My Blog List

Monday, October 19, 2020

‘ಚತುರ್ಭಜ’ಕ್ಕೆ ಭೀಮಬಲ: ಮಲಬಾರ್ ನೌಕಾ ಕವಾಯತಿಗೆ ಆಸ್ಟೇಲಿಯಾ

 ‘ಚತುರ್ಭಜ’ಕ್ಕೆ ಭೀಮಬಲ: ಮಲಬಾರ್
ನೌಕಾ ಕವಾಯತಿಗೆ ಆಸ್ಟೇಲಿಯಾ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಮಲಬಾರ್ ನೌಕಾ ಕವಾಯತಿನಲ್ಲಿ ಆಸ್ಟ್ರೇಲಿಯಾ ಸೇರಲಿದೆ ಎಂದು ಭಾರತ 2020 ಅಕ್ಟೋಬರ್ 19 ಸೋಮವಾರ ಪ್ರಕಟಿಸಿತು. ಇದರರ್ಥ ಕ್ವಾಡ್ ಅಥವಾ ಚತುರ್ಭುಜ ಒಕ್ಕೂಟದ ಎಲ್ಲಾ ನಾಲ್ಕು ಸದಸ್ಯ ರಾಷ್ಟ್ರಗಳು ಮೆಗಾ ಡ್ರಿಲ್ನಲ್ಲಿ ಭಾಗವಹಿಸಲಿವೆ.

ಇದರೊಂದಿಗೆ ಕ್ವಾಡ್ ಗುಂಪಿನ ಅಧಿಕೃತತೆಗೆ ಭದ್ರ ತಳಪಾಯ ಬೀಳುವ ನಿರೀಕ್ಷೆ ಇದೆ. ಅಮೆರಿಕ ಮತ್ತು ಜಪಾನ್ ಮಲಬಾರ್ ನೌಕಾ ಕವಾಯತಿಯನಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ದೃಢಪಡಿಸಿವೆ.

ಕವಾಯತು ಮುಂದಿನ ತಿಂಗಳು ಬಂಗಾಳಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ನಡೆಯುವ ಸಾಧ್ಯತೆಯಿದೆ.

ಬೃಹತ್ ನೌಕಾ ಕವಾಯತಿನಲ್ಲಿನ ಭಾಗವಾಗಬೇಕೆಂಬ ಆಸ್ಟ್ರೇಲಿಯಾದ ಮನವಿಗೆ ಕಿವಿಗೊಟ್ಟ ಭಾರತದ ನಿರ್ಧಾರವು ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗಿನ ಸಂಬಂಧದಲ್ಲಿ ಹೆಚ್ಚುತ್ತಿರುವ ಪ್ರಕ್ಷುಬ್ಧತೆಯ ಮಧ್ಯೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮುಂದಿನ ತಿಂಗಳು ನಡೆಯುವ ವಾರ್ಷಿಕ ಮಲಬಾರ್ ನೌಕಾ ಕಸರತ್ತಿನಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯಾವನ್ನು ಆಹ್ವಾನ ನೀಡಿದ್ದು, ಆಸ್ಟ್ರೇಲಿಯಾ ಅದಕ್ಕೆ ಒಪ್ಪಿಗೆ ನೀಡಿದೆ.

ಮಲಬಾರ್ ನೌಕಾ ಕಸರತ್ತು ಬಂಗಾಳಕೊಲ್ಲಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ೨೦೧೯ ಕಸರತ್ತು ಸೆಪ್ಟೆಂಬರ್ ೨೬ ರಿಂದ ಅಕ್ಟೋಬರ್ ರವರೆಗೆ ಜಪಾನ್ ಕರಾವಳಿಯಲ್ಲಿ ನಡೆದಿತ್ತು. ಕ್ವಾಡ್ ಪಾಲುದಾರರನ್ನು ಒಳಗೊಂಡ ನೌಕಾ ಕಸರತ್ತು ನವೆಂಬರ್ - ಮತ್ತು ನವೆಂಬರ್ ೧೭-೨೦ ರಂದು ನಡೆಯಲಿದೆ. ಹಿಂದೂ ಮಹಾಸಾಗರ-ಶಾಂತಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ಉಚಿತ ಮತ್ತು ಮುಕ್ತ ಸಂಚರಣೆಯ ವ್ಯವಸ್ಥೆ ಮಾಡುವುದು ಎಲ್ಲ ನಾಲ್ಕು ದೇಶಗಳ ಉದ್ದೇಶವಾಗಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಜೊತೆಗಿನ ಬಿಕ್ಕಟ್ಟುನ್ನು ಬಗೆಹರಿಸಲು ನಡೆಯುತ್ತಿರುವ ಮಿಲಿಟರಿ-ರಾಜತಾಂತ್ರಿಕ ಮಾತುಕತೆಗಳ ಮೇಲೆ ಕ್ವಾಡ್ ಕಸರತ್ತಿನ ಪರಿಣಾಮವನ್ನು ರಕ್ಷಣಾ ಸಚಿವಾಲಯದ ಒಂದು ವಿಭಾಗವು ಚರ್ಚಿಸುತ್ತಿದೆ. ಆಸ್ಟ್ರೇಲಿಯಾದ ಭಾಗವಹಿಸುವಿಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ವಿದೇಶಾಂಗ ಸಚಿವಾಲಯವು ರಕ್ಷಣಾ ಸಚಿವಾಲಯಕ್ಕೆ ತಿಳಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಅಕ್ಟೋಬರ್ ರಂದು ಟೋಕಿಯೊದಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯ ಬಳಿಕ ಕಸರತ್ತು ಬರುತ್ತಿದ್ದು, ಅಕ್ಟೋಬರ್ ೨೬-೨೭ರಂದು ಭಾರತ-ಅಮೆರಿಕ ಟು ಪ್ಲಸ್ ಟು ಮಾತುಕತೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿವೆ. ಮಾತುಕತೆಯ ವೇಳೆಯಲ್ಲಿ ಉಭಯ ರಾಷ್ಟ್ರಗಳು ಬಿಇಸಿಎ ಎಂಬ ಭೌಗೋಳಿಕ-ಪ್ರಾದೇಶಿಕ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ನಿರೀಕ್ಷೆಯಿದೆ.

೨೦೦೭ ರಲ್ಲಿ ಮಲಬಾರ್ಗೆ ಆಸ್ಟ್ರೇಲಿಯಾವನ್ನು ಶಾಶ್ವತವಲ್ಲದ ಪಾಲುದಾರನಾಗಿ ಆಹ್ವಾನಿಸಿದಾಗ, ಬೀಜಿಂಗ್ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಕ್ಕೆ (ಸಿಂಗಾಪುರವು ಇತರ ಪಾಲುದಾರ) ನಡಾವಳಿ ಪತ್ರ ಕಳುಹಿಸಿ ಕ್ವಾಡ್ ಉಪಕ್ರಮದ ಹಿನ್ನೆಲೆಯಲ್ಲಿ ಕಸರತ್ತಿನ ವಿವರಗಳನ್ನು ಕೋರಿತ್ತು. ಕ್ವಾಡ್ ಉಪಕ್ರಮ ಆಗ ಇನ್ನೂ ಕೇವಲ ಕಾಗದದ ಮೇಲಿನ ಪ್ರಸ್ತಾಪದ ಹಂತದಲ್ಲಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಆಗ ರಕ್ಷಣಾತ್ಮಕ ನಿಲುವು ತಾಳಿದ್ದವು.

ಕ್ವಾಡ್ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಅಕ್ಟೋಬರ್ ೧೩ ರಂದು ಕೌಲಾಲಂಪುರದಲ್ಲಿ ಮಲೇಷ್ಯಾ ವಿದೇಶಾಂಗ ಸಚಿವ ಹಿಷಾಮುದ್ದೀನ್ ಹುಸೇನ್ ಅವರನ್ನು ಭೇಟಿ ಮಾಡಿದ ಬಳಿಕ ಪ್ರಶ್ನೋತ್ತರ ಅಧಿವೇಶನದಲ್ಲಿ ಗುಂಪಿನ ಬಗ್ಗೆ ಮಾತನಾಡಲು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಗೆ ಯಾವುದೇ ಹಿಂಜರಿಕೆ ಇರಲಿಲ್ಲ. ಅಮೆರಿಕ- ಇಂಡೋ-ಪೆಸಿಫಿಕ್ ಕಾರ್ಯತಂತ್ರವು ವಿಭಿನ್ನ ಗುಂಪುಗಳ ನಡುವೆ ಮುಖಾಮುಖಿಯನ್ನು ಉಂಟುಮಾಡಲು ಮತ್ತು ಶೀತಲ ಸಮರದ ಮನಸ್ಥಿತಿಯೊಂದಿಗೆ ಭೌಗೋಳಿಕ-ರಾಜಕೀಯ ಸ್ಪರ್ಧೆಯನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಲಾದ ದೊಡ್ಡ ಅಪಾಯ ಎಂದು ಅವರು ಹೇಳಿದ್ದರು. ಅದೇ ಸಚಿವರು ಕ್ವಾಡ್ನ್ನು ೨೦೧೮ರಲ್ಲಿ ಬೀಜಿಂಗ್ನಲ್ಲಿ ಕಡಲ ಬುರುಗು ಎಂದು ಕರೆದಿದ್ದರು. ಅಕ್ಟೋಬರ್ ೧೧ ರಿಂದ ೧೫ ರವರೆಗೆ ಆಸಿಯಾನ್ನಲ್ಲಿ ಬೀಜಿಂಗ್ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ವಾಂಗ್ ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಥೈಲ್ಯಾಂಡ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಿದರೆ, ಉನ್ನತ-ಶ್ರೇಣಿಯ ರಾಜತಾಂತ್ರಿಕ ಯಾಂಗ್ ಜೀಚಿ ಇಂಡೋ-ಪೆಸಿಫಿಕ್ ಮತ್ತು ಕೊರೋನವೈರಸ್ ಕುರಿತ ಚೀನೀ ನಿರೂಪಣೆಯನ್ನು ವಿವರಿಸಲು ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಏತನ್ಮಧ್ಯೆ, ನಾಲ್ಕು ಕ್ವಾಡ್ ಸದಸ್ಯರು ತಾವು ಹಂಚಿಕೊಂಡಿರುವ ಮೌಲ್ಯಗಳನ್ನು ಇತರರಿಗೆ ವಿವರಿಸುವ ಉದ್ದೇಶ ಹೊಂದಿದಾರೆ. ಮುಕ್ತ ವ್ಯಾಪಾರಕ್ಕಾಗಿ ಸಮುದ್ರ ಪಥಗಳನ್ನು ಭದ್ರಪಡಿಸುವುದು ಮತ್ತು ವಿಸ್ತರಣಾವಾದಿ ಚೀನೀ ನೌಕಾಪಡೆಯಿಂದ ನಿರ್ಬಂಧಿತವಾಗಬಾರದು ಎಂಬುದು ಕ್ವಾಡ್ ಸದಸ್ಯರ ಇಂಗಿತವಾಗಿದ್ದು, ಕ್ವಾಡ್ ಎಂಬುದು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಣ ಭದ್ರತಾ ವಾಸ್ತುಶಿಲ್ಪವಾಗಿದೆ, ಇದು ಸೇನಾ ಸಾಗಣೆ ಮತ್ತು ಸಂವಹನ ಒಪ್ಪಂದವನ್ನು ಹೊಂದಿದೆ. ಇದು ಭಾವನೆ ಅಥವಾ ಶೀತಲ ಸಮರದ ಮಾದರಿಯ ಮೈತ್ರಿ ಅಲ್ಲ ಎಂದು ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದರು.

ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್ ನಿವೃತ್ತ ಕಮಾಂಡರ್ ಪ್ರಕಾರ, ಮಲಬಾರ್ ಅಭ್ಯಾಸಗಳು ಮಾನವೀಯ ನೆರವು, ಮೇಲ್ಮೈ ಯುದ್ಧ ಕುಶಲತೆ, ಜಲಾಂತರ್ಗಾಮಿ ವಿರೋಧಿ ಯುದ್ಧ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ, ಗುಂಡೇಟು ತರಬೇತಿ ಮತ್ತು ವೈಮಾನಿಕ ಕಣ್ಗಾವಲುಗಳಿಗೆ ಒತ್ತು ನೀಡುವ ಮೂಲಕ ಪರಸ್ಪರ ಕಾರ್ಯಸಾಧ್ಯತೆಯನ್ನು ಗುರಿಯಾಗಿರಿಸಿಕೊಂಡಿವೆ.

ಕುತೂಹಲಕಾರಿಯಾಗಿ, ಮಲಬಾರ್ ೨೦೨೦ ಕಸರತ್ತು ಬಂಗಾಳಕೊಲ್ಲಿಯಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ, ಪ್ರಮುಖ ಸಮುದ್ರ ಪಥಗಳಲ್ಲಿ ನಡೆಯಲಿದೆ.

No comments:

Advertisement