Wednesday, April 15, 2020

ಬೆಂಗಳೂರಿನ 'ಕೊರೋನಾ ರಾತ್ರಿ'..!

ಬೆಂಗಳೂರಿನ ಕೊರೋನಾ ರಾತ್ರಿ..!
(ಇದು ಸುವರ್ಣ ನೋಟ)
ಕೊರೋನಾ ದಿಗ್ಬಂಧನ ಜಾರಿಯಾದ ಬಳಿಕ ಕಳೆದ 21 ದಿನಗಳಿಂದ ಬೆಂಗಳೂರಿನ ಮಂದಿ ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವುದನ್ನೇ  ಮರೆತು ಬಿಟ್ಟಿದ್ದಾರೆ
ರಾತ್ರಿಯ ಝಗಮಗಿಸುವ ಬೆಳಕಿನಲ್ಲಿ  ಕಣ್ಣು ಕೋರೈಸುವ ಲೈಟುಕಿವಿಗಡಚಿಕ್ಕುವ ಹಾರ್ನ್ ಸದ್ದಿನೊಂದಿಗೆ ಪೈಪೋಟಿಯಲ್ಲಿ ಸಂಚರಿಸುವ ವಾಹನಗಳ  ಭರಾಟೆ ನಿಂತೇ ಹೋಗಿದೆ
ಜನಸಂದಣಿಯಿಂದ ಕಿಕ್ಕಿರಿಯುತ್ತಿದ್ದ ಬೆಂಗಳೂರಿನ ಕೇಂದ್ರೀಯ ಬಸ್ಸು ನಿಲ್ದಾಣನಗರ ಬಸ್ಸು    ನಿಲ್ದಾಣಗಳು ಈಗ ‘ಹಾಳು ಹಂಪಿಯನ್ನು ನೆನಪು ಮಾಡುತ್ತವೆ.
 ವಿದ್ಯುದ್ದೀಪಗಳ ಬೆಳಕು ಎಂದಿನಂತಿದ್ದರೂ ಸದ್ದುಗದ್ದಲವನ್ನು ಮೂಲೆಗುಂಪು ಮಾಡಿದ      ಕೊರೋನಾವೈರಸ್ ಅಬ್ಬರಕ್ಕೆ ದಿಕ್ಕೆಟ್ಟ ‘ಬೆಂಗಳೂರಿನ ಕೊರೋನಾರಾತ್ರಿ’
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಸಲ್ಪಟ್ಟು   ಹೀಗೆ

 ಸಮೀಪದೃಶ್ಯದ  ಅನುಭವಕ್ಕಾಗಿ ಚಿತ್ರಗಳನ್ನು ಕ್ಲಿಕ್ಕಿಸಿ.

No comments:

Advertisement