ದೇವಸ್ಥಾನದಲ್ಲಿ ಮಕ್ಕಳ ಸಡಗರ, ಗ್ರಹಣ ದೋಷ ಪರಿಹಾರ ಹೋಮ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್ ೮ರ
ಸೋಮವಾರ ಚಂದ್ರ ಗ್ರಹಣ ದೋಷ ಪರಿಹಾರ ನಿಮಿತ್ತ ನವಗ್ರಹ ಹೋಮ ನೆರವೇರಿಸಲಾಯಿತು.
೨೦೨೫ ಸೆಪ್ಟೆಂಬರ್ ೯ರ ಮಂಗಳವಾರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ
ಮಕ್ಕಳು, ಬೋಧಕ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಮಕ್ಕಳು ಭಜನೆಯ ಹಾಡುಗಳನ್ನು ಸಡಗರದೊಂದಿಗೆ ಹಾಡಿ ನಲಿದರು.
ಈ ಎರಡೂ ಕಾರ್ಯಕ್ರಮಗಳ ಕೆಲವು ಚಿತ್ರ, ವಿಡಿಯೋಗಳು ಇಲ್ಲಿವೆ.


1 comment:
Very well sir
Post a Comment