My Blog List

Saturday, August 1, 2020

ಮತ್ತೆ ಕ್ಯಾತೆ, ಲಿಪುಲೇಖ ಕಣಿವೆ ಸಮೀಪ ಚೀನಾ ಸೇನಾ ಚಲನವಲನ

ಮತ್ತೆ ಕ್ಯಾತೆ, ಲಿಪುಲೇಖ ಕಣಿವೆ ಸಮೀಪ ಚೀನಾ ಸೇನಾ ಚಲನವಲನ

ನವದೆಹಲಿ: ಲಡಾಖ್ ವಲಯದ ಹೊರಗೆ ಕಳೆದ ಕೆಲವು ವಾರಗಳಿಂದ ಚಲನವಲನ ನಡೆಸಿದ್ದ ಚೀನಾದ ಪೀಪಲ್ಸ್ ಲಿಬರೇಶನ್ ಅರ್ಮಿಯ ಸೈನಿಕ ತುಕಡಿಗಳು ಇದೀಗ ಭಾರತದ ಉತ್ತರಾಖಂಡದ ಲಿಪುಲೇಖ ಕಣಿವೆಯ ಚಲನವಲನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 01ರ ಶನಿವಾರ ತಿಳಿಸಿದವು.

ಪೂರ್ವ ಲಡಾಕ್‌ನಲ್ಲಿ ಮೇ ಆರಂಭದಿಂದ ಜೂನ್ ೧೫ ರವರೆಗೆ ಭಾರತ ಮತ್ತು ಚೀನಾ ಮಧ್ಯೆ ಘರ್ಷಣೆ ಭುಗಿಲೆದ್ದಿದ್ದು, ೪೫ ವರ್ಷಗಳಲ್ಲೇ ಉಭಯ ದೇಶಗಳ ಸೈನಿಕರ ಮಧ್ಯೆ ಅತ್ಯಂತ ಭೀಕರವಾದ ರಕ್ತಪಾತದ ಘರ್ಷಣೆಗೆ ಕಾರಣವಾಗಿತ್ತು.

ಮೂರು ವಾರಗಳ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಂಭಾಷಣೆಯ ಬಳಿಕ ಸೇನಾ ವಾಪಸಾತಿ ಮತ್ತು ಪ್ರಕ್ಷುಬ್ಧತೆ ಶಮನಕ್ಕೆ ಎರಡೂ ಕಡೆಯವರು ಒಪಿದ್ದು, ಮುಖಾಮುಖಿ ಘರ್ಷಣೆಯ ಸ್ಥಳಗಳಲ್ಲಿ ಸೈನಿಕರ ಸಂಖ್ಯೆಯನ್ನು ವಿರಳಗೊಳಿಲಾಗುತ್ತಿದೆ. ಆದರೆ ಸೈನಿಕರ ಚಟುವಟಿಕೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವ ಕಾರ್‍ಯ ಇನ್ನೂ ಪೂರ್ಣಗೊಂಡಿಲ್ಲ.

ಇದೀಗ ಇದೇ ಸಮಯದಲ್ಲಿ, ಲಡಾಖ್‌ನ ಆಚೆಯ ಆಳ ಪ್ರದೇಶಗಳಲ್ಲಿ ಚೀನಾವು ತನ್ನ ಸೇನಾ ಶಕ್ತಿ ಹೆಚ್ಚಿಸುವ ಕಾರ್‍ಯದಲ್ಲಿ ಮಗ್ನವಾಗಿರುವುದು ಭಾರತದ ಮಿಲಿಟರಿ ಅಧಿಕಾರಗಳ ಗಮನಕ್ಕೆ ಬಂದಿತು. ಜೊತೆಗೇ ಅಲ್ಲಿ ಮೂಲ ಸೌಕರ್‍ಯ ಹೆಚ್ಚಳದ ಯೋಜನೆ ಭರದಿಂದ ಜಾರಿಯಾಗುತ್ತಿರುವುದು ಮತ್ತು ನೈಜ ನಿಯಂತ್ರಣ ರೇಖೆಯ ಆಚೆ ಬದಿಯಲ್ಲಿ ಚೀನೀ ಸೇನೆಯ ಅಸ್ತಿತ್ವ ಹೆಚ್ಚುತ್ತಿರುವುದೂ ಕಂಡು ಬಂದಿತು.

ಇದೀಗ ಬಂದಿರುವ ವರ್ತಮಾನದಂತೆ ಉತ್ತರ ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳು,  ಲಿಪುಲೇಖ ಕಣಿವೆಯ ಸಮೀಪ ನೈಜ ನಿಯಂತ್ರಣ ರೇಖೆಯಾಚೆ ಪಿಎಲ್‌ಎ ಪಡೆಗಳ ಜಮಾವಣೆ ಕಂಡು ಬಂದಿದೆಎಂದು ಉನ್ನತ ಸೇನಾ ಕಮಾಂಡರ್ ಒಬ್ಬರು ತಿಳಿಸಿದ್ದಾರೆ.

ಮಾನಸ ಸರೋವರ ಯಾತ್ರಾ ಮಾರ್ಗದಲ್ಲಿ ಬರುವ ಲಿಪುಲೇಖ ಕಣಿವೆಯ ಸಮೀಪಕ್ಕೆ ಭಾರತವು ೮೦ ಕಿಮೀ ರಸ್ತೆ ನಿರ್ಮಿಸಿದ್ದಕ್ಕೆ ನೇಪಾಳ ಆಕ್ಷೇಪ ವ್ಯಕ್ತ ಪಡಿಸಿತ್ತು. ಹಿನ್ನೆಲೆಯಲ್ಲಿ ಲಿಪುಲೇಖ ಕಣಿವೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದೆ. ಭಾರತ ಮತ್ತು ಚೀನಾದ ನಡುವಣ ನೈಜ ನಿಯಂತ್ರಣ ರೇಖೆಯ ಉಭಯ ಕಡೆಗಳಲ್ಲಿ ವಾಸವಾಗಿರುವ ಬುಡಕಟ್ಟು ಜನರ ವ್ಯಾಪಾರ ವಿನಿಮಯಕ್ಕೆ ಲಿಪುಲೇಖ ಕಣಿವೆ ಜೂನ್ -ಅಕ್ಟೋಬರ್ ಅವಧಿಯಲ್ಲಿ ಬಳಕೆಯಾಗುತ್ತದೆ.

ಭಾರತ-ಚೀನಾ-ನೇಪಾಳದ ತ್ರಿ-ಜಂಕ್ಷನ್‌ಗೆ ಸಮೀಪದಲ್ಲಿರುವ ಲಿಪುಲೇಖ ಸೇರಿದಂತೆ ಕಾಲಾಪಾನಿ ಪ್ರದೇಶವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ನೇಪಾಳವು ಪರಿಷ್ಕೃತ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿದ ಬಳಿ ಭಾರತ ಮತ್ತು ನೇಪಾಳದ ಬಾಂಧವ್ಯದಲ್ಲಿ ವರ್ಷ ಉದ್ವಿಗ್ನತೆ ಹೆಚ್ಚಿತು.

ಬದಲಾಯಿಸಿದ ನಂತರ ವರ್ಷ ಕಠ್ಮಂಡು ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು.

ಈಗ ಲಿಪುಲೇಖ ಕಣಿವೆಯಲ್ಲಿ ಪೀಪಲ್ಸ್ ಲಿಬರೇಶನ್ ಅರ್ಮಿಯು ಒಂದು ಬೆಟಾಲಿಯನ್ ಅಂದರೆ ಸರಿ ಸುಮಾರು ೧೦೦೦ ಸೈನಿಕರನ್ನು ಗಡಿಯಿಂದ ಸ್ವಲ್ಪ ಆಚೆ ಜಮಾವಣೆ ಮಾಡಿದೆ.

"ಇದು ಚೀನಾವು ಸೇನೆಯನ್ನು ಸಜ್ಜುಗೊಳಿಸಿದೆ ಎಂಬುದರ ಸಂಕೇತವಾಗಿದೆ" ಎಂದು ಇನ್ನೊಬ್ಬ ಸೇನಾ ಅಧಿಕಾರಿ ಹೇಳಿದರು. ಭಾರತವು ಪಿಎಲ್‌ಎ ಪಡೆಗಳ ಬಲಕ್ಕೆ ಸರಿಸಮವಾದ ಬಲವನ್ನು ಹೊಂದಿದೆ ಮತ್ತು ಇತ್ತೀಚಿನ ಗಡಿ ಹಕ್ಕುಗಳ ಪ್ರತಿಪಾದನೆಯ ಹಿನ್ನೆಲೆಯಲ್ಲಿ ನೇಪಾಳವನ್ನು ವರ್ತನೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ನುಡಿದರು.

"ಎಲ್‌ಎಸಿಯ ಬದಿಯಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಪಿಎಲ್‌ಎ ತನ್ನ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸುತ್ತಿರುವುದರಿಂದ ನೈಜ ನಿಯಂತ್ರಣದ ರೇಖೆಯ ಪರಿಸ್ಥಿತಿ ಚಲನಶೀಲವಾಗಿದೆಎಂದು ಅಧಿಕಾರಿ ಹೇಳಿದರು.

ಲಡಾಖ್ ಮತ್ತು ಇತರೆಡೆಗಳಲ್ಲಿ, ಸೇನಾ ಚಲನವಲನ ಮತ್ತು ಅಪನಂಬಿಕೆಗಳ ಕಾರಣ, ಚಳಿಗಾಲದಲ್ಲಿ ಹಿಮಾವೃತ ಲಡಾಖ್‌ನ ಎತ್ತರ ಪ್ರದೇಶದಲ್ಲಿ ಸೈನಿಕರ ನಿಯೋಜನೆಗೆ ಸಿದ್ಧತೆ ಮಾಡುವಂತೆ ಸೇನೆಯನ್ನು ಪ್ರೇರಿಸಿದೆ ಎಂದು ಅವರು ನುಡಿದರು.

ತುರ್ತು ಖರೀದಿಗಳಿಗಾಗಿ ಉನ್ನತ-ಎತ್ತರದ ಉಡುಪು ತಯಾರಕರು ಮತ್ತು ಹಿಮ ಡೇರೆ ತಯಾರಕರನ್ನು ಪತ್ತೆಹಚ್ಚಲು ಸರ್ಕಾರ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಯುರೋಪಿನ ತನ್ನ ರಾಯಭಾರ ಕಚೇರಿಗಳಿಗೆ ಸೂಚಿಸಿದೆ. ಕಡಿಮೆ ಬಿದ್ದರೆ, ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜಿಸಲಾಗಿರುವ ಸೈನಿಕರ ಮೂಲ ಕೇಂದ್ರವಾದ ಥೋಯಿಸ್‌ನಂತಹ ಸ್ಥಳಗಳಿಂದ ದಾಸ್ತಾನನ್ನು ಬೇರೆಡೆಗೆ ಬೇರೆಡೆಗೆ ತಿರುಗಿಸುವ ಬಿ ಯೋಜನೆ ರೂಪಿಸಲಾಗಿದೆ.

"ನಮ್ಮ ಕಣ್ಣುಗಳನ್ನು ಗಡಿಯಿಂದ ಹೊರತೆಗೆಯುವುದೇ ಅಸಂಭವವಾಗಿದೆಎಂದು ಸೇನಾ ಕಮಾಂಡರ್ ಹೇಳಿದರು.

ವಿಸ್ತರಣಾವಾದಿ ಚೀನಾ ಭಾರತೀಯ ಭೂಪ್ರದೇದತ್ತ ಕಣ್ಣು ಹಾಕದಂತೆ ಮಾಡಲು ಮತ್ತು ಗಡಿಯಲ್ಲಿ ಶಾಂತಿ ಕಾಪಾಡಲು ಇದು ಈಗಿರುವ ಏಕೈಕ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು.

"ಪಿಎಲ್‌ಎ ಆಕ್ರಮಣದ ನಂತರ, ನಾವು ಚೀನಿಯರನ್ನು ನಂಬುವುದಿಲ್ಲ ಮತ್ತು ೨೦೨೧ ರಲ್ಲಿ ಬೇಸಿಗೆ ಬರುತ್ತಿದ್ದಂತೆ ಅವರು ಮತ್ತೆ ಪ್ಯಾಂಗೊಂಗ್ ತ್ಸೊದ ಉತ್ತರಕ್ಕೆ ಬರುತ್ತಾರೆ ಎಂಬ ಅನುಮಾನವಿದೆಎಂದು ಮಿಲಿಟರಿ ಕಮಾಂಡರ್ ಹೇಳಿದರು.

ಪಹರೆ ಪಾಯಿಂಟ್ ೧೪ (ಗಲ್ವಾನ್), ೧೫-೧೬ (ಹಾಟ್ ಸ್ಪ್ರಿಂಗ್ಸ್) ನಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ಹೊರ ಹೋಗಿದ್ದರೂ, ಎದುರಾಳಿ ಪಡೆಗಳ ಒಂದು ಸಣ್ಣ ತುಕಡಿಯು ಪಹರೆ ಪಾಯಿಂಟ್ ೧೭ (ಗೋಗ್ರಾ) ದಲ್ಲಿ ಇನ್ನೂ ಇದೆ. ಪಾಂಗೊಂಗ್ ತ್ಸೋದಿಂದಲೂ ಚೀನೀ ಪಡೆಗಳು ಪೂರ್ತಿಯಾಗಿ ಖಾಲಿ ಮಾಡಿಲ್ಲ.

No comments:

Advertisement