My Blog List

Tuesday, June 23, 2020

ಕೊರೋನಾ ವಿರುದ್ಧ ಚೊಚ್ಚಲ ಆಯುರ್ವೇದ ಔಷಧ

ಕೊರೋನಾ ವಿರುದ್ಧ ಚೊಚ್ಚಲ ಆಯುರ್ವೇದ ಔಷಧ

ಹರಿದ್ವಾರ: ಇಡೀ ಜಗತ್ತು ಕೊರೋನಾವೈರಸ್  ಲಸಿಕೆ ಕಂಡು ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಹೊತ್ತಿನಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಬಲ್ಲ ಮೊತ್ತ ಮೊದಲ ಆಯುರ್ವೇದ ಔಷಧವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಯೋಗಗುರು ಬಾಬಾ ರಾಮದೇವ್ ಅವರು ಅವರು 23 ಜೂನ್ 2020ರ ಮಂಗಳವಾರ ಇಲ್ಲಿ ಪ್ರಕಟಿಸಿದರು.

ಇದು ರೋಗನಿರೋಧಕ ಶಕ್ತಿ ವರ್ಧಿಸುವ ಔಷಧವಲ್ಲ. ರೋಗವನ್ನೇ ಗುಣಪಡಿಸುವ ಔಷಧ. ‘ಕೊರೊನಿಲ್ ಮತ್ತುಸ್ವಸಾರಿ ಎಂಬ ಎರಡು ಔಷಧಗಳು ಕೊರೋನಾ ರೋಗಿಗಳ ಮೇಲೆ ಶೇ ೧೦೦ರಷ್ಟು ಧನಾತ್ಮಕ ಫಲಿತಾಂಶ ನೀಡಿವೆ ಎಂದು ರಾಮದೇವ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಇಡೀ ಜಗತ್ತು ಕೋವಿಡ್ ಲಸಿಕೆಗೆ ಕಾದು ಕುಳಿತಿರುವಾಗ ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್‌ಐಎಂಎಸ್ ಸಂಸ್ಥೆಗಳು ಒಗ್ಗೂಡಿ ಚೊಚ್ಚಲ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಔಷಧಗಳು ದೀರ್ಘ ಸಂಶೋಧನೆ ಮೂಲಕ ಪ್ರಾಯೋಗಿಕವಾಗಿ ತಯಾರಾಗಿವೆ ಎಂದು ರಾಮದೇವ್ ಹೇಳಿದರು.

ಕೊರೋನಿಲ್, ’ಸ್ವಸಾರಿ ಔಷಧ ಸೇವನೆಯಿಂದ - ದಿನಗಳ ಅವಧಿಯಲ್ಲಿ ರೋಗಿಗಳು ಗುಣಮುಖರಾಗುತ್ತಾರೆ ಎಂದು ಅವರು ರಾಮದೇವ್ ಆಶಾಭಾವ ವ್ಯಕ್ತಪಡಿಸಿದರು.

ಎರಡು ಪ್ರಯೋಗಗಳನ್ನು ಔಷಧಗಳ ಮೇಲೆ ನಡೆಸಲಾಗಿದೆ. ಮೊದಲನೆಯ ಕ್ಲಿನಿಕಲ್ ಆಧರಿತ ಅಧ್ಯಯನವನ್ನು ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ ಕೈಗೊಳ್ಳಲಾಗಿದೆ. ೨೮೦ ರೋಗಿಗಳು ಶೇ ೧೦೦ರಷ್ಟು ಗುಣಮುಖರಾಗಿದ್ದಾರೆ. ಔಷಧದ ಮೂಲಕ ಕೊರೊನಾ ವೈರಸ್ ಅನ್ನು ನಿಯಂತ್ರಿಸಬಹುದು ಎಂದು ಅವರು  ನುಡಿದರು.

೫೪೫ ರೂಪಾಯಿಗಳಿಗೆ ಕೊರೊನಾ ಕಿಟ್ ಲಭಿಸುತ್ತದೆ. ಕಿಟ್ಟನ್ನು ೩೦ ದಿನ ಬಳಸಬಹುದು ಎಂದು ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಚಾರ್ಯ ಬಾಲಕೃಷ್ಣ ತಿಳಿಸಿದರು.

ಮುಂದಿನ ಒಂದು ವಾರದೊಳಗೆ ಎಲ್ಲ ಪತಂಜಲಿ ಮಳಿಗೆಗಳಲ್ಲಿ ಕಿಟ್ ಲಭ್ಯವಾಗಲಿದೆ. ಕಿಟ್‌ಗಳನ್ನು ಗ್ರಾಹಕರಿಗೆ ತಲುಪಿಸಲು ಆಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಮದೇವ್ ನುಡಿದರು.

ಔಷಧಿಗಳನ್ನು ರೋಗಿಗಳ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಲಾಗಿದೆ ಎಂದು ರಾಮದೇವ್ ಸ್ಪಷ್ಟ ಪಡಿಸಿದರು.

ಕೊರೊನಿಲ್ ಮತ್ತು ಸ್ವಸಾರಿ ಯನ್ನು ಪೀಡಿತ ರೋಗಿಗಳ ಮೇಲೆ ಪ್ರಾಯೋಗಿಕವಾಗಿ ಪ್ರಯೋಗಿಸಲಾಗಿದ್ದು, ಪರೀಕ್ಷೆಗಳು ಶೇಕಡಾ ೧೦೦ ರಷ್ಟು ಅನುಕೂಲಕರ ಫಲಿತಾಂಶಗಳನ್ನು ತೋರಿಸಿದೆ ಎಂದು ರಾಮದೇವ್ ಹೇಳಿದರು.

ಇಡೀ ದೇಶ ಮತ್ತು ಜಗತ್ತು ಕೊರೋನವೈರಸ್ ವಿರುದ್ಧ ಔಷಧಕ್ಕಾಗಿ ಅಥವಾ ಲಸಿಕೆಗಾಗಿ ಕಾಯುತ್ತಿತ್ತು. ಪತಂಜಲಿ ಸಂಶೋಧನಾ ಕೇಂದ್ರ ಮತ್ತು ನಿಮ್ಸ್‌ನ ಸಂಯೋಜಿತ ಪ್ರಯತ್ನಗಳಿಂದ ಮೊದಲ ಆಯುರ್ವೇದ ಔಷಧ ಸಿದ್ಧಗೊಂಡಿದೆ. ಪ್ರಯೋಗ ಆಧಾರಿತ ಪುರಾವೆಗಳೊಂದಿಗೆ ಸಂಶೋಧನಾ-ಆಧಾರಿತ ಔಷಧವನ್ನು ತಯಾರಿಸಲಾಗಿದೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಯೋಗಗುರು ನುಡಿದರು.

ನಾವು ಇಂದು ಕೋವಿಡ್ ಔಷಧಗಳಾದ ಕೊರೊನಿಲ್ ಮತ್ತು ಸ್ವಸರಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಇವುಗಳ ಎರಡು ಪ್ರಯೋಗಗಳನ್ನು ನಾವು ನಡೆಸಿದ್ದೇವೆ, ಮೊದಲು ಕ್ಲಿನಿಕಲ್ ನಿಯಂತ್ರಿತ ಅಧ್ಯಯನ, ಇದು ಅಹಮದಾಬಾದ್, ದೆಹಲಿ ಮತ್ತು ಇತರ ಅನೇಕ ನಗರಗಳಲ್ಲಿ ನಡೆಯಿತು. ಇದರ ವ್ಯಾಪ್ತಿಗೆ ೨೮೦ ರೋಗಿಗಳನ್ನು ತರಲಾಯಿತು. ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟ ರೋಗಿಗಳು ಚೇತರಿಸಿದ್ದಾರೆ ಕೊರೋನಾವೈರಸ್ ತೊಡಕುಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಾಯಿತು. ಬಳಿಕ ಎಲ್ಲಾ ಪ್ರಮುಖ ಕ್ಲಿನಿಕಲ್ ನಿಯಂತ್ರಣ ಪ್ರಯೋಗವನ್ನು ನಡೆಸಲಾಯಿತು ಎಂದು ರಾಮದೇವ್ ಹೇಳಿದರು.

ಸಂದರ್ಭದಲ್ಲಿ ಆಚಾರ್ಯ ಬಾಲಕೃಷ್ಣ ಇತರ ಅಧಿಕಾರಿಗಳು ಮತು ಔಷಧ ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಹಾಜರಿದ್ದರು.

No comments:

Advertisement