Showing posts with label Gujarath. Show all posts
Showing posts with label Gujarath. Show all posts

Sunday, October 9, 2022

ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಮೊಧೇರಾ (ಗುಜರಾತ್): ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ 2022 ಅಕ್ಟೋಬರ್ 9 ರ ಭಾನುವಾರ ಮೊಧೇರಾವನ್ನು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಬ್ಯಾಟರಿ ಇಂಧನ ದಾಸ್ತಾನು ವ್ಯವಸ್ಥೆಯ (ಬಿಇಎಸ್ಎಸ್) ಬೆಂಬಲ ಹೊಂದಿದ ʼದೇಶದ ಪ್ರಪ್ರಥಮ  ಸೌರಶಕ್ತಿ ಚಾಲಿತ ಗ್ರಾಮʼ ಎಂದು ಘೋಷಿಸಿದರು.

ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಸಮಗ್ರ ಸೌರಶಕ್ತಿಯನ್ನು ಪ್ರಾರಂಭಿಸಿದೆ. ಸೂರ್ಯ ಮಂದಿರದಿಂದ ಕೇವಲ 6 ಕಿಮೀ ದೂರದಲ್ಲಿರುವ ಸುಜನಪುರ, ಮೆಹ್ಸಾನಾದಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯೊಂದಿಗೆ ಯೋಜನೆ ರೂಪುಗೊಂಡಿದೆ. ಮೊಧೇರಾದಲ್ಲಿ 24×7 ಸೌರಶಕ್ತಿ ಆಧಾರಿತ ವಿದ್ಯುತ್  ಒದಗಿಸುವ ಸಲುವಾಗಿಯೇ ಮೊಧೇರಾ ಸೂರ್ಯ ದೇಗುಲ ಮತ್ತು ಗ್ರಾಮವನ್ನು ಸಂಪೂರ್ಣ ʼಸೌರ ಶಕ್ತಿಮಯʼವಾಗಿ ಮಾಡುವ ಉಪಕ್ರಮ ಕೈಗೊಳ್ಳಲಾಗಿದೆ.

ಇಂಧನ ಯೋಜನೆಯ ಪಯಣ ಹೇಗಿತ್ತು ಗೊತ್ತಾ?

ಯೋಜನೆಯ ಅಭಿವೃದ್ಧಿಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತು. ಅದೇ ಸಮಯದಲ್ಲಿ, ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಯೋಜನೆಗೆ 50:50 ಆಧಾರದ ಮೇಲೆ ಎರಡು ಹಂತಗಳಲ್ಲಿ 80.66 ಕೋಟಿ ರೂಪಾಯಿಗಳನ್ನು ಜಂಟಿಯಾಗಿ ಖರ್ಚು ಮಾಡಿದವು. ಅಂದರೆ ಹಂತ-1 ರಲ್ಲಿ 69 ಕೋಟಿ ಮತ್ತು ಹಂತ I. 2 ರಲ್ಲಿ 11.66 ಕೋಟಿ ರೂಪಾಯಿಗಳು. ಅಲ್ಲದೆ, ಮೋಧೇರಾದಲ್ಲಿ 1300 ಮನೆಗಳಿಗೆ ತಲಾ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬಿಸಿಲಿನ ಶಕ್ತಿಯಿಂದ ವಿದ್ಯುತ್ ಪಡೆಯುತ್ತದೆ. ಈ ಸೌರ ಫಲಕಗಳ ಮೂಲಕ ಹಗಲಿನಲ್ಲಿ ನೇರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೂರ್ಯ ಮುಳುಗಿದ ಬಳಿಕ, ರಾತ್ರಿ ಬಿಇಎಸ್‌ ಎಸ್‌ (ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್)‌ ಮೂಲಕ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಯೋಜನೆಯ ವಿಶೇಷತೆ ಏನು?

1. ಮೊಧೇರಾ ಈ ಯೋಜನೆಯ ಮೂಲಕ ಶುದ್ಧ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2. ಸೋಲಾರ್ ಆಧಾರಿತ ಅಲ್ಟ್ರಾ-ಆಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ಹೊಂದಿರುವ ಮೊದಲ ಆಧುನಿಕ ಗ್ರಾಮ ಎನಿಸಿತು.

3. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWh ಪ್ರಮಾಣದ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

4. ಇಲ್ಲಿನ ಸ್ಥಳೀಯ ಜನರ ವಸತಿ ವಿದ್ಯುತ್ ಬಿಲ್ಲಿನಲ್ಲಿ ಶೇ.60ರಿಂದ 100ರಷ್ಟು ಉಳಿತಾಯವಾಗುತ್ತಿದೆ.

ಸೌರಬೆಳಕಿನಿಂದ ಸೂರ್ಯ ದೇಗುಲ ಜಗಮಗ

ವಿಶ್ವಪ್ರಸಿದ್ಧ ಮೊಧೇರಾ ಸೂರ್ಯ ದೇವಾಲಯದಲ್ಲಿ ಸೌರಶಕ್ತಿ ಚಾಲಿತ 3-ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಮೊಧೇರಾದ ಶ್ರೀಮಂತ ಇತಿಹಾಸವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 3-ಡಿ ಪ್ರೊಜೆಕ್ಷನ್ ಪ್ರತಿದಿನ ಸಂಜೆ 7:00 ರಿಂದ 7:30 ರವರೆಗೆ ನಡೆಯುತ್ತದೆ. ದೇವಾಲಯದ ಸೌಂದರ್ಯವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ಪರಂಪರಾತ ದೀಪಗಳನ್ನು ಅದರ ಆವರಣದಲ್ಲಿ ಅಳವಡಿಸಲಾಗಿದೆ. ಸಂದರ್ಶಕರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಆಕರ್ಷಕ ಬೆಳಕನ್ನು ಆಸ್ವಾದಿಸಬಹುದು.

ವಸತಿ ವಿದ್ಯುತ್ ಬಿಲ್ ಸೊನ್ನೆ

ಮೊಧೇರಾ ಗ್ರಾಮದ ಸರಪಂಚ್ ಜತನ್‌ಬೆನ್ ಡಿ.ಟ್ಯಾಗೋರ್ ಪ್ರಕಾರ “ಕೇಂದ್ರ-ರಾಜ್ಯ ಯೋಜನೆಯಿಂದ ಗ್ರಾಮೀಣ ಜನರು ಸಂತೋಷಭರಿತರಾಗಿದ್ದಾರೆ. ಈ ಹಿಂದೆ ಗ್ರಾಮಸ್ಥರ ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1000 ರೂಪಾಯಿ ಬರುತ್ತಿತ್ತು. ಈಗ ಅದು ಬಹುತೇಕ ಸೊನ್ನೆಗೆ ಇಳಿದಿದೆ.

ಯಾವುದೇ ವೆಚ್ಚವಿಲ್ಲದೆ ಎಲ್ಲ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಶಕ್ತಿಯನ್ನು ಒದಗಿಸಿ ಉಳಿಸಿದಾಗ ಸರ್ಕಾರವು ನಮಗೆ ಹೆಚ್ಚುವರಿ ಹಣವನ್ನು ನೀಡುತ್ತದೆಎನ್ನುತ್ತಾರೆ ಜತನ್‌ ಬೆನ್.

ಮೊಧೇರಾ ಈ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸ್ವಚ್ಛ ಮತ್ತು ಹಸಿರು ಇಂಧನವನ್ನು ಸೃಷ್ಟಿಸುವ ಪ್ರಧಾನಿಯವರ ಕನಸಿಗೆ ಗುಜರಾತ್ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿರುವುದು ಸಂತೋಷವಾಗಿದೆ ಎಂದು ಹೇಳಿದರು..

ಇದೇ ವೇಳೆಗೆ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ 50% ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಪಟೇಲ್ ಹೇಳಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Saturday, October 31, 2020

ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

 ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

ಸ್ವತಃ ಸವಾರಿ ಮೂಲಕ ಪ್ರಧಾನಿ ಮೋದಿ ಚಾಲನೆ

ಅಹಮದಾಬಾದ್: ನರ್ಮದಾ ನದಿಯ ಏಕತಾ ಪ್ರತಿಮೆ ಇರುವ ಕೇವಡಿಯಾದಿಂದ ಅಹಮದಾಬಾದಿನ ಸಬರಮತಿ ನದಿ ಮುಂಭಾಗದವರೆಗೆ ಭಾರತದ ಮೊತ್ತ ಮೊದಲ ಸೀಪ್ಲೇನ್ ಸೇವೆಯ ಚೊಚ್ಚಲ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸವಾರಿ ಮಾಡುವ ಮೂಲಕ 2020 ಅಕ್ಟೋಬರ್ 31ರ ಶನಿವಾರ ಚಾಲನೆ ನೀಡಿದರು.

ಹಾರಾಟವನ್ನು ಸ್ಪೈಸ್ಜೆಟ್ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಸ್ಪೈಸ್ ಷಟಲ್ ನಿರ್ವಹಿಸುತ್ತದೆ.

ಸೀ ಪ್ಲೇನ್ ಅಥವಾ ಸಮುದ್ರ ವಿಮಾನ ಎಂದರೆ ರೆಕ್ಕೆ ಜೋಡಿಸಲ್ಪಟ್ಟಿರುವ ಆಗಸದಲ್ಲಿ ಹಾರುವುದರ ಜೊತೆಗೆ ನೀರಿನಲ್ಲಿ ಇಳಿಯುವ ಸಾಮರ್ಥ್ಯವಿರುವ ವಿಶಿಷ್ಟ ವಿಮಾನ.

ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ಸಿಎಸ್) - ಉಡಾನ್ ಅಡಿಯಲ್ಲಿ ಪ್ರಾರಂಭಿಸಲಾದ ಸೀಪ್ಲೇನ್ ಸೇವೆಯು ಕೊನೆಯ ಮೈಲಿನವರೆಗೆ ಜನರಿಗೆ ಸಂಪರ್ಕವನ್ನು ಕಲ್ಪಿಸುವುದರಿಂದ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಅಹಮದಾಬಾದಿನಲ್ಲಿ ಇಳಿದ ಕೂಡಲೇ ಪ್ರಧಾನಿ ಮೋದಿ ಅವರು ಸಬರಮತಿ ನದಿಯ ಮುಂಭಾಗದಲ್ಲಿ ವಾಟರ್ ಡ್ರೋಮ್ನ್ನು ಉದ್ಘಾಟಿಸಿದರು, ನಂತರ ಅವರು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (ಎಸ್ವಿಪಿಐ) ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು.

ಸ್ಪೈಸ್ ಜೆಟ್ ಅಹಮದಾಬಾದ್-ಕೇವಡಿಯಾ ಮಾರ್ಗದಲ್ಲಿ ಅಕ್ಟೋಬರ್ ೩೧ ರಿಂದ ಪ್ರತಿದಿನ ಎರಡು ವಿಮಾನಗಳನ್ನು ನಿರ್ವಹಿಸಲಿದೆ

ಕೇವಡಿಯಾದಿಂದ ಅಹ್ಮದಾಬಾದ್ ತಲುಪಲು ಪ್ರಧಾನ ಮಂತ್ರಿಯವರು ೫೦ ನಿಮಿಷಗಳ ಕಾಲವನ್ನು ಸೀಪ್ಲೇನ್ ಸವಾರಿಗೆ ತೆಗೆದುಕೊಂಡರು. ಸೇವೆಯು ಈಗ ನವೆಂಬರ್ ೧ರ ಭಾನುವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಸಮುದ್ರ ವಿಮಾನ ಸವಾರಿಗಾಗಿ ಈಗಾಗಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ ಮತ್ತು ವೆಬ್ಸೈಟ್ನಲ್ಲಿಯೂ ಬುಕ್ಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.

ಆದರೆ, ಪ್ರಯಾಣಿಕರಿಗೆ ದೃಢಪಡಿಸಿದ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇವಡಿಯಾದ ಏಕತಾ ಪ್ರತಿಮೆ ಇರುವ ತಾಣದಿಂದ ಸಮುದ್ರ ವಿಮಾನ ಸವಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ಏಕ್ ಭಾರತ್ ಶ್ರೇಷ್ಠ ಭಾರತ್ ಆಚರಣೆಯ ಅಂಗವಾಗಿ ನೆರವೇರಿಸಿದರು.

ಪ್ರಧಾನಮಂತ್ರಿಯವರ ಭದ್ರತೆಗಾಗಿ ನಗರದ ಪೂರ್ವ ಮತ್ತು ಪಶ್ಚಿಮ ದಂಡೆಯ ಸಬರಮತಿ ರಿವರ್ಫ್ರಂಟ್ ರಸ್ತೆಗೆ ಭದ್ರ ಕಾವಲು ಹಾಕಿ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಮೋದಿಯವರು ಶುಕ್ರವಾರ ಬೆಳಗ್ಗೆ ಗುಜರಾತ್ ತಲುಪಿದರು. ನಂತರ ಅವರು ವಾರದ ಆರಂಭದಲ್ಲಿ ನಿಧನರಾದ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಮತ್ತು ಜನಪ್ರಿಯ ಗುಜರಾತಿ ನಟ ಮತ್ತು ಸಂಗೀತಗಾರ ನರೇಶ್ ಕನೋಡಿಯಾ ಹಾಗೂ ಮಹೇಶ್ ಕನೋಡಿಯಾ ಅವರಿಗೆ ಗೌರವ ಸಲ್ಲಿಸಿದರು.

 ಭಾರತದ ಚೊಚ್ಚಲ ಸೀ ಪ್ಲೇನ್ ಸೇವೆಯ ವೈಶಿಷ್ಟ್ಯ

* ಮಾದರಿಯ ಮೊದಲ ಸೇವೆಯಲ್ಲಿ, ೧೯ ಆಸನಗಳ ಸಮುದ್ರ ವಿಮಾನವನ್ನು (ಸೀಪ್ಲೇನ್) ಸಬರಮತಿ ನದಿಯ ಮುಂಭಾಗ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ (ಸ್ಟಾಚ್ಯೂ ಆಫ್ ಯೂನಿಟಿ) ನಡುವಣ ವಿಮಾನಗಳಿಗಾಗಿ ಬಳಸಲಾಗುತ್ತದೆ. ಸೀಪ್ಲೇನ್ ಮಾಲ್ದೀವ್ಸ್ ನಿಂದ ಬಂದಿದೆ.

* ಸ್ಪೈಸ್ಜೆಟ್ನಿಂದ ಗುತ್ತಿಗೆ ಪಡೆದಿರುವ ಟ್ವಿನ್ ಒಟ್ಟರ್ ೩೦೦ ಸೀಪ್ಲೇನ್ನಲ್ಲಿ ೧೨ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು.

* ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆಗಳಿಗೆ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ನೀಡಲಾಗುವುದು. ಗುಜರಾತ್ ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡುವಿನ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

* ಅಹಮದಾಬಾದಿನ ಸಬರಮತಿ ನದಿಯ ಮುಂಭಾಗ ಮತ್ತು ಕೇವಡಿಯಾದಲ್ಲಿನ ಏಕತಾ ಪ್ರತಿಮೆ ನಡುವಣ ಪ್ರಯಾಣದ ಸಮಯವನ್ನು ಸೀಪ್ಲೇನ್ ಕಡಿತಗೊಳಿಸುತ್ತದೆ. ಕೇವಡಿಯಾದ ಏಕತಾ ಪ್ರತಿಮೆಯು ವಡೋದರಾದಿಂದ ಸುಮಾರು ೯೦ ಕಿ.ಮೀ, ಸೂರತ್ನಿಂದ ೧೫೦ ಕಿ.ಮೀ ಮತ್ತು ಅಹಮದಾಬಾದಿನಿಂದ ೨೦೦ ಕಿ.ಮೀ ದೂರದಲ್ಲಿದೆ.

*. ಅಹಮದಾಬಾದಿನಿಂದ ಕೇವಡಿಯಾ ನಡುವೆ ೨೦೦ ಕಿ.ಮೀ ದೂರ ಸಾಮಾನ್ಯವಾಗಿ ರಸ್ತೆ ಮೂಲಕ ಪಯಣಕ್ಕೆ ನಾಲ್ಕು ಗಂಟೆ ಬೇಕಾಗುತ್ತದೆ. ಆದರೆ ಈಗ ಸೀಪ್ಲೇನ್ ತನ್ನ ಗಮ್ಯಸ್ಥಾನವನ್ನು ತಲುಪಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.

* ಸ್ಪೈಸ್ ಜೆಟ್ ಒಂದು ದಿನದಲ್ಲಿ ನಾಲ್ಕು ಸುತ್ತಿನ ಸೀಪ್ಲೇನ್ ಪಯಣವನ್ನು ನಡೆಸುತ್ತದೆ, ಅಂದರೆ, ಅಹಮದಾಬಾದ್ ಮತ್ತು ಕೇವಡಿಯಾ ನಡುವೆ ಎಂಟು ವಿಮಾನಗಳು ಸಂಚರಿಸುತ್ತವೆ.

* ಒಂದು ಸೀಪ್ಲೇನ್ ಟಿಕೆಟ್ ಟಿಕೆಟ್ ಬೆಲೆ ೧೫೦೦ ರೂ.ಗಳಷ್ಟು ಕಡಿಮೆ ಎಂದು ನಿರೀಕ್ಷಿಸಲಾಗಿದೆ.

Advertisement