Showing posts with label Medals. Show all posts
Showing posts with label Medals. Show all posts

Saturday, November 22, 2014

ವಿಶ್ವ ಆಯುರ್ವೇದ ಸಮ್ಮೇಳನ: ಡಾ. ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ

ವಿಶ್ವ ಆಯುರ್ವೇದ ಸಮ್ಮೇಳನ: ಡಾ. ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ


ಬೆಳಗಾವಿ: ಜನ್ಮ ನೀಡಿದ ತಂದೆಯ ಮೃತದೇಹವನ್ನು ಛೇದನಗೊಳಿಸುವ ಮೂಲಕ ೨೦೧೦ ನವೆಂಬರ ೧೩ ರಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಜಾಗತಿಕ ಇತಿಹಾಸ ಬರೆದ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ನವದೆಹಲಿಯ
ಪ್ರಗತಿ ಮೈದಾನದಲ್ಲಿ ಇತ್ತೀಚೆಗೆ ನಡೆದ ನೇ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೀಲಾಂಜನ ಸಾನಿಯಾಳ ಅವರು ಬೆಳಗಾವಿ ಕೆಎಲ್‌ಇ ಆಯುರ್ವೇದ ಕಾಲೇಜಿನ ಶರೀರ ರಚನಾ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಪ್ರಶಸ್ತಿ ಏಕೆ?
ಡಾ.ಮಹಾಂತೇಶ ರಾಮಣ್ಣವರ ಜನಸಾಮಾನ್ಯರಲ್ಲಿರುವ ಮೂಢನಂಬಿಕೆ ಹಾಗೂ ಧಾರ್ಮಿಕ ಕಟ್ಟಳೆಗಳಿಂದ ಹೊರಬಂದು ದೇಹದಾನಕ್ಕೆ ಪ್ರೇರಣೆಯಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ರಕ್ತ, ನೇತ್ರ, ದೇಹ, ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಟ್ರಸ್ಟಿನ ಮೂಲಕ ರಾಜ್ಯದ ವಿವಿಧ ವೈದ್ಯಕೀಯ ಆಯುರ್ವೇದ, ಹೋಮಿಯೋಪತಿ, ವೈದ್ಯಕೀಯ ಮಹಾವಿದ್ಯಾಲಯಗಳಿಗೆ ೨೫ ಕ್ಕೂ ಹೆಚ್ಚು ಮೃತದೇಹಗಳನ್ನು ದಾನವಾಗಿ ನೀಡಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅನುವು ಮಾಡಿಕೊಟ್ಟಿದ್ದಾರೆ. ದೇಶಾದ್ಯಂತ ದೇಹದಾನಕ್ಕಾಗಿ ಪ್ರೇರೇಪಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಒಂದು
ಕಾಲಕ್ಕೆ ಸಂಶೋಧನೆಗೆಂದೇ ಸಿಗುವ ದೇಹಗಳ ಸಂಖ್ಯೆ ಹಾಗೂ ದೇಹದಾನ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಈಗ ಜನರೇ ಸ್ವಯಂ ಸ್ಪೂರ್ತಿಯಿಂದ ದೇಹದಾನಕ್ಕೆ ಮುಂದಾಗುತ್ತಿದ್ದಾರೆ. ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ಗೆ ಸ್ವಯಂ ಪ್ರೇರಿತರಾಗಿ ದೇಹದಾನ ಮಾಡಲು ಜನಸಾಗರವೇ ಹರಿದು ಬರುತ್ತಿದೆ. ಮಾನವೀಯ ನೆಲೆಗೆ, ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ಸೇವೆಯಲ್ಲಿ ಜನ ತೊಡಗಿಕೊಳ್ಳಲು ಜನರನ್ನು ಪ್ರೇರೇಪಿಸಿದ್ದು, ಅದು ನಿರೀಕ್ಷೆ ಮೀರಿ ಫಲ ನೀಡುತ್ತಿದೆ. ಇದು ತಂದೆಯ ಕೊನೆಯಾಸೆಯೂ ಆಗಿತ್ತು. ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ತಂದೆಯ ಕೊನೆಯ ಆಸೆ ಈಡೇರಿಸಿದ್ದಕ್ಕಾಗಿ ಮಗನಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು.

ಪ್ರಶಸ್ತಿ
ವಿತರಣಾ ಸಮಾರಂಭದಲ್ಲಿ ಕೇಂದ್ರೀಯ ವೈದ್ಯ ಪದ್ಧತಿ ಆಯುರ್ವೇದ ಪರಿಷತ್ ಅಧ್ಯಕ್ಷ ಡಾ.ವನಿತಾ ಮುರಳಿಕುಮಾರ ಸೇರಿದಂತೆ ಸುಮಾರು ೩೦ ದೇಶಗಳ ಆಯುರ್ವೇದ ವೈದ್ಯ ವಿಜ್ಞಾನಿಗಳು, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು, ಕೇಂದ್ರ ಆಯುಷ್ ಇಲಾಖೆಯ ಉನ್ನತ ಅಧಿಕಾರಿಗಳು ಡಾ. ಬಾಲಪ್ರಸಾದ, ವಿಜ್ಞಾನ ಭಾರತಿ, ಪದ್ಮಶ್ರೀ ಡಾ. ವಿಜಯ ಭಾಟ್ಕರ, ಡಾ. ಎಸ್. ಕೆ. ಬನ್ನಿಗೊಳ, ಡಾ. ಜಿ. ಬಿ. ಪಾಟೀಲ, ಡಾ. . ಎಮ್. ಗೌಡರ, ಡಾ.. ರಾಜಶೇಖರ ಗಾಣಿಗೇರ, ಡಾ. ಬಿ. ಎಸ್. ಪ್ರಸಾದ ಡಾ. ಪ್ರಸನ್ನ ಎನ್. ರಾವ ಉಪಸ್ಥಿತರಿದ್ದರು.

ಫೋಟೋ
ಶೀರ್ಷಿಕೆ: ಬೆಳಗಾವಿ - ತಂದೆಯ ಮೃತದೇಹವನ್ನು ಛೇದನಗೊಳಿಸಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಜಾಗತಿಕ ಇತಿಹಾಸ ಬರೆದ ಮಗ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ದೆಹಲಿಯ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Wednesday, October 22, 2014

ಬಾಕ್ಸರ್ ಎಲ್. ಸರಿತಾದೇವಿ ಅಮಾನತು: ಎಐಬಿಎ ಅಚ್ಚರಿಯ ನಿರ್ಣಯ

ಬಾಕ್ಸರ್ ಎಲ್. ಸರಿತಾದೇವಿ ಅಮಾನತು: ಎಐಬಿಎ ಅಚ್ಚರಿಯ ನಿರ್ಣಯ


ಕೋಚ್ ಸಂಧು, ಅಧಿಕಾರಿ ಸುಮರಿವಾಲ್ಲಾ ಮೇಲೂ ಕೆಂಗಣ್ಣು


ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿಭಟಿಸಿದ್ದಕ್ಕಾಗಿ ಭಾರತದ ಬಾಕ್ಸರ್ ಲೈಶ್ರಮ್ ಸರಿತಾ ದೇವಿ ಮತ್ತು ಅವರ ತರಬೇತಿದಾರರನ್ನು (ಕೋಚ್) ಅಂತಾರಾಷ್ಟ್ರೀಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (ಅಸೋಸಿಯೇಷನ್ ಇಂಟರ್ನ್ಯಾಷನಲ್ಎ ಡ ಬಾಕ್ಸೆ ಅಮೆಚೂರ್)- ಎಐಬಿಎ ಅನಿದಿಷ್ಟ ಅವಧಿಗೆ ಅಮಾನತು ಮಾಡಿದೆ.

ಸರಿತಾ ದೇವಿ ಅವರ ತರಬೇತಿದಾರ ಜಿ.ಎಸ್ ಸಂಧು ಮತ್ತು ಇಂಡಿಯನ್ ಚೆಫ್-ಡೆ-ಮಿಷನ್ ಎ.ಜೆ. ಸುಮರಿವಾಲ್ಲಾ ಅವರೂ ಎಐಬಿಎ ಕೋಪಕ್ಕೆ ತುತ್ತಾಗಿದ್ದಾರೆ.

ಮುಂದಿನ ನೋಟಿಸಿನವರೆಗೆ ಈ ಮೂವರೂ ವಿವಿಧ ಹಂತದ ಸ್ಪರ್ಧೆಗಳು, ಕ್ರೀಡಾಕೂಟಗಳು, ಸಭೆಗಳು ಸೇರಿದಂತೆ ಯಾವುದೇ ಮಟ್ಟದಲ್ಲೂ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಐಬಿಎ ತಿಳಿಸಿದೆ.

ಎಐಬಿಎ ಶಿಸ್ತು ಆಯೋಗವು ಈ ಪ್ರಕರಣವನ್ನು ಪರಿಶೀಲನೆಗಾಗಿ ಕಳುಹಿಸಿದೆ. ಅದರರ್ಥ ಸರಿತಾದೇವಿ ಅವರನ್ನು ಎಐಬಿಎ ಅವರಿಗೆ 2014ರಲ್ಲಿ ಕೊರಿಯಾದ ಜೆಜು ದ್ವೀಪಗಳಲ್ಲಿ ನಡೆಯಲಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎಐಬಿಎ ಅವಕಾಶ ನೀಡುವುದಿಲ್ಲ ಎಂದೇ ಆಗಿದೆ ಎಂದು ಎಐಬಿಎ ಹೇಳಿಕೆ 22-10-2014ರಂದು ತಿಳಿಸಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ 60 ಕಿ.ಗ್ರಾಂ. ಸೆಮಿಫೈನಲಿನಲ್ಲಿ ತಾನು ಮುಂದಿದ್ದರೂ ದಕ್ಷಿಣ ಕೊರಿಯಾದ ಬಾಕ್ಸರ್ ಜೆ-ನಾ-ಪಾರ್ಕ್ ಅವರೆದುರು ಪರಾಜಿತರಾಗಿದ್ದಾರೆ ಎಂದು ಘೋಷಿಸಿದ ಬಳಿಕ ಸರಿತಾದೇವಿ ತೀವ್ರವಾಗಿ ಪ್ರತಿಭಟಿಸಿದ್ದರು. ಕಂಚಿನ ಪದಕ ಸ್ವೀಕರಿಸಲೂ ಅವರು ನಿರಾಕರಿಸಿದ್ದರು.ಆದರೆ ಆ ಬಳಿಕ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಬಳಿ ಕ್ಷಮೆ ಯಾಚಿಸಿದ್ದರು. ಒಸಿಎ ಅವರಿಗೆ ಬಿಗಿ ಎಚ್ಚರಿಕೆ ನೀಡಿತ್ತು.

ಎಐಬಿಎ ಈ ಕ್ಷಮಾಯಾಚನೆಯನ್ನು ಗಣನೆಗೆ ತೆಗೆದುಕೊಂಡಿತ್ತು. ಆದರೂ ಈಗ ಅಚ್ಚರಿಕರ ನಿರ್ಣಯದಲ್ಲಿ ಸರಿತಾದೇವಿ ಅವರನ್ನು ಮಾತ್ರವೇ ಅಲ್ಲ ಭಾರತದ ಇತರ ಇಬ್ಬರು ಅಧಿಕಾರಿಗಳನ್ನೂ ಅನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ಆಂಗ್ಲಭಾಷಾ ವಿವರ:
AIBA suspends boxer Sarita Devi, coaches and chef-de-mission
New Delhi
: AIBA (The International Amateur Boxing Association (or Association Internationale de Boxe Amateur – AIBA)) has suspended India boxer L Sarita Devi and her coaches for an indefinite period because of her Asian Games protest. Her coach GS Sandhu and Indian chef-de-mission AJ Sumariwalla also faced the brunt.  AIBA will not allow any of them to participate at all levels of various competitions, events and meetings until further notice.
This case has been sent for review by the AIBA Disciplinary Commission, and it means that Sarita Devi will not be allowed to participate in the AIBA women’s world boxing championships in Jeju Islands (Korea), 2014, said an AIBA release.
Sarita Devi, who had dominated her 60kg semifinals bout against South Korean boxer Ji-Na Park, had reacted strongly after she was declared the loser. She had refused to accept the bronze medal, but later apologised to the Olympic Council of Asia (OCA), which had given her a stern warning.
Even though the AIBA had taken note of her written apology, it surprisingly decided to suspend not only the boxer but also other Indian officials as well.
Earlier on October 2, reports suggested that Sarita Devi was about to face suspension after refusing to accept her medal on the podium in the Incheon Asian Games 2014.
The International Boxing Association (AIBA) had taken a dim view of Sarita’s behaviour on the podium, opening a disciplinary case against her.
“The whole incident looked like a well-planned scenario by her and her team, and it is regretful to watch a boxer refuse the medal regardless of what happened in the competition,” AIBA technical delegate David Francis said in a statement.  

Friday, October 3, 2014

ಏಷ್ಯಾಡ್ ಕಬಡ್ಡಿ: ಭಾರತಕ್ಕೆ "ಡಬ್ಬಲ್ ಸ್ವರ್ಣ' India bags Double Gold in Asiad

ಏಷ್ಯಾಡ್ ಕಬಡ್ಡಿ: ಭಾರತಕ್ಕೆ ಡಬ್ಬಲ್ ಸ್ವರ್ಣ ಪದಕ


ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾರತ ‘ಡಬ್ಬಲ್ ಸ್ವಣ ಪದಕ’ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಭಾರತದ ಮಹಿಳೆಯರ ತಂಡ ಮೊದಲಿಗೆ ಇರಾನಿನ ಮಹಿಳಾ ತಂಡವನ್ನು ಪರಾಭವಗೊಳಿಸುವ ಮೂಲಕ ಭಾರತದ ಮಹಿಳಾ ಕಬಡ್ಡಿ ತಂಡವು ಸತತ ಎರಡನೇ ಬಾರಿಗೆ ಏಷ್ಯಾಡ್ ಕಬಡ್ಡಿ ಸ್ವರ್ಣ ಪದಕವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

31-21 ಅಂಕಗಳ ಅಂತರದೊಂದಿಗೆ ಈ ಪದಕ ಭಾರತೀಯ ಮಹಿಳೆಯರ ಪಾಲಾಯಿತು. ದಿನದ ಆರಂಭದಲ್ಲಿ ಭಾರತ ಮಹಿಳೆಯರ ಮೂಲಕ ಗೆಲುವು ಪಡೆದರೆ ಬಳಿಕ ಪುರುಷರ ಮೂಲಕವೂ ಕಬಡ್ಡಿ ಪಂದ್ಯದಲ್ಲಿ ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.

ಪುರುಷರ ಕಬಡ್ಡಿ: ಭಾರತಕ್ಕೆ ಸತತ 7ನೇ ಏಷ್ಯಾಡ್ ಸ್ವರ್ಣ

ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡವು ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.

ಭಾರತದ ತಂಡವು ಬಿರುಸಿನ ಸ್ಪರ್ಧೆಯಲ್ಲಿ 27-25 ಅಂಕಗಳ ಅಂತರದಲ್ಲಿ ಭಾರಿ ಹೋರಾಟ ನೀಡಿದ ಇರಾನ್ ತಂಡವನ್ನು ಪರಾಭವಗೊಳಿಸಿ ಚಿನ್ನದ ಪದಕವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಏಷ್ಯನ್ ಕ್ರೀಡಾಕೂಟಕ್ಕೆ 1990ರಲ್ಲಿ ಕಬಡ್ಡಿಯನ್ನು ಸೇರ್ಪಡೆ ಮಾಡಿದ ಲಾಗಾಯ್ತಿನಿಂದಲೂ ಭಾರತವು ಚಿನ್ನದ ಪದಕವನ್ನು ಗೆಲ್ಲುತ್ತಲೇ ಬಂದಿತ್ತು.

ಇಂಚೋನ್ ಸ್ಪರ್ಧೆಯಲ್ಲಿ ಮೊದಲ 20 ನಿಮಿಷಗಳಲ್ಲಿ 10 ಅಂಕಗಳ ಭಾರಿ ಮುನ್ನಡೆ ಸಾಧಿಸಿದ ಇರಾನ್ ಭಾರತವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಪಂದ್ಯದ 37ನೇ ನಿಮಿಷದಲ್ಲಷ್ಟೇ ಭಾರತೀಯ ತಂಡಕ್ಕೆ ಇರಾನ್ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಯಿತು. 
India bags Double Gold in Asiad

Incheon:
The Indian men's kabaddi team clinched its seventh successive gold medal at the Asian Games after coming from behind to beat a spirited Iran 27-25 in the summit clash here today, 3rd October 2014. Earlier the Indian Woman's Kabaddi Team won Gold by defeating Iranian team. 

The Indian mens team, which has been winning gold ever since the sport was introduced on the Asiad roster in 1990, was given a massive scare by Iran, who had finished runners-up in the 2010 edition as well.


 The Iranians took a massive 10-point lead in the first 20 minutes before the Indians got their act together to nullify the deficit and edge past in the closing few minutes of the match. In fact, the Indians managed to take a lead only in the 37th minute of the match.

Advertisement