Showing posts with label Rahul Gandhi. Show all posts
Showing posts with label Rahul Gandhi. Show all posts

Sunday, December 21, 2025

ರಾಹುಲ್ ಗಾಂಧಿ ಪೌರತ್ವ ಕೇಸ್: ರಾಯಬರೇಲಿಯಿಂದ ಲಕ್ನೋಗೆ

 ರಾಹುಲ್ ಗಾಂಧಿ ಪೌರತ್ವ ವಿವಾದ: ರಾಯಬರೇಲಿಯಿಂದ ಲಕ್ನೋಗೆ !

ರಾಯಬರೇಲಿಯ ನ್ಯಾಯಾಲಯದಲ್ಲಿ ಸೃಷ್ಟಿಯಾದ ಆತಂಕದ ವಾತಾವರಣ ಮತ್ತು ಬೆದರಿಕೆಯ ಆರೋಪಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ದೂರಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಲಕ್ನೋಗೆ ವರ್ಗಾಯಿಸಿದೆ.

📍 ವರ್ಗಾವಣೆಗೆ ಮುಖ್ಯ ಕಾರಣಗಳೇನು?

ಅರ್ಜಿದಾರರಾದ ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರ ಪೀಠವು ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿ ಆದೇಶ ಹೊರಡಿಸಿದೆ:

  • ನ್ಯಾಯಾಲಯದಲ್ಲಿ ಗದ್ದಲ: ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಸ್ಥಳೀಯ ವಕೀಲರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಘೋಷಣೆಗಳನ್ನು ಕೂಗುತ್ತಿದ್ದರು.
  • ಬೆದರಿಕೆ ಆರೋಪ: ಡಿಸೆಂಬರ್ 5, 2025 ರಂದು ಅರ್ಜಿದಾರರು ಮತ್ತು ಅವರ ವಕೀಲರ ಮೇಲೆ ಹಲ್ಲೆ ಹಾಗೂ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವಿದೆ.
  • ಭದ್ರತಾ ಲೋಪ: ಹೈಕೋರ್ಟ್ ನೀಡಿದ್ದ ವೈಯಕ್ತಿಕ ಭದ್ರತಾ ಅಧಿಕಾರಿಯನ್ನು (PSO) ಬಲವಂತವಾಗಿ ನ್ಯಾಯಾಲಯದಿಂದ ಹೊರಹಾಕಲಾಗಿತ್ತು ಎಂದು ಅರ್ಜಿದಾರರು ದೂರಿದ್ದಾರೆ.
  • ನಿಷ್ಪಕ್ಷಪಾತ ವಿಚಾರಣೆ: ರಾಹುಲ್ ಗಾಂಧಿ ಅವರು ರಾಯಬರೇಲಿಯ ಹಾಲಿ ಸಂಸದರಾಗಿರುವುದರಿಂದ, ಅಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ಸಾಧ್ಯವಿಲ್ಲ ಎಂಬ ಆತಂಕವನ್ನು ಕೋರ್ಟ್ ಮಾನ್ಯ ಮಾಡಿದೆ.

🔍 ಪ್ರಕರಣದ ಹಿನ್ನೆಲೆ ಏನು?

ಈ ವಿವಾದವು ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳ ಮುಚ್ಚಿಡುವಿಕೆಗೆ ಸಂಬಂಧಿಸಿದೆ. ಅರ್ಜಿದಾರರು ಈ ಕೆಳಗಿನ ಕಾಯ್ದೆಗಳ ಅಡಿಯಲ್ಲಿ FIR ದಾಖಲಿಸಲು ಕೋರಿದ್ದರು:

  1. ಭಾರತೀಯ ನ್ಯಾಯ ಸಂಹಿತೆ (BNS)
  2. ಅಧಿಕೃತ ರಹಸ್ಯಗಳ ಕಾಯ್ದೆ (Official Secrets Act)
  3. ಪಾಸ್‌ಪೋರ್ಟ್ ಕಾಯ್ದೆ
  4. ವಿದೇಶಿಯರ ಕಾಯ್ದೆ (Foreigners Act)

"ನ್ಯಾಯದ ಹಿತದೃಷ್ಟಿಯಿಂದ ಮತ್ತು ಪಾರದರ್ಶಕ ವಿಚಾರಣೆಗಾಗಿ ಈ ಪ್ರಕರಣವನ್ನು ರಾಯಬರೇಲಿಯ ಸಂಸದ/ಶಾಸಕರ (MP/MLA) ನ್ಯಾಯಾಲಯದಿಂದ ಲಕ್ನೋದ ಸಮರ್ಥ ನ್ಯಾಯಾಲಯಕ್ಕೆ ತಕ್ಷಣವೇ ವರ್ಗಾಯಿಸಬೇಕು."ಅಲಹಾಬಾದ್ ಹೈಕೋರ್ಟ್

📋 ಪ್ರಕರಣದ ವಿವರ (Case Title)

ಎಸ್. ವಿಘ್ನೇಶ್ ಶಿಶಿರ್ Vs ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಇತರರು.

Sunday, December 27, 2020

ರಾಹುಲ್ ವಿಡಿಯೋ ಮೂಲಕ ಕಾಲೆಳೆದ ನಡ್ಡಾ!

 ರಾಹುಲ್ ವಿಡಿಯೋ ಮೂಲಕ  ಕಾಲೆಳೆದ ನಡ್ಡಾ!

ನವದೆಹಲಿ: ಹಳೆಯ ವಿಡಿಯೋ ಒಂದನ್ನು ತಮ್ಮ ಟ್ವೀಟಿಗೆ ಜೋಡಿಸಿಇದೆಂತಹ ಮ್ಯಾಜಿಕ್ ರಾಹುಲ್ ಜಿಎಂಬುದಾಗು ಪ್ರಶ್ನಿಸುವ ಮೂಲಕ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅರು 2020 ಡಿಸೆಂಬರ್ 27ರ ಭಾನುವಾರ ಕೃಷಿ ಸುಧಾರಣಾ ಮಸೂದೆಗಳ ವಿರುದ್ಧ ಧ್ವನಿ ಎತ್ತಿರುವ ರಾಹುಲ್ ಗಾಂಧಿಯವರ ಕಾಲೆಳೆದರು.

ಬಿಜೆಪಿ ಅಧ್ಯಕ್ಷರು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಭಾಷಣದ ಹಳೆಯ ವಿಡಿಯೋವನ್ನು ಹಂಚಿಕೊಂಡರು.  ಇದರಲ್ಲಿ ರೈತರನ್ನು ಮಧ್ಯವರ್ತಿಗಳ ಮುಷ್ಠಿಯಿಂದ ಬಿಡಿಸಬೇಕಾದ ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಉದ್ಯಮಕ್ಕೆ ಮಾರಾಟ ಮಾಡುವ ಅವಕಾಶ ಒದಗಿಸಬೇಕಾದ ಅಗತ್ಯವನ್ನು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.

"ರಾಹುಲ್ ಜಿ ಏನಾಗುತ್ತಿದೆ? ನೀವು ಹಿಂದೆ ಪ್ರತಿಪಾದಿಸಿದ್ದನ್ನು ಈಗ ನೀವೇ ವಿರೋಧಿಸುತ್ತಿದ್ದೀರಿ. ನಿಮಗೆ ದೇಶದ ಅಥವಾ ರೈತರ ಹಿತಾಸಕ್ತಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ನಿಮಗೆ ರಾಜಕೀಯದ ಆಟ ಮಾತ್ರ ಬೇಕಾಗಿದೆ. ಆದರೆ ನಿಮ್ಮ ಬೂಟಾಟಿಕೆ ಕೆಲಸ ಮಾಡುವುದಿಲ್ಲ. ದೇಶದ ಜನರು ಮತ್ತು ರೈತರು ನಿಮ್ಮ ಡಬಲ್ ಸ್ಟ್ಯಾಂಡರ್ಡ್ನ್ನು ಗುರುತಿಸಿದ್ದಾರೆಎಂದು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಜೆ.ಪಿ. ನಡ್ಡಾ ಅದಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದ ವಿಡಿಯೋವನ್ನು ಜೋಡಿಸಿದ್ದಾರೆ.

ಮೂರು ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಕಾಂಗ್ರೆಸ್ ಬೆಂಬಲಿಸಿದೆ, ಇದು ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಖಾಸಗಿ ಆಟಗಾರರಿಗೆ ಮಾರಾಟ ಮಾಡುವ ಆಯ್ಕೆಯನ್ನು ನೀಡುತ್ತದೆ. ಕಾನೂನುಗಳು ಕೃಷಿ ಕ್ಷೇತ್ರಕ್ಕೆ ಅಸ್ತಿತ್ವದಲ್ಲಿರುವ ಸರ್ಕಾರದ ಬೆಂಬಲವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ ಎಂದು ಆಕ್ರೋಶಗೊಂಡ ರೈತರು ವಾದಿಸಿದ್ದಾರೆ, ಇದನ್ನು ಕೇಂದ್ರ ನಿರಾಕರಿಸಿದೆ.

ಅಮೇಥಿಯಿಂದ ಸಂಸದರಾಗಿದ್ದಾಗ ಕೊನೆಯ ಲೋಕಸಭೆಯಲ್ಲಿ ಮಾಡಿದ್ದೆನ್ನಲಾದ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿಯವರು ಉತ್ತರ ಪ್ರದೇಶ ಪ್ರವಾಸದ ಸಮಯದಲ್ಲಿ ಒಬ್ಬ ರೈತ ೧೦ ರೂ.ಗಳ ಬೆಲೆಯ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟಿನ ಹಿಂದಿನ "ಮ್ಯಾಜಿಕ್" ವಿವರಿಸಲು ಕೇಳಿಕೊಂಡರು ಎಂದು ರಾಹುಲ್ ಗಾಂಧಿ ಹೇಳುವುದು ಕೇಳುತ್ತದೆ. ರೈತರು ಆಲೂಗಡ್ಡೆಯಲ್ಲಿ ಕೆಜಿಗೆ ರೂಪಾಯಿಯಂತೆ ಮಾರಾಟ ಮಾಡುವಾಗ ಅದರ ಚಿಪ್ಸ್ ಪ್ಯಾಕೆಟಿಗೆ ೧೦ ರೂಪಾಯಿ ಬೆಲೆ ಹೇಗಾಗುತ್ತದೆ ಎಂದು ರೈತ ಪ್ರಶ್ನಿಸಿದ ಎಂದು ರಾಹುಲ್ ಹೇಳಿದ್ದಾರೆ. ಇದ್ದಕೇನು ಕಾರಣ ಎಂಬುದು ನಿಮ್ಮ ಯೋಚನೆ ಎಂದು ಕೇಳಿದಾಗ ರೈತಕಾರ್ಖಾನೆಗಳು ನಮ್ಮಿಂದ ಬಹಳ ದೂರದಲ್ಲಿವೆ. ನಮಗೆ ನಮ್ಮ ಉತ್ಪನ್ನಗಳನ್ನು ನೇರವಾಗಿ ಅಲ್ಲಿಯೇ ಮಾರಾಟ ಮಾಡಲು ಸಾಧ್ಯವಾದರೆ, ಯಾವುದೇ ಮಧ್ಯವರ್ತಿಗಳಿಂದ ಹಣ ಕಡಿತವಾಗದೆ ಪೂರ್ತಿ ಹಣ ನಮಗೆ ಸಿಗುತ್ತದೆಎಂದು ರೈತ ಉತ್ತರಿಸಿದ ಎಂದು ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.

"ಇದು ಫುಡ್ ಪಾರ್ಕ್ ಹಿಂದಿನ ಆಲೋಚನೆಯಾಗಿತ್ತು, ಮತ್ತು ಇದು ಅಮೆಥಿ ಮತ್ತು ಉತ್ತರ ಪ್ರದೇಶದ ೧೦-೧೨ ಜಿಲ್ಲೆಗಳ ರೈತರು ಮತ್ತು ಕಾರ್ಮಿಕರು ಇದಕ್ಕಾಗಿ ಹೋರಾಡುತ್ತಿದ್ದರುಎಂದು ವಿಡಿಯೋ ತುಣುಕಿನಲ್ಲಿ ಹೇಳಿದ್ದ ರಾಹುಲ್ ಗಾಂಧಿಅಮೆಥಿಯಲ್ಲಿನ ಫುಡ್ ಪಾರ್ಕ್ ಯೋಜನೆಯನ್ನು ಮೊದಲ ಅವಧಿಯಲ್ಲಿ ಮೋದಿ ಸರ್ಕಾರವನ್ನು ಕೈಬಿಟ್ಟಿತುಎಂದು ಆರೋಪಿಸಿದ್ದರು.

ಆದರೆ ಸರ್ಕಾರ ಆರೋಪವನ್ನು ನಿರಾಕರಿಸಿತ್ತು ಮತ್ತು ಫುಡ್ ಪಾರ್ಕಿಗಾಗಿ ಎಂದಿಗೂ ಭೂಮಿ ಇಟ್ಟಿರಲೇ ಇಲ್ಲ ಎಂದು ಹೇಳಿತ್ತು.

Thursday, December 24, 2020

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕಾಪ್ರಹಾರ

 ಪ್ರಧಾನಿ ಮೋದಿ ವಿರುದ್ಧ  ರಾಹುಲ್ ಗಾಂಧಿ ಟೀಕಾಪ್ರಹಾರ

ನವದೆಹಲಿ: ಒಂದು ತಿಂಗಳ ಕಾಲ ನಡೆದ ರೈತ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ಮೇಲೆ 2020 ಡಿಸೆಂಬರ್ 24ರ ಗುರುವಾರ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ’ಈಗ ಭಾರತದಲ್ಲಿ "ಪ್ರಜಾಪ್ರಭುತ್ವವಿಲ್ಲ" ಮತ್ತು ಪ್ರಧಾನ ಮಂತ್ರಿಯ ವಿರುದ್ಧ ಎತ್ತಿದವರೆಲ್ಲರಿಗೂ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. (ಆರ್ಎಸ್ಎಸ್ ಮುಖ್ಯಸ್ಥ) ಮೋಹನ್ ಭಾಗವತ್ಗೆ ಕೂಡಾ ಇದೇ ಗತಿಎಂದು ಚುಚ್ಚಿದರು.

ಬಂಡವಾಳಶಾಹಿಗಳನ್ನು ಸಂತೃಪ್ತ ಪಡಿಸಲು ಜಾರಿಗೆ ತರಲಾಗಿರುವ ಕೃಷಿ ಕಾಯ್ದೆಗಳನ್ನು ತತ್ ಕ್ಷಣ ರದ್ದು ಪಡಿಸಿಎಂದು ರಾಹುಲ್ ಆಗ್ರಹಿಸಿದರು.

"ಪ್ರಧಾನಿ ಮೋದಿ ಅವರು ತಮ್ಮ ಆಪ್ತರಾದ ಬಂಡವಾಳಶಾಹಿಗಳನ್ನು ಸಂತುಷ್ಟಿಗೊಳಿಸಲು ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ಅವರ ವಿರುದ್ಧ ನಿಲ್ಲುವ ಯಾರೇ ವ್ಯಕ್ತಿಗಳನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಗುತ್ತದೆ- ಅದು ರೈತರು, ಕಾರ್ಮಿಕರು ಅಥವಾ ಮೋಹನ ಭಾಗವತ್ ಆಗಿದ್ದರೂ ಸರಿಎಂದು ರಾಹುಲ್ ಗಾಂಧಿ ನುಡಿದರು.

"ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ. ಇದೆ ಎಂಬುದಾಗಿ ನಿಮ್ಮಲ್ಲಿ ಯಾರಾದರೂ ಭಾವಿಸಿದ್ದರೆ ಅದು ನಿಮ್ಮ ಕಲ್ಪನೆಯಲ್ಲಿ ಮಾತ್ರ ಇದೆಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸೆಪ್ಟೆಂಬರಿನಲ್ಲಿ ಜಾರಿಗೆ ಬಂದ ಕೃಷಿ ಕಾನೂನುಗಳ ಬಗ್ಗೆ ದೆಹಲಿ ಬಳಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರ ನಿಯೋಗದ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿದ್ದರು.

ರಾಷ್ಟ್ರಪತಿಯವರು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕಾನೂನುಗಳ ಬಗ್ಗೆ ಚರ್ಚಿಸಲು ಸಂಸತ್ತಿನ ಜಂಟಿ ಅಧಿವೇಶ ಕರೆಯುವಂತೆ ಕಾಂಗ್ರೆಸ್ ಒತ್ತಾಯಿಸಿದೆ, ಕಾಯ್ದೆಗಳನ್ನು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಂಸತ್ತಿನ ಮೂಲಕ ನುಗ್ಗಿಸಲಾಗಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.

ರಾಷ್ಟ್ರಪತಿ ಭವನಕ್ಕೆ ಹೊರಟಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮೆರವಣಿಗೆಯನ್ನು ಪೊಲೀಸರು ತಡೆದರು ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಹಲವಾರು ಮುಖಂಡರನ್ನು ವಶಕ್ಕೆ ತೆಗೆದುಕೊಂಡು ಬಸ್ಸುಗಳಿಗೆ ಹತ್ತಿಸಲಾಯಿತು. ಆಗ ಕೆಲವೇ ಕೆಲವು ಕಾಂಗ್ರೆಸ್ ಮುಖಂಡರು ರಾಷ್ಟ್ರಪತಿ ಭವನದತ್ತ ಮುಂದುವರೆದರು.

ರಾಷ್ಟ್ರಪತಿಗಳ ಭೇಟಿಯ ನಂತರ ಮಾತನಾಡಿದ ರಾಹುಲ್ ಗಾಂಧಿ, ’ಕಾನೂನುಗಳು ಲಕ್ಷಾಂತರ ರೈತರ ಜೀವನೋಪಾಯವನ್ನು ಕಸಿದುಕೊಳ್ಳುತ್ತವೆ ಮತ್ತು ಅವುಗಳನ್ನು "ನಾಲ್ಕು ಅಥವಾ ಐದು ಉದ್ಯಮಿಗಳಿಗೆ" ಅನುಕೂಲಕರ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆಎಂದು ಹೇಳಿದರು.

"ಯುವಕರು ಮತ್ತು ದೇಶದ ಎಲ್ಲಾ ಜನರು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಪ್ರಧಾನ ಮಂತ್ರಿ ಏನೂ ತಿಳಿಯದ ಅಸಮರ್ಥ ವ್ಯಕ್ತಿ, ಅವರು ತಮ್ಮ ಆಪ್ತರಾದ ಬಂಡವಾಳಶಾಹಿಗಳಿಗೆ ಮಾತ್ರ ಕಿವಿಗೊಡುತ್ತಾರೆ. ಅವರು ಏನು ಹೇಳಿದರೂ ಅದನ್ನು ಮಾಡುತ್ತಾರೆಎಂದು ರಾಹುಲ್ ಟೀಕಿಸಿದರು.

ಪ್ರಿಯಾಂಕಾ ಪೊಲೀಸ್ ವಶಕ್ಕೆ: ಇದಕ್ಕೂ ಮುನ್ನ ರಾಹುಲ್ ಗಾಂಧಿ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಹೊರಟಿದ್ದಾಗ ಪೊಲೀಸರು ಪಕ್ಷದ ಇತರ ಮುಖಂಡರ ಜೊತೆಗೆ ತಡೆದು ವಶಕ್ಕೆ ತೆಗೆದುಕೊಂಡರು.

" ಸರ್ಕಾರದ ವಿರುದ್ಧದ ಯಾವುದೇ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಯ ಅಂಶಗಳು ಎಂದು ವರ್ಗೀಕರಿಸಲಾಗಿದೆ. ರೈತರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲು ನಾವು ಮೆರವಣಿಗೆಯನ್ನು ಕೈಗೊಂಡಿದ್ದೇವೆಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕೆಲವೊಮ್ಮೆ ಅವರು (ಸರ್ಕಾರ) ನಾವು ತುಂಬಾ ದುರ್ಬಲರಾಗಿದ್ದೇವೆಂದು ಹೇಳುತ್ತಾರೆ, ಪ್ರತಿಪಕ್ಷಗಳಾಗಲೂ ನಮಗೆ ಅರ್ಹತೆ ಇಲ್ಲ ಎನ್ನುತ್ತಾರೆ ಮತ್ತು ಕೆಲವೊಮ್ಮೆ, ನಾವು ತುಂಬಾ ಶಕ್ತಿಶಾಲಿಗಳು, ನಾವು ಒಂದು ತಿಂಗಳ ಕಾಲ ಗಡಿಯಲ್ಲಿ (ದೆಹಲಿಯ) ಲಕ್ಷಾಂತರ ರೈತರ ಶಿಬಿರವನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ನಾವು ಏನೆಂದು ಅವರು ಮೊದಲು ನಿರ್ಧರಿಸಬೇಕುಎಂದು ಪ್ರಿಯಾಂಕಾ ಕುಟುಕಿದರು.

ಅವರು (ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು) ರೈತರಿಗೆ ಬಳಸುವ ಹೆಸರುಗಳನ್ನು ಬಳಸುವುದುಪಾಪದ ಕೆಲಸವಾಗುತ್ತದೆಎಂದು ಪ್ರಿಯಾಂಕಾ ಹೇಳಿದರು. "ಸರ್ಕಾರ ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯುತ್ತಿದ್ದರೆ, ಸರ್ಕಾರವು ಮಹಾಪಾಪಿಎಂದು ಕಾಂಗ್ರೆಸ್ ನಾಯಕಿ ನುಡಿದರು.

ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಅವರೊಂದಿಗೆ ಅಧ್ಯಕ್ಷ ಕೋವಿಂದ್ ಅವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, " ಕೃಷಿ ಕಾನೂನುಗಳು ರೈತ ವಿರೋಧಿ ಎಂದು ನಾನು ರಾಷ್ಟ್ರಪತಿಗೆ ಹೇಳಿದೆ. ಕಾನೂನುಗಳ ವಿರುದ್ಧ ರೈತರು ಎದ್ದು ನಿಂತಿರುವುದನ್ನು ಇಡೀ  ದೇಶವು ನೋಡಿದೆ" ಎಂದು ಹೇಳಿದರು.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ಮನೆಗೆ ಹಿಂದಿರುಗುವುದಿಲ್ಲ ಎಂದು ನಾನು ಪ್ರಧಾನ ಮಂತ್ರಿಗೆ ಹೇಳಲು ಬಯಸುತ್ತೇನೆ. ಸರ್ಕಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆಯಬೇಕು ಮತ್ತು ಕಾನೂನುಗಳನ್ನು ಹಿಂಪಡೆಯಬೇಕು. ವಿರೋಧ ಪಕ್ಷಗಳು ರೈತರು ಮತ್ತು ಕಾರ್ಮಿಕರೊಂದಿಗೆ ನಿಲ್ಲುತ್ತವೆಎಂದು ರಾಹುಲ್ ನುಡಿದರು.

ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ತಡೆಯಲು ಪ್ರಯತ್ನಿಸಿದ ವಿರೋಧ ಪಕ್ಷಗಳು ಹಿಂದೆ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದವು. ಮಸೂದೆಗಳನ್ನು ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದರು.

ಆದಾಗ್ಯೂ, ರಾಷ್ಟ್ರಪತಿಯವರು ಮೂರು ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರು. ಡಿಸೆಂಬರ್ ರಂದು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿದ್ದ ಪ್ರತಿಪಕ್ಷಗಳ ನಿಯೋಗದಲ್ಲಿ ರಾಹುಲ್ ಗಾಂಧಿಯವರೂ ಇದ್ದರು.

Friday, December 18, 2020

ರಾಹುಲ್ ಗಾಂಧಿಗೆ ಅಧ್ಯಕ್ಷತೆ, ಶೇ.೯೯.೯ ಕಾಂಗ್ರೆಸ್ ಸದಸ್ಯರ ಬಯಕೆ

 ರಾಹುಲ್ ಗಾಂಧಿಗೆ ಅಧ್ಯಕ್ಷತೆ, ಶೇ.೯೯. ಕಾಂಗ್ರೆಸ್ ಸದಸ್ಯರ ಬಯಕೆ

ನವದೆಹಲಿ: ಪಕ್ಷವು ಶೀಘ್ರದಲ್ಲೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಮತ್ತು ನಾನೂ ಸೇರಿದಂತೆ ಪಕ್ಷದ ಶೆ.೯೯. ಸದಸ್ಯರು ರಾಹುಲ್ ಗಾಂಧಿಯವರು ಚುಕ್ಕಾಣಿ ಹಿಡಿಯಬೇಕೆಂದು ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ 2020 ಡಿಸೆಂಬರ್ 18ರ ಶುಕ್ರವಾರ ಹೇಳಿದರು.

ಕಾಂಗ್ರೆಸ್ ಚುನಾವಣಾ ಕಾಲೇಜು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸುರ್ಜೆವಾಲ ಹೇಳಿದರು.

ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಧಾನವನ್ನು ಪಕ್ಷ ಶೀಘ್ರದಲ್ಲೇ ಪ್ರಾರಂಭಿಸುತ್ತದೆ. ಕಾಂಗ್ರೆಸ್ ಚುನಾವಣಾ ಕಾಲೇಜು, ಎಐಸಿಸಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಯಾರು ಹೆಚ್ಚು ಸೂಕ್ತವೆಂದು ಆಯ್ಕೆ ಮಾಡುತ್ತಾರೆ. ನಾನು ಸೇರಿದಂತೆ ಶೇ.೯೯. ಮಂದಿ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಬಯಸುತ್ತಾರೆಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ತಮಿಳುನಾಡಿನ ನಿರ್ಣಾಯಕ ಚುನಾವಣೆಗಳಿಗೆ ಮುಂಚೆಯೇ ಪಕ್ಷವು ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಬಿಹಾರ ಮತ್ತು ಮಹಾರಾಷ್ಟ್ರದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಇತ್ತೀಚಿನ ಕಳಪೆ ಸಾಧನೆಯು ಅದರ ಹಲವಾರು ಪ್ರಖ್ಯಾತ ನಾಯಕರನ್ನು ಭಿನ್ನಮತೀಯರನ್ನಾಗಿ ಮಾಡಿವೆ.

ಪಕ್ಷದ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಕಾರ್ಯತಂತ್ರ ಸಭೆ ಕರೆದಿದ್ದಾರೆ ಮತ್ತು ಭಿನ್ನಮತೀಯರಲ್ಲಿ ಕೆಲವರು ಹಾಜರಾಗುವ ನಿರೀಕ್ಷೆಯಿದೆ. ಗುಂಪಿನಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಮ್ ನಬಿ ಆಜಾದ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರಂತಹ ಪ್ರಖ್ಯಾತ ಹೆಸರುಗಳಿವೆ.

ರಾಜ್ಯಗಳಲ್ಲಿ ಉನ್ನತ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳಿಗಾಗಿ ಪಕ್ಷವು ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ನಾಯಕರ ಸಲಹೆಯನ್ನು ಸಹ ಪಡೆದಿದೆ. ಕ್ರಮವು ಮುಖ್ಯವಾಗಿ ರಾಜ್ಯಗಳಲ್ಲಿನ ಒಳನೋಟವನ್ನು ಪರಿಶೀಲಿಸುವುದು ಮತ್ತು ಕಾದಾಡುತ್ತಿರುವ ಬಣಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ ಎಂದು ಹೆಸರಿಸಲು ಇಚ್ಛಿಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದರು.

೨೦೦೮ ರಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧಿಕಾರಕ್ಕೆ ತರಲು ಮಾಜಿ ಅಧ್ಯಕ್ಷರು ಮತ್ತು ಹಾಲಿ ಅಭಿಮಾನಿ ಹಿಂಬಾಲಕರು ಪ್ರಾರಂಭಿಸಿದ್ದ ಆಂತರಿಕ ಮತದಾನ ವ್ಯವಸ್ಥೆಯನ್ನು ಕಾಂಗ್ರೆಸ್ಸಿನ ಯುವ ವಿಭಾಗವು ರದ್ದುಗೊಳಿಸಿದೆ. ಯುವ ಕಾಂಗ್ರೆಸ್ ತನ್ನ ರಾಜ್ಯ ಘಟಕವನ್ನು ಮುಖ್ಯಸ್ಥರನ್ನು ಆಯ್ಕೆ ಮಾಡಲು ಸದಸ್ಯತ್ವ ದಾಖಲಾತಿಯನ್ನು ಆಧರಿಸಿ ಹೊಸ ಸ್ವರೂಪವನ್ನು ರೂಪಿಸಿದೆ.

ವ್ಯವಸ್ಥೆಯನ್ನು ಹಿಮಾಚಲ ಪ್ರದೇಶದ ಆಯ್ಕೆಯಲ್ಲಿ ಅಳವಡಿಸಲಾಗಿದ್ದು, ಗುಜರಾತ್, ತೆಲಂಗಾಣ ಮತ್ತು ಮುಂಬೈಗಳಲ್ಲಿ ಆಯ್ಕೆ ಪ್ರಕ್ರಿಯೆಗೆ ಬಳಸಲಾಗುತ್ತದೆ. ಆದರೆ, ಕರ್ನಾಟಕ ಮತ್ತು ಮಧ್ಯಪ್ರದೇಶದ ಆಯ್ಕೆ ಹಳೆಯ ವಿಧಾನವನ್ನು ಅನುಸರಿಸುತ್ತದೆ.

ಇತ್ತೀಚೆಗೆ ಸ್ಪರ್ಧಿಸಿದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೭೦ ಕ್ಕೆ ಸ್ಪರ್ಧಿಸಿದ ನಂತರ ಕೇವಲ ೧೯ ಸ್ಥಾನಗಳನ್ನು ಗೆದ್ದಿದೆ.

Advertisement