My Blog List

Wednesday, May 13, 2020

ಸಣ್ಣ ಉದ್ಯಮ, ವ್ಯವಹಾರಕ್ಕೆ ೩ ಲಕ್ಷ ಕೋಟಿ ರೂ. ಖಾತರಿ ರಹಿತ ಸ್ವಯಂಚಾಲಿತ ಸಾಲ

ಸಣ್ಣ ಉದ್ಯಮ, ವ್ಯವಹಾರಕ್ಕೆ ೩ ಲಕ್ಷ ಕೋಟಿ ರೂ. ಖಾತರಿ ರಹಿತ ಸ್ವಯಂಚಾಲಿತ ಸಾಲ
*ಎಂಎಸ್ ಎಂಇಗಳಿಗೆ ಮೇಲಾಧಾರ ರಹಿತ ಸಾಲ
*ಎಂಎಸ್ ಎಂಇಗಳ ವ್ಯಾಖ್ಯಾನ ಪರಿಷ್ಕರಣೆ
*೨೦೦ ಕೋಟಿ ರೂ.ವರೆಗೆ ಜಾಗತಿಕ ಟೆಂಡರ್ ಇಲ್ಲ
*ಇಪಿಎಫ್ ಬೆಂಬಲಕ್ಕೆ ೨೫೦೦ ಕೋಟಿ ರೂ.
*ಡಿಸ್ಕಾಮ್ಗಳಿಗೆ ೯೦,೦೦೦ ಕೋಟಿ ರೂ.
*ಗುತ್ತಿಗೆದಾರರಿಗೆ ತಿಂಗಳ ಕಾಲಾವಕಾಶ ವಿಸ್ತರಣೆ
*ಟಡಿಎಸ್ ದರ ಶೇಕಡಾ ೨೫ರಷ್ಟು ಕಡಿತ

ನವದೆಹಲಿ: ಸಣ್ಣ ಹಾಗೂ ಮಧ್ಯಮ ಉದ್ಯಮಗಳು (ಎಸ್ಎಂಇ) ಸೇರಿದಂತೆ ವ್ಯವಹಾರಗಳಿಗೆ ಸರ್ಕಾgವು ಲಕ್ಷ ಕೋಟಿ ರೂಪಾಯಿಗಳ ಮೇಲಾಧಾರ ರಹಿತ (ಪೂರಕ ಖಾತರಿ ರಹಿತ) ಸ್ವಯಂಚಾಲಿತ ಸಾಲವನ್ನು ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮೇ  13ರ ಬುಧವಾರ ಇಲ್ಲಿ ಪ್ರಕಟಿಸಿದರು.

ಕೊರೋನಾವೈರಸ್ ಹಾವಳಿ ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನದಿಂದ (ಲಾಕ್ ಡೌನ್) ಉದ್ಭವಿಸಿದ ಆರ್ಥಿಕ ಹಿನ್ನಡೆ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪರಿಹಾರ ಕೊಡುಗೆಯ ವಿವರಗಳನ್ನು ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡರು.

ಆರ್ಥಿಕ ಕೊಡುಗೆಯನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಈದಿನ ಕಂತು ೧೪ ವಿಭಿನ್ನ ಕ್ರಮಗಳನ್ನು ಹೊಂದಿದೆ ಎಂದು ವಿತ್ತ ಸಚಿವರು ನುಡಿದರು.

ಪ್ರಸ್ತುತ ಕಂತಿನ ೧೪ ಕ್ರಮಗಳ ಪೈಕಿ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು (ಎಂಎಸ್ಎಂಇ)ಗಳಿಗೆ, ನೌಕರರ ಭವಿಷ್ಯನಿಧಿ ಸಂಸ್ಥೆಗೆ (ಇಪಿಎಫ್), ಎರಡು ಎನ್ಬಿಎಫ್ಸಿ ಮತ್ತು ಮ್ಯೂಚುವಲ್ ಫಂಡ್ಗಳಿಗೆ ಮತ್ತು ತಲಾ ಒಂದು ಡಿಸ್ಕಾಮ್ಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಮತ್ತು ತೆರಿಗೆ ಕ್ರಮಗಳಿಗೆ ಎಂದು ನಿರ್ಮಲಾ ಹೇಳಿದರು.

" ಸಾಲವು ವರ್ಷಗಳ ಅವದಿಯದ್ದು ಮತ್ತು ಶೇಕಡಾ ೧೦೦ ರಷ್ಟು ಖಾತರಿಯಾದುದು. ಇದು ೨೦೨೦ ಅಕ್ಟೋಬರ್ ೨೧ ರವರೆಗೆ ಇರುತ್ತದೆ. ಇದು ೪೫ ಲಕ್ಷ ಘಟಕಗಳಿಗೆ ಪ್ರಯೋಜಕಾರಿಯಾಗಲಿದೆ ಮತ್ತು ಅವುಗಳಿಗೆ ಚಟುವಟಿಕೆಯ ಪುನಾರಂಭs ಮತ್ತು ಉದ್ಯೋಗ ರಕ್ಷಣೆ ನಿಟ್ಟಿನಲ್ಲಿ ಘಟಕಗಳಿಗೆ ನೆರವಾಗಲಿವೆ ಎಂದು ಸಚಿವರು ಹೇಳಿದರು.

ಸಂಕಷ್ಟದಲ್ಲಿರುವ ಎಂಎಸ್ ಎಂಇಗಳಿಗೆ ೨೦,೦೦೦ ಕೋಟಿ ರೂ
ಸಂಕಷ್ಟದಲ್ಲಿರುವ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳಿಗೆ (ಎಂಎಸ್ ಎಂಇ) ೨೦,೦೦೦ ಕೋಟಿ ರೂಪಾಯಿಗಳ ಸಾಲವನ್ನು ಸಚಿವೆ ಸೀತಾರಾಮನ್ ಪ್ರಕಟಿಸಿದರು. ಸಂಕಷ್ಟದಲ್ಲಿರುವ ಎಂಎಸ್ ಎಂಇಗಳಿಗೆ ಈಕ್ವಿಟಿ ಬೆಂಬಲದ ಅಗತ್ಯವಿದೆ. ಸರ್ಕಾರವು ೨೦,೦೦೦ ಕೋಟಿ ರೂಪಾಯಿಗಳನ್ನು ಆಧೀನ ಸಾಲವಾಗಿ ಒದಗಿಸಲಿದ್ದು ಇದು ಲಕ್ಷ ಎಂಎಸ್ ಎಂಇಗಳಿಗೆ ಅನುಕೂಲ ಮಾಡಿಕೊಡಲಿದೆ.
ಇದರಿಂದ
ಮರುಪಾವತಿಯಾಗದ ಸಾಲ (ಎಂಪಿಎ) ಎಂಬುದಾಗಿ ಪರಿಗಣಿತವಾದ ಅಥವಾ ಸಂಕಷ್ಟದಲ್ಲಿರುವ ಎಂಎಸ್ ಎಂಇU ಕಾರ್ ನಿರ್ವಹಣೆಗೆ ಇದು ನೆರವಾಗಲಿದೆ. ಸರ್ಕಾರವು ೪೦೦೦ ಕೋಟಿ ರೂಪಾಯಿಗಳನ್ನು ಸಿಜಿಟಿಎಂಎಸ್ ಇಗಳಿಗೆ ನೀಡಲಿದೆ ಎಂದೂ ಸಚಿವೆ ಹೇಳಿದರು.

"ಹ್ಯಾಂಡ್ಹೋಲ್ಡಿಂಗ್ ಅಗತ್ಯವಿರುವ ಎಂಎಸ್ಎಂಇಗಳಿಗೆ, ಅವುಗಳ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಅವರು ಆಯ್ಕೆ ಮಾಡಿದ ಮಾರುಕಟ್ಟೆಗಳಲ್ಲಿ ಪಟ್ಟಿ ಮಾಡಲುಮದರ್ ಫಂಡ್ - ಡಾಟರ್ ಫಂಡ್ ಚೌಕಟ್ಟಿನ ಮೂಲಕ ೫೦,೦೦೦ ಕೋಟಿ ರೂಪಾಯಿಗಳ ನಿಧಿಯನ್ನು ರಚಿಸಲಾಗುತ್ತಿದೆ, " ಎಂದು ಸಚಿವರು ನುಡಿದರು.

ಎಂಎಸ್ಎಂಇ ವ್ಯಾಖ್ಯಾನ ಪರಿಷ್ಕರಣೆ
"ಎಂಎಸ್ಎಂಇಗಳ ವ್ಯಾಖ್ಯಾನವನ್ನು ಅವುಗಳ ಅನುಕೂಲಕ್ಕಾಗಿ ಬದಲಾಯಿಸಲಾಗುತ್ತಿದೆ ಇದರಿಂದ ಅವುಗಳು ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಎಂಎಸ್ಎಂಇಗಳನ್ನು ವ್ಯಾಖ್ಯಾನಿಸಿದ ಹೂಡಿಕೆ ಮಿತಿಯನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.

ವಹಿವಾಟು ಗಾತ್ರ - ಉತ್ಪಾದನೆ ಮತ್ತು ಸೇವೆಯ ಹಿಂದಿನ ವ್ಯತ್ಯಾಸಗಳಿಗೆ ಅನುಗುಣವಾಗಿ ಎಂಎಸ್ಎಂಇಗಳನ್ನು ವರ್ಗೀಕರಿಸಲಾಗಿದ್ದು, ಹಿನ್ನೆಲೆಯಲ್ಲಿ ಹೆಚ್ಚುವರಿ ಮಾನದಂಡಗಳನ್ನು ತರಲಾಗುತ್ತಿದೆ ಎಂದು ಸೀತಾರಾಮನ್ ಹೇಳಿದರು.

ಜಾಗತಿಕ ಟೆಂಡರ್ಗಳಿಗೆ ಅನುಮತಿ ಇಲ್ಲ
೨೦೦ ಕೋಟಿ ರೂ.ಗಳವರೆಗೆ ಸರ್ಕಾರದ ಖರೀದಿಯಲ್ಲಿ ಜಾಗತಿಕ ಟೆಂಡರ್ಗಳಿಗೆ ಅನುಮತಿ ನೀಡಲಾಗುವುದಿಲ್ಲ. ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೆರವಾಗಲಿದೆ, ಹಾಗೆಯೇಮೇಕ್ ಇನ್ ಇಂಡಿಯಾಕ್ಕೂ ಅನುಕೂಲಕರವಾಗಲಿದೆ ಎಂದು ಹಣಕಾಸು ಸಚಿವೆ ನುಡಿದರು.

"ಭಾರತೀಯ ಎಂಎಸ್ಎಂಇಗಳು ಮತ್ತು ಇತರ ಕಂಪನಿಗಳು ವಿದೇಶಿ ಕಂಪನಿಗಳಿಂದ ಅಸಮಬಲದ  ಸ್ಪರ್ಧೆಯನ್ನು ಎದುರಿಸುತ್ತಿವೆ. ಆದ್ದರಿಂದ, ೨೦೦ ಕೋಟಿ ರೂ.ಗಳವರೆಗೆ ಸರ್ಕಾರಿ ಖರೀದಿ ಟೆಂಡರ್ಗಳಲ್ಲಿ ಜಾಗತಿಕ ಟೆಂಡರ್Uಳಿಗೆ ಅನುಮತಿ ನೀಡಲಾಗುವುದಿಲ್ಲ. ಇದಕ್ಕಾಗಿ ಸಾಮಾನ್ಯ ಹಣಕಾಸು ನಿಯಮಗಳಿಗೆ  ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು. ಇದು ಮೇಕ್ ಇನ್ ಇಂಡಿಯಾವನ್ನು ಬೆಂಬಲಿಸಿ ಸ್ವಾವಲಂಬಿ ಭಾರತದತ್ತ ಒಂದು ಹೆಜ್ಜೆಯಾಗಿದೆ ಮತ್ತು ಇದು ಎಂಎಸ್ಎಂಇಗಳಿಗೆ ತಮ್ಮ ವ್ಯವಹಾರಗಳನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ "ಎಂದು ಸಚಿವರು ಹೇಳಿದರು.

"ಎಂಎಸ್ಎಂಇಗಳ ನೆರವಿನ ಆರನೇ ಹೆಜ್ಜೆಯಾಗಿ ಕೋವಿಡ್ -೧೯ ನಂತರ, ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳು ಕಷ್ಟಕರವಾದ ಕಾರಣ, ನಾವು -ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುತ್ತೇವೆ. ಮುಂದಿನ ೪೫ ದಿನಗಳಲ್ಲಿ ಸ್ವೀಕರಿಸಲಾಗುವ ಪ್ರತಿಯೊಂದು ಎಂಎಸ್ಎಂಇಯನ್ನು ಭಾರತ ಸರ್ಕಾರ ಮತ್ತು ಕೇಂದ್ರ ಸಾರ್ವಜನಿಕ ವಲಯ ಉದ್ಯಮಗಳು (ಸಿಪಿಎಸ್) ಗೌರವಿಸಲಿವೆ ಎಂದು ಸೀತಾರಾಮನ್ ನುಡಿದರು.

ಇಪಿಎಫ್ ಬೆಂಬಲಕ್ಕೆ ೨೫೦೦ ಕೋಟಿ ರೂ
ಉದ್ಯಮ ಸಂಸ್ಥೆಗಳು ವ್ಯವಹಾರ ಆರಂಭಿಸುತ್ತಿದ್ದಂತೆಯೇ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು, ವ್ಯವಹಾರ ಮತ್ತು ಕಾರ್ಮಿಕರಿಗೆ ದ್ರವ್ಯತೆ ಪರಿಹಾರವನ್ನು ಒದಗಿಸುವ ಸಲುವಾಗಿ ೨೫೦೦ ಕೋಟಿ ರೂಪಾಯಿಗಳ ಇಪಿಎಫ್ ಬೆಂಬಲವನ್ನು ಇನ್ನೂ ತಿಂಗಳು ಮುಂದುವರೆಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವರು ನುಡಿದರು.

ಎನ್ಬಿಎಫ್ಸಿ / ಎಚ್ಎಫ್ಸಿ / ಎಂಎಫ್ಐಗಳಿಗಾಗಿ ವಿಶೇಷ ಲಿಕ್ವಿಡಿಟಿ ಯೋಜನೆ
ಸರ್ಕಾರವು ೩೦,೦೦೦ ಕೋಟಿ ರೂಪಾಯಿಗಳ ವಿಶೇಷ ದ್ರವ್ಯತೆ ಯೋಜನೆಯನ್ನು ಪ್ರಾರಂಭಿಸುತ್ತಿದೆ.
ಇದರ
ಅಡಿಯಲ್ಲಿ ಎನ್ಬಿಫ್ಸಿ / ಎಚ್ಎಫ್ಸಿ / ಎಂಎಫ್ಐಗಳ ಹೂಡಿಕೆ ದರ್ಜೆಯ ಸಾಲಪತ್ರದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಮಾರುಕಟ್ಟೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ,  ದ್ರವ್ಯತೆಯನ್ನು ಹೆಚ್ಚಿಸಲು ಆರ್ಬಿಐ / ಸರ್ಕಾರ ಕ್ರಮ ವಹಿಸುತ್ತದೆ ಎಂದು ಸಚಿವರು ಹೇಳಿದರು.

ಇದರ ಅಡಿಯಲ್ಲಿ ಭಾರತ ಸರ್ಕಾರದಿಂದ ಭದ್ರತೆಗಳನ್ನು ಸಂಪೂರ್ಣವಾಗಿ ಖಾತರಿಪಡಿಸಲಾಗುತ್ತದೆ ಮತ್ತು ಇದು ದ್ರವ್ಯತೆ ಬೆಂಬಲವನ್ನು ನೀಡುತ್ತದೆ ಎಂದು ಅವರು ನುಡಿದರು.

ಎನ್ಬಿಎಫ್ ಸಿಗಳಿಗೆ ಭಾಗಶಃ ಸಾಲ ಖಾತರಿ ಯೋಜನೆ
ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳಿಗೆ (ಎನ್ ಬಿಎಫ್ ಸಿ) ೪೫,೦೦೦ ಕೋಟಿ ರೂಪಾಯಿಗಳ ಭಾಗಶಃ ಸಾಲ ಖಾತರಿ ಯೋಜನೆ . ಯನ್ನು ಸರ್ಕಾರ ರೂಪಿಸಿದೆ. 
ಡಿಸ್ಕಾಮ್ ಗಳಿಗೆ ೯೦,೦೦೦ ಕೋಟಿ ರೂಪಾಯಿಗಳ ಲಿಕ್ವಿಡಿಟಿ ಇಂಜೆಕ್ಷನ್ ಯೋಜನೆಯನ್ನೂ ರೂಪಿಸಲಾಗಿದೆ ಎಂದು ವಿತ್ತ ಸಚಿವೆ ವಿವರಿಸಿದರು.

ಗುತ್ತಿಗೆದಾರರಿಗೆ ಪರಿಹಾರ
ಗುತ್ತಿಗೆದಾರರಿಗೆ ಪರಿಹಾರವಾಗಿ, ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಕೇಂದ್ರ ಲೋಕೋಪಯೋಗಿ ಇಲಾಖೆ ಮುಂತಾದ ಎಲ್ಲಾ ಕೇಂದ್ರ ಸಂಸ್ಥೆಗಳಿಂದ ತಿಂಗಳವರೆಗೆ ವಿಸ್ತರಣೆಯನ್ನು ಹಣಕಾಸು ಸಚಿವಾಲಯ ಪ್ರಕಟಿಸಿದೆ. ಇದು ನಿರ್ಮಾಣ ಕಾರ್ಯಗಳು ಮತ್ತು ಸರಕು ಮತ್ತು ಸೇವಾ ಒಪ್ಪಂದಗಳು, ಕಾಮಗಾರಿಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಮಧ್ಯಂತರ ಮೈಲಿಗಲ್ಲುಗಳು, ಮತ್ತು ಪಿಪಿಪಿ ಒಪ್ಪಂದಗಳಲ್ಲಿ ರಿಯಾಯಿತಿ ಅವಧಿ. ಹೆಚ್ಚಿನ ದ್ರವ್ಯತೆಗೆ ಅನುಕೂಲವಾಗುವಂತೆ, ಸರ್ಕಾರಿ ಸಂಸ್ಥೆಗಳು ಪೂರ್ಣಗೊಂಡ ಒಪ್ಪಂದದ ಮಟ್ಟಿಗೆ ಬ್ಯಾಂಕ್ ಖಾತರಿಗಳನ್ನು ಭಾಗಶಃ ಬಿಡುಗಡೆ ಮಾಡುತ್ತವೆ ಇದರಿಂದ ಹಣದ ಹರಿವು ಸುಧಾರಿಸುತ್ತದೆ ಎಂದು ನಿರ್ಮಲಾ ಹೇಳಿದರು.

ರೇರಾ ಅಡಿಯಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ನೋಂದಣಿ ಮತ್ತು ಪೂರ್ಣಗೊಳಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.

- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೋವಿಡ್ -೧೯ನ್ನುದೈವೀ ಕೃತ್ಯ ಎಂಬುದಾಗಿ ಪರಿಗಣಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

- ೨೦೨೦ ಮಾರ್ಚ್ ೨೫ ರಂದು ಅಥವಾ ನಂತರ ಮುಕ್ತಾಯಗೊಳ್ಳುವ ಎಲ್ಲಾ ನೋಂದಾಯಿತ ಯೋಜನೆಗಳ ನೋಂದಣಿಯನ್ನು ಸ್ವ ಇಚ್ಛೆಯಿಂದ ತಿಂಗಳವರೆಗೆ ವಿಸ್ತರಿಸಲಾಗುವುದು.

- ಪರಿಷ್ಕೃತ ಕಾಲಮಿತಿಯೊಂದಿಗೆ ಹೊಸ ಪ್ರಾಜೆಕ್ಟ್ ನೋಂದಣಿ ಪ್ರಮಾಣಪತ್ರಗಳನ್ನು ಸ್ವಯಂಚಾಲಿತವಾಗಿ ನೀಡಲಾಗುವುದು - ಎಲ್ಲ ಕ್ರಮಗಳು ರಿಯಲ್ ಎಸ್ಟೇಟ್ ಡೆವಲಪರ್ಗಳ ಒತ್ತಡವನ್ನು ತಗ್ಗಿಸುತ್ತವೆ ಮತ್ತು ಯೋಜನೆಗಳನ್ನು ಪೂರ್ಣಗೊಳಿಸಲು ನೆರವಾಗುತ್ತವೆ ಎಂದು ಸಚಿವರು ಹೇಳಿದರು.

ಟಿಡಿಎಸ್ ದರ ಶೇಕಡಾ ೨೫ರಷ್ಟು ಇಳಿಕೆ
ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ದರವನ್ನು ಶೇಕಡಾ ೨೫ ರಷ್ಟು ಕಡಿಮೆ ಮಾಡಲಾಗಿದೆ. ಬಡ್ಡಿ, ಬಾಡಿಗೆ, ದಲ್ಲಾಳಿ, ಪೂರೈಕೆ ಮುಂತಾದ ಎಲ್ಲಾ ಪಾವತಿಗಳಿಗೆ ಇದು ಅನ್ವಯಿಸುತ್ತದೆ. ಇದನ್ನು ನಾಳೆಯಿಂದ ಮಾರ್ಚ್ ೩೧, ೨೦೨೧ ರವರೆಗೆ ಜಾರಿಗೊಳಿಸಲಾಗುವುದು. ಕಡಿತವು ೫೦,೦೦೦ ಕೋಟಿ ರೂ.ಗಳನ್ನು ಜನರ ಕೈಗಳಿಗೆ ಒದಗಿಸುತ್ತದೆ ಎಂದು ಸೀತಾರಾಮನ್ ನುಡಿದರು.

ಚಾರಿಟಬಲ್ ಟ್ರಸ್ಟ್, ಲಾಭರಹಿತ ವ್ಯವಹಾರ, ಸಹಕಾರ ಸಂಘಗಳು ಮತ್ತು ಸಣ್ಣ ಪಾಲುದಾರಿಕೆಗಳ ಎಲ್ಲಾ ಬಾಕಿ ಮರುಪಾವತಿಗಳನ್ನು ತತ್ ಕ್ಷಣ ನೀಡಲಾಗುತ್ತದೆ. ೨೦೨೦ ಜುಲೈ ೩೧ ರಂದು ಮತ್ತು ೨೦೨೦ ಅಕ್ಟೋಬರ್ ೩೧ ರಂದು ಸಲ್ಲಿಕೆಯಾಗಬೇಕಾಗಿದ್ದ ಎಲ್ಲ ಐಟಿ ರಿಟರ್ನ್ಸ್ ಅವಧಿಯನ್ನು ೨೦೨೦ ನವೆಂಬರ್ ೩೧ ರವರೆಗೆ ವಿಸ್ತರಿಸಲಾಗಿದೆ.

ತೆರಿಗೆ ಲೆಕ್ಕಪರಿಶೋಧನೆಯ ಅವಧಿಯನ್ನು ಸೆಪ್ಟೆಂಬರ್ ೩೦, ೨೦೨೦ ರಿಂದ ಅಕ್ಟೋಬರ್ ೩೧, ೨೦೨೦ ರವರೆಗೆ ವಿಸ್ತರಿಸಿದೆ. ವಿವಾದ ಸೆ ವಿಶ್ವಾಸ್ ಯೋಜನೆಯನ್ನು ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ೨೦೨೦ ಡಿಸೆಂಬರ್ ೩೧ ರವರೆಗೆ ವಿಸ್ತರಿಸಲಾಗುತ್ತಿದೆ "ಎಂದು ಸೀತಾರಾಮನ್ ಹೇಳಿದರು.

"ಬ್ಯಾಂಕುಗಳು ಸಾಲವನ್ನು ವಿತರಿಸುವುದರಿಂದ ದೂರ ಸರಿಯುತ್ತಿಲ್ಲ, ಆದರೆ ಲಾಕ್ಡೌನ್ ಮುಗಿದ ನಂತರ ಸಾಲ ಪಡೆಯುವುದಾಗಿ ಅನೇಕ ಗ್ರಾಹಕರು ಹೇಳುತ್ತಿದ್ದಾರೆ, ಇದು ಮಂಜೂರಾದ ಸಾಲಗಳನ್ನು ಬಿಡುಗಡೆ ಮಾಡದಿರಲು ಒಂದು ಕಾರಣವಾಗಿದೆ" ಎಂದು ವಿತ್ತ ಸಚಿವರು ನುಡಿದರು.

ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್
ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ೧೮ ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ವಾಪಸ್ ನೀಡಿದೆ. ಇದರಿಂದ ೧೪ ಕೋಟಿ ಆದಾಯ ತೆರಿಗೆದಾರರಿಗೆ ಅನುಕೂಲವಾದಂತಾಗಿದೆ. ಹಾಗೂ ಆದಾಯ ತೆರಿಗೆ ಮರುಪಾವತಿ ದಿನಾಂಕವನ್ನು ಡಿಸೆಂಬರ್ವರೆಗೆ ಮುಂದೂಡಿಕೆ ಮಾಡಲಾಗಿದೆ.

ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಕ ೨೫೦೦ ಕೋಟಿ ರೂಪಾಯಿ ನೆರವು ನೀಡಲಿದೆ. ಸಣ್ಣ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುವ ಸಂಸ್ಥೆಗಳು ಹಾಗೂ ಸಣ್ಣ ಸಾಲ ನೀಡುವ ಸಂಸ್ಥೆಗಳು ಕೇಂದ್ರ ಸರ್ಕಾರ ನೆರವು ನೀಡಲಿದೆ. ವಲಯಕ್ಕೆ ೩೦ ಸಾವಿರ ಕೋಟಿ ರೂ. ನೀಡಲಿದೆ. ವಲಯ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

೧೫ ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಕ್ಷಣ ಪಿಎಫ್ ಹಣ ಪಾವತಿ ಮಾಡಲಾಗುವುದು. ಅಲ್ಲದೆ, ಪ್ರತಿ ತಿಂಗಳು ೧೫,೦೦೦ಕ್ಕೂ ಅಧಿಕ ಸಂಬಳ ಪಡೆಯುವ ನೌಕರರಿಗೆ ಕೂಡ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಉದ್ಯೋಗದಾತರ ಪಿಎಫ್ ಪಾಲು ಶೇ. ೧೨ರಿಂದ ಶೇ. ೧೦ಕ್ಕೆ ಇಳಿಕೆ ಮಾಡಲಾಗಿದೆ. ,೭೫೦ ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮತ್ತೆ ತಿಂಗಳ ಕಾಲ ಅಂದರೆ ಜೂನ್, ಜುಲೈ, ಆಗಸ್ಟ್ ತಿಂಗಳವರೆಗೆ ಸರ್ಕಾರವೇ ಪಿಎಫ್ ಹಣವನ್ನು ಪಾವತಿ ಮಾಡಲಿದೆ. ಕಂಪನಿ ಮತ್ತು ನೌಕರರ ಪಾಲಿನ ಪಿಎಫ್ ಹಣವನ್ನು ಸರ್ಕಾರವೇ ಭರಿಸಲಿದೆ.
,೫೦೦ ಕೋಟಿ ಲಿಕ್ವಿಡಿಟಿ ಪ್ರೋತ್ಸಾಹದೊಂದಿಗೆ ೭೨.೨೨ ಉದ್ಯೋಗಿಗಳು ಇಪಿಎಫ್ ಅನುಕೂಲ ಪಡೆಯಲಿದ್ದಾರೆ  ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಉಚಿತ ಧಾನ್ಯ: ಮುಂದಿನ ಮೂರು ತಿಂಗ ಕಾಲ ಭಾರತದಲ್ಲಿರುವ ೮೦ ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಉಚಿತವಾ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.. ಯೋಜನೆಯಿಂದ ತುತ್ತು ಕೂಳಿಗೂ ಸಂಕಷ್ಟ ಪಡುತ್ತಿದ್ದ ಬಡವರು ನಿಟ್ಟುಸಿರು ಬಿಡುವಂತಾಗಿದೆ.
ಮುಂದಿನ
ಮೂರು ತಿಂಗಳ ಕಾಲ ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿತು.

No comments:

Advertisement