ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…
ಇದು ಸುವರ್ಣ ನೋಟ
ಕುಂದಾ ನಗರಿ ಎಂಬುದಾಗಿಯೇ ಹೆಸರು
ಪಡೆದಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ
ಅಧಿವೇಶನ ಸಂದರ್ಭದ ಚಿತ್ರಗಳನ್ನು ತೆಗೆಯುವ ಸಲುವಾಗಿಯೇ ಬೆಳಗಾವಿಗೆ ತೆರಳಿದ ಹಿರಿಯ ಪತ್ರಿಕಾ ಛಾಯಾಗ್ರಾಹಕ
ವಿಶ್ವನಾಥ ಸುವರ್ಣ ಅವರು ʼಪರ್ಯಾಯ ಡಾಟ್ ಕಾಮ್ʼ ವೆಬ್ಸೈಟಿಗೆ
ಕೆಲವೊಂದು ಚಿತ್ರಗಳನ್ನು ಕಳುಹಿಸಿದ್ದಾರೆ.
ಸುವರ್ಣ ಸೌಧದ ಮುಂಭಾಗದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಸುಂದರ ಕಾರಂಜಿಗಳ ಚಿತ್ರಗಳು ಅವು. ಆ ಚಿತ್ರಗಳು ಮತ್ತು ಅಧಿವೇಶನ ಕುರಿತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಪದ್ಯವೊಂದನ್ನು ಬರೆದರು.
ಆ ಕವನ ಇಲ್ಲಿದೆ:
ಶೀರ್ಷಿಕೆ: ಸುವರ್ಣ ಸೌಧದ ಕಾರಂಜಿ
ಕೇಳುತ್ತಿದೆ…
ಮೈಯ ನಡುಗಿಸುವ ಚಳಿಯಲಿ|
ಚರ್ಚೆ ನಡೆದಿದೆ ಕಾವೇರಿ ಸದನದಿ|
ಕುಂದ ನಗರಿಯ ಭವ್ಯಸೌಧದ|
ಒಳ ಸಭಾಂಗಣದಿ||
ಚಂದದಿಂದಲಿ ತಕ ತಕನೆ
ಕುಣಿದಿದೆ|
ಮಂದ ಬೆಳಕಿನ ನಡುವೆ ನೀರಿನ|
ಭವ್ಯ ವರ್ಣದ ಛಾಪು
ಚೆಲ್ಲುತ|
ದಿವ್ಯ ಕಾರಂಜಿ||
ಹಾಡು ಹಗಲಲಿ ನಡೆವ ಮಾತಿನ|
ಜೋರು ಚರ್ಚೆಯ ಬಳಿಕ ಬರುವುದೇ|
ನಾಕು ಜನಕನುಕೂಲವಾಗುವ|
ಖಚಿತ ಆಡಳಿತ? ||
ಮುಗಿಲು ಮುಟ್ಟಿದ ಕಾಡಿ|
ಕೆಣಕುವ ಅಟ್ಟಹಾಸದ ಭ್ರಷ್ಟ|
ಬಲಗಳ ಮೆಟ್ಟಿಹಾಕುವ ಶುಭ್ರ|
ವರ್ಣದ ಜಗ ಜಟ್ಟಿ ನಿರ್ಧಾರ? ||
ಹಾಲು ಬಂದಿತೇ ಬೆಣ್ಣೆ ಬಂದಿತೇ|
ವಿಷವು ಬಂದಿತೇ ಅಮೃತ|
ಬಂದಿತೆ ಕೋಪತಾಪದ ಬಿರುಸು|
ಮಾತಿನ ಮಥನ ಕಾಲದಲಿ? ||
ಕೋಟಿ ಜನರ ಸಂಕಷ್ಟ ನೀಗುವ|
ಮೇಟಿ ಮಾಡುವ ಕೃಷಿಕ|
ಮಂದಿಯ ತಾಪ ಕಳೆವ|
ವಿವೇಕ ಮೆರೆವುದೇ ಚರ್ಚೆಕಾಲದಲಿ? ||
ಈ ಕವನ ಮತ್ತು ಅದರ ವಿಶ್ಲೇಷಣೆಯ ವಿಡಿಯೋ 👇👇 ಇಲ್ಲಿದೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ( https://youtu.be/VmUnrkngtQE ) ಕ್ಲಿಕ್ ಮಾಡಿರಿ. ಮೇಲಿನ ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿರಿ.










No comments:
Post a Comment