Tuesday, April 15, 2008

ಇಂದಿನ ಇತಿಹಾಸ History Today ಏಪ್ರಿಲ್ 15

ಇಂದಿನ ಇತಿಹಾಸ

ಏಪ್ರಿಲ್ 15

ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ನವದಹಲಿಯಲ್ಲಿ ನಡೆದ ಎಚ್ಐವಿ - ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬಹಿರಂಗವಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರನ್ನು ಬರಸೆಳೆದು ಬಿಗಿದಪ್ಪಿ ಗಲ್ಲಕ್ಕೆ ಚುಂಬಿಸಿದರು. ಈ ಘಟನೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿ ಗೇರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಕೂಡಾ ದಾಖಲಾಯಿತು.

2007: ಬಾಲನಟ ವಿನಾಯಕ ಜೋಶಿ ಅವರ ತಂದೆ ನಿರ್ಮಾಪಕ ವಾಸುದೇವ ಜೋಶಿ (52) ಅವರು ಮೂತ್ರಪಿಂಡ ವೈಫಲ್ಯದ ಕಾರಣ ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿಯಾಗಿದ್ದ ಅವರು ತಮ್ಮ ಏಕೈಕ ಪುತ್ರ ವಿನಾಯಕ ಜೋಶಿಯನ್ನು ನಾಯಕ ನಟನನ್ನಾಗಿ ಮಾಡಲು `ನನ್ನ ಕನಸಿನ ಹೂವೆ' ಚಿತ್ರ ನಿರ್ಮಿಸಿದ್ದರು. ಇಂಡಿಯಾ ಫೌಂಡೇಷನ್ನಿನ ಟ್ರಕ್ಕರ್ಸ್ ಕಾರ್ಪೊರೇಷನ್ ಮತ್ತು ಎಚ್ ಐ ವಿ - ಏಡ್ಸ್ ಸಲಹಾ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮ ಸಂಘಟಿಸಿದ್ದವು.

2007: ಬಹು ನಿರೀಕ್ಷಿತ ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.

2007: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಒಂದೇ ಕಾರ್ನಿಯಾ ಬಳಸಿ ಮೂವರಿಗೆ ದೃಷ್ಟಿ ನೀಡುವ ಮೂಲಕ ವಿಶ್ವದ ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು. ಏಮ್ಸ್ ನ ಜೆ.ಎಸ್. ತಿತಿಯಾಲ್ ಮತ್ತು ನಾಸಿಕದ ಡಾ. ರಸಿಕ್ ವಾಜಪೇಯಿ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮಾಡಿತು. ಹೃದಯಾಘಾತದಿಂದ ಮೃತನಾದ 44 ವರ್ಷದ ವ್ಯಕ್ತಿಯ ಕಣ್ಣಿನ ಕಾರ್ನಿಯಾವನ್ನು (ಕಣ್ಣು ಗುಡ್ಡೆಯ ಪಾರದರ್ಶಕ ಭಾಗ) ಮೂರು ಭಾಗಗಳಾಗಿ ಕತ್ತರಿಸಿ ಮೂವರು ರೋಗಿಗಳಿಗೆ ಅಳವಡಿಸಲಾಯಿತು. ಮೂರು ತಿಂಗಳ ಸತತ ಚಿಕಿತ್ಸೆಯ ಬಳಿಕ ಮೂವರಿಗೂ ದೃಷ್ಟಿ ಬಂತು.

2007: ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ನವದಹಲಿಯಲ್ಲಿ ನಡೆದ ಎಚ್ಐವಿ - ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬಹಿರಂಗವಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರನ್ನು ಬರಸೆಳೆದು ಬಿಗಿದಪ್ಪಿ ಗಲ್ಲಕ್ಕೆ ಚುಂಬಿಸಿದರು. ಈ ಘಟನೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿ ಗೇರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಕೂಡಾ ದಾಖಲಾಯಿತು.

2007: ಖ್ಯಾತ ಸಂಗೀತಗಾರ ಹಾಗೂ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಧ್ಯಪ್ರದೇಶದ ಲೋಕೋಪಯೋಗಿ ಸಚಿವ ಕೈಲಾಶ್, ಸಂಸ್ಕೃತಿ ಸಚಿವ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಸಂಸದೆ ಸುಮಿತ್ರಾ ಮಹಾಜನ್ ಅವರು ಇಂದೋರಿನಲ್ಲಿ ಹೃದಯನಾಥ್ ಮಂಗೇಶ್ಕರ್ ಅವರನ್ನು ಒಂದು ಲಕ್ಷ ರೂ. ನಗದು, ಪ್ರಶಸ್ತಿ ನೀಡಿ ಗೌರವಿಸಿದರು. 1937 ಅಕ್ಟೋಬರ್ 26ರಂದು ಜನಿಸಿದ ಹೃದಯನಾಥ್ ಪ್ರಸಿದ್ಧ ಸಂಗೀತಗಾರ ಹಾಗೂ ನಾಟಕಕಾರರಾದ ದೀನನಾಥ್ ಮಂಗೇಶ್ಕರ್ ಅವರ ಪುತ್ರ. ಪ್ರಸಿದ್ಧ ಹಿನ್ನೆಲೆ ಗಾಯಕಿಯರಾದ ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಹೃದಯನಾಥ್ ಅವರ ಸಹೋದರಿಯರು. ಲತಾ ಸಹೋದರಿ ಆಶಾ ಭೋಂಸ್ಲೆ ಸೇರಿದಂತೆ ನೌಷದ್, ಕಿಶೋರ್ ಕುಮಾರ್, ಅನಿಲ್ ವಿಶ್ವಾಸ್, ಮನ್ನಾ ಡೇ, ಆರ್.ಡಿ. ಬರ್ಮನ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಕಲ್ಯಾಣ್ ಜೀ ಆನಂದಜೀ, ಜಗಜಿತ್ ಸಿಂಗ್, ಭೂಪೇನ್ ಹಜಾರಿಕಾ ಅವರು ಇದುವರೆಗೂ ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.

2007: ಕಾವೇರಿ ಜಲ ವಿವಾದ ನ್ಯಾಯ ಮಂಡಳಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮತ್ತು ಜಟಿಲ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಹೋಗುವ ಆಯ್ಕೆಯನ್ನು ಮುಕ್ತವಾಗಿ ಇರಿಸಲು ತಮಿಳುನಾಡು ಸಕರ್ಾರ ಚೆನ್ನೈಯಲ್ಲಿ ಕರೆದಿದ್ದ ಸರ್ವ ಪಕ್ಷಗಳ ಸಭೆ ನಿರ್ಧರಿಸಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮೊದಲ ಹೆಜ್ಜೆಯಾಗಿ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಿತು.

2006: ಇಂದೋರಿನಲ್ಲಿ ನಡೆದ ಏಳನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಅಂತರದ ಭರ್ಜರಿ ಜಯ ಸಾಧಿಸಿತು.

2006: ತೀವ್ರ ವಿವಾದಕ್ಕೆ ಕಾರಣವಾಗಿರುವ ಸರ್ದಾರ ಸರೋವರ ಅಣೆಕಟ್ಟೆ ಎತ್ತರ ಹೆಚ್ಚಿಸುವ ನಿರ್ಧಾರದ ಹೊಣೆಯನ್ನು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ವರ್ಗಾಯಿಸಿತು. ಅಣೆಕಟ್ಟೆ ಎತ್ತರ ಹೆಚ್ಚಳ ಪ್ರಸ್ತಾವ ಕೈಬಿಟ್ಟ ಕೇಂದ್ರದ ನಿರ್ಧಾರ ವಿರೋಧಿಸಿ 51 ಗಂಟೆಗಳ ನಿರಶನ ಆರಂಭಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದರು.

2006: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಶಾಸಕರ ಬಣಕ್ಕೆ ವಿದಿಸಿದ್ದ ಬಹಿಷ್ಕಾರ ಶಿಕ್ಷೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹಿಂತೆಗೆದುಕೊಂಡು, ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರ ಸಭೆ ನಡೆಸಿದರು.

1986: ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ಸ್ ಅತಿ ವೇಗದ ಟೆಸ್ಟ್ ಶತಕ ಬಾರಿಸಿದರು. 56 ಬಾಲ್ ಗಳಿಗೆ ಅವರು ಈ ಶತಕ ಸಿಡಿಸಿದರು.

1980: ತತ್ವಜ್ಞಾನಿ ಜೀನ್-ಪೌಲ್-ಸಾರ್ತ್ರೆ ತನ್ನ 74ನೇ ವಯಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತನಾದ.

1975: ಕಲಾವಿದ ಬಿ.ಜಿ. ವಿನುತ ಜನನ.

1963: ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ ಹುಟ್ಟಿದ ದಿನ.

1962: ಕಲಾವಿದ ಸದಾಶಿವ ಪಾಟೀಲ ಜನನ.

1955: ಷಿಕಾಗೊವಿನ ಡೆ ಪ್ಲೈನ್ ಸನ್ನಲ್ಲಿ ರೇ ಕ್ರಾಕ್ `ಮೆಕ್ ಡೊನಾಲ್ಡ್' ಮಾಂಸದ ಭಕ್ಷ್ಯದ ಮಳಿಗೆ ತೆರೆದ. ವರ್ತುಲಾಕಾರದಲ್ಲಿ ಚಪ್ಪಟೆಯಾಗಿ ಕತ್ತರಿಸಿ ನಂತರ ಕರಿದು ಬ್ರೆಡ್ ಜೊತೆಗೆ ನೀಡಲಾಗುವ ಗೋಮಾಂಸದ ಭಕ್ಷ್ಯದ ಈ ಉದ್ಯಮ ಮುಂದೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯಮವಾಗಿ ಬೆಳೆಯಿತು.

1955: ಕಲಾವಿದ ಮ. ನರಸಿಂಹ ಮೂರ್ತಿ ಜನನ.

1946: ಕಲಾವಿದ ಜೆ. ಹುಸೇನ್ಸಾಬ್ ಜನನ.

1922: ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ ಮುಖಿಯಾಗಿ ಹೃದಯಾಂತರಾಳದಿಂದ ಹಾಡುವ ಗಾಯಕ ಪ್ರಭಾಕರ ಅವರು ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣತರಾದ ಎಂ. ರಂಗರಾವ್- ಶಿಕ್ಷಕಿ ಕಾವೇರಿಬಾಯಿ ದಂಪತಿಯ ಮಗನಾಗಿ ಭಟ್ಕಳದಲ್ಲಿ ಜನಿಸಿದರು. ಇವರ ತಾಯಿಯದ್ದೂ ಕೀರ್ತನಕಾರ, ಸಂಗೀತಕಾರರ ಮನೆತನ.

1912: ಬ್ರಿಟಿಷ್ ಲಕ್ಸುರಿ ನೌಖೆ ಟೈಟಾನಿಕ್ ನ್ಯೂಫೌಂಡ್ ಲ್ಯಾಂಡ್ ಸಮೀಪ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನೌಕೆಯಲ್ಲಿದ್ದ ಸುಮಾರು 1500 ಮಂದಿ ಅಸುನೀಗಿದರು. ಆದರೆ ಈ ದುರಂತದಲ್ಲಿ ಸತ್ತವರ ಸಂಖ್ಯೆ ಬಗ್ಗೆ ಎಂದೂ ಒಮ್ಮತ ಮೂಡಲೇ ಇಲ್ಲ.

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಬೆಳಿಗ್ಗೆ 7.30ಕ್ಕೆ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ ನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಗೆ ಗುಂಡು ಹೊಡೆದಿದ್ದ. ಈ ವೇಳೆಯಲ್ಲಿ ಲಿಂಕನ್ ಥಿಯೇಟರಿನಲ್ಲಿ `ಅವರ್ ಅಮೆರಿಕನ್ ಕಸಿನ್' ಎಂಬ ಹಾಸ್ಯಚಿತ್ರ ನೋಡುವುದರಲ್ಲಿ ತಲ್ಲೀನರಾಗಿದ್ದರು.

1469: ಸಿಕ್ಖರ ಪ್ರಥಮ ಗುರುವಾಗಿದ್ದ ಗುರುನಾನಕ್ ಅವರ ಜನ್ಮದಿನ.

1452: ಲಿಯೋನಾರ್ಡೊ ಡ ವಿಂಚಿ (1452-1519) ಹುಟ್ಟಿದ ದಿನ. ಈತ ಇಟಲಿಯ ಖ್ಯಾತ ಕಲಾವಿದ, ಶಿಲ್ಪಿ, ಗಣಿತತಜ್ಞ, ಸಂಶೋಧಕ .

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement