My Blog List

Tuesday, November 10, 2020

ವಿಜಯ್ ಮಲ್ಯ ಹಸ್ತಾಂತರ: ತ್ವರಿತ ಇತ್ಯರ್ಥಕ್ಕೆ ಇಂಗ್ಲೆಂಡ್ ಯತ್ನ

 ವಿಜಯ್ ಮಲ್ಯ ಹಸ್ತಾಂತರ: ತ್ವರಿತ ಇತ್ಯರ್ಥಕ್ಕೆ ಇಂಗ್ಲೆಂಡ್ ಯತ್ನ

ನವದೆಹಲಿ: ಪರಾರಿಯಾದ ಉದ್ಯಮಿ ಹಾಗೂ ಮಾಜಿ ಸಂಸತ್ ಸದಸ್ಯ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇರುವ "ಗೌಪ್ಯ" ಕಾನೂನು ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಇಂಗ್ಲೆಂಡ್ ಪ್ರಯತ್ನಿಸುತ್ತಿದೆ ಎಂದು ಬ್ರಿಟನ್ನಿನ ಕಾರ್ಯಕಾರಿ ಹೈ ಕಮಿಷನರ್ ಜಾನ್ ಥಾಂಪ್ಸನ್ 2020 ನವೆಂಬರ್ 11ರ ಮಂಗಳವಾರ ಹೇಳಿದರು.

ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಕ್ರಮದ ವಿರುದ್ಧ ಬ್ರಿಟನ್ ಸುಪ್ರೀಂ ಕೋರ್ಟ್ನ್ನು ಸಂಪರ್ಕಿಸಲು ಅನುಮತಿ ಕೋರಿ ಮದ್ಯ ಉದ್ಯಮಿ ಸಲ್ಲಿಸದ್ದ ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ ತಿರಸ್ಕರಿಸಿದ ನಂತರ ಮೇ ತಿಂಗಳಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದವು. ಆದರೆ ರಹಸ್ಯ ಪ್ರಕ್ರಿಯೆಗಳು ಅವರ ನಿರ್ಗಮನವನ್ನು ತಡೆಹಿಡಿದಿವೆ.

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ವಿಷಯದ ಬಗ್ಗೆ ಕೇಳಿದಾಗ, ಮಲ್ಯ ಹಸ್ತಾಂತರಕ್ಕೆ ನಿಖರವಾದ ಸಮಯವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಥಾಂಪ್ಸನ್ ಹೇಳಿದರು.

"ನೀವು ಬಹುಶಃ ಇದನ್ನು ತಿಳಿದಿರಬಹುದೆಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವು ಇದನ್ನು ಹಲವಾರು ಬಾರಿ ಹೇಳಿದ್ದೇವೆ. ಮಲ್ಯ ಅವರನ್ನು ಹಸ್ತಾಂತರಿಸುವ ಮೊದಲು ಇನ್ನೂ ಹಲವು ಕಾನೂನು ಸಮಸ್ಯೆಗಳನ್ನು  ಬಗೆಹರಿಯಬೇಕಾಗಿದೆ ಎಂದು ಅವರು ನುಡಿದರು.

ಹಸ್ತಾಂತರಕ್ಕೆ ಕೆಲ ಸಮಯದ ಹಿಂದೆ ಆದೇಶಿಸಲಾಗಿದೆ. ಆದರೆ ಕಾನೂನು ವಿಷಯವಾಗಿರುವುದರಿಂದ ಇದಕ್ಕೆ ಕಾನೂನುಬದ್ಧವಾಗಿ ಪ್ರತಿಕ್ರಿಯಿಸುವುದು ನನಗೆ ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಆದರೆ ನಿರ್ದಿಷ್ಟ ಕಾನೂನು ಸಮಸ್ಯೆಯನ್ನು ಬಗೆಹರಿಸುವವರೆಗೆ ಹಸ್ತಾಂತರ ನಡೆಯಲು ಸಾಧ್ಯವಿಲ್ಲ. ಇದು ಗೌಪ್ಯ ಸಮಸ್ಯೆಯಾಗಿದೆ, ಇದರ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಅಂದಾಜು ಮಾಡಲು ಸಾಧ್ಯವಿಲ್ಲ, ಆದರೆ ನಾವು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಥಾಂಪ್ಸನ್ ಹೇಳಿದರು.

ಮಲ್ಯ ಹಸ್ತಾಂತರವನ್ನು ಹಿಡಿದಿಟ್ಟುಕೊಂಡಿರುವ ಇಂಗ್ಲೆಂಡಿನರಹಸ್ಯ ಕಾನೂನು ವಿಷಯದಲ್ಲಿ ತಾನು ಕಕ್ಷಿದಾರ/ಪಾಲುದಾರನಲ್ಲ ಎಂದು ಭಾರತ ಈಗಾಗಲೇ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಅಕ್ಟೋಬರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಹಸ್ಯ ಕಾನೂನು ವಿಷಯವನ್ನುಇನ್ನೂ ಬಗೆಹರಿಸಲಾಗಿಲ್ಲ ಮತ್ತು ಅದನ್ನು ನಿರ್ಣಯಿಸದೆ ಅವರನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

"ನಾವು ವಿಷಯದಲ್ಲಿ ಕಕ್ಷಿದಾರರಲ್ಲ ಮತ್ತು ನಾವು ಇಂಗ್ಲೆಂಡ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ  ಎಂದು ಶ್ರೀವಾಸ್ತವ ಸಮಯದಲ್ಲಿ ಹೇಳಿದ್ದರು.

ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ೨೦೧೮ ಡಿಸೆಂಬರ್ ೧೦ರಂದು ಮಲ್ಯ ಅವರನ್ನು ಹಸ್ತಾಂತರಿಸುವಂತೆ ಶಿಫಾರಸು ಮಾಡಿತ್ತು. ಆದೇಶದ ವಿರುದ್ಧ ಮಲ್ಯ ಅವರ ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ ವರ್ಷ ಏಪ್ರಿಲ್ ೨೦ ರಂದು ವಜಾಗೊಳಿಸಿತ್ತು.

ನಂತರ ಮಲ್ಯ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿ ಇಂಗ್ಲೆಂಡ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮೇ ೧೪ ರಂದು ತಿರಸ್ಕರಿಸಲಾಗಿತ್ತು. ಇದರೊಂದಿಗೆ ಮೇಲ್ಮನವಿ ಸಲ್ಲಿಕೆಯ ಅವರ ಎಲ್ಲ ಮಾರ್ಗಗಳೂ ಮುಚ್ಚಿ ಹೋಗಿವೆ.

ಮಲ್ಯ ಹಸ್ತಾಂತರಕ್ಕೆ ಅಡ್ಡಿಯಾಗಿರುವ ಮುಖ್ಯ ಕಾರಣ ಅವರು ಆಶ್ರಯ ಕೋರಿ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಲಂಡನ್ನಿನಲ್ಲಿ ಊಹಾಪೋಹಗಳಿವೆ. ಪ್ರಕ್ರಿಯೆಗೆ ಸಂಬಂಧಿಸಿದ ನೀತಿ ಮತ್ತು ಕಟ್ಟುನಿಟ್ಟಾದ ದತ್ತಾಂಶ ಸಂರಕ್ಷಣಾ ಕಾನೂನುಗಳ ವಿಷಯವಾಗಿ ವೈಯಕ್ತಿಕ ಪ್ರಕರಣಗಳ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದಿಲ್ಲ.

ತಮ್ಮ ನಿಷ್ಕ್ರಿಯ ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಲಾದ ಸಾಲ ಹಾಗೂ ಅದರ ಮೇಲಿನ ಬಡ್ಡಿಯಾಗಿ ಭಾರತೀಯ ಬ್ಯಾಂಕುಗಳ ಒಕ್ಕೂಟಕ್ಕೆ ಪಾವತಿ ಮಾಡಬೇಕಾಗಿದ್ದ ೯೦೦೦ ಕೋಟಿ ರೂಪಾಯಿಗಳ ವಸೂಲಿಗಾಗಿ ಬ್ಯಾಂಕುಗಳ ಒಕ್ಕೂಟ ಕ್ರಮ ಕೈಗೊಂಡಾಗ ೨೦೧೬ರಲ್ಲಿ ಮಲ್ಯ ಅವರು ಇಂಗ್ಲೆಂಡಿಗೆ ಹಾರಿದ್ದರು. ತರುವಾಯ ಅವರನ್ನು ಭಾರತದಲ್ಲಿ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿತ್ತು.

No comments:

Advertisement