Thursday, January 29, 2026

ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

 ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ೨೦೨೫ ಜನವರಿ ೨೫ರ ಭಾನುವಾರ ಹಿಂದೂ ಸಮಾಜೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದಿಂದ ʼಭಾರ್ಗವ ವಿಜಯʼ ಯಕ್ಷಗಾನ ಕಾರ್ಯಕ್ರಮ ನಡೆಯಿತು.






ಹಿಮ್ಮೇಳದಲ್ಲಿ ಭಾಗವತರು:ಉಮೇಶ ರಾಜ್ ಮಂದಾರ್ತಿ
ಮದ್ದಳೆ: ನರಸಿಂಹ ಆಚಾರ್ ಕೂರಾಡಿ 
ಚೆಂಡೆ:‌ ಸುಬ್ರಹ್ಮಣ್ಯ ಸಾಸ್ತಾನ
ವೇಷಭೂಷಣ: ಯಕ್ಷ ಕಲಾ ಕೌಸ್ತುಭ ಬೆಂಗಳೂರು
ಉದಯ ಮಂದಾರ್ತಿ,
ಗುರುರಾಜ್‌  ಬಿಲ್ಲಾಡಿ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ಪರಶುರಾಮ – ಶಿವಾಂಷ್
ಕಾರ್ತ್ಯವೀರ್ಯಾರ್ಜನ – ಆದ್ಯ ಕಶ್ಯಪ್
ಕಾಲಾಜ್ಞ – ಆದ್ಯ
ರೇಣುಕೆ -ಆದ್ಯ ಶ್ರೀವಲ್ಲಿ
ಜಮದಗ್ನಿ – ಉಮಾದೇವಿ
ಶತ್ರಜಿತು – ಪುಣ್ಯ

ರಂಗಸ್ಥಳಕ್ಕೆ ಕಳೆ ಕಟ್ಟಿದರು.

ಅದಕ್ಕೂ ಮುನ್ನ ಜನವರಿ ೨೪ರ ಭಾನುವಾರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ತಂಡಕ್ಕಾಗಿ ತಂದ ಹೊಸ ಕಿರೀಟಗಳ ಪೂಜೆಯೂ ನಡೆಯಿತು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ಯಕ್ಷಗಾನ ಭಾರ್ಗವ ವಿಜಯದ ವಿಡಿಯೋಗಳು ಮೇಲಿವೆ. ಯಕ್ಷಗಾನ/ ತಾಳಮದ್ದಳೆಯ ಹೆಚ್ಚಿನ ಸುದ್ದಿಗಳಿಗಾಗಿ  ಮೇಲಿನ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ನೀಡಿ. 

No comments:

Advertisement