Showing posts with label Tripura. Show all posts
Showing posts with label Tripura. Show all posts

Thursday, December 12, 2019

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ
ರಾಜ್ಯಸಭೆಯಲ್ಲಿ 125 ಪರ, 105 ವಿರೋಧ ಮತಗಳೊಂದಿಗೆ ಒಪ್ಪಿಗೆ

ನವದೆಹಲಿ: ವಿರೋಧ ಪಕ್ಷಗಳ ಭಾರೀ ಪ್ರತಿಭಟನೆ, ಶಿವಸೇನೆಯ ಸಭಾತ್ಯಾಗದ ಬಳಿಕ ರಾಜ್ಯಸಭೆಯು 2019 ಡಿಸೆಂಬರ್ 11ರ ಬುಧವಾರ ಬೆಳಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಐತಿಹಾಸಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ರಾತ್ರಿ ತನ್ನ ಅಂಗೀಕಾರವನ್ನು ನೀಡಿತು. ಸದನದಲ್ಲಿ 125 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 105 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಶಿವಸೇನೆಯ ಮೂವರು ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವವನ್ನು ಸದನವು ತಿರಸ್ಕರಿಸಿತು. ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಲೋಕಸಭೆಯು ಕೋಲಾಹಲಕಾರಿ ಪ್ರತಿಭಟನೆಯ ಬಳಿಕ ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತ್ತು.

ಉಭಯ ಸದನಗಳ ಅನುಮೋದನೆಯೊಂದಿಗೆ ಪೌರತ್ವ ತಿದ್ದುಪಡಿಯು ಈಗ  ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ ಶಾಸನರೂಪ ಪಡೆಯಲಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ರಾಷ್ಟ್ರಗಳ ಸುಮಾರು ೧.೫ ಕೋಟಿಗೂ ಹೆಚ್ಚು ಮಂದಿ ವಲಸಿಗರಿಗೆ ಭಾರತದ ಪೌರತ್ವವವನ್ನು ಒದಗಿಸಲಿದೆ. ಇವರ ಪೈಕಿ ಶೇಕಡಾ ೫೦ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸೇರಿದವರು ಎಂದು ಹೇಳಲಾಯಿತು.

ಸುಮಾರು ೬ ಗಂಟೆಗಳಿಗೂ ಹೆಚ್ಚಿನ ಕೋಲಾಹಲಕಾರೀ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿದ ಬಳಿಕ ಸದನವು ಅಂಗೀಕರಿಸಿದ ಈ ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ದೇಶಗಳಿಂದ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರರಾಗುವ ಅವಕಾಶವನ್ನು ಒದಗಿಸಿದ್ದು, ಇದಕ್ಕಾಗಿ ಅವರ ೧೧ ವರ್ಷಗಳ ಕಾಯುವಿಕೆಯನ್ನು ಸಮಾಪ್ತಿಗೊಳಿಸಿತು.

ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ಚರ್ಚೆಗೆ ಉತ್ತರ ನೀಡಿದ ಅಮಿತ್ ಶಾ ಅವರು ’ಭಾರತವು ಎಂದಿಗೂ ಮುಸ್ಲಿಮ್ ಮುಕ್ತ ರಾಷ್ಟ್ರವಾಗದು, ಅವರು ಹಿಂದೆ, ಇಂದು ಮತ್ತು ಮುಂದೆ ಕೂಡಾ ಭಾರತೀಯರಾಗಿಯೇ ಇರುತ್ತಾರೆ ಎಂದು ರಾಜ್ಯಸಭೆಯಲ್ಲಿ ಘೋಷಿಸಿ,  ’ಪೌರತ್ವ (ತಿದ್ದುಪಡಿ) ಮಸೂದೆಯು ’ ಚಾರಿತ್ರಿಕ ತಪ್ಪನ್ನು ಸರಿಪಡಿಸುತ್ತಿದೆ ಎಂದು ಪ್ರತಿಪಾದಿಸಿದರು.

‘ಧಾರ್ಮಿಕ ನೆಲೆಯಲ್ಲಿ ಭಾರತವನ್ನು ವಿಭಜಿಸಲಾಗಿದೆ ಎಂದು ನಾನು ಸದನದಲ್ಲಿ ಬುಧವಾರ ಮಸೂದೆ ಮಂಡನೆ ಮಾಡುತ್ತಾ ಹೇಳಿದ್ದೇನೆ. ವಿಪಕ್ಷಗಳು ನನ್ನ ಈ ಹೇಳಿಕೆಯನ್ನು ಟೀಕಿಸಿವೆ. ಆದ್ದರಿಂದ ನಾನು ೧೯೫೦ರ ಏಪ್ರಿಲ್ ೮ರ ನೆಹರೂ-ಲಿಯಾಖತ್ ಒಪ್ಪಂದದ (ದೆಹಲಿ ಘೋಷಣೆ) ಸಾಲನ್ನು ಉಲ್ಲೇಖಿಸಬಯಸುವೆ ಎಂದು ಅಮಿತ್ ಶಾ ಹೇಳಿದರು.

‘ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಭಯ ದೇಶಗಳಲ್ಲೂ (ಭಾರತ ಮತ್ತು ಪಾಕಿಸ್ತಾನ) ಸರ್ಕಾರ ಮತ್ತು ತಮ್ಮ ಸ್ವಂತ ಧರ್ಮ ಆಚರಣೆಯಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗುವುದು ಎಂದು ಸದರಿ ಒಪ್ಪಂದ ಹೇಳಿದೆ. ಉಭಯ ದೇಶಗಳ ಪ್ರಧಾನಿಗಳು ತಮ್ಮ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಪ್ರತಿಪಾದನೆಗಳು ಇವು ಎಂದು ಶಾ ನುಡಿದರು.

’ಆದ್ದರಿಂದ ದೇಶವಿಭಜನೆಯನ್ನು ಧಾರ್ಮಿಕ ನೆಲೆಯಲ್ಲಿಯೇ ಮಾಡಲಾಗಿದೆ. ಇದೊಂದು ದೊಡ್ಡ ತಪ್ಪಾಗಿದ್ದು, ಈ ಕಾರಣದಿಂದಲೇ ನಾವು ಈ ಮಸೂದೆಯನ್ನು ರಚಿಸಬೇಕಾಯಿತು ಎಂದು ಶಾ ಹೇಳಿದರು.

‘ನನಗೆ ಪಾಕಿಸ್ತಾನದ ಕಾನೂನು ಗೊತ್ತಿದೆ, ಅಲ್ಲಿ ಹಲವಾರು ನಿರ್ಬಂಧಗಳಿವೆ. ಭಾರತವು ತನ್ನ ತತ್ವಗಳನ್ನು ಅನುಸರಿಸಿದೆ- ನಾವು ಅಲ್ಪಸಂಖ್ಯಾತ ಸಮುದಾಯದ ಜನರು ಭಾರತದ ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇತ್ಯಾದಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದನ್ನು ನೋಡಿದ್ದೇವೆ. ಆದರೆ ಇದು ನೆರೆಯ ರಾಷ್ಟ್ರಗಳಲ್ಲಿ ಸಂಭವಿಸಿದೆಯೇ? ಈ ಅಲ್ಪಸಂಖ್ಯಾತರು ತಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಮ್ಮ ದೇಶಕ್ಕೆ ಬಂದಿದ್ದಾರೆ. ನಾವು ಅವರಿಗೆ ಪೌರತ್ವ ಕೊಡಬಾರದೇ?’ ಎಂದು ಪ್ರಶ್ನಿಸಿದ ಗೃಹ ಸಚಿವರು ’ಹೀಗಾಗಿಯೇ ಈ ಕಾನೂನು ಅಗತ್ಯವಾಗಿದೆ ಎಂದು ನುಡಿದರು.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ಬಂದಿರುವ ವಲಸೆಗಾರರಿಗೆ ತ್ವರಿತಗತಿಯಲ್ಲಿ ಪೌರತ್ವವನ್ನು ನೀಡಲು ಮಸೂದೆ ಕೋರಿದೆ. ಈ ಅಲ್ಪಸಂಖ್ಯಾತರು ಗೌರವಾನ್ವಿತ ಬದುಕು ನೀಡುವುದು ಭಾರತದ ಕರ್ತವ್ಯ ಎಂದು ವಾದಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಮಸೂದೆಯನ್ನು ರೂಪಿಸಿತ್ತು.

ಸರ್ಕಾರವನ್ನು ಜಗ್ಗಾಡಿದ ಪ್ರತಿಪಕ್ಷಗಳು: ಕೋಲಾಹಲಕಾರೀ ಚರ್ಚೆಯ ವೇಳೆಯಲ್ಲಿ ವಿರೋಧ ಪಕ್ಷಗಳು ಸಂವಿಧಾನದ ಅಡಿಪಾಯದ ಮೇಲೆಯೇ ದಾಳಿ ನಡೆಸುತ್ತಿರುದಕ್ಕಾಗಿ ಸರ್ಕಾರವನ್ನು ಜಗ್ಗಾಡಿದವು. ಆದರೆ ಕೇಂದ್ರವು ಎಲ್ಲ ಆರೋಪಗಳನ್ನೂ ತಳ್ಳಿ ಹಾಕಿತು.

ಸಚಿವ ಅಮಿತ್ ಶಾ ಅವರು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದರೊಂದಿಗೆ ದಿನದ ಕಲಾಪ ಆರಂಭಗೊಂಡಿತ್ತು. ’ಈ ಮಸೂದೆಯು ಮೂರು ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಿದೆ ಶಾ ಹೇಳಿದರು.

‘ದೇಶ ವಿಭಜನೆಯಾದಾಗ, ಅಲ್ಪಸಂಖ್ಯಾತರಿಗೆನಾಗರಿಕ ಹಕ್ಕುಗಳನ್ನು ನೀಡಲಾಗುತ್ತದೆ ಮತ್ತು ಅವರು ಸಹಜ ಜೀವನ ನಡೆಸುವರು ಎಂದು ಭಾವಿಸಲಾಗಿತ್ತು. ಅವರಿಗೆ ತಮ್ಮ ಸ್ವಂತ ಧರ್ಮ ಅನುಸರಣೆಗೆ ಮತ್ತು ತಮ್ಮ ಮಹಿಳೆಯರ ರಕ್ಷಣೆಗೆ ಸಮರ್ಥರಾಗುವರು ಎಂದು ಯೋಚಿಸಲಾಗಿತ್ತು. ಆದರೆ ಹಿಂದಕ್ಕೆ ತಿರುಗಿ ನೋಡಿದಾಗ, ನಿಜವಾದ ಸತ್ಯ ಏನು ಎಂಬುದು ನಮಗೆ ಅರಿವಾಗುತ್ತದೆ. ಈ ಜನರಿಗೆ ತಮ್ಮ ಹಕ್ಕುಗಳು ಲಭಿಸಲಿಲ್ಲ. ಅವರನ್ನು ಕೊಲ್ಲಲಾಯಿತು, ಮತಾಂತರ ಮಾಡಲಾಯಿತು ಇಲ್ಲವೇ ಅವರು ಭಾರತಕ್ಕೆ ಬಂದರು ಎಂದು ಶಾ ವಿವರಿಸಿದರು.

ಮಸೂದೆಯು ಭಾರತದಲ್ಲಿನ ಮುಸ್ಲಿಮರ ವಿರುದ್ಧ ಎಂಬುದನ್ನು ಖಂಡತುಂಡವಾಗಿ ನಿರಾಕರಿಸಿದ ಗೃಹಸಚಿವರು, ’ಭಾರತದಲ್ಲಿನ ಮುಸ್ಲಿಮರು ನಮ್ಮ ಪ್ರಜೆಗಳು, ಅವರನ್ನು ಚಿತ್ರಹಿಂಸೆಗೆ ಪಡಿಸಲಾಗುವುದಿಲ್ಲ. ನೀವು ಏನು ಬಯಸುತ್ತಿದ್ದೀರಿ -ವಿಶ್ವಾದ್ಯಂತದಿಂದ ಬರುವ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಬೇಕೆ? ಇದು ಸಾಧ್ಯವಿಲ್ಲ. ಈ ಮೂರು ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗಿದ್ದಾರೆ,ಆದ್ದರಿಂದ ನಾವು ಈ ಮೂರು ರಾಷ್ಟ್ರಗಳನ್ನು ಮಾತ್ರ ಸೇರಿಸಿದ್ದೇವೆ ಎಂದು ಶಾ ಹೇಳಿದರು.

ಆದರೆ ಗೃಹಸಚಿವರು ತಮ್ಮ ಪ್ರಸ್ತಾವನಾ ಭಾಷಣ ಮುಗಿಸುತ್ತಿದ್ದಂತೆಯೇ, ವಿರೋಧ ಪಕ್ಷಗಳು ಮೊಹಮ್ಮದ್ ಅಲಿ ಜಿನ್ನಾ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಹೆಸರುಗಳನ್ನು ಉಲ್ಲೇಖಿಸುತ್ತಿರುವುದಕ್ಕಾಗಿ ಸರ್ಕಾರದ ವಿರುದ್ಧ ಟೀಕೆಯ ಮಳೆಗರೆದವು.

‘ಇದು ಭಾರತದ ಆತ್ಮಕ್ಕೆ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಇದು ನೈತಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತದೆ. ಇದು ಸಂವಿಧಾನಾತ್ಮಕ ಪರೀಕ್ಷೆಯಲ್ಲಿ ವಿಫಲವಾಗುತ್ತದೆ.  ಇದು ವಿಭಜನಕಾರಿಮತ್ತು ತಾರತಮ್ಯದ್ದು ಎಂದು ಕಾಂಗ್ರೆಸ್ ಪಕ್ಷದ ಆನಂದ ಶರ್ಮ ಹೇಳಿದರು.

ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಚರ್ಚೆಯಲ್ಲಿ ಸರ್ಕಾರದ ವಿರುದ್ಧದ ಟೀಕಾಪ್ರಹಾರಕ್ಕೆ ಇಳಿದವು. ’ಪ್ರಧಾನಿಯವರು ಇದನ್ನು ಸ್ವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂಬುದಾಗಿ ಹೇಳಿದ್ದನ್ನು ನಾನು ಓದಿದ್ದೇನೆ. ಇದನ್ನು ಎಲ್ಲಿ ಬರೆದಿಡಲಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ.: ಇದನ್ನು ರಾಷ್ಟ್ರ ಪಿತನ ಸಮಾಧಿಯ ಮೇಲೆ ಬರೆಯಲಾಗುತ್ತದೆ, ಆದರೆ ಯಾವ ದೇಶದ ರಾಷ್ಟ್ರಪಿತ? ಕರಾಚಿಯಲ್ಲಿ, ಜಿನ್ನಾ ಸಮಾಧಿಯಲ್ಲಿ ಎಂದು ತೃಣಮೂಲ ಕಾಂಗ್ರೆಸ್ಸಿನ ಡೆರೆಕ್ ಒಬ್ರಿಯನ್ ನುಡಿದರು.

ಸಮಾಜವಾದಿ ಪಕ್ಷದ ಜಾವೇದ್ ಅಲಿಖಾನ್  ಅವರು ’ನಮ್ಮ ಸಕಾರವು ಈ ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ಎನ್‌ಆರ್ ಸಿ ಮೂಲಕ ಜಿನ್ನಾ ಅವರ ಕನಸನ್ನು ನನಸಾಗಿಸಲು ಯತ್ನಿಸುತ್ತಿದೆ. ನೆನಪಿಡಿ, ೧೯೪೯ರಲ್ಲಿ ’ನಾವು ಭಾರತದಲ್ಲಿ ನೈಜ ಜಾತ್ಯತೀತ ಪ್ರಜಾಪ್ರಭುತ್ವದ ಅಡಿಗಲ್ಲು ಹಾಕುತ್ತಿದ್ದೇವೆ ಎಂದು ಸರ್ದಾರ್ ಪಟೇಲ್ ಹೇಳಿದ್ದರು.’ ದೇಶವನ್ನು ಧರ್ಮದ ನೆಲೆಯಲ್ಲಿ ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿರುಮಾತುಗಳ ವಿನಿಮಯದ ಮೂಲಕ ವಿವಿಧ ಪಕ್ಷಗಳ ನಾಯಕರು ಮಸೂದೆಯ ಪರ ಅಥವಾ ವಿರುದ್ಧವಾದ ತಮ್ಮ ನಿಲುವುಗಳನ್ನು  ಪ್ರಕಟಿಸಿದರು.

ಜನತಾದಳ (ಸಂಯುಕ್ತ) ಲೋಕಸಭೆಯಂತೆಯೇ ರಾಜ್ಯಸಭೆಯಲ್ಲೂ ತನ್ನ ಬೆಂಬಲ ಮುಂದುವರೆಸಿದರೆ, ಸರ್ಕಾರದ ಶಾಸನಕ್ಕೆ  ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜು ಜನತಾದಳ (ಬಿಜೆಡಿ)ಯ ಗಮನಾರ್ಹ ಬೆಂಬಲ ಲಭಿಸಿತು.

ಲೋಕಸಭೆಯಲ್ಲೂ ಮಸೂದೆ ಮಂಡನೆಯಾದಾಗ ವಿರೋಧ ಪಕ್ಷಗಳಿಂದ ಇದೇ ಮಾದರಿಯ ವಿರೋಧ ವ್ಯಕ್ತವಾಗಿತ್ತು. ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಸದನದಲ್ಲಿ ಹರಿದು ಹಾಕಿದ್ದರು. ಆದರೆ, ಮಸೂದೆಯನ್ನು ಮತಕ್ಕೆ ಹಾಕಿದಾಗ ಸರ್ಕಾರಕ್ಕೆ ಕೆಳಮನೆಯಲ್ಲಿ ಪ್ರಚಂಡ ಬಹುಮತ ಲಭಿಸಿತ್ತು.

ಹಿಂಸೆಗೆ ತಿರುಗಿದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ

ಹಿಂಸೆಗೆ ತಿರುಗಿದ ಪೌರತ್ವ ತಿದ್ದುಪಡಿ ಮಸೂದೆ
ವಿರೋಧಿ ಪ್ರತಿಭಟನೆ
ತ್ರಿಪುರಾ, ಅಸ್ಸಾಮಿನಲ್ಲಿ ಸೇನೆಗೆ ಬುಲಾವ್, ಕರ್ಫ್ಯೂ, ಇಂಟರ್ ನೆಟ್ ಸ್ಥಗಿತ
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಅಸ್ಸಾಮಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದನ್ನು ಅನುಸರಿಸಿ ನಾಗರಿಕ ಆಡಳಿತವು ಮೂರು ಸೇನಾ ಕಾಲಂಗಳನ್ನು ಕರೆಸಿಕೊಂಡಿದ್ದು, ಹಲವಡೆ ಕರ್ಫ್ಯೂ ಜಾರಿ ಮಾಡಿತು. ಅಸ್ಸಾಮಿನ ೧೦ ಜಿಲ್ಲೆಗಳಲ್ಲಿ 2019 ಡಿಸೆಂಬರ್ 11ರ ಬುಧವಾರ  ರಾತ್ರಿ ೭ ಗಂಟೆಯಿಂದ ೨೪ ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್ ಸ್ಥಗಿತಗೊಳಿಸಲಾಯಿತು.

ಸೇನೆಯ ಎರಡು ಕಾಲಂಗಳನ್ನು ತ್ರಿಪುರಾದ ಕಂಚನಪುರ ಮತ್ತು ಮನ ಸಾಮಾನ್ಯ  ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಮೂರನೇ ಕಾಲಂನ್ನು ಅಸ್ಸಾಮಿನ ಬೊಂಗಾಯಿಗಾಂವ್‌ನಲ್ಲಿ ನಿಯೋಜನೆಗಾಗಿ ಕಾಯ್ದಿರಿಸಿದೆ ಎಂದು ಸೇನೆ ತಿಳಿಸಿದೆ.

ಪೌರತ್ವ (ತಿದ್ದುಪಡಿ) ಮಸೂದೆಯು ೨೦೧೪ರ ಡಿಸೆಂಬರ್ ೩೧ಕ್ಕೆರಂದು ಅಥವಾ ಅದಕ್ನೆ ಮುನ್ನ ಭಾರತಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಉದ್ದೇಶಿಸಿದೆ.

ಅಸ್ಸಾಮಿನಲ್ಲಿ ಸಹಸ್ರಾರು ಪ್ರತಿಭಟನೆಕಾರರು ವಿವಿಧ ಸ್ಥಳಗಳಲ್ಲಿ ಬೀದಿಗಳಿಗೆ ಇಳಿದಿದ್ದು, ಪೊಲೀಸರ ಜೊತೆಗೆ ಘರ್ಷಣೆಗೆ ನಡೆಸಿದರು. ಅಸ್ಸಾಮ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮುಕ್ತಾಯಗೊಂಡಿದ್ದ ೬ ವರ್ಷಗಳ ವಿದ್ಯಾರ್ಥಿಗಳ ಅಕ್ರಮ ವಲಸೆ ವಿರೋಧಿ ಚಳವಳಿ ಕಾಲಕ್ಕಿಂತಲೂ ವ್ಯಾಪಕ ಸ್ವರೂಪವನ್ನು ಪ್ರತಿಭಟನೆ ಪಡೆದಿದ್ದು, ಪರಿಣಾಮವಾಗಿ ರಾಜ್ಯದಲ್ಲಿ ಒಂದು ರೀತಿಯ ಅರಾಜಕ ಸ್ಥಿತಿ ಉದ್ಭವಿಸಿತು.

ಯಾವುದೇ ಪಕ್ಷ ಅಥವಾ ವಿದ್ಯಾರ್ಥಿ ಸಂಘಟನೆ ಹರತಾಳಕ್ಕೆ ಕರೆ ನೀಡಿರದಿದ್ದರೂ, ಸಚಿವಾಲಯದ ಮುಂಭಾಗ ಸೇರಿದಂತೆ ರಾಜ್ಯಾದ್ಯಂತ  ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದರು. ಸಂಜೆಯ ವೇಳೆಗೆ ಸರ್ಕಾರವು ಲಖೀಂಪುರ, ಧೇಮಜಿ, ತೀನ್ ಸುಕಿಯಾ, ದೀಬ್ರುಗಢ, ಛರಾಯಿದೇವ್, ಶಿವನಗರ, ಜೊರ್‍ಹಾತ್, ಗೋಲಘಾಟ್, ಕಾಮರೂಪ್ (ಮೆಟ್ರೋ) ಮತ್ತು ಕಾಮರೂಪ್ ಜಿಲ್ಲೆಗಳಲ್ಲಿ ಗುರುವಾರ ೭ ಗಂಟೆಯವರೆಗೆ ೨೪ ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆ ಅಮಾನತುಗೊಳಿಸುತ್ತಿರುವುದಾಗಿ ಪ್ರಕಟಿಸಿತು.

ಗುವಾಹಟಿಯಲ್ಲಿ ಸಚಿವಾಲಯದ ಮುಂಭಾಗದಲ್ಲಿ ನಡೆದ ಪೊಲೀಸ್ ಕಾರ್‍ಯಾಚರಣೆಯಲ್ಲಿ ಹಲವಾರು ಪ್ರತಿಭಟನಕಾರರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಕಾರರು ಟಿವಿ ಚಾನೆಲ್ ಗಳಿಗೆ ತಿಳಿಸಿದರು. ಗುವಾಹಟಿ- ಶಿಲ್ಲಾಂಗ್ ರಸ್ತೆಯಲ್ಲಿ ಪೊಲೀಸರು ಇರಿಸಿದ್ದ ಅಡೆತಡೆಗಳನ್ನು ಪ್ರತಿಭಟನಕಾರರು ಕಿತ್ತು ಹಾಕಿದಾಗ ಪೊಲೀಸರು ಪ್ರತಿಭಟನಕಾರರ ಮೇಲೆ ಆಶ್ರುವಾಯು ಪ್ರಯೋಗದ ಜೊತೆಗೆ ಬೆತ್ತ ಪ್ರಹಾರವನ್ನೂ ನಡೆಸಿದರು.

2019 ಡಿಸೆಂಬರ್ 15ರ ಭಾನುವಾರ ಜಪಾನ್ ಪ್ರಧಾನಿ ಶಿಂಘೋ ಅಬೆ ಅವರ ಜೊತೆ ನಡೆಯಬೇಕಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಶೃಂಗಸಭೆಗಾಗಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯನ್ನೂ ಧ್ವಂಸಗೊಳಿಸಿದ ಪ್ರತಿಭಟನಕಾರರು, ಸಚಿವಾಲಯದ ಮುಂದೆ ಹಾಕಲಾಗಿದ್ದ ಸರ್ಕಾರದ ಕಲ್ಯಾಣ ಕಾರ್‍ಯಕ್ರಮಗಳಿಗೆ ಸಂಬಂಧಿಸಿದ ಬ್ಯಾನರ್ ಮತ್ತು ಭಿತ್ತಿ ಚಿತ್ರಗಳನ್ನು ಕಿತ್ತು ಹಾಕಿದರು.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಕಾರರು ದೀಬ್ರುಗಢದಲ್ಲಿ ಪೊಲೀಸರ ಜೊತೆ ಘರ್ಷಿಸಿದಾಗ ಪ್ರತಿಭಟನಕಾರರನ್ನು ಚದುರಿಸಲು ರಬ್ಬರ್ ಬುಲ್ಲೆಟ್ ಮತ್ತು ಅಶ್ರುವಾಯು ಶೆಲ್ ಪ್ರಯೋಗಿಸಲಾಯಿತು.

ಜೊರ್‍ಹಾತ್, ಗೋಲಘಾಟ್, ದೀಬ್ರುಗಢ, ತೀನ್ ಸುಕಿಯಾ, ಶಿವಸಾಗರ, ಬೊಂಗಾಯಿಗಾಂವ್, ನಾಗಾಂವ್, ಸೋನಿತಪುರ ಮತ್ತು ಇತರ ಹಲವಾರು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆಗಳು ನಡೆದವು.

ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರ ಪಟ್ಟಣವಾಧ ಛಬುವಾದಲ್ಲಿ ಮಸೂದೆ ವಿರುದ್ಧ ಮೋಟಾರ್ ಸೈಕಲ್ ರ್‍ಯಾಲಿ ಸಂಘಟಿಸಲಾಗಿತ್ತು. ಪ್ರತಿಭಟನೆಗಳ ಪರಿಣಾಮವಾಗಿ ಅಸ್ಸಾಂ ಮುಖ್ಯಮಂತ್ರಿ ಸೋನೋವಾಲ್ ಅವರು ಬುಧವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೂ ಘಟಿಸಿತು. ಆದಾಗ್ಯೂ ಸೋನೋವಾಲ್ ಅವರ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನು ’ಸಮರಾಂಗಣವಾಗಿ ಮಾರ್ಪಟ್ಟಿದ್ದ ನಗರದ ವಿವಿಧ ಭಾಗಗಳ ಮೂಲಕವಾಗಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಗುವಾಹಟಿ ವಿಶ್ವವಿದ್ಯಾಲಯ, ಕಾಟನ್ ವಿಶ್ವ ವಿದ್ಯಾಲಯ ಮತ್ತು ದೀಬ್ರುಗಢ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆಗಳ ಪರಿಣಾಮವಾಗಿ ಬುಧವಾರ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಯಿತು.

ವಲಸೆಗೆ ಧರ್ಮವನ್ನು ಮುಖ್ಯ ಆಧಾರವನ್ನಾಗಿಮಾಡಿದ್ದನ್ನು ’ಸಂವಿಧಾನಬಾಹಿರ ಎಂಬುದಾಗಿ ವಿರೋಧ ಪಕ್ಷಗಳು ಕರೆದಿದ್ದರೂ, ಅಸ್ಸಾಂ ಮತ್ತು ತ್ರಿಪುರಾದಂತಹ ರಾಜ್ಯಗಳ ಭಿನ್ನ ಜನಾಂಗೀಯರು ಬಾಂಗ್ಲಾದಿಂದ ಇತ್ತೀಚಿನ ದಶಕಗಳಲ್ಲಿ ಭಾರೀ ಪ್ರಮಾಣದಲ್ಲಿ ವಲಸೆ ಬಂದಿರುವ ಹಿಂದುಗಳಿಗೆ ಪೌರತ್ವ  ಲಭಿಸುತ್ತದೆ ಎಂಬ ಕಾರಣಕ್ಕಾಗಿ ಮಸೂದೆಯನ್ನು ವಿರೋಧಿಸಿದರು.

Wednesday, March 7, 2018

PM Narendra Modi strongly Disapproves Vandalism of Statues



PM Narendra Modi strongly Disapproves Vandalism of Statues

New Delhi: Prime Minister Narendra Modi has strongly disapproved the incidents of vandalism reported from across the country and asked the Home Ministry on Wednesday 7th March 2018 to take strong action.

PM Modi spoke to Home Minister Rajnath Singh over the issue following which the Home Ministry issued an advisory to the states asking them to prevent such incidents. The MHA has said that persons indulging in such acts must be sternly dealt with and booked under relevant provisions of law.

BJP chief Amit Shah terms as extremely unfortunate vandalisation of statues in some states. "The recent issue on destroying of statues is extremely unfortunate. We as a party do not support the bringing down of anybody’s statue," Shah tweeted.

In another incident of vandalisation, a statue of Bharatiya Jana Sangh founder Shyama Prasad Mookerjee was damaged at Jadavpur University in West Bengal on Wednesday, 7th March 2018.

Police said a group of students blackened the face of the statue and tried to bring it down. Six students have been detained.

This incident comes after a statue of Dravidian movement leader Periyar  

Ramaswamy was razed in Vellore and two Lenin statues were damaged in Tripura.

The Lenin statues were razed in Tripura and the statue of Periyar was vandalised by two men in Tamil Nadu.

According to police, the glasses and the nose of the Periyar statue inside Tirupathur Corporation Office in Vellore were damaged by the vandals around 9 pm on Tuesday, 6th March 2018. The men were caught by locals before they could inflict further damage and handed over to the police.

The vandalism attempt came hours after senior BJP leader H Raja said Periyar was "casteist" and called for the reformist's statue to be "destroyed" in a Facebook post. He deleted the post after facing a backlash.

“Who is Lenin? What is the relevance he holds in India? What is the link between communalism and India? Lenin’s statues were destroyed in Tripura, tomorrow, in Tamil Nadu, casteist Periyar’s statues will be destroyed,” wrote Raja.

The Facebook post was in reference to the incident in south Tripura, where alleged BJP supporters used a JCB to bring down a statue of communist revolutionary Lenin on Monday 5th March 2018, two days after the party won the assembly elections in the state. On Tuesday 6th March 2018, another Lenin statue was razed to the ground.

The Periyar reference in Raja’s post was heavily criticised online, following which, the leader took it down. He has reportedly said that someone else had inadvertently posted it on his page.

However BJP distanced itself from Raja’s statement

Tuesday, March 6, 2018

Another Lenin Statue Toppled in Tripura



Another Lenin Statue Toppled in Tripura

New Delhi: Another statue of Vladimir Ilyich Ulyanov, better known as Lenin, was razed to the ground by a mob in Tripura on Tuesday 6th March 2018. This is the second such incident in two days after the BJP stormed to power in the state that was a Left bastion.

On Monday, 5th March 2018, a group of alleged BJP supporters had brought down a sculpture of the Communist revolutionary leader in the heart of Belonia town in the southern part of the state while chanting Bharat Mata ki Jai.

Tuesday's incident took place in Sabroom town, also in south Tripura. Governor Tathagata Roy said it was a case of vandalism and not rioting. He said the district administration has been directed to take action.

The incidents have caused a war of words between the BJP and the opposition, with several BJP ministers defending the acts and saying that it was a mark of protest against communism.
A photo of Monday’s incident was shared by BJP national general secretary Ram Madhav on Twitter, who wrote, "People taking down Lenin’s statue ... not in Russia; it is in Tripura. ‘Chalo Paltai' (sic)." The leader later deleted the tweet.

Tathagata Roy had also tweeted that a newly elected government was within its right to undo what the previous government had done. "What one democratically elected government can do another democratically elected government can undo. And vice versa," Roy wrote.

BJP leader Subramanian Swamy said the late Russian leader was "a terrorist" and questioned if the statue of such a person could be installed in India.

Speaking to reporters outside the Parliament, Swamy also suggested the Communist leaders should install Lenin's statue inside their party headquarters and "worship" him if they want.
Lenin was a foreigner. He was, in a way, a terrorist because the number of people he killed there (in Russia) after imposing dictatorship there. And (you) want statue of such a person erected in our country?" Swamy asked.

Union minister Giriraj Singh took the defense to another level and said people who were "oppressed" during the Left's 25-year rule in Tripura might have brought down a statue of communist icon Vladimir Lenin in the state.

On the other hand, CPI(M) general secretary Sitaram Yechury criticised the BJP-RSS and urged the democratic and secular forces of the country to come together against the “fascist onslaught” of the saffron regime.

Condemning the incident, West Bengal Chief Minister Mamata Banerjee said, the kind of “divisive politics” that is vandalising Lenin’s statue today, will soon target those of Gandhi, Subhash Chandra Bose and Swami Vivekananda.


Advertisement