ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ,
ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ
೨೦೨೬ ಏಪ್ರಿಲ್ ೧೫ರ ಬುಧವಾರ ಸೌರಮಾನ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.
ಬೆಳಗ್ಗೆಯೇ ಸಮೃದ್ಧಿಯ ಸಂಕೇತವಾದ ಹಲ-ಫಲ, ಹಣ್ಣುಗಳು, ತರಕಾರಿ, ಹೂ, ನಾಣ್ಯಗಳನ್ನು ಒಳಗೊಂಡ
ʼವಿಶು-ಕಣಿʼ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಶ್ರೀಮತಿ ಶ್ರೀವಿದ್ಯಾ ಡಿ. ಕಾರ್ತಿಕ್ ಮತ್ತು ಕುಟುಂಬದವರು ಶ್ರೀ ದೇವರಿಗೆ ವಸ್ತ್ರಾಲಂಕಾರ, ಕೆ.ಪಿ. ಸುಗುಣನ್ ಮತ್ತು ಕುಟುಂಬದವರು ʼಕಣಿ-ದರ್ಶನʼ ಹಾಗೂ ವಿಶೇಷ ಅಪ್ಪಂ ಪ್ರಸಾದ, ನೆತ್ರಕೆರೆ ಉದಯಶಂಕರ ನಾರಾಯಣ ಭಟ್ ಮತ್ತು ಕುಟುಂಬದವರು ನಾಣ್ಯ ಸೇವೆ, ಶ್ರೀಮತಿ ಉಮಾ ಜಯಶಂಕರ್ ಮತ್ತು ಕುಟುಂಬದವರು ಸಂಜೆಯ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಶ್ರೀ ದೇವರಿಗೆ ಅಭಿಷೇಕ ವಿಶೇಷ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದ ಕೆಲವು ಫೋಟೋ ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ. ಇತರ ವಿಡಿಯೋಗಳನ್ನು ನೋಡಲು ಅವುಗಳನ್ನು ಕ್ಲಿಕ್
ಮಾಡಿ.


No comments:
Post a Comment