My Blog List

Friday, April 17, 2020

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
(ಇದು ಸುವರ್ಣ ನೋಟ..!)
ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಥರಗುಟ್ಟಿಸಿದೆಮಾನವ ನಿರ್ಮಿತ ಸಂಚಾರ

 ವ್ಯವಸ್ಥೆ ಮಕಾಡೆ ಮಲಗಿದೆವಾಹನ ಸಂಚಾರಕ್ಕಾಗಿ ನಿರ್ಮಿಸಿದ ರಸ್ತೆಗಳು,ಸೇತುವೆಗಳು 
ಬಿಕೋಗುಟ್ಟುತ್ತಿವೆಫ್ಯಾಕ್ಟರಿಕಾರ್ಖಾನೆಅಂಗಡಿ ಮುಂಗಟ್ಟುಗಳು ಬಾಗಿಲೆಳೆದುಕೊಂಡಿವೆ....

 ಆದರೆ ಪ್ರಕೃತಿ ಎಂದಿನಂತೆಯೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ಸೂರ್ಯನ ಎಳೆಬಿಸಿಲು,
 ಮಧ್ಯಾಹ್ನದ ಪ್ರಖರತೆಯುಗಾದಿಯ ವೇಳೆಗೆ ಸಾಮಾನ್ಯವಾಗಿ ಮೋರೆ ತೋರಿಸುವ ವರುಣನ ಸಿಂಚನ

 ವರುಣಸಿಂಚನಕ್ಕೆ ಸಂಭ್ರಮಿಸುವ ಗಿಡಮರಗಳುಹೂವುಗಳು ತಮ್ಮ ದಿನಚರಿಗಳನ್ನು     ಮಾಡುತ್ತಿವೆ.


 ಇತೀಚಿನ ವರುಣ ಸಿಂಚನಕ್ಕೆ ಸಂಭ್ರಮಿಸಿದ ಹೂಗಳು,

  ನಿರ್ಜನ ಪಾರ್ಕಿನಲ್ಲಿ ಮರ ಉದುರಿಸಿದ ಹೂವಿನ ಹಾಸಿಗೆಯಲ್ಲಿ ಪವಡಿಸಿದ ವ್ಯಕ್ತಿ,   ಅಂತಹುದೇ ಇನ್ನೊಂದು ಮರದ ಬುಡದಲ್ಲಿ ತನ್ನ ಚೀಲ ಇಟ್ಟುಕೊಂಡು ಕುಳಿತ ಮುದುಕಿ...
ಪ್ರಕೃತಿಯ ಸಂಭ್ರಮದ ಜೊತೆಗೆ ಪ್ರಕೃತಿಯನ್ನು ತನ್ನಿಷ್ಟದಂತೆ ಬದಲಾಯಿಸ ಹೊರಟ ಮನುಷ್ಯನ ದುರವಸ್ಥೆಗೆ  ಹಿಡಿದ ಕನ್ನಡಿಯಂತೆ ಕಾಣುತ್ತವೆ.
  
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಅವರ ಕ್ಯಾಮರಾ ಪ್ರಕೃತಿಯ ಸಂಭ್ರಮ ಮತ್ತು ಮನುಷ್ಯನ ದುರವಸ್ಥೆ ಕಥೆಯನ್ನು ಹೇಗೆ ಕಟ್ಟಿ ಕೊಟ್ಟಿದೆ ನೋಡಿ.

 
ಸಮೀಪ ದೃಶ್ಯದ ಅನುಭವಕ್ಕೆ ಫೊಟೋಗಳನ್ನು ಕ್ಲಿಕ್ಕಿಸಿ.

No comments:

Advertisement