My Blog List

Friday, January 10, 2020

ಜೆಎನ್‌ಯು ವಿಸಿ ವಜಾಕ್ಕೆ ಮುರಳಿ ಮನೋಹರ ಜೋಷಿ ಸಲಹೆ

ಜೆಎನ್ಯು ವಿಸಿ ವಜಾಕ್ಕೆ ಮುರಳಿ ಮನೋಹರ ಜೋಷಿ ಸಲಹೆ
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಅಟಲ್ ಬಿಹಾರಿ ವಾಜಪೇಯಿ  ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಮುರಳಿ ಮನೋಹರ ಜೋಷಿ ಅವರು ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಉಪಕುಲಪತಿ ಮಮಿಂಡಾಲ ಜಗದೀಶ್ ಕುಮಾರ್ ಅವರನ್ನು ತತ್ ಕ್ಷಣ ವಜಾಗೊಳಿಸುವಂತೆ ಸರ್ಕಾರಕ್ಕೆ  2020 ಜನವರಿ 09ರ ಗುರುವಾರ ಸಲಹೆ ಮಾಡಿದರು.

ವಿಶ್ವ
 ವಿದ್ಯಾಲಯದ ಬಿಕ್ಕಟ್ಟು ಇತ್ಯರ್ಥಕ್ಕೆ ಕ್ರಮಗಳನ್ನು ಕೈಗೊಂಡು ಸೂತ್ರ ರೂಪಿಸುವಂತೆ ಶಿಕ್ಷಣ ಸಚಿವಾಲಯವು ಎರಡು ಬಾರಿ ಉಪಕುಲಪತಿ ಅವರಿಗೆ ಸಲಹೆ ಮಾಡಿದ್ದ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಜೋಷಿ,  ಸರ್ಕಾರದ ಸೂಚನೆಗಳನ್ನು ಪಾಲಿಸದ ಉಪಕುಲಪತಿ ಅವರನ್ನು ತತ್ ಕ್ಷಣ ವಜಾಗೊಳಿಸುವುದು ಸೂಕ್ತ’ ಎಂದು ಟ್ವೀಟ್ ಮಾಡಿದರು.

No comments:

Advertisement