My Blog List

Tuesday, September 22, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 19

ಇಂದಿನ ಇತಿಹಾಸ

ಸೆಪ್ಟೆಂಬರ್ 19

1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ  ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು.

2008: ಒರಿಸ್ಸಾದಲ್ಲಿ ಭಾರಿ ಮಳೆಯಿಂದಾಗಿ ಮಹಾನದಿಯಲ್ಲಿ ಉಕ್ಕೇರಿದ ಪ್ರವಾಹದಲ್ಲಿ 19ಮಂದಿ ಕೊಚ್ಚಿ ಹೋದರು.

2008: ಮಲೇಷ್ಯಾದ ಸರವಾಕ್ ಮತ್ತು ಪೆರಾಕ್ ಪ್ರಾಂತ್ಯದಲ್ಲಿ ಪ್ರಾಚ್ಯವಸ್ತು ಸಂಶೋಧಕರು ನವ ಶಿಲಾಯುಗದ ಕಾಲದಲ್ಲಿ ಬದುಕಿದ್ದ ಮನುಷ್ಯರ ಅಸ್ಥಿ ಪಂಜರಗಳನ್ನು ಪತ್ತೆಹಚ್ಚಿದರು.

2007: ಶ್ರೀರಾಮ ಐತಿಹಾಸಿಕ ವ್ಯಕ್ತಿಯೇ ಅಲ್ಲ ಎಂಬ ತಮ್ಮ ಮುಂಚಿನ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ತಮ್ಮ ವಾದ ವಿರೋಧಿಸುವವರು ಸೂಕ್ತ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ರಾಮ ಬದುಕಿದ್ದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ, ಅದೇ ರೀತಿ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲ ಎಂಜಿನಿಯರಿಂಗ್ ಪರಿಣಿತಿಯನ್ನು ಹೊಂದಿರುವ ಕುರಿತೂ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದರು.

2007: ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದರಿಂದ ಉತ್ತೇಜನಗೊಂಡ ಷೇರುಪೇಟೆ ಸೂಚ್ಯಂಕವು 653 ಅಂಶಗಳಷ್ಟು ಏರಿಕೆಯೊಂದಿಗೆ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಮುಂಬೈ ಷೇರುಪೇಟೆ ವಹಿವಾಟಿನ ಅಳತೆ ಗೋಲಾಗಿರುವ ಸಂವೇದಿ ಸೂಚ್ಯಂಕವು ಮಾಂತ್ರಿಕ ಸಂಖ್ಯೆ 16 ಸಾವಿರ ಅಂಶಗಳನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಷೇರುಪೇಟೆಯಲ್ಲಿ ಹಣ ಹೂಡಿದವರು ಕಳೆದ ಎರಡು ತಿಂಗಳಲ್ಲಿ ರೂ 5 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು. ಸೂಚ್ಯಂಕವು 15 ಸಾವಿರ ಅಂಶಗಳಿಂದ 16 ಸಾವಿರ ಅಂಶಗಳವರೆಗೆ ಸಾಗಿ ಬಂದ ಹಿನ್ನೆಲೆಯಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯಾದ ಹಣದ ಒಟ್ಟು ಮೊತ್ತ ರೂ 49,17,402 ಕೋಟಿಗಳಷ್ಟಾಯಿತು.

 2007: ವಿಫಾ ಹೆಸರಿನ ಚಂಡಮಾರುತ ಚೀನದ ಝೆಜಿಯಾಂಗ್ ಪ್ರಾಂತವನ್ನು ಅಪ್ಪಳಿಸಿದ ಪರಿಣಾಮವಾಗಿ 50 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕಳೆದ ವರ್ಷ ಇದೇ ಭಾಗಕ್ಕೆ ಅಪ್ಪಳಿಸಿದ್ದ ಸೊಮಾಯ್ ಚಂಡಮಾರುತ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು.

2007: ಷೇರುಪೇಟೆ ವಹಿವಾಟನ್ನು ಮನೆ ಅಥವಾ ಕಚೇರಿಯಲ್ಲಿ ಕುಳಿತೇ ಇಂಟರ್ನೆಟ್ ನೆರವಿನಿಂದ ನಿರ್ವಹಿಸಬಹುದಾದ ಇ-ಟ್ರೇಡಿಂಗ್ ಸೇವೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಬೆಂಗಳೂರಿನಲ್ಲಿ ಆರಂಭಿಸಿತು.

2007: ಎಸ್ಬಿಎಂ ಜೈನ್ ಕಾಲೇಜಿನ ಜೈಪ್ರಕಾಶ್ ಶೆಟ್ಟಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜ್ 43ನೇ ವಾರ್ಷಿಕ ಅಂತರ ಕಾಲೇಜ್ ಅಥ್ಲೆಟಿಕ್ ಕೂಟದ ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ಕೂಟದ ನೂತನ ದಾಖಲೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಅಥ್ಲೆಟಿಕ್ ಕೂಟದ ಎರಡನೇ ದಿನ, ಜೈಪ್ರಕಾಶ್ ಶೆಟ್ಟಿ 400 ಮೀ ಓಟದ ಸ್ಪರ್ಧೆಯನ್ನು 48.2 ಸೆಕೆಂಡುಗಳಲ್ಲಿ ಕ್ರಮಿಸಿ 2005ರಲ್ಲಿ ಅಲ್ ಅಮೀನ್ ಕಾಲೇಜಿನ ಅಯ್ಯಪ್ಪ ಹೆಸರಿನಲ್ಲಿದ್ದ 48.8 ಸೆಕೆಂಡು ಹಳೆ ದಾಖಲೆಯನ್ನು ಅಳಿಸಿ ಹಾಕಿದರು.

2006: `ಜೋಗಿ' ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ನಟ ಶಿವರಾಜ್ ಕುಮಾರ್, `ನಾಯಿ ನೆರಳು' ಚಿತ್ರದ ಅದ್ಭುತ ನಟನೆಗಾಗಿ ಪವಿತ್ರಾ ಲೋಕೇಶ್ ಅವರು 2005-06 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯಿತು. `ಕೇರಾಫ್ ಫುಟ್ ಪಾತ್' ನ ಮಾಸ್ಟರ್ ಕಿಶನ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡರು.

 2006: 1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ  ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು. ಈತನು ಪ್ರಮುಖ ಆರೋಪಿ ಟೈಗರ್ ಮೆಮನ್ ನ ವಾಹನ ಚಾಲಕನಾಗಿದ್ದ. 1993ರ ಮಾರ್ಚರ್್ 12ರಂದು ಈತ ಸೆಂಚುರಿ ಬಜಾರಿನಲ್ಲಿ ಆರ್ಡಿಎಕ್ಸ್ ತುಂಬಿದ್ದ ಜೀಪ್ ನಿಲ್ಲಿಸಿ ಭಾರಿ ಸ್ಫೋಟಕ್ಕೆ ಕಾರಣನಾಗಿದ್ದ.

2006: ಬ್ರಿಟನ್ನಿನ ವರ್ತಮಾನ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಶತಮಾನದ ಸ್ಥಳೀಯ ಹಗರಣಗಳು, ಅಂತಾರಾಷ್ಟ್ರೀಯ ಪ್ರಮುಖ ಘಟನಾವಳಿಗಳು, ಜಾಗತಿಕ ಮಟ್ಟದ ದುರಂತಗಳ ಸಂಗ್ರಹವನ್ನು ಒಳಗೊಂಡ `ಸುದ್ದಿಮನೆ'ಸುದ್ದಿಮನೆ' ಲಂಡನ್ನಿನಲ್ಲಿ ಅನಾವರಣಗೊಂಡಿತು. ಖಾಸಗಿಯವರಿಂದ ಸಂಗ್ರಹಿಸಲಾದ ಒಂದು ಲಕ್ಷ ಪತ್ರಿಕೆಗಳ ಮುಖಪುಟಗಳು ಇಲ್ಲಿ ಪ್ರದರ್ಶಿತವಾಗಿವೆ. 1909ರಲ್ಲಿ ನಡೆದ ಪ್ರಪ್ರಥಮ ವಿಮಾನ ಹಾರಾಟ, 1953ರಲ್ಲಿ ಪ್ರಥಮ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಘಟನೆಯಿಂದ ಹಿಡಿದು, ಲಂಡನ್ನಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಾನವ ಬಾಂಬ್ ಸ್ಫೋಟದವರೆಗಿನ ಸುದ್ದಿಗಳನ್ನು ಒಳಗೊಂಡ ಪತ್ರಿಕೆಗಳ ಮುಖಪುಟಗಳು ಇಲ್ಲಿವೆ. 1969ರ ಜುಲೈ 21ರಂದು ಮಾನವ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ಮೊದಲಿಗೆ ಪ್ರಕಟಿಸಿದ `ಈವ್ನಿಂಗ್ ಸ್ಟ್ಯಾಂಡರ್ಡ್' ಮುಖಪುಟ, 1963ರ ನವೆಂಬರ್ 25ರಂದು ಪ್ರಥಮ ಬಾರಿಗೆ ವಿಧಿಸಲಾದ ಮರಣದಂಡನೆ (ಓಸ್ವಾಲ್ಡ್ ಹಾರ್ವೆ ಹತ್ಯೆಯ ಆರೋಪಿ ಜಾಕ್ ರೂಬಿ) ಪ್ರಕರಣದ ವರದಿ ಕೂಡಾ ಈ ಪ್ರದರ್ಶನದಲ್ಲಿದೆ.

 2006: ಪ್ರಧಾನಿ ತಕ್ ಸಿನ್ ಶಿನವಾತ್ರ ಅವರು ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆ ಶೃಂಗಸಬಯಲ್ಲಿ ಪಾಲ್ಗೊಂಡಿದ್ದಾಗ ಅವರ ಅನುಪಸ್ಥಿತಿಯಲ್ಲಿ ಥಾಯ್ಲೆಂಡ್ ಸೇನೆ ಕ್ಷಿಪ್ರ ಕ್ರಾಂತಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಶಿನವಾತ್ರ ಅವರು ಸೇನಾ ಮುಖ್ಯಸ್ಥರನ್ನು ವಜಾ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದರು.

2001: ಪಂಜಾಬಿನ ಗುರುಪ್ರೀತ್ ಸಿಂಗ್ ಅವರು ಲಖ್ನೋದಲ್ಲಿ ನಡೆದ 41ನೇ  ಅಂತರ್ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸನ್ನು 14.07 ಸೆಕೆಂಡುಗಳಲ್ಲಿ ಓಡುವ ಮೂಲಕ ಭಾರತೀಯ ಓಟಗಾರರ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. 1964ರ ಟೋಕಿಯೊ ಒಲಿಪಿಂಕ್ಸಿನಲ್ಲಿ ಜಿ.ಎಸ್. ರಾಂಧವಾ ಅವರು ಮಾಡಿದ್ದ ದಾಖಲೆಯನ್ನು ಅವರು ಮುರಿದರು. ಈ ದಾಖಲೆ ಮುರಿಯುವ ಯತ್ನವನ್ನು ಜಿ.ಎಸ್. ರಾಂಧವಾ ಅವರೂ ವೀಕ್ಷಿಸಿದರು.

2000: ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯ  (ವೆಯ್ಟ್ ಲಿಫ್ಟಿಂಗ್) 69 ಕಿ.ಗ್ರಾಂ. ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1965: ಭಾರತೀಯ ಸ್ವಾತಂತ್ರ್ಯ ಯೋಧ, ಗುಜರಾತಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು ಭಾರತ - ಪಾಕ್ ಘéರ್ಷಣೆಯ ಸಂದರ್ಭದಲ್ಲಿ ಕಛ್ ಗಡಿಯಲ್ಲಿ ಅವರ ವಿಮಾನಕ್ಕೆ ಪಾಕ್ ವಿಮಾನವು ಗುಂಡು ಹೊಡೆದು ಉರುಳಿಸಿದ ಪರಿಣಾಮವಾಗಿ ಮೃತರಾದರು. ಅವರ ಬದುಕಿನಲ್ಲಿನಂಬರ್ 19 ಮಹತ್ವ ಪಡೆದಿದೆ. ಅವರು ಹುಟ್ಟಿದ್ದು 1899ರ ಫೆಬ್ರುವರಿ 19ರಂದು. ಮದುವೆಯಾದದ್ದು 1936ರ ಏಪ್ರಿಲ್ 19ರಂದು. ಮೃತರಾದದ್ದು 1965ರ ಸೆಪ್ಟೆಂಬರ್ 19ರಂದು.

1961: ಸಾಹಿತಿ ಅನುರಾಧ ಕೆ.ವಿ. ಜನ್ಮದಿನ.

1958: ಅಮೆರಿಕದ ಮಿಲಿಟರಿಯೇತರ ಬಾಹ್ಯಾಕಾಶ ಯಾನಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ವಿಚಾರದಲ್ಲಿ ಸಮನ್ವಯ ಸಾಧಿಸುವ ಸಲುವಾಗಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎಂಬ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1929: ಖ್ಯಾತ ನಾಟಕಕಾರ ಬಿ.ವಿ. ಕಾರಂತ (19-9-1929ರಿಂದ 1-9-2002) ಅವರು ಬಾಬುಕೋಡಿ ನಾರಣಪ್ಪಯ್ಯ- ಲಕ್ಷ್ಮಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ಒಟ್ಟು 52 ನಾಟಕಗಳನ್ನು ನಿರ್ದೇಶಿದ ಅವರು 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು. ಏವಂ ಇಂದ್ರಜಿತ, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ ಅವರ ನಿರ್ದೇಶಿಸಿದ ನಾಟಕಗಳಲ್ಲಿ ಹೆಸರುವಾಸಿಯಾದವು. ಮಕ್ಕಳಿಗಾಗಿಯೂ ಹಲವಾರು ನಾಟಕಗಳನ್ನು ರಚಿಸಿದ ಕಾರಂತ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

1704: ಗುರುಗೋವಿಂದ ಸಿಂಗ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement