My Blog List

Sunday, July 6, 2008

ಇಂದಿನ ಇತಿಹಾಸ History Today ಜುಲೈ 6

ಇಂದಿನ ಇತಿಹಾಸ

ಜುಲೈ 6

ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2006: ಕನ್ನಡದ ಖ್ಯಾತ ಚಲನಚಿತ್ರ ನಟಿಯರಲ್ಲಿ ಒಬ್ಬರಾದ ಪ್ರೇಮಾ ಮತ್ತು ಎಂಜಿನಿಯರ್ ಜೀವನ್ ಅವರ ಮದುವೆ ಬೆಂಗಳೂರಿನ ವಸಂತನಗರದ ಕೊಡವ ಸಮಾಜ ಭವನದಲ್ಲಿ ನಡೆಯಿತು.

2006: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ (73) ಬೆಂಗಳೂರಿನ ಶಾಖಾಮಠದಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2006: ಬಿಎಂಐಸಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಕಟಿಸಿದರು.

1932: ಪದ್ಮಾಮೂರ್ತಿ ಜನನ.

1918: ಖ್ಯಾತ ಸಾಹಿತಿ ದೇ. ಜವರೇಗೌಡ ಅವರು ದೇವೇಗೌಡ-ಚೆನ್ನಮ್ಮ ದಂಪತಿಯ ಪುತ್ರನಾಗಿ ಚೆನ್ನಪಟ್ಟಣ ತಾಲ್ಲೂಕಿನ ಚೆಕ್ಕೆರೆ ಗ್ರಾಮದಲ್ಲಿ ಜನಿಸಿದರು. ಜನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಸಂಪಾದನೆ, ವಿಶ್ವಕೋಶ ಇತ್ಯಾದಿ ಎಲ್ಲ ಅಧ್ಯಯನ ಕ್ಷೇತ್ರಗಳನ್ನು ಒಂದೆಡೆಗೆ ತಂದ ಕೀರ್ತಿ ಜವರೇಗೌಡರದ್ದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement