Wednesday, January 15, 2020

ರಾಷ್ಟ್ರಪತಿಗೆ ಮುಖೇಶ್ ಸಿಂಗ್ ಕ್ಷಮೆ ಕೋರಿಕೆ ಅರ್ಜಿ

ರಾಷ್ಟ್ರಪತಿಗೆ ಮುಖೇಶ್ ಸಿಂಗ್ ಕ್ಷಮೆ ಕೋರಿಕೆ ಅರ್ಜಿ
ನವದೆಹಲಿ: ಮರಣದಂಡನೆ ವಿರುದ್ಧ ಸಲ್ಲಿಸಲಾಗಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠವು ವಜಾಗೊಳಿಸಿದ ಬೆನ್ನಲ್ಲೆ ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಅಪರಾದಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್  2020 ಜನವರಿ 14ರ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮೆ ಕೋರಿಕೆ ಅರ್ಜಿ ಸಲ್ಲಿಸಿದ್ದಾನೆ.

ರಾಷ್ಟ್ರಪತಿ ಅವರಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವ ಅಧಿಕಾರ ಇದೆಯಾದ್ದರಿಂದ ಮುಖೇಶ್ ಸಿಂಗ್ ಯತ್ನ ನಡೆಸಿರುವುದಾಗಿ ತಿಹಾರ್ ಸೆರೆಮನೆ ಮೂಲಗಳು ತಿಳಿಸಿವೆ.

No comments:

Advertisement