Showing posts with label music. Show all posts
Showing posts with label music. Show all posts

Monday, April 6, 2026

ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

 ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

ಚೆನ್ನೈ: ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲೆಯ ಕಡೆಗೆ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ಇತ್ತೀಚೆಗೆ ಅವರು ಖ್ಯಾತ ಸಂಗೀತ ಸಂಯೋಜಕ ತಿರು ರಮೇಶ್ ವಿನಾಯಕಮ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿ, ಭಾರತೀಯ ಸಂಗೀತ ಜಗತ್ತಿನ ಹೊಸ ಆವಿಷ್ಕಾರವೊಂದನ್ನು ಕಣ್ತುಂಬಿಕೊಂಡರು.

ಭಾರತೀಯ ಸಂಗೀತಕ್ಕೆ ಜಾಗತಿಕ ಮನ್ನಣೆ: ಏನಿದು 'ಗಮಕ ಬಾಕ್ಸ್'?

ರಮೇಶ್ ವಿನಾಯಕಮ್ ಅವರು ತಮ್ಮ ಜೀವನವನ್ನೇ ಭಾರತೀಯ ಸಂಗೀತದ ಪ್ರಸಾರಕ್ಕಾಗಿ ಮುಡಿಪಾಗಿಟ್ಟವರು. ಅವರು ತಾವು ಅಭಿವೃದ್ಧಿಪಡಿಸಿರುವ 'ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್' (Gamaka Box Notation System) ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು.

  • ವಿಶೇಷತೆ: ಭಾರತೀಯ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಅಂಗವಾದ 'ಗಮಕ'ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಅರ್ಥೈಸಲು ಈ ವ್ಯವಸ್ಥೆ ಸಹಕಾರಿ.
  • ಪ್ರಧಾನಿಯವರ ಮೆಚ್ಚುಗೆ: ಈ ಕುರಿತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, "ಇದು ನಮ್ಮ ಸಂಗೀತವನ್ನು ವಿಶ್ವದಾದ್ಯಂತ ಕೊಂಡೊಯ್ಯುವ ಒಂದು ನವೀನ ಮಾರ್ಗ" ಎಂದು ಶ್ಲಾಘಿಸಿದ್ದಾರೆ. 

"ಚುನಾವಣಾ ಪ್ರಚಾರದ ನಡುವೆ ರಮೇಶ್ ವಿನಾಯಕಮ್‌ ಜೀ ಮತ್ತು ಅವರ ಕುಟುಂಬವನ್ನು ಭೇಟಿಯಾದದ್ದು ಸಂತಸ ತಂದಿದೆ. ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಲು ಅವರು ಮಾಡುತ್ತಿರುವ ಕೆಲಸ ಅದ್ಭುತವಾಗಿದೆ," ಎಂದು ಪ್ರಧಾನಿ ಬಣ್ಣಿಸಿದ್ದಾರೆ. ☝ ವಿಡಿಯೋ ನೋಡಿ.

ನವೀನ ಆವಿಷ್ಕಾರಕ್ಕೆ ಪ್ರಧಾನಿ ಸಾಕ್ಷಿ

ರಮೇಶ್ ವಿನಾಯಕಮ್‌ ಅವರು ತಮ್ಮ ಸಂಶೋಧನೆಯ ಒಂದು ಸಣ್ಣ ಝಲಕ್ ಅನ್ನು ಪ್ರಧಾನಿಯವರಿಗೆ ಪ್ರದರ್ಶಿಸಿದರು. ಕೇವಲ ರಾಜಕೀಯ ಮಾತ್ರವಲ್ಲದೆ, ಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನಕ್ಕೆ ಪ್ರಧಾನಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತೀಯ ಸಂಗೀತದ ಈ ಹೊಸ ಹೆಜ್ಜೆ ಮುಂದಿನ ದಿನಗಳಲ್ಲಿ ಜಾಗತಿಕ ವೇದಿಕೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Sunday, May 11, 2025

ವಿಶ್ವ ಅಮ್ಮಂದಿರ ದಿನಾಚರಣೆ....

 ವಿಶ್ವ ಅಮ್ಮಂದಿರ ದಿನಾಚರಣೆ....

ಮ್ಮ ಎಂದು ಕರೆಯುವ  ಪದದಲ್ಲಿ ಏನೋ ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿ ಮುಂದೆ ಅದೆಲ್ಲ ನಗಣ್ಯ ಹೀಗಾಗಿ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯನ್ನು ಹೊಗಳಲು ಪದಗಳಿಲ್ಲ.  ತಾಯಿ ತನ್ನ ಮಗುವಿಗೆ ತೋರಿಸುವ ಪ್ರೀತಿ, ಕಾಳಜಿ ಮತ್ತು ತ್ಯಾಗವನ್ನು ಪ್ರಶಂಸಿಸಲು ಪ್ರತಿ ವರ್ಷ ವಿಶ್ವ ತಾಯಂದಿರ ದಿನವನ್ನು (ಮೇ ೧೧) ಆಚರಿಸಲಾಗುತ್ತದೆ...

ಈ ಸಂದರ್ಭಕ್ಕೊಂದು ಸುಂದರವಾದ ಹಾಡನ್ನು ಬರೆದಿದ್ದಾರೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್.‌ ಅವರ ಹಾಡಿಗೆ ಇಂಪಾಗಿ ಧ್ವನಿ ನೀಡಿದ್ದಾರೆ ಸುಪ್ರಿಯಾ.

ವಿಡಿಯೋ ಸಹಿತವಾಗಿ ಹಾಡು ಕೇಳಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

Thursday, March 20, 2025

ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

 ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ಈಕೆಯ ಪಿಟೀಲು ವಾದನದ ಮಾಧುರ್ಯಕ್ಕೆ ತಲೆದೂಗದವರಿಲ್ಲ.

ಆದರೆ ಇತ್ತೀಚೆಗೆ ಕೇರಳದ ಅಲಪ್ಪುಳದ ಕೊಟ್ಟಂಕುಲಂಗರ ದೇವಸ್ಥಾನದಲ್ಲಿ ಈಕೆಯ ಭಕ್ತಿ ಸಂಗೀತಕ್ಕೆ ಪೊಲೀಸರ ತಡೆ ಬಿತ್ತು. ದೇವಸ್ಥಾನದಲ್ಲಿ ಇನ್ನೂ ಉತ್ಸವ ಮುಂದುವರೆದಿತ್ತು. ದೇವಸ್ಥಾನ ಸಮೀಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಬಾಲಕಿ ಶಶಿ ಭಾವಪೂರ್ಣವಾಗಿ ಪಿಟೀಲು ವಾದನದಲ್ಲಿ ನಿರತಳಾಗಿದ್ದಳು.

ಆಕೆ ನುಡಿಸುತ್ತಿದ್ದ ʼಮರುತಮಲೈ ಮಾಮನಿಯೇ ಮುರುಗಯ್ಯʼ ತಮಿಳು ಹಾಡಿಗೆ ಅಲ್ಲಿ ನೆರೆದಿದ್ದ ಸಹಸ್ರಾರು ಮಂದಿ ತಲೆದೂಗುತ್ತಾ ಕುಳಿತಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ʼರಾತ್ರಿ ೧೦ ಗಂಟೆಯಾಗಿದೆ. ಕಚೇರಿ ನಿಲ್ಲಿಸುʼ ಎಂದು ಆಕೆಯ ಬಳಿಗೆ ವೇದಿಕೆಯೇರಿ ಬಂದು ಸೂಚಿಸಿದರು. ಈ ದಿಢೀರ್‌ ಸೂಚನೆಯಿಂದ ಪುಟ್ಟ ಬಾಲಕಿ ಆಘಾತಕ್ಕೆ ಒಳಗಾದಳು. ನೆರೆದಿದ್ದ ಜನರೂ ದಿಗ್ಭ್ರಮೆಗೊಂಡರು. ಪೊಲೀಸರೂ ಬಂದು ಸಂಗೀತ ಕಾರ್ಯಕ್ರಮ ನಿಲ್ಲಿಸಿದರು.

ಕೊನೆಗೆ ಆ ಪುಟ್ಟ ಬಾಲಕಿ ಕೊಠಡಿಯೊಂದರಲ್ತಲಿ ಪ್ರೀತಿಯ ಪಿಟೀಲನ್ನು ಹಿಡಿದುಕೊಂಡು ಕುಳಿತಿದ್ದ ದೃಶ್ಯವನ್ನು ಕೂಡಾ ಸೇರಿಸಿ ಮಲಯಾಳಂ ಮನೋರಮಾ ವರದಿ ಮಾಡಿದೆ.

ಪುಟ್ಟ ಬಾಲಕಿಯ ಪಿಟೀಲುವಾದನಕ್ಕೆ ತಡೆ ಹಾಕಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ. 

ಈ ಘಟನೆ ಬಗ್ಗೆ ನಿಮಗೆ ಏನನ್ನಿಸಿತು? ಕಾಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.

ಬಾಲಕಿಯ ಮಧುರವಾದ ಪಿಟೀಲು ಧ್ವನಿ ಆಲಿಸಲು ಈ ಕೆಳಗಿನ ಸುದ್ದಿಯಲ್ಲಿನ ವಿಡಿಯೋ ನೋಡಿರಿ:

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

Sunday, February 6, 2022

ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

 ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ  ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.

ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.

ಗಾನ ಕೋಗಿಲೆ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.

ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.

೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..

ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ  ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ  ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.

ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.

ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.

ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು  ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.

ಲತಾ ಮಂಗೇಶ್ಕರ್ ಅವರ ಮೈ ನವಿರೇಳಿಸುವ ಒಂದು ಹಾಡಿನ ಪರಿ ಇಲ್ಲಿದೆ ನೋಡಿ.

ಲತಾ ಹಾಡಿನ ಮೋಡಿ



Sunday, October 11, 2020

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನ

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನ

ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಅಕ್ಟೋಬರ್ ೧೧ರ ಭಾನುವಾರ  ರಾತ್ರಿ ೧೦.೩೦ಕ್ಕೆ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಅವರು ಮನೆಯಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರು ಎಳೆದರು.

ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ರಾಜನ್-ನಾಗೇಂದ್ರ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. ೧೯೫೨ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜೋಡಿ, ಸುಮಾರು ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. ೧೯೫೨ರಿಂದ ೧೯೯೯ರವರೆಗೆ ೩೭೫ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಇದರಲ್ಲಿ ಕನ್ನಡದ ೨೦೦ಕ್ಕೂ ಅಧಿಕ ಸಿನಿಮಾಗಳು. ತೆಲುಗಿನಲ್ಲಿಯೂ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು. ರಾಜನ್ ಅವರ ಸಹೋದರ ನಾಗೇಂದ್ರ ಅವರು ೨೦೦೦ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು.

 ಮಂತ್ರಾಲಯ ಮಹಾತ್ಮೆ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಎರಡು ಕನಸು, ಕಳ್ಳ ಕುಳ್ಳ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಆಟೋ ರಾಜ, ಗಾಳಿಮಾತು, ಚಲಿಸುವ ಮೋಡಗಳು, ಬೆಟ್ಟದ ಹೂವು, ಸುಪ್ರಭಾತ, ಮತ್ತೆ ಹಾಡಿತು ಕೋಗಿಲೆ, ಕರುಳಿನ ಕುಡಿ, ಪರಸಂಗದ ಗೆಂಡೆತಿಮ್ಮ, ಶ್ರೀನಿವಾಸ ಕಲ್ಯಾಣ ಮುಂತಾದವು. ಅದರಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳೇ ಜಾಸ್ತಿ. ಬಾನಲ್ಲೂ ನೀನೇ ಭುವಿಯಲ್ಲೂ ನೀನೇ.., ಬಂz ಬಾಳಿನ ಬೆಳಕಾಗಿ.., ಚೆಲುವೆಯ ಅಂದದ ಮೊಗಕೆ.., ಎಂದೆಂದೂ ನಿನ್ನನು ಮರೆತು..., ಹೊಸ ಬಾಳಿಗೆ ನೀ ಜೊತೆಯಾದೆ..,ನಲಿವಾ ಗುಲಾಬಿ ಹೂವೇ.., ನಾವಾಡುವ ನುಡಿಯೇ ಕನ್ನಡ ನುಡಿ...., ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.., ತೇರಾ ಏರಿ ಅಂಬರದಾಗೆ ನೇಸರ ನಗುತಾನೇ... ಮುಂತಾದವು ರಾಜನ್-ನಾಗೇಂದ್ರ ಜೋಡಿಯ ಸಾರ್ವಕಾಲಿಕ ಹಿಟ್ ಗೀತೆಗಳು.

Monday, August 17, 2020

ಹಾಡು ಮುಗಿಸಿದ ಸಂಗೀತ ದಂತಕಥೆ ಪಂಡಿತ್ ಜಸರಾಜ್

 ಹಾಡು ಮುಗಿಸಿದ ಸಂಗೀತ ದಂತಕಥೆ ಪಂಡಿತ್ ಜಸರಾಜ್

ನವದೆಹಲಿ: ಶಾಸ್ತ್ರೀಯ ಸಂಗೀತ ಕ್ಷೇತ್ರದ ದಂತಕತೆಯಾಗಿರುವ ಹಿರಿಯ ಗಾಯಕ ಪಂಡಿತ್ ಜಸರಾಜ್ ಅವರು ತಮ್ಮ ೯೦ ನೇ ವಯಸ್ಸಿನಲ್ಲಿ 2020 ಆಗಸ್ಟ್ 17ರ ಸೋಮವಾರ ಅಮೆರಿಕದಲ್ಲಿ ನಿಧನರಾದರು. ಸೋಮವಾರ ಬೆಳಿಗ್ಗೆ : ೧೫ ಕ್ಕೆ ತಮ್ಮ ತಂದೆ ಕೊನೆಯುಸಿರು ಎಳೆದರು ಎಂದು ಜಸ್ ರಾಜ್ ಪುತ್ರಿ ದುರ್ಗಾ ಜಸರಾಜ್ ಹೇಳಿಕೆಯಲ್ಲಿ ದೃಢಪಡಿಸಿದರು.

ಜಸರಾಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

"ಅಮೆರಿಕದ ನ್ಯೂಜೆರ್ಸಿಯ ಮನೆಯಲ್ಲಿ, ಹೃದಯ ಸ್ತಂಭನದಿಂದಾಗಿ ಸಂಗೀತ ಮಾರ್ತಾಂಡ ಪಂಡಿತ ಜಸರಾಜ್ ಜಿ ಅವರು ಸೋಮವಾರ ಬೆಳಗ್ಗ್ಗೆ : ೧೫ ಕ್ಕೆ ನಿಧನರಾದರು ಎಂದು ತಿಳಿಸಲು ನಾವು ಅತೀವವಾಗಿ ದುಃಖಿಸುತ್ತೇವೆ. ಭಗವಾನ್ ಕೃಷ್ಣನು ಅವರನ್ನು ಸ್ವರ್ಗದ ಬಾಗಿಲುಗಳ ಮೂಲಕ ಪ್ರೀತಿಯಿಂದ ಸ್ವಾಗತಿಸಲಿ, ಅಲ್ಲಿ ಪಂಡಿತ್ ಜಿ ಈಗ ಓಂ ನಮೋ ಭಗವತೆ ವಾಸುದೇವವನ್ನು ಕೇವಲ ತನ್ನ ಪ್ರೀತಿಯ ಭಗವಂತನಿಗಾಗಿ ಮಾತ್ರ ಹಾಡಲಿದ್ದಾರೆ. ಅವರ ಆತ್ಮವು ಶಾಶ್ವತ ಸಂಗೀತ ಶಾಂತಿಯಿಂದ ಕೂಡಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನಿಮ್ಮೆಲ್ಲರ ಚಿಂತನೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು- ಪಂಡಿತ್ ಜಸರಾಜ್ ಜಿ ಅವರ ಕುಟುಂಬ ಮತ್ತು ಮೇವತಿ ಘರಾನಾ ವಿದ್ಯಾರ್ಥಿಗಳು ಎಂದು ದುರ್ಗಾ ಜಸರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏಳು ದಶಕಗಳಿಗಿಂತಲೂ ಹೆಚ್ಚು ಕಾಲ ಗಾಯನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಪಂಡಿತ್ ಜಸರಾಜ್ ಅವರು ಪದ್ಮಶ್ರೀ, ಪದ್ಮಭೂಷಣ, ಮತ್ತು ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳಿಗೆ ಪಾತ್ರರಾಗಿದ್ದರು.

೧೯೩೦ ರಲ್ಲಿ ಹರಿಯಾಣದ ಹಿಸ್ಸಾರ್ ಪ್ರದೇಶದಲ್ಲಿ ಜನಿಸಿದ ಜಸರಾಜ್ ಸಂಗೀತಗಾರರ ಕುಟುಂಬಕ್ಕೆ ಸೇರಿದವರು. ಅವರ ತಂದೆ ಪಂಡಿತ್ ಮೋತಿರಾಮ್ ಮತ್ತು ಸಹೋದರರಾದ ಪ್ರತಾಪ್ ನಾರಾಯಣ್ ಮತ್ತು ಮಣಿರಾಮ್ ಸಹ ನುರಿತ ಸಂಗೀತಗಾರರಾಗಿದ್ದರು.

ಸೋದರಳಿಯಂದಿರಾದ ಜತಿನ್-ಲಲಿತ್ ಮತ್ತು ಸೋದರ ಸೊಸೆಯರಾದ ಸುಲಕ್ಷನಾ ಮತ್ತು ವಿಜೇತ ಪಂಡಿತ್ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರು ಮುಂಬೈ ಚಲನಚಿತ್ರೋದ್ಯಮಕ್ಕೆ ಸೇರಿದವರಾಗಿದ್ದಾರೆ.

ಜಸರಾಜ್ ಅವರು ೧೯೬೨ ರಲ್ಲಿ ಖ್ಯಾತ ನಿರ್ದೇಶಕ ವಿ ಶಾಂತಾರಾಮ್ ಅವರ ಮಗಳು ಮಧುರಾ ಅವರನ್ನು ವಿವಾಹವಾದರು ಮತ್ತು ಮಗಳು ದುರ್ಗಾ ಮತ್ತು ಮಗ ಶಾರಂಗ್ ದೇವ್ ಇಬ್ಬರು ಮಕ್ಕಳನ್ನು ಹೊಂದಿದ್ದರು. ೨೦೦೯ ರಲ್ಲಿ, ಮಧುರಾ ಅವರು ಪಂಡಿತ್ ಜಸರಾಜ್ ಅವರ ಜೀವನ ಮತ್ತು ಸಾಧನೆಗಳ ಆಧಾರದ ಮೇಲೆ ಒಂದು ಚಲನಚಿತ್ರವನ್ನು ಸಹ ನಿರ್ಮಿಸಿದ್ದರು. ಇದಕ್ಕೆ ಸಂಗೀತ ಮಾರ್ತಾಂಡ ಪಂಡಿತ ಜಸರಾಜ್ ಎಂದು ಹೆಸರಿಡಲಾಗಿತ್ತು.

ಜಸರಾಜ್ ಚಿಕ್ಕ ವಯಸ್ಸಿನಲ್ಲಿಯೇ ಟೇಬಲ್ ಪ್ಲೇಯರ್ ಆಗಿ ಕಲಾ ಸೇವೆ ಆರಂಭಿಸಿದ್ದರು. ಆದರೆ ಶೀಘ್ರದಲ್ಲೇ ಗಾಯನದತ್ತ ಹೊರಳಿದರು. ಅವರು ತಮ್ಮ ಸಂಗೀತದ ಪ್ರಯೋಗವನ್ನು ಪ್ರಾರಂಭಿಸುವ ಮೊದಲು ವರ್ಷಗಳ ಕಾಲ ರೇಡಿಯೊದಲ್ಲಿ ಹಾಡಿದ್ದರು. ಸಾಂಪ್ರದಾಯಿಕಖಯಾಲ್ ಅಂಶಗಳನ್ನುತುಮ್ರಿಯೊಂದಿಗೆ ಬೆರೆಸುವಲ್ಲಿ ಅವರು ಹೆಸರುವಾಸಿಯಾದರು, ಇದು ಸ್ವರವನ್ನು ಸ್ವಲ್ಪ ಹಗುರವಾಗಿಸಿದರೂ, ಬಹಳ ಪರಿಣಾಮಕಾರಿಯಾಗಿ ಮಾಡಿತು. ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಪ್ರೇಕ್ಷಕರಿಗೆ ಹೆಚ್ಚು ಮೆಚ್ಚುವಂತೆ ಮಾಡುವುದು ಅವರ ಪ್ರಯತ್ನವಾಗಿತ್ತು, ಅದು ಅವರನ್ನು ಚಲನಚಿತ್ರ ಸಂಗೀತಕ್ಕೆ ಕರೆದೊಯ್ಯಿತು.

ಅವರು ೧೯೭೫ ರಲ್ಲಿ ಬೀರ್‌ಬಲ್ ಮೈ ಬ್ರದರ್ ಸಂಗೀತಕ್ಕಾಗಿ ಪಂಡಿತ ಭೀಮಸೇನ ಜೋಶಿ ಅವರೊಂದಿಗೆ ಸಹಯೋಗ ನೀಡಿದರು. ೧೯೨೦ರಲ್ಲಿ ನಿರ್ಮಾಣವಾಗಿದ್ದ ವಿಕ್ರಮ್ ಭಟ್ ಚಲನಚಿತ್ರದ ಹಾಡು ಅವರ ಕೊನೆಯ ಹಾಡುಗಳಲ್ಲಿ ಒಂದಾಗಿತ್ತು. ಅದಕ್ಕೆವಾಡಾ ತುಮ್ಸೆ ಹೈ ವಾಡಾ ಎಂದು ಹೆಸರಿಡಲಾಗಿತ್ತು.

ಭಾರತೀಯ ಶಾಸ್ತ್ರೀಯ ಮತ್ತು ಚಲನಚಿತ್ರ ಸಂಗೀತ ಎರಡರಲ್ಲೂ ದೊಡ್ಡ ಹೆಸರು ಸಂಪಾದಿಸಿದ ಜಸರಾಜ್ ವಿಶ್ವದ ಅನೇಕ ಭಾಗಗಳಲ್ಲಿ ಸಂಗೀತ ಶಾಲೆಗಳನ್ನು ತೆರೆದರು. ಅವರು, ಪಂಡಿತ ರವಿಶಂಕರ್ ಅವರೊಂದಿಗೆ ಭಾರತೀಯ ಸಂಗೀತವನ್ನು ಪಶ್ಚಿಮದಲ್ಲಿ ಜನಪ್ರಿಯಗೊಳಿಸಿದರು.

ಮಂಗಳ ಮತ್ತು ಗುರು ಗ್ರಹಗಳ ನಡುವಿನ ಒಂದು ಸಣ್ಣ ಗ್ರಹಕ್ಕೆ ಕಳೆದ ವರ್ಷ ಪಂಡಿತ್ ಜಸರಾಜ್ ಹೆಸರಿಡಲಾಗಿತ್ತು. ಇದರೊಂದಿಗೆ ಮೊಜಾರ್ಟ್, ಬೀಥೋವೆನ್ ಮತ್ತು ಟೆನೋರ್ ಲೂಸಿಯಾನೊ ಪವರೊಟ್ಟಿಯಂತಹ ಅಮರ ಸಂಯೋಜಕರ ನಕ್ಷತ್ರಪುಂಜಕ್ಕೆ ಸೇರಿದ ಮೊದಲ ಭಾರತೀಯ ಸಂಗೀತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

೨೦೨೦ರ ಜನವರಿಯಲ್ಲಿ ಜಸರಾಜ್ ಅವರಿಗೆ ೯೦ ವರ್ಷ ತುಂಬಿತ್ತು.

ಪ್ರಧಾನಿ ಮೋದಿ ಕಂಬನಿ

ಪೌರಾಣಿಕ ಗಾಯಕ ಜಸರಾಜ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು "ಅವರ ಹಾಡುಗಳು ಅತ್ಯುತ್ತಮವಾಗಿದ್ದವು ಮಾತ್ರವಲ್ಲ, ಇತರ ಹಲವಾರು ಗಾಯಕರಿಗೆ ಅಸಾಧಾರಣ ಮಾರ್ಗದರ್ಶಕರಾಗಿ ಅವರು ಗುರುತಿಸಿಕೊಂಡರು" ಎಂದು ಟ್ವೀಟ್ ಮಾಡಿದರು.

Advertisement