Showing posts with label ಪರಿಹಾರ. Show all posts
Showing posts with label ಪರಿಹಾರ. Show all posts

Thursday, July 9, 2026

ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

 ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6'  ಪರಿಹಾರ

 ಬೆಂಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ, ಅಂತಹವರಿಗೆ ಎಣಿಕೆ ನಮೂನೆ (Enumeration Form) ತಲುಪುವುದಿಲ್ಲ ಎಂಬ ಆತಂಕ ಸದ್ಯ ನಗರದ ಮತದಾರರಲ್ಲಿ ಮನೆಮಾಡಿದೆ. ಆದರೆ, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಸಭೆಯಲ್ಲಿ ಈ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಮುಖ ಅಂಶಗಳು:

  • ವಿಳಾಸ ಬದಲಾವಣೆ: ಹಾಲಿ ಮತದಾರರ ಪಟ್ಟಿಯಲ್ಲಿರುವ ವಿಳಾಸಕ್ಕಿಂತ ಪ್ರಸ್ತುತ ವಾಸವಿರುವ ವಿಳಾಸ ಬದಲಾಗಿದ್ದರೆ, ಅವರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗುವುದಿಲ್ಲ. ಹೀಗಾಗಿ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
  • ಪರಿಹಾರವೇನು?: ಆಗಸ್ಟ್ 5ರ ನಂತರ ಕರಡು ಮತದಾರರ ಪಟ್ಟಿಯು ಪ್ರಕಟವಾಗಲಿದೆ. ಆ ನಂತರ ನಡೆಯುವ ಪರಿಶೀಲನೆ ಹಾಗೂ ಆಕ್ಷೇಪಣೆಗಳ ಅವಧಿಯಲ್ಲಿ, ಮತದಾರರು 'ಫಾರ್ಮ್ 6' (Form 6) ಭರ್ತಿ ಮಾಡಿ ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು.
  • ನಗರ ಪ್ರದೇಶಗಳಿಗೆ ವಿಶೇಷ ಗಮನ: ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮನೆ ಬದಲಾವಣೆ ಸಾಮಾನ್ಯ. ಈ ಸ್ಪಷ್ಟನೆಯು ಇಂತಹ ಸಾವಿರಾರು ಮತದಾರರಲ್ಲಿ ಇದ್ದ ಗೊಂದಲವನ್ನು ನಿವಾರಿಸಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಚರ್ಚಿಸಲ್ಪಟ್ಟ ಇತರ ವಿಷಯಗಳು:

ಸಭೆಯು ಕೇವಲ ವಿಳಾಸ ಬದಲಾವಣೆಗೆ ಸೀಮಿತವಾಗಿರಲಿಲ್ಲ; ಹಲವು ಪ್ರಮುಖ ವಿಚಾರಗಳ ಕುರಿತು ಪಕ್ಷಗಳ ಪ್ರತಿನಿಧಿಗಳು ಆಯೋಗದ ಗಮನ ಸೆಳೆದಿದ್ದಾರೆ:

  • ವಿತರಣೆಯ ಅಂಕಿಅಂಶ: ಎಣಿಕೆ ನಮೂನೆಗಳ ವಿತರಣೆ ಶೇ. 80ರಷ್ಟು ಪೂರ್ಣಗೊಂಡಿದೆ ಎಂಬ ಆಯೋಗದ ಹೇಳಿಕೆಯ ಬಗ್ಗೆ ಬಿಜೆಪಿ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಕೇವಲ ನಮೂನೆಗಳನ್ನು ಮನೆಗೆ ತಲುಪಿಸುವುದು ಮಾತ್ರವಲ್ಲದೆ, ಬೂತ್ ಮಟ್ಟದ ಅಧಿಕಾರಿಗಳು (BLOs) ಮತದಾರರಿಗೆ ಪ್ರಕ್ರಿಯೆಯನ್ನು ಸರಿಯಾಗಿ ವಿವರಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ.
  • ಕ್ಷೇತ್ರ ಮಟ್ಟದ ಪರಿಶೀಲನೆ: ಜಿಲ್ಲೆಗಳು, ತಾಲೂಕುಗಳು ಮತ್ತು ಮತಗಟ್ಟೆಗಳಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಯಲು ಮುಖ್ಯ ಚುನಾವಣಾಧಿಕಾರಿಗಳು ಸ್ವತಃ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
  • ಇತರೆ ಸುಧಾರಣೆಗಳು: ಮತದಾರರ ಹೆಸರು ಅಥವಾ ಉಪನಾಮದಲ್ಲಿನ ಕಾಗುಣಿತ ದೋಷಗಳನ್ನು ಸರಿಪಡಿಸುವುದು, ಮದುವೆಯಾದ ಮಹಿಳೆಯರ ಹೆಸರಿನಲ್ಲಿ ಪತಿಯ ಹೆಸರನ್ನು ಸೇರಿಸುವಂತಹ ತಾಂತ್ರಿಕ ಬದಲಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಅಲ್ಲದೆ, ಬಿಎಲ್‌ಒಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರ (BLA) ನಡುವಿನ ಸಮನ್ವಯವನ್ನು ಬಲಪಡಿಸುವ ಅಗತ್ಯವನ್ನೂ ಒತ್ತಿ ಹೇಳಲಾಗಿದೆ.

ಈ ಹೊಸ ಮಾಹಿತಿಯು ಮತದಾರರಿಗೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಿದೆ. 

Tuesday, September 9, 2025

ದೇವಸ್ಥಾನದಲ್ಲಿ ಮಕ್ಕಳ ಸಡಗರ, ಗ್ರಹಣ ದೋಷ ಪರಿಹಾರ ಹೋಮ

 ದೇವಸ್ಥಾನದಲ್ಲಿ ಮಕ್ಕಳ ಸಡಗರ, ಗ್ರಹಣ ದೋಷ ಪರಿಹಾರ ಹೋಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ೮ರ ಸೋಮವಾರ ಚಂದ್ರ ಗ್ರಹಣ ದೋಷ ಪರಿಹಾರ ನಿಮಿತ್ತ ನವಗ್ರಹ ಹೋಮ ನೆರವೇರಿಸಲಾಯಿತು.

೨೦೨೫ ಸೆಪ್ಟೆಂಬರ್‌ ೯ರ ಮಂಗಳವಾರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮಕ್ಕಳು, ಬೋಧಕ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಮಕ್ಕಳು ಭಜನೆಯ ಹಾಡುಗಳನ್ನು ಸಡಗರದೊಂದಿಗೆ ಹಾಡಿ ನಲಿದರು.

ಈ ಎರಡೂ ಕಾರ್ಯಕ್ರಮಗಳ ಕೆಲವು ಚಿತ್ರ, ವಿಡಿಯೋಗಳು ಇಲ್ಲಿವೆ.


Tuesday, August 2, 2022

ತಪ್ಪಾಗಿ ಬಂಧಿಸಿದರೆ ಜೋಕೆ! ರೂ.೫ ಲಕ್ಷ ಪರಿಹಾರಕ್ಕೆ ಹೈ ಆದೇಶ

 ತಪ್ಪಾಗಿ ಬಂಧಿಸಿದರೆ ಜೋಕೆರೂ. ಲಕ್ಷ ಪರಿಹಾರಕ್ಕೆ ಹೈ ಆದೇಶ

ಬೆಂಗಳೂರು: ಜಾಮೀನು ಸಹಿತ ಅಥವಾ ಜಾಮೀನುರಹಿತವಾದ ಯಾವುದೇ ವಾರಂಟ್ಹೊರಡಿಸಿದಾಗ ಬಂಧಿಸಬೇಕಾಗಿರುವ ವ್ಯಕ್ತಿಯ ಗುರುತನ್ನು ಅಧಿಕಾರಿಯು ಖಚಿತಪಡಿಸಿಕೊಳ್ಳಬೇಕು. ಬಂಧಿಸಲು ಉದ್ದೇಶಿಸಿರುವ ವ್ಯಕ್ತಿಯು ಅದೇ ವ್ಯಕ್ತಿ ಎಂಬುದನ್ನು ಖಚಿತವಾಗಿ ತಿಳಿದುಕೊಂಡಿರಬೇಕು ಎಂದು ಕರ್ನಾಟಕ ಹೈಕೋರ್ಟ್ಹೇಳಿದೆ.

೨೦೨೨ ಜುಲೈ ೭ರಂದು ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವ ಏಕಸದಸ್ಯ ಪೀಠವು ಅರ್ಜಿದಾರ ನಿಂಗರಾಜು ಎನ್ ಅವರ ಗುರುತಿನ ಗೊಂದಲವನ್ನು ಪರಿಗಣಿಸಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

"ಯಾರ ಹೆಸರಿನಲ್ಲಿ ವಾರಂಟ್ಹೊರಡಿಸಲಾಗಿದೆಯೋ ವ್ಯಕ್ತಿಯನ್ನು ಬಂಧಿಸಲು ನೀಡಲಾದ ಒಂದೇ ಕಾರಣ ಏನೆಂದರೆ ಅವನ ತಂದೆಯ ಹೆಸರು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿಯ ಹೆಸರನ್ನು ಹೋಲುತ್ತದೆ ಎಂಬುದಾಗಿದೆ. ಆದರೆ ತಂದೆಯ ಹೆಸರು ಹೋಲುತ್ತದೆ ಅಥವಾ ಒಂದೇ ಆಗಿರುತ್ತದೆ ಎಂಬುದು ವ್ಯಕ್ತಿಯನ್ನು ಬಂಧಿಸುವಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಇದೇ ಸೂತ್ರವನ್ನು ಅನ್ವಯಿಸಿದರೆ ತಂದೆಯ ಹೆಸರು ಒಂದೇ ರೀತಿ ಇದೆ ಎಂಬ ಕಾರಣಕ್ಕಾಗಿ ಒಬ್ಬ ಸಹೋದರ, ಇನ್ನೊಬ್ಬ ಸಹೋದರ ಅಥವಾ ಸಹೋದರಿಗಾಗಿ ಬಂಧನ ವಾರಂಟ್ ಹೊರಡಿಸಿ ಬಂಧಿಸಬಹುದು. ಇಲ್ಲಿ ಮುಖ್ಯವಾದ ವಿಚಾರ ಬಂಧನಕ್ಕೊಳಗಾಗಬೇಕಾದ ವ್ಯಕ್ತಿಯ ಗುರುತು ಮತ್ತು ತಂದೆಯ ಹೆಸರಿನಂತಹ ಯಾವುದೇ ಅಂಶವಲ್ಲ, ಆದರೆ ಬಂಧಿತನಾಗಬೇಕಾದ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳುವುದುಎಂದು ತೀರ್ಪು ಹೇಳಿದೆ.

"ಭಾರತೀಯ ಸಂವಿಧಾನದ ಅನುಚ್ಛೇದ 21 ಅಡಿಯಲ್ಲಿ ಖಾತರಿಪಡಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಅತ್ಯಂತ ಪ್ರಾಮುಖ್ಯತೆ ಹೊಂದಿರುವಂತಹುದು. ಅಧಿಕೃತವಲ್ಲದ ಯಾವುದೇ ವ್ಯಕ್ತಿಯನ್ನು ಬಂಧಿಸುವ ಮೂಲಕ ನಡೆಯುವ ಬಂಧನವು ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ." ಎಂದೂ ಹೈಕೋರ್ಟ್ಹೇಳಿತು.

ದಾಖಲೆಗಳನ್ನು ಪರಿಶೀಲಿಸಿದಾಗ ಬಂಧಿತನು ವಾರೆಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ಮತ್ತು ಅವನಿಗೆ ವಾರೆಂಟ್ ಅನ್ವಯಿಸುವ ಬಗ್ಗೆ ವಾದ ಮಂಡಿಸಿದ್ದರೂ, ಅವನ ಗುರುತನ್ನು ಅಡ್ಡ-ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗಿಲ್ಲ. ಪರಿಣಾಮವಾಗಿ ಒಬ್ಬ ಅಮಾಯಕನನ್ನು ಬಂಧಿಸಲಾಯಿತು ಎಂಬುದು ದೃಢಪಟ್ಟಿದೆ ಎಂದು ಕೋರ್ಟ್ಹೇಳಿತು.

ಬಂಧಿತನು ವಾರಂಟ್‌ನಲ್ಲಿ ಹೆಸರಿಸಲಾದ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಬಂಧಿಸಿದ ಅಧಿಕಾರಿ ಅದನ್ನು ಪರಿಶೀಲಿಸಲಿಲ್ಲ, ಬದಲಿಗೆ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದರಿಂದಾಗಿ ಆತನ ಸ್ವಾತಂತ್ರ್ಯಕ್ಕೆ ಹಾನಿ ಮತ್ತು ಘಾಸಿಯಾಗಿದೆಎಂದೂ ಕೋರ್ಟ್ಅಭಿಪ್ರಾಯ ಪಟ್ಟಿತು.

ಕಾರಣಕ್ಕಾಗಿ ಬಂಧಿತ ವ್ಯಕ್ತಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಹೇಳಿದ ಪೀಠವು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.

ತೀರ್ಪು ನೀಡಿದ ದಿನದಿಂದ ದಿನಗಳ ಅವಧಿಯಲ್ಲಿ ಪರಿಹಾರವನ್ನು ಪಾವತಿ ಮಾಡಬೇಕು. ಸರ್ಕಾರವು ಅರ್ಜಿದಾರನನ್ನು ಬಂಧಿಸಿದ ಅಧಿಕಾರಿಗಳಿಂದ ಹಣವನ್ನು ರಾಜ್ಯ ಸರ್ಕಾರವು ವಸೂಲಿ ಮಾಡಬಹುದು ಎಂದೂ ಪೀಠ ಹೇಳಿತು.

ಬಂಧನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ, ನಿಗದಿತ ಕಾರ್ಯ ವಿಧಾನವನ್ನು ನೀಡುವಂತೆ ಪೊಲೀಸ್ಮಹಾ ನಿರ್ದೇಶಕರಿಗೂ ಕೋರ್ಟ್ಸೂಚಿಸಿದೆ. ಇಂತಹ ಮಾರ್ಗಸೂಚಿ, ಕಾರ್ಯವಿಧಾನವನ್ನು ಈಗಾಗಲೇ ನೀಡಿದ್ದರೆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ತರಬೇತಿ ನೀಡುವಂತೆಯೂ ಪೀಠವು ನಿರ್ದೇಶನ ನೀಡಿತು.

Advertisement