Friday, February 7, 2020

ನಿರ್ಭಯಾ ಪ್ರಕರಣ: ಅಪರಾಧಿಗಳ ವಿರುದ್ಧ ಹೊಸ ಡೆತ್ ವಾರಂಟ್‌ಗೆ ಕೋರ್ಟ್ ನಕಾರ

ನಿರ್ಭಯಾ ಪ್ರಕರಣ: ಅಪರಾಧಿಗಳ ವಿರುದ್ಧ
ಹೊಸ ಡೆತ್ ವಾರಂಟ್ಗೆ ಕೋರ್ಟ್ ನಕಾರ
ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು  ಶಿಕ್ಷಿತ ಅಪರಾದಿಗಳ ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಪಡಿಸುವಂತೆ ಕೋರಿ ತಿಹಾರ್ ಸೆರೆಮನೆ ಅಧಿಕಾರಿಗಳು ಹೊಸದಾಗಿ ಸಲ್ಲಿಸಿದ ಮನವಿಯನ್ನು ದೆಹಲಿಯ ನ್ಯಾಯಾಲಯ 2020 ಫೆಬ್ರುವರಿ 07ರ ಶುಕ್ರವಾರ ತಿರಸ್ಕರಿಸಿತು.

ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ದೆಹಲಿ ಹೈಕೋರ್ಟಿನ  ಫೆಬ್ರುವರಿ ೫ರ ಆದೇಶದ ಪ್ರಕಾರ ಒಂದು ವಾರದ ಗಡುವಿನ ಒಳಗಾಗಿ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ ಎಂಬುದಾಗಿ ನೀವು ಹೇಗೆ ಊಹಿಸಿದಿರಿ? ಎಂದು ಅರ್ಜಿಯ ವಿಚಾರಣೆ ಕಾಲದಲ್ಲಿ ನಾಯಾಲಯವು ತಿಹಾರ್ ಸೆರೆಮನೆ ಅಧಿಕಾರಿಗಳನ್ನು ಪ್ರಶ್ನಿಸಿತು.

ಕೇವಲ ಊಹೆ ಅಥವಾ ಕಲ್ಪನೆಗಳನ್ನು ಆಧರಿಸಿ ಡೆತ್ ವಾರಂಟ್ಗಳನ್ನು ಹೊರಡಿಸಲು ಸಾಧ್ಯವಿಲ್ಲಎಂದು ಕೋರ್ಟ್ ಹೇಳಿತು.

೨೦೧೮ರಲ್ಲಿ ತನ್ನ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದಂದಿನಿಂದ ಈವರೆಗೂ ಯಾವುದೇ ಕಾನೂನು ಬದ್ಧ ಅರ್ಜಿಯನ್ನು ಸಲ್ಲಿಸಿಲ್ಲ, ಆದ್ದರಿಂದ ಈಗ ಅರ್ಜಿ ಸಲ್ಲಿಸುವ ಸಾಧ್ಯತೆಗಳಿಲ್ಲಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ನ್ಯಾಯಾಲಯವು ಅದನ್ನು ಒಪ್ಪಲಿಲ್ಲ ಮತ್ತು ಶಿಕ್ಷಿತ ಅಪರಾಧಿಗಳ ಎಲ್ಲ ಕಾನೂನುಬದ್ದ ಪರಿಹಾರ ಪಡೆಯುವ ಹಕ್ಕನ್ನು ತಾನು ಎತ್ತಿ ಹಿಡಿಯುವುದಾಗಿ ಹೇಳಿತು.

ಬದುಕಲು ಕಾನೂನು ಅನುಮತಿ ನೀಡಿರುವಾಗ ಶಿಕ್ಷಿತರನ್ನು ದಂಡನೆಗೆ ಗುರಿಮಾಡುವುದು ಕ್ರಿಮಿನಲ್ ಪಾಪವಾಗುತ್ತದೆಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ತಿಹಾರ್ ಸೆರೆಮನೆ ಅಧಿಕಾರಿಗಳು ದೆಹಲಿಯ ೨೦೧೨ರ ಸಾಮೂಹಿಕ ಕುಖ್ಯಾತ ಅತ್ಯಾಚಾರ ಮತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಮರಣದಂಡನೆಯನ್ನು ಜಾರಿಗೊಳಿಸಲು ಹೊಸದಾಗಿ ದಿನಾಂಕ ನಿಗದಿ ಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಮೂವರು ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಭಾರತದ ರಾಷ್ಟ್ರಪತಿಯವರು ವಜಾಗೊಳಿಸಿರುವ ಹಿನ್ನೆಲೆ ಮತ್ತು ಯಾವುದೇ ನ್ಯಾಯಾಲಯದ ಮುಂದೆ ಶಿಕ್ಷಿತರ ಅರ್ಜಿಗಳು ಬಾಕಿ ಇಲ್ಲವಾದ್ದರಿಂದ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಬೇಕು ಎಂದು ಸೆರೆಮನೆ ಅಧಿಕಾರಿಗಳು ಕೋರಿದ್ದರು.

ಏನಿದ್ದರೂ, ಶಿಕ್ಷಿತರ ಪರ ವಕೀಲರು, ದೆಹಲಿ ಹೈಕೋರ್ಟಿನ ಫೆಬ್ರುವರಿ ೫ರ ತೀರ್ಪಿನ ಹಿನ್ನೆಲೆಯಲ್ಲಿ, ಸೆರೆಮನೆ ಅಧಿಕಾರಿಗಲು ಸಲ್ಲಿಸಿರುವ ಅರ್ಜಿ ಆತುರದ್ದಾಗಿದೆ ಎಂದು ಬಣ್ಣಿಸಿದರು. ದೆಹಲಿ ಹೈಕೋರ್ಟ್ ತನ್ನ ಫೆಬ್ರುವರಿ ೫ರ ತೀರ್ಪಿನಲ್ಲಿ ಶಿಕ್ಷಿತರಿಗೆ ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಬಳಸಿಕೊಳ್ಳಲು ಒಂದು ವಾರದ ಗಡುವು ನೀಡಿ, ಬಳಿಕ ಅಧಿಕಾರಿಗಳು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಬಹುದು ಎಂದು ಹೇಳಿತ್ತು. 
ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಗಮನದಲ್ಲಿ ಇಟ್ಟುಕೊಂಡೇ ಗಲ್ಲು ಜಾರಿಗೆ ಹೊಸ ದಿನಾಂಕವನ್ನು ನ್ಯಾಯಾಲಯವು ನಿಗದಿ ಪಡಿಸುವುದು ಸೂಕ್ತವಾಗುತ್ತದೆ ಎಂದು ತಿಹಾರ್ ಸೆರೆಮನೆ ಅಧಿಕಾರಿಗಳು ವಾದಿಸಿದರು.

ತನಗೆ ಕಾನೂನುಬದ್ಧವಾಗಿ ಚಲಾಯಿಸಲು ಅವಕಾಶ ಇರುವ ಕೊನೆಯ ಪರಿಹಾರವಾದ ಕ್ಯುರೇಟಿವ್ ಅರ್ಜಿಯನ್ನು  ಬಳಸಿಕೊಳ್ಳಲು ಇನ್ನೂ ಅರ್ಜಿ ಸಲ್ಲಿಸದೇ ಇರುವ ಏಕೈಕ ಶಿಕ್ಷಿತ ಅಪರಾಧಿಯಾಗಿದ್ದಾನೆ ಪವನ್ ಗುಪ್ತ. ಕ್ಯುರೇಟಿವ್ ಅರ್ಜಿಯ ಬಳಿಕ ಆತ ಭಾರತದ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸುವ ಅವಕಾಶ ಇದೆ.

೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸೊಂದರಲ್ಲಿ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಕ್ರೂರವಾಗಿ ಚಿತ್ರಹಿಂಸೆ ನೀಡಿ ರಸ್ತೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ವಿಚಾರಣಾ ನ್ಯಾಯಾಲಯವ ಜನವರಿ ೭ರಂದುಡೆತ್ ವಾರಂಟ್ಎಂಬುದಾಗಿಯೇ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ನ್ನು ಜಾರಿಗೊಳಿಸಿ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ಎಲ್ಲ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಬೇಕು ಎಂದು ಆಜ್ಞಾಪಿಸಿತ್ತು. ಆದರೆ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನ ಕ್ಷಮಾದಾನ ಕೋರಿಕೆ ಅರ್ಜಿ ಬಾಕಿ ಇದ್ದುದರಿಂದ ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗಿರಲಿಲ್ಲ.

ಬಳಿಕ ವಿಚಾರಣಾ ನ್ಯಾಯಾಲಯವು ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗೆ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಾಂಕ ಹಾಗೂ ಸಮಯ ನಿಗದಿ ಪಡಿಸಿ ಜನವರಿ ೧೭ರಂದು ಎರಡನೇ ಬಾರಿಗೆಡೆತ್ ವಾರಂಟ್ಜಾರಿಗೊಳಿಸಿತ್ತು.

ಆದರೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಪವನ್, ವಿನಯ್ ಮತ್ತು ಅಕ್ಷಯ್ ಮೂವರು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಿಲ್ಲವಾದ ಕಾರಣ ವಿಷಯವನ್ನು ಅನಿರ್ದಿಷ್ಟ ಕಾಲ ಮುಂದೂಡಬೇಕು ಎಂದು ಆಗ್ರಹಿಸಿದ್ದನ್ನು ಅನುಸರಿಸಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ಸಂಜೆ ಫೆಬ್ರುವರಿ ೧ಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಗೆ ಪುನಃ ತಡೆಯಾಜ್ಞೆ ನೀಡಿತು.
ಮುಕೇಶ್ ಮತ್ತು ವಿನಯ್ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ರಾಷ್ಟ್ರಪತಿಯವರು ತಿರಸ್ಕರಿಸಿದರೆ, ಅಕ್ಷಯ್ ಫೆಬ್ರುವರಿ ೧ರಂದು ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿಯನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದಾರೆ. ಪವನ್ ಇನ್ನೂ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ.

ಮಧ್ಯೆ, ಫೆಬ್ರುವರಿ ೧ರಂದು ದೆಹಲಿ ಹೈಕೋರ್ಟ್ ಕದ ತಟ್ಟಿದ ಕೇಂದ್ರ ಮತ್ತು ದೆಹಲಿ ಸರ್ಕಾರ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದವು.

ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರುಕಾನೂನಿನ ಆದೇಶವನ್ನು ವಿಫಲಗೊಳಿಸಲು ಶಿಕ್ಷಿತ ಅಪರಾಧಿಗಳು ಗಲ್ಲು ಜಾರಿಯನ್ನು ವಿಳಂಬಗೊಳಿಸುವ ಉದ್ದೇಶಪೂರ್ವಕ ಸಂಚು ಹೆಣೆದಿದ್ದಾರೆ. ಇನ್ನಷ್ಟು ಸಮಯ ವಿಸ್ತರಣೆಗೆ ಅವರು ಅರ್ಹರಲ್ಲಎಂದು ಪ್ರತಿಪಾದಿಸಿದ್ದರು.

ಶಿಕ್ಷಿತ ಅಪರಾಧಿಗಳ ಪರ ಹಾಜರಾಗಿದ್ದ ವಕೀಲರುಕೇಂದ್ರವು ಎಂದೂ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ  ಕಲಾಪಗಳಲ್ಲಿ ಕಕ್ಷಿದಾರನಾಗಿ ಇರಲೇ ಇಲ್ಲ. ಮತ್ತು ವಿಳಂಬಕ್ಕೆ ಕಕ್ಷಿದಾರರನ್ನು ಆಪಾದಿಸುತ್ತಿರುವ ಸರ್ಕಾರ ಈಗಷ್ಟೇ ಎಚ್ಚೆತ್ತುಕೊಂಡಿದೆ. ಆದ್ದರಿಂದ ಅರ್ಜಿ ವಿಚಾರಣಾರ್ಹವೇ ಅಲ್ಲಎಂದು ವಾದಿಸಿದ್ದರು.

ಆದಾಗ್ಯೂ ಕೇಂದ್ರ ಮತ್ತು ದೆಹಲಿ ಸರ್ಕಾರದ ಅರ್ಜಿಗಳನ್ನು  ದೆಹಲಿ ಹೈಕೋರ್ಟ್ ತಿರಸ್ಕರಿಸಿ ಪ್ರಕರಣದ ನಾಲ್ಕೂ ಮಂದಿ ಶಿಕ್ಷಿತರನ್ನು ಒಟ್ಟಿಗೇ ಗಲ್ಲಿಗೆ ಏರಿಸಬೇಕು ಎಂದು ಫೆಬ್ರುವರಿ ೫ರಂದು ತೀರ್ಪು ನೀಡಿತ್ತು. ತಮಗೆ ಲಭ್ಯವಿರುವ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಒಂದು ವಾರದ ಗಡುವಿನ ಒಳಗಾಗಿ ಬಳಸಿಕೊಳ್ಳುವಂತೆ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶಿಸಿತ್ತು.

೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸೊಂದರಲ್ಲಿ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಕ್ರೂರವಾಗಿ ಚಿತ್ರಹಿಂಸೆ ನೀಡಿ ರಸ್ತೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ಮಂದಿ ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ವಿಚಾರಣಾ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಆಪಾದಿಸಲಾಗಿದ್ದು, ೬ನೇ ಆರೋಪಿಯನ್ನು ಅಪ್ರಾಪ್ತ ಬಾಲಕ ಎಂಬ ನೆಲೆಯಲ್ಲಿ ಮೂರುವರ್ಷಗಳ ಸುಧಾರಣಾ ಕಸ್ಟಡಿಗೆ ಗುರಿಪಡಿಸಿ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

ದೆಹಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ೨೦೧೭ರಲ್ಲಿ ಎತ್ತಿ ಹಿಡಿದಿತ್ತು.

ನಾಲ್ಕು ಮಂದಿ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರಿಗೆ ೨೦೧೨ರಲ್ಲಿ ಕ್ರೂರ ಕೃತ್ಯ ನಡೆದ ಒಂದು ವರ್ಷದ ಒಳಗಾಗಿಯೇ ತ್ವರಿತ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು.

ಕ್ರೂರ ಘಟನೆಯನ್ನು ಪ್ರತಿಭಟಿಸಿ, ಇಡೀ ದೇಶದಲ್ಲಿ ಜನರು ಬೀದಿಗಳಿಗೆ ಇಳಿದಿದ್ದರು.
ಪರಿಣಾಮವಾಗಿ
ಲೈಂಗಿಕ ಹಲ್ಲೆಗೆ ಸಂಬಂಧಿಸಿದ ಕಾನೂನುಗಳು ಕೂಡಾ ಪರಿಷ್ಕರಣೆಗೊಂಡಿದ್ದವು.

No comments:

Advertisement