Showing posts with label ಹೈಕೋರ್ಟ್‌. Show all posts
Showing posts with label ಹೈಕೋರ್ಟ್‌. Show all posts

Monday, August 22, 2022

ಮಾಹಿತಿ ವಿಳಂಬಕ್ಕೆ ಆಯೋಗ ಕುರುಡಾಗುವಂತಿಲ್ಲ: ಕರ್ನಾಟಕ ಹೈಕೋರ್ಟ್

 ಮಾಹಿತಿ ವಿಳಂಬಕ್ಕೆ ಆಯೋಗ ಕುರುಡಾಗುವಂತಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು (ಪಿಐಒ) ಮಾಹಿತಿ ಒದಗಿಸುವಲ್ಲಿ ಮಾಡುವ ವಿಳಂಬವು ಶಿಕ್ಷಾರ್ಹವಾಗಿದ್ದು, ಇಂತಹ ವಿಳಂಬದ ಬಗ್ಗೆ ಮಾಹಿತಿ ಆಯೋಗವು ಕುರುಡಾಗಿ ಇರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ.

ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಕೋರಿದ ಮಾಹಿತಿಯನ್ನು ಒದಗಿಸುವಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಉಂಟಾದ ಅನಗತ್ಯ ವಿಳಂಬಕ್ಕಾಗಿ ತಪ್ಪಿತಸ್ಥನನ್ನು ಮಾಹಿತಿ ಆಯೋಗವು ಶಿಕ್ಷಿಸದೇ ಇರಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ಪೀಠವು ಸಾರ್ವಜನಿಕ ಮಾಹಿತಿ ಅಧಿಕಾರಿಗೆ 25,000 ರೂಪಾಯಿಗಳ ದಂಡವನ್ನು ವಿಧಿಸಿದೆ.

ಬೆಂಗಳೂರಿನ ಬ್ಲಾಕ್ ಶಿಕ್ಷಣ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯು (ಪಿಐಒ) ಕರ್ತವ್ಯಲೋಪ ಎಸಗಿದ್ದಕ್ಕಾಗಿ ಆರ್‌ಟಿಐ ಸೆಕ್ಷನ್ 20 ರ ಅಡಿಯಲ್ಲಿ ಅನುಕರಣೀಯ ಶಿಕ್ಷೆಯನ್ನು ಕೋರಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತ್ತು.

ತಾವು ಕೇಳಿದ ಮಾಹಿತಿಯು ಸುಮಾರು ಎರಡು ವರ್ಷಗಳಷ್ಟು ವಿಳಂಬವಾಗಿ ಒದಗಿಸಲ್ಪಟ್ಟಿದೆ, ಆದರೆ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಹೇಳಿ ರಾಜ್ಯ ಮಾಹಿತಿ ಆಯೋಗವು ತನ್ನ ಅರ್ಜಿಯನ್ನು ಇತ್ಯರ್ಥ ಪಡಿಸಿತು. ಆದರೆ ವಾಸ್ತವ ಪ್ರಶ್ನೆ ಏನೆಂದರೆ ರಾಜ್ಯ ಮಾಹಿತಿ ಆಯೋಗವು ಮಾಹಿತಿ ಒದಗಿಸುವಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಆದ ಅಗಾಧ ವಿಳಂಬದ ಬಗ್ಗೆ ಕಣ್ಣು ಮುಚ್ಚಿತು ಎಂದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ನಿವೇದಿಸಿದರು.

"ಪ್ರತಿವಾದಿ-ಆಯೋಗವು ಶಾಸನಬದ್ಧ ಅರೆ ನ್ಯಾಯಾಂಗ ಸಂಸ್ಥೆಯಾಗಿರುವುದರಿಂದ ಮಹಾರಾಜ ಅಥವಾ ಮೊಘಲ್‌ನಂತೆ ವರ್ತಿಸಲು ಸಾಧ್ಯವಿಲ್ಲ, ಅದರ ಕಾರ್ಯಗಳು ಸಾರ್ವಜನಿಕ ಕಾನೂನಿನ ಸ್ವರೂಪದವು” ಎಂದು ಹೈಕೋರ್ಟ್‌ ಈ ಪ್ರಕರಣ ಕುರಿತ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.

ಆರ್‌ಟಿಐ ಕಾಯಿದೆಯ ಸೆಕ್ಷನ್ 20, ಮಾಹಿತಿಯನ್ನು ಒದಗಿಸುವಲ್ಲಿ ಪ್ರತಿ ದಿನದ ವಿಳಂಬಕ್ಕೆ 250 ರೂಪಾಯಿಗಳ ದಂಡವನ್ನು ಸೂಚಿಸುತ್ತದೆ ಎಂದು ಕೋರ್ಟ್ ಗಮನಿಸಿತು. ಸಬ್‌ ಸೆಕ್ಷನ್‌ (1) ಗರಿಷ್ಠ 25,000 ರೂಪಾಯಿಗಳ ದಂಡವನ್ನು ವಿಧಿಸಬಹುದು ಎಂದು ಹೇಳುತ್ತದೆ.

ಅದರಂತೆ, ವಿಳಂಬದ ತಪ್ಪಿಗಾಗಿ ಅರ್ಜಿದಾರರಿಗೆ 25,000 ರೂಪಾಯಿಗಳ ದಂಡ ಮತ್ತು 10,000 ರೂಪಾಯಿಗಳ ಖಟ್ಲೆ ವೆಚ್ಚವನ್ನು ಪಾವತಿ ಮಾಡುವಂತೆ ಹೈಕೋರ್ಟ್‌ ಪೀಠವು  ಪಿಐಒಗೆ ನಿರ್ದೇಶನ ನೀಡಿತು.

"ಭ್ರಷ್ಟಾಚಾರ ಮತ್ತು ತಪ್ಪುಗಳನ್ನು ಎದುರಿಸುವಲ್ಲಿ ಮಾಹಿತಿಯ ಲಭ್ಯತೆಯು ಒಂದು ಪ್ರಮುಖ ಸಾಧನವಾಗಿದೆ. ತನಿಖಾ ಪತ್ರಕರ್ತರು ಮತ್ತು ಕಾವಲುಗಾರ ನಾಗರಿಕ ಸಮಾಜ ಸಂಸ್ಥೆಗಳು ತಪ್ಪನ್ನು ಬಹಿರಂಗಪಡಿಸಲು ಮತ್ತು ಅದನ್ನು ಬೇರುಸಹಿತ ಕಿತ್ತುಹಾಕಲು ಮಾಹಿತಿ ಪಡೆಯುವ ಹಕ್ಕನ್ನು ಬಳಸಬಹುದು. ಈ ಕಾನೂನುಗಳು ಸರ್ಕಾರ ಮತ್ತು ಸಾರ್ವಜನಿಕ ಅಧಿಕಾರಿಗಳು ಜನರ ಸೇವೆ ಸಲ್ಲಿಸಬೇಕು ಎಂಬ ಮೂಲಭೂತ ಕರ್ತವ್ಯವನ್ನು ಪ್ರತಿಬಿಂಬಿಸುತ್ತವೆ. ಇದಲ್ಲದೆ ಮಾಹಿತಿ ಹಕ್ಕಿನ ವ್ಯಾಪಕವಾದ ಮಾನ್ಯತೆಗೆ ಆಧಾರವಾಗಿರುವ ಇತರ ಹಲವಾರು ಹೆಚ್ಚು ಪ್ರಾಯೋಗಿಕ ವಿಚಾರಗಳೂ ಇವೆ" ಎಂದು ನ್ಯಾಯಾಲಯ ಹೇಳಿತು.

"ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ನಿಬಂಧನೆಗಳ ಅಡಿಯಲ್ಲಿಯೂ ಸಹ ಮಾಹಿತಿ ಲಭ್ಯತೆಯ ಹಕ್ಕನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಅಂಶವಾಗಿ ಗುರುತಿಸಲಾಗಿದೆ. ಮಾಹಿತಿಯನ್ನು ಹುಡುಕುವ ಮತ್ತು ಸ್ವೀಕರಿಸುವ ಹಕ್ಕು ಎಂದು ಅದು ಅರ್ಥೈಸಿದೆ.”

"ಸೆಕ್ಷನ್. 20ಸಬ್‌ ಸೆಕ್ಷನ್‌ (1) ನಿಬಂಧನೆಯ ಅಡಿಯಲ್ಲಿ ದಂಡವನ್ನು ವಿಧಿಸುವ ಮೊದಲು ಆರೋಪಿತ ವ್ಯಕ್ತಿಯ ಅಹವಾಲನ್ನು ಆಲಿಸಬೇಕು. ಆದರೆ ಮಾಹಿತಿಯನ್ನು ಒದಗಿಸುವಲ್ಲಿ ಅಥವಾ ಒದಗಿಸದೇ ಇರುವಲ್ಲಿ ತಾನು ಸಮಂಜಸವಾಗಿ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿರುವುದಾಗಿ ಸಾಬೀತು ಪಡಿಸುವ ಜವಾಬ್ದಾರಿಯನ್ನು ಆರೋಪಿತ ಅಧಿಕಾರಿಯ ಮೇಲೆ ಹೊರಿಸಿದೆ. ಈ ವಿಧಿಯು ಸಂಸತ್ತು ರೂಪಿಸಿರುವ ಕಾನೂನಿನ ಪ್ರಕಾರ ಶಾಸನಬದ್ಧವಾದ ಮಾಹಿತಿಯ ಹಕ್ಕಿನ ಮಹತ್ವ ಏನು ಎಂಬುದನ್ನು ತೋರಿಸುತ್ತದೆ. 2ನೇ ಪ್ರತಿವಾದಿಗೆ ದಂಡ ವಿಧಿಸದೆ ಅರ್ಜಿದಾರರ ಮನವಿಯನ್ನು ಮುಕ್ತಾಯಗೊಳಿಸುವುದು ಸರಿಯಲ್ಲ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು.

ಪ್ರಕರಣ: ಸಿಜೋ ಸೆಬಾಸ್ಟೈನ್ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಮತ್ತು ಇತರರು

ಆದೇಶದ ದಿನಾಂಕ: 2022  ಜುಲೈ 26.

Tuesday, August 2, 2022

ತಪ್ಪಾಗಿ ಬಂಧಿಸಿದರೆ ಜೋಕೆ! ರೂ.೫ ಲಕ್ಷ ಪರಿಹಾರಕ್ಕೆ ಹೈ ಆದೇಶ

 ತಪ್ಪಾಗಿ ಬಂಧಿಸಿದರೆ ಜೋಕೆರೂ. ಲಕ್ಷ ಪರಿಹಾರಕ್ಕೆ ಹೈ ಆದೇಶ

ಬೆಂಗಳೂರು: ಜಾಮೀನು ಸಹಿತ ಅಥವಾ ಜಾಮೀನುರಹಿತವಾದ ಯಾವುದೇ ವಾರಂಟ್ಹೊರಡಿಸಿದಾಗ ಬಂಧಿಸಬೇಕಾಗಿರುವ ವ್ಯಕ್ತಿಯ ಗುರುತನ್ನು ಅಧಿಕಾರಿಯು ಖಚಿತಪಡಿಸಿಕೊಳ್ಳಬೇಕು. ಬಂಧಿಸಲು ಉದ್ದೇಶಿಸಿರುವ ವ್ಯಕ್ತಿಯು ಅದೇ ವ್ಯಕ್ತಿ ಎಂಬುದನ್ನು ಖಚಿತವಾಗಿ ತಿಳಿದುಕೊಂಡಿರಬೇಕು ಎಂದು ಕರ್ನಾಟಕ ಹೈಕೋರ್ಟ್ಹೇಳಿದೆ.

೨೦೨೨ ಜುಲೈ ೭ರಂದು ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವ ಏಕಸದಸ್ಯ ಪೀಠವು ಅರ್ಜಿದಾರ ನಿಂಗರಾಜು ಎನ್ ಅವರ ಗುರುತಿನ ಗೊಂದಲವನ್ನು ಪರಿಗಣಿಸಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

"ಯಾರ ಹೆಸರಿನಲ್ಲಿ ವಾರಂಟ್ಹೊರಡಿಸಲಾಗಿದೆಯೋ ವ್ಯಕ್ತಿಯನ್ನು ಬಂಧಿಸಲು ನೀಡಲಾದ ಒಂದೇ ಕಾರಣ ಏನೆಂದರೆ ಅವನ ತಂದೆಯ ಹೆಸರು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿಯ ಹೆಸರನ್ನು ಹೋಲುತ್ತದೆ ಎಂಬುದಾಗಿದೆ. ಆದರೆ ತಂದೆಯ ಹೆಸರು ಹೋಲುತ್ತದೆ ಅಥವಾ ಒಂದೇ ಆಗಿರುತ್ತದೆ ಎಂಬುದು ವ್ಯಕ್ತಿಯನ್ನು ಬಂಧಿಸುವಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಇದೇ ಸೂತ್ರವನ್ನು ಅನ್ವಯಿಸಿದರೆ ತಂದೆಯ ಹೆಸರು ಒಂದೇ ರೀತಿ ಇದೆ ಎಂಬ ಕಾರಣಕ್ಕಾಗಿ ಒಬ್ಬ ಸಹೋದರ, ಇನ್ನೊಬ್ಬ ಸಹೋದರ ಅಥವಾ ಸಹೋದರಿಗಾಗಿ ಬಂಧನ ವಾರಂಟ್ ಹೊರಡಿಸಿ ಬಂಧಿಸಬಹುದು. ಇಲ್ಲಿ ಮುಖ್ಯವಾದ ವಿಚಾರ ಬಂಧನಕ್ಕೊಳಗಾಗಬೇಕಾದ ವ್ಯಕ್ತಿಯ ಗುರುತು ಮತ್ತು ತಂದೆಯ ಹೆಸರಿನಂತಹ ಯಾವುದೇ ಅಂಶವಲ್ಲ, ಆದರೆ ಬಂಧಿತನಾಗಬೇಕಾದ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳುವುದುಎಂದು ತೀರ್ಪು ಹೇಳಿದೆ.

"ಭಾರತೀಯ ಸಂವಿಧಾನದ ಅನುಚ್ಛೇದ 21 ಅಡಿಯಲ್ಲಿ ಖಾತರಿಪಡಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಅತ್ಯಂತ ಪ್ರಾಮುಖ್ಯತೆ ಹೊಂದಿರುವಂತಹುದು. ಅಧಿಕೃತವಲ್ಲದ ಯಾವುದೇ ವ್ಯಕ್ತಿಯನ್ನು ಬಂಧಿಸುವ ಮೂಲಕ ನಡೆಯುವ ಬಂಧನವು ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ." ಎಂದೂ ಹೈಕೋರ್ಟ್ಹೇಳಿತು.

ದಾಖಲೆಗಳನ್ನು ಪರಿಶೀಲಿಸಿದಾಗ ಬಂಧಿತನು ವಾರೆಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ಮತ್ತು ಅವನಿಗೆ ವಾರೆಂಟ್ ಅನ್ವಯಿಸುವ ಬಗ್ಗೆ ವಾದ ಮಂಡಿಸಿದ್ದರೂ, ಅವನ ಗುರುತನ್ನು ಅಡ್ಡ-ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗಿಲ್ಲ. ಪರಿಣಾಮವಾಗಿ ಒಬ್ಬ ಅಮಾಯಕನನ್ನು ಬಂಧಿಸಲಾಯಿತು ಎಂಬುದು ದೃಢಪಟ್ಟಿದೆ ಎಂದು ಕೋರ್ಟ್ಹೇಳಿತು.

ಬಂಧಿತನು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಬಂಧಿಸಿದ ಅಧಿಕಾರಿ ಅದನ್ನು ಪರಿಶೀಲಿಸಲಿಲ್ಲ, ಬದಲಿಗೆ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದರಿಂದಾಗಿ ಆತನ ಸ್ವಾತಂತ್ರ್ಯಕ್ಕೆ ಹಾನಿ ಮತ್ತು ಘಾಸಿಯಾಗಿದೆಎಂದೂ ಕೋರ್ಟ್ಅಭಿಪ್ರಾಯ ಪಟ್ಟಿತು.

ಕಾರಣಕ್ಕಾಗಿ ಬಂಧಿತ ವ್ಯಕ್ತಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಹೇಳಿದ ಪೀಠವು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.

ತೀರ್ಪು ನೀಡಿದ ದಿನದಿಂದ ದಿನಗಳ ಅವಧಿಯಲ್ಲಿ ಪರಿಹಾರವನ್ನು ಪಾವತಿ ಮಾಡಬೇಕು. ಸರ್ಕಾರವು ಅರ್ಜಿದಾರನನ್ನು ಬಂಧಿಸಿದ ಅಧಿಕಾರಿಗಳಿಂದ ಹಣವನ್ನು ರಾಜ್ಯ ಸರ್ಕಾರವು ವಸೂಲಿ ಮಾಡಬಹುದು ಎಂದೂ ಪೀಠ ಹೇಳಿತು.

ಬಂಧನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ, ನಿಗದಿತ ಕಾರ್ಯ ವಿಧಾನವನ್ನು ನೀಡುವಂತೆ ಪೊಲೀಸ್ಮಹಾ ನಿರ್ದೇಶಕರಿಗೂ ಕೋರ್ಟ್ಸೂಚಿಸಿದೆ. ಇಂತಹ ಮಾರ್ಗಸೂಚಿ, ಕಾರ್ಯವಿಧಾನವನ್ನು ಈಗಾಗಲೇ ನೀಡಿದ್ದರೆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ತರಬೇತಿ ನೀಡುವಂತೆಯೂ ಪೀಠವು ನಿರ್ದೇಶನ ನೀಡಿತು.

Advertisement