My Blog List

Thursday, August 13, 2020

ಹೊಸ ತೆರಿಗೆ ಸುಧಾರಣೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

 ಹೊಸ ತೆರಿಗೆ ಸುಧಾರಣೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ತೆರಿಗೆ ಆಡಳಿತದಲ್ಲಿ ಮಾಡಲಾದ ಮಹತ್ವದ ಬದಲಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 13ರ ಗುರುವಾರ ಮುಖರಹಿತ ತೆರಿಗೆ ಮೌಲ್ಯ ಮಾಪನ ಮತ್ತು ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಅತಿಕ್ರಮಣ  ಅವಕಾಶವನ್ನು ಕಡಿಮೆಗೊಳಿಸುವ ಉಪಕ್ರಮಗಳನ್ನು ಅನಾವರಣಗೊಳಿಸಿದರು.

ಮುಕ್ತ, ನ್ಯಾಯೋಚಿತ ಮತ್ತು ಪಾರದರ್ಶಕ ತೆರಿಗೆ ಪರಿಸರ ನಿರ್ಮಾಣದ ಖಾತರಿಗಾಗಿ ತೆರಿಗೆ ಪಾವತಿದಾರರ ಚಾರ್ಟರ್ ಜಾರಿಗೆ ತರಲಾಗುತ್ತಿದೆ ಎಂದು ಪ್ರಧಾನಿ ಪ್ರಕಟಿಸಿದರು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕಪ್ರಾಮಾಣಿಕ ವೇದಿಕೆ ಗೌರವ- ಪಾರದರ್ಶಕ ತೆರಿಗೆ ಉಪಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ, ಭಾರತದಲ್ಲಿ ಕೇವಲ . ಕೋಟಿ ತೆರಿಗೆ ಪಾವತಿದಾರರಿದ್ದು, ಅತ್ಯಂತ ಕಡಿಮೆ ಮಟ್ಟವಾಗಿದೆ ಎಂದು ಹೇಳಿದರು. ತೆರಿಗೆ ಪಾವತಿ ಮಾಡಬೇಕಾದವರು ಮುಂದೆ ಬರಬೇಕು ಮತ್ತು ಪ್ರಾಮಾಣಿಕವಾಗಿ ತಮ್ಮ ತೆರಿಗೆ ಬಾಕಿಯನ್ನು ಪಾವತಿ ಮಾಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕಾಣಿಕೆ ನೀಡಬೇಕು ಎಂದು ಪ್ರಧಾನಿ ಆಗ್ರಹಿಸಿದರು.

ತೆರಿಗೆದಾರರ ಚಾರ್ಟರ್ ಮತ್ತು ಮುಖರಹಿತ ಮೌಲ್ಯಮಾಪನವು ನೇರ ತೆರಿಗೆ ಸುಧಾರಣೆಗಳ ಮುಂದಿನ ಹಂತಗಳಾಗಿವೆ, ಇದು ಸಾಂಕ್ರಾಮಿಕ ಪೀಡಿತ ಆರ್ಥಿಕತೆಯನ್ನು ಪುನರ್ನಿರ್ಮಿಸಲು,  ಅನುಸರಣೆಯನ್ನು ಸರಾಗಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಬಹುಮಾನ ನೀಡುವ ಗುರಿಯನ್ನು ಹೊಂದಿದೆ.

ಆದರೆ, ತೆರಿಗೆ ಪಾವತಿದಾರನು ಯಾವುದೇ ಕಚೇರಿಗೆ ಭೇಟಿ ನೀಡಲು ಅಥವಾ ಯಾವುದೇ ಅಧಿಕಾರಿಯನ್ನು ಭೇಟಿಯಾಗುವ ಅಗತ್ಯವಿಲ್ಲದ ಮುಖರಹಿತ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ರನ್ನು ಈದಿನದಿಂದ (ಗುರುವಾರ) ಜಾರಿಗೆ ತರಲಾಗುವುದು, ಮುಖರಹಿತ ಮನವಿಯು ಸೆಪ್ಟೆಂಬರ್ ೨೫ ರಿಂದ ಜಾರಿಗೆ ಬರಲಿದೆ ಎಂದು ಪ್ರಧಾನಿ ಹೇಳಿದರು.

"ತೆರಿಗೆ ವ್ಯವಸ್ಥೆಯು ಮುಖರಹಿತವಾಗಿ ಬದಲಾಗಬಹುದು, ಆದರೆ ಇದು ತೆರಿಗೆದಾರರಿಗೆ ನ್ಯಾಯ ಮತ್ತು ನಿರ್ಭಯತೆಯನ್ನು ನೀಡುತ್ತದೆ" ಎಂದು ಅವರು ಹೇಳಿದರು

ಇದುವರೆಗೂ ವಸತಿ ನಗರದ ತೆರಿಗೆ ಕಚೇರಿಗಳು ವೈಯಕ್ತಿಕ ತೆರಿಗೆದಾರರ ಪರಿಶೀಲನೆ, ಮೇಲ್ಮನವಿ ಮತ್ತು ನೋಟಿಸ್ಗಳನ್ನು ನಿರ್ವಹಿಸುತ್ತಿದ್ದವು.  ಇನ್ನು, ಅಪಾಯದ ನಿಯತಾಂಕಗಳು ಮತ್ತು ಹೊಂದಿಕೆಯಾಗದ ಆಧಾರದ ಮೇಲೆ ಪರಿಶೀಲನೆಗಾಗಿ ತೆರಿಗೆ ರಿಟರ್ನ್ಸ್ ಅನ್ನು ಕೇಂದ್ರ ಕಂಪ್ಯೂಟರ್ ತೆಗೆದುಕೊಳ್ಳುತ್ತದೆ ಮತ್ತು ನಂತರ ಅವುಗಳನ್ನು ಯಾವುದೇ ನಗರದ ಅಧಿಕಾರಿಗಳ ತಂಡಕ್ಕೆ ಯಾದೃಚ್ಛಿಕ ಪರಿಶೀಲನೆಗೆ ನೀಡುತ್ತದೆ. ಅಧಿಕಾರಿಗಳ ಪರಿಶೀಲನೆಯನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾದ ಇನ್ನೊಂದು ಸ್ಥಳದ ಅಧಿಕಾರಿಗಳು  ಪರಿಶೀಲಿಸುತ್ತಾರೆ

ಯಾವುದಾದರೂ ನೋಟಿಸ್ ಇದ್ದರೆ, ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯಿಂದ ಮಾತ್ರ ಕಳುಹಿಸಲಾಗುತ್ತದೆ, ಮತ್ತು ತೆರಿಗೆ ಪಾವತಿದಾರರು ತೆರಿಗೆ ಕಚೇರಿಗೆ ಭೇಟಿ ನೀಡುವ ಅಥವಾ ಯಾವುದೇ ಅಧಿಕಾರಿಯನ್ನು ಭೇಟಿ ಮಾಡುವ ಅಗತ್ಯವಿಲ್ಲ, ನೇರವಾಗಿ ವಿದ್ಯುನ್ಮಾನ ವ್ಯವಸ್ಥೆಯಲ್ಲಿಯೇ ಪ್ರತಿಕ್ರಿಯಿಸಬಹುದು

ಪರಿಶೀಲನೆ ಅಥವಾ ನೋಟಿಸ್ಗಳನ್ನು ಇತ್ಯರ್ಥಗೊಳಿಸಲು "ಜಾನ್ ಪೆಹಚಾನ್" (ಪರಿಚಯಸ್ಥರ) ಯುಗವನ್ನು ಇದು ಕೊನೆಗೊಳಿಸುತ್ತದೆ ಎಂದು ಮೋದಿ ಹೇಳಿದರು

ತೆರಿಗೆದಾರರ ಚಾರ್ಟರ್, ತೆರಿಗೆದಾರರನ್ನು ಪ್ರಾಮಾಣಿಕರೆಂದು ಪರಿಗಣಿಸುವಾಗ ನ್ಯಾಯಯುತ, ವಿನಯಶೀಲ ಮತ್ತು ಸಮಂಜಸ ನಡವಳಿಕೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಹೇಳಿದರು. ತೆರಿಗೆದಾರರು ಪ್ರಾಮಾಣಿಕರಾಗಿರಬೇಕು ಮತ್ತು ಅನುಸರಣೆ ಹೊಂದಿರಬೇಕು ಮತ್ತು ಸಮಯಕ್ಕೆ ತೆರಿಗೆ ಪಾವತಿಸಬೇಕು ಎಂದು ಅದು ನಿರೀಕ್ಷಿಸುತ್ತದೆ ಎಂದು ಪ್ರಧಾನಿ ನುಡಿದರು.

ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಸುಮಾರು . ಕೋಟಿಗಳಷ್ಟು ಹೆಚ್ಚಾಗಿದೆ, ಆದರೆ ೧೩೦ ಕೋಟಿ ಜನಸಂಖ್ಯೆಯಲ್ಲಿ ಕೇವಲ . ಕೋಟಿಯಷ್ಟು ನಿಜವಾದ ತೆರಿಗೆದಾರರಾಗಿರುವುದು  ಬಹಳ ಕಡಿಮೆಯಾಯಿತು" ಎಂದು ಅವರು ಹೇಳಿದರು

"ಸಮರ್ಥರಾದವರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ತಮ್ಮ ಬಾಕಿ ಹಣವನ್ನು ಪಾವತಿಸಿ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು" ಎಂದು ಮೋದಿ ಹೇಳಿದರು

ಹಿಂದೆ ಆರ್ಥಿಕ ಸುಧಾರಣೆಗಳನ್ನು ಕಡ್ಡಾಯ ಅಥವಾ ಒತ್ತಡದಲ್ಲಿ ಮಾಡಲಾಗಿದ್ದು ಅದು ಅಪೇಕ್ಷಿತ ಫಲಿತಾಂಶವನ್ನು ನೀಡಲಿಲ್ಲ. ನಮಗೆ ಸುಧಾರಣೆಗಳು ಎಂದರೆ ನೀತಿಯ ಆಧಾರದ ಮೇಲಿನ ಸುಧಾರಣೆಗಳು, ಸಮಗ್ರವಾದ ಮತ್ತು ತುಣುಕುಗಳಲ್ಲದ ಸುಧಾರಣೆಗಳಾಗಿದ್ದು, ಒಂದು ಸುಧಾರಣೆಯು ಇತರ ಸುಧಾರಣಗಳಿಗೆ ಆಧಾರವಾಗಿರುತ್ತದೆ. ಸುಧಾರಣೆಯು ನಿರಂತರ ಪ್ರಕ್ರಿಯೆಯಾಗಿದೆ ಎಂದೂ ಪ್ರಧಾನಿ ಹೇಳಿದರು.

ತೆರಿಗೆ ವ್ಯವಸ್ಥೆಗೆ ಮೂಲಭೂತ ಮತ್ತು ರಚನಾತ್ಮಕ ಸುಧಾರಣೆಯ ಅಗತ್ಯವಿತ್ತು ಏಕೆಂದರೆ ಭಾರತವು ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗ ಇದನ್ನು ತರಲಾಗಿತ್ತು ಎಂದು ಅವರು ನುಡಿದರು.

"ಸಂಕೀರ್ಣತೆ ಇರುವಲ್ಲಿ ಅನುಸರಣೆ ಕಷ್ಟವಾಗುತ್ತದೆ, ಕಾನೂನುಗಳು ಸಂಖ್ಯೆಯಲ್ಲಿ ಕಡಿಮೆ ಇರಬೇಕು ಮತ್ತು ತೆರಿಗೆದಾರರನ್ನು ಸಂತೋಷಪಡಿಸಬೇಕು ಎಂದು ಪ್ರಧಾನಿ ಹೇಳಿದರು.

"ನಾವುವಿವಾದ್ ಸೆ ವಿಶ್ವಾಸ್ (ವಿವಾದದಿಂದ ವಿಶ್ವಾಸದೆಡೆಗೆ) ಯೋಜನೆಯನ್ನು ತಂದಿದ್ದೇವೆ, ಇದರಿಂದಾಗಿ ನ್ಯಾಯಾಲಯದ ಹೊರಗೆ ಗರಿಷ್ಠ ಪ್ರಕರಣಗಳು ಪರಿಣಾಮಕಾರಿಯಾಗಿ ಬಗೆಹರಿಯುತ್ತವೆ. ಅಲ್ಪಾವಧಿಯಲ್ಲಿಯೇ ಸುಮಾರು ಲಕ್ಷ ಪ್ರಕರಣಗಳನ್ನು ಬಗೆಹರಿಸಲಾಗಿದೆ" ಎಂದು ಮೋದಿ ಹೇಳಿದರು.

೨೦೧೪ ರಿಂದ ತಮ್ಮ ಸರ್ಕಾರ ಕೈಗೊಂಡ ತೆರಿಗೆ ಸುಧಾರಣೆಗಳನ್ನು ಪಟ್ಟಿ ಮಾಡಿದ ಮೋದಿ, ಡಜನ್ ಗಟ್ಟಲೆ ತೆರಿಗೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ತೆರಿಗೆ ವಿಷಯಗಳನ್ನು ಮುಂದುವರೆಸಲು ನಿಗದಿಪಡಿಸಿದ ಮಿತಿಗಳು ಮತ್ತು ದಾವೆಗಳನ್ನು ಕಡಿಮೆ ಮಾಡಲು ತರಲಾದ ವಿವಾದ ಪರಿಹಾರ ಯೋಜನೆಯನ್ನು ಸರಕು ಮತ್ತು ಸೇವಾ ತೆರಿಗೆ ಒಟ್ಟುಗೂಡಿಸಿದೆ ಎಂದು ಪ್ರಧಾನಿ ನುಡಿದರು.

ಅಲ್ಲದೆ, ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ. "ವ್ಯಕ್ತಿಗಳಿಗೆ ಲಕ್ಷ ರೂ.ವರೆಗೆ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ತೆರಿಗೆ ಹೊರೆಯನ್ನು ಸಹ ಕಡಿಮೆ ಮಾಡಲಾಗಿದೆ. ಭಾರತವು ಈಗ ಕಡಿಮೆ ಕಾರ್ಪೊರೇಟ್ ತೆರಿಗೆ ಹೊಂದಿರುವ ರಾಷ್ಟ್ರಗ ಸಾಲಿನಲ್ಲಿದೆ ಎಂದು ಅವರು ಹೇಳಿದರು.

"ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ ಮತ್ತು ಮುಖರಹಿತವಾಗಿರಬೇಕು ಎಂದು ಪ್ರಯತ್ನಿಸಲಾಗಿದೆ" ಎಂದು ಪ್ರಧಾನಿ ಹೇಳಿದರು

ತಡೆರಹಿತ ಎಂದರೆ ತೆರಿಗೆ ಆಡಳಿತವು ಸಂಕೀರ್ಣವಾಗದಿರುವುದು, ನೋವುರಹಿತ ಎಂದರೆ ಸರಳ ನಿಯಮಗಳು ಮತ್ತು ತಂತ್ರಜ್ಞಾನ ಎಂದು ಮೋದಿ ನುಡಿದರು.

ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರದ ಸುಧಾರಣೆಗಳು ಬ್ಯಾಂಕ್ ಸಂಪರ್ಕ ಇಲ್ಲದವರಿಗೆ ಬ್ಯಾಂಕಿಂಗ್, ಅಸುರಕ್ಷಿತರನ್ನು ಸುರಕ್ಷಿತಗೊಳಿಸುವುದು ಮತ್ತು ಹಣ ಇಲ್ಲದವರಿಗೆ sನಸಹಾಯ ನೀಡುವುದರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಪ್ರಧಾನಿ ಹೇಳಿದರು. "ಇಂದು ಇದೇ ಮಾದರಿಯ ಪ್ರಯಾಣದ ಆರಂಭ ಎಂದು ಅವರು ಹೇಳಿದರು.

ಮುಖರಹಿತ ಮೌಲ್ಯಮಾಪನ, ಮುಖರಹಿತ ಮನವಿ ಮತ್ತು ತೆರಿಗೆದಾರರ ಚಾರ್ಟರ್ ಇವು ಗುರುವಾರ ಅನಾವರಣಗೊಂಡ ವೇದಿಕೆಯ ಮೂರು ಪ್ರಮುಖ ಲಕ್ಷಣಗಳು. ತೆರಿಗೆ ವ್ಯವಸ್ಥೆಯನ್ನು "ಜನ ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಪರ" ವನ್ನಾಗಿ ಮಾಡುವತ್ತ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ತೆರಿಗೆ ವ್ಯವಸ್ಥೆಯಲ್ಲಿನ ಬದಲಾವಣೆಗಳಿಗೆ ನೀತಿ-ಚಾಲಿತ ಆಡಳಿತ, ಜನರ ಪ್ರಾಮಾಣಿಕತೆಯ ಮೇಲಿನ ನಂಬಿಕೆ, ಸುಧಾರಿತ ತಂತ್ರಜ್ಞಾನದ ಬಳಕೆ ಮತ್ತು ಅಧಿಕಾರಶಾಹಿಯಲ್ಲಿನ ದಕ್ಷತೆ ಇವು ನಾಲ್ಕು ಪ್ರಮುಖ ಅಂಶಗಳಾಗಿವೆ ಎಂದು ಮೋದಿ ಹೇಳಿದರು.

ವಿತ್ತ ಸಚಿವ ನಿರ್ಮಲಾ ಸೀತಾರಾಮನ್, ೨೦೨೦-೨೧ರ ಮುಂಗಡಪತ್ರ ಮಂಡಿಸುವಾಗ, ಆದಾಯ ತೆರಿಗೆ ಇಲಾಖೆಯಿಂದ ಸಮಯಕ್ಕೆ ಅನುಗುಣವಾಗಿ ಸೇವೆಗಳನ್ನು ಖಾತರಿಪಡಿಸುವ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸಲುತೆರಿಗೆದಾರರ ಚಾರ್ಟರ್ ಆರಂಭಿಸುವ ಘೋಷಣೆ ಮಾಡಿದ್ದರು.

ಕಳೆದ ಆರು ವರ್ಷಗಳಲ್ಲಿ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು ಈಗಿನ ಕಂಪೆನಿಗಳಿಗೆ ಶೇಕಡಾ ೩೦ ರಿಂದ ೨೨ ಕ್ಕೆ,  ಹೊಸ ಉತ್ಪಾದನಾ ಘಟಕಗಳಿಗೆ ಶೇಕಡಾ ೧೫ಕ್ಕೆ ಇಳಿಸಿ, ಲಾಭಾಂಶ ವಿತರಣಾ ತೆರಿಗೆಯನ್ನು ರದ್ದು ಪಡಿಸಿದೆ. ಜೊತೆಗೆ ಮುಖರಹಿತ ಮೌಲ್ಯಮಾಪನ ಸೇರಿದಂತೆ ವಿವಿಧ ತೆರಿಗೆ ಸುಧಾರಣೆಗಳನ್ನು ಕೈಗೊಂಡಿದೆ.

 

No comments:

Advertisement