My Blog List

Wednesday, August 19, 2020

ಸುಶಾಂತ್ ಸಿಂಗ್ ಸಾವು: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

 ಸುಶಾಂತ್ ಸಿಂಗ್ ಸಾವು: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಎರಡು ರಾಜ್ಯಗಳ ಜಗ್ಗಾಟಕ್ಕೆ ತೆರೆ

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ  ಸುಪ್ರೀಂ ಕೋರ್ಟ್ 2020 ಆಗಸ್ಟ್ 19ರ ಬುಧವಾರ ಆದೇಶಿಸಿದ್ದು ನಿಟ್ಟಿನಲ್ಲಿ ಅಗತ್ಯ ನೆರವು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.ಇದರೊಂದಿಗೆ ವಿಚಾರದಲ್ಲಿ ಉಂಟಾಗಿದ್ದ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳ ಜಗ್ಗಾಟಕ್ಕೆ ತೆರೆ ಬಿದ್ದಿತು.

ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ನ್ಯಾಯಪೀಠ ಇದು ನ್ಯಾಯಾಲಯದ ಆದೇಶದ ಸಿಬಿಐ ತನಿಖೆಯಾಗಿದೆ ಮತ್ತು ಇದನ್ನು ಪ್ರಶ್ನಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಅವಕಾಶವಿಲ ಎಂದು ಸ್ಪಷ್ಟಪಡಿಸಿತು.

ಪಾಟ್ನಾದಲ್ಲಿ ದಾಖಲಿಸಲಾಗಿರುವ ಎಫ್ಐಆರ್ ಕಾನೂನುಬದ್ಧವಾಗಿದ್ದು, ಅಪರಾಧ ದಂಡ ಸಂಹಿತೆಯ ವಿಧಿಗಳಿಗೆ ಅನುಗುಣವಾಗಿದೆ ಎಂದೂ ಪೀಠ ಸ್ಪಷ್ಟ ಪಡಿಸಿತು.

ಹಿನ್ನೆಲೆಯಲ್ಲಿ ಸಿಬಿಐ ತನಿಖೆಗಾಗಿ ಬಿಹಾರ ಸರ್ಕಾರ ಮಾಡಿದ ಶಿಫಾರಸು ಕೂಡ ಸರಿಯಾಗಿದೆ ಮತ್ತು ಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿತು.

೩೫ ಪುಟಗಳ ತೀರ್ಪಿನ ಆಪರೇಟಿವ್ ಭಾಗವನ್ನು ಓದಿದ ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರು, ಇದು ನ್ಯಾಯಾಲಯದ ಆದೇದ ತನಿಖೆಯಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರವು ಆದೇಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಮುಂಬೈ ಪೊಲೀಸರು ಈವರೆಗೆ ನಡೆಸಿದ ವಿಚಾರಣೆಯ ವಿವರಗಳು ಮತ್ತು ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.

ಪಾಟ್ನಾದಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಅವರ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಸುಶಾಂತ ಸಿಂಗ್ ರಜಪೂತ್ (೩೪) ಅವರು ಜೂನ್ ೧೪ ರಂದು ಮುಂಬೈಯ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್ಮೆಂಟ್ ಒಳಗೆ ಶವವಾಗಿ ಪತ್ತೆಯಾಗಿದ್ದು, ಅಂದಿನಿಂದ ಮುಂಬೈ ಪೊಲೀಸರು ವಿವಿಧ ಕೋನಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದರು.

ಸುಪ್ರೀಂಕೋರ್ಟಿನ ತೀರ್ಪಿನಲ್ಲಿ ಪಾತ್ರವಹಿಸಿದ ಅಂಶಗಳು ಹೀಗಿವೆ:

. ಮಹಾರಾಷ್ಟ್ರ ಪೊಲೀಸರು ಇನ್ನೂ ತನಿಖೆ ನಡೆಸಿಲ್ಲ

ರಜಪೂತ್ ಅವರ ಅಸ್ವಾಭಾವಿಕ ಸಾವಿನ ಕಾರಣದ ಬಗ್ಗೆ ಮಹಾರಾಷ್ಟ್ರ ಪೊಲೀಸರು ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ ೧೭೪ ಅಡಿಯಲ್ಲಿ ಸೀಮಿತ ವಿಚಾರಣೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಸಿಆರ್ಪಿಸಿಯ ಸೆಕ್ಷನ್ ೧೭೪ ಆತ್ಮಹತ್ಯೆಯಿಂದ ಸಾವಿನ ಬಗ್ಗೆ ವಿಚಾರಣೆ ನಡೆಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ವರದಿಯನ್ನು ಸಲ್ಲಿಸಲು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಸೆಕ್ಷನ್ ೧೭೪ ಅಡಿಯಲ್ಲಿ ವಿಚಾರಣೆಯ ವ್ಯಾಪ್ತಿಯು ಸೀಮಿತವಾಗಿದೆ ಮತ್ತು ಪೂರ್ಣ ಪ್ರಮಾಣದ ತನಿಖೆಗೆ ಸಮನಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಅಥವಾ ಘಟನೆಯ ತನಿಖೆ ಆರಂಭಿಸಿಲ್ಲ ಎಂದು ಪೀಠ ಹೇಳಿದೆ.

. ಪಾಟ್ನಾ ಪೊಲೀಸರಿಗೆ ಎಫ್ಐಆರ್ ದಾಖಲಿಸುವ ಅಧಿಕಾರವಿದೆ. ಮುಂಬೈಯಲ್ಲಿ ಘಟನೆ ನಡೆದಾಗಿನಿಂದ ಬಿಹಾರ ಪೊಲೀಸರಿಗೆ ವಿಷಯದಲ್ಲಿ ವ್ಯವಹರಿಸಲು ಮತ್ತು ಎಫ್ಐಆರ್ ದಾಖಲಿಸಲು ಅಧಿಕಾರವಿಲ್ಲ ಎಂದು ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ವಾದಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿದೆ, ದಂಡನೀಯ ಅಪರಾಧದ ಮಾಹಿತಿ ಲಭಿಸಿದಾಗ ಪೊಲೀಸರು ಎಫ್ಐಆರ್ ನೋಂದಣಿ ಮಾಡಬೇಕಾದ್ದು ಕಡ್ಡಾಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

"ತನಿಖೆಯ ಹಂತದಲ್ಲಿ, ಸಂಬಂಧಪಟ್ಟ ಪೊಲೀಸ್ ಠಾಣೆಯು ಪ್ರಕರಣದ ತನಿಖೆ ನಡೆಸಲು ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ ಎಂದು ಹೇಳಲಾಗುವುದಿಲ್ಲ" ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದಲ್ಲದೆ, ಬಿಜಾರ್ ಪೊಲೀಸರಿಗೆ ಎಫ್ಐಆರ್ ನೋಂದಾಯಿಸಲು ರಜಪೂತ್ ಅವರ ತಂದೆ ನೀಡಿದ ದೂರು ಆಧಾರವಾಗಿದೆ. ರಜಪೂತ್ ಅವರು ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಹಣ ದುರುಪಯೋಗದ ಆಪಾದನೆ ಮಾಡಿರುವುದರಿಂದ ಘಟನೆಯ ಪರಿಣಾಮಗಳು ಪಾಟ್ನಾದಲ್ಲಿಯೂ ಸಂಭವಿಸುತ್ತವೆ. ವಿಶ್ವಾಸದ್ರೋಹ ಮತ್ತು  ಹಣ ದುರುಪಯೋಗಕ್ಕೆ ಸಂಬಂಧಿಸಿದ ಆರೋಪವು ಅಂತಿಮವಾಗಿ ಪಾಟ್ನಾದಲ್ಲಿ (ದೂರುದಾರ ವಾಸಿಸುವ ಸ್ಥಳದಲ್ಲಿ) ದಾಖಲಾಗಿದೆ. ಇದು ಪಾಟ್ನಾ ಪೊಲೀಸರಿಗೆ ಕಾನೂನುಬದ್ಧ ನ್ಯಾಯವ್ಯಾಪ್ತಿಯನ್ನು ಒದಗಿಸುತ್ತದೆ" ಎಂದು ನ್ಯಾಯಾಲಯು ಹೇಳಿದೆ.

ಬಿಹಾರ ಪೊಲೀಸರು ಮಾಡಿದ ಮನವಿಯನ್ನು ಆಧರಿಸಿ ಸಿಬಿಐ ತನಿಖೆಯನ್ನು ವಹಿಸಿಕೊಂಡದ್ದರಿಂದ ಬಿಹಾರ ಪೊಲೀಸರ ಎಫ್ಐಆರ್ ನಿರ್ಣಾಯಕ ಕೂಡಾ ಆಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

. ಎರಡು ರಾಜ್ಯ ಸರ್ಕಾರಗಳ ನಡುವಣ ಸಂಘರ್ಷದಿಂದಾಗಿ ಸ್ವತಂತ್ರ ಏಜೆನ್ಸಿಯ ಅವಶ್ಯಕತೆ ಇದೆ.

ವಿಷಯದಲ್ಲಿ ಎರಡು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷವಿದೆ ಮತ್ತು ಮುಂಬೈ ಪೊಲೀಸರು ಕೈಗೊಂಡ ಕ್ರಮಗಳನ್ನು ತಪ್ಪಿಸಲು ಸಾಧ್ಯವಿಲ್ಲವಾದರೂ, ಮುಂಬೈ ಪೊಲೀಸರ ವಿರುದ್ಧ ಅನ್ಯಾಯದ ತನಿಖೆಯ ಆರೋಪಗಳನ್ನು ಮಧ್ಯಸ್ಥಗಾರರು ಎತ್ತಿದ್ದಾರೆ. "ಎರಡೂ ರಾಜ್ಯಗಳು ಪರಸ್ಪರರ ವಿರುದ್ಧ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡುತ್ತಿರುವುದರಿಂದ, ತನಿಖೆಯ ನ್ಯಾಯಸಮ್ಮತ ವಿಚಾರಕ್ಕೆ ಮೋಡ ಮುಸುಕಿದೆ. ನ್ಯಾಯಾಲಯವು (ಸುಪ್ರೀಂ ಕೋರ್ಟ್) ಸತ್ಯಕ್ಕಾಗಿ ಹುಡುಕಾಟವನ್ನು ಸ್ವತಂತ್ರ ಏಜೆನ್ಸಿಯಿಂದ ಕೈಗೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ, ಇದನ್ನು ಎರಡು ರಾಜ್ಯ ಸರ್ಕಾರಗಳು ನಿಯಂತ್ರಿಸುವುದಿಲ್ಲ ಎಂದು ತೀರ್ಪು ತಿಳಿಸಿದೆ.

. ಸಂಭವನೀಯ ಸಮಾನಾಂತರ ತನಿಖೆಯಿಂದಾಗಿ ಅನಿಶ್ಚಿತತೆಯನ್ನು ತಪ್ಪಿಸುವ ಅವಶ್ಯಕತೆಯಿದೆ.

ಬಿಹಾರ ಸರ್ಕಾರದ ಕೋರಿಕೆ ಮೇರೆಗೆ ಸಿಬಿಐ ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ ಎಂದು ನ್ಯಾಯಾಲಯ ಹೇಳಿದೆ. ಮುಂಬೈ ಪೊಲೀಸರು ಸಹ ತನಿಖೆ ಪ್ರಾರಂಭಿಸಲು ನಿರ್ಧರಿಸಿದರೆ, ಅದು ಅನಿಶ್ಚಿತತೆ ಮತ್ತು ಗೊಂದಲಗಳಿಗೆ ಕಾರಣವಾಗಬಹುದು. ಇಂತಹ ಅನಿಶ್ಚಿತತೆ ಮತ್ತು ಗೊಂದಲಗಳನ್ನು ತಪ್ಪಿಸಬೇಕು" ಎಂದು ತೀರ್ಪು ತಿಳಿಸಿದೆ.

. ರಜಪೂತ ತಂದೆ ಮತ್ತು ರಿಯಾ ಅವರಿಗೆ ನ್ಯಾಯದ ಅಗತ್ಯ. ರಜಪೂತ್ ಮುಂಬೈ ಚಲನಚಿತ್ರ ಜಗತ್ತಿನಲ್ಲಿ ಪ್ರತಿಭಾನ್ವಿತ ನಟನಾಗಿದ್ದು, ಅವರ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಮೊದಲೇ ಅವರು ನಿಧನರಾದರು ಎಂದು ನ್ಯಾಯಾಲಯ ಗಮನಿಸಿದೆ. ನಿಷ್ಪಕ್ಷಪಾತ ತನಿಖೆ ಮತ್ತು ಅದರ ಫಲಿತಾಂಶವು ರಜಪೂತ ತಂದೆ ಮತ್ತು ರಿಯಾ ಅವರಿಗೆ ನ್ಯಾಯ ದೊರಕುವುದನ್ನು ಖಚಿತಪಡಿಸುತ್ತದೆ. ಇದಲ್ಲದೆ, ರಿಯಾ ಸ್ವತಃ ಸಿಬಿಐ ತನಿಖೆಗೆ ಕರೆ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ.

"ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ನ್ಯಾಯಯುತ, ಸಮರ್ಥ ಮತ್ತು ನಿಷ್ಪಕ್ಷಪಾತ

ತನಿಖೆಯ ಫಲಿತಾಂಶವನ್ನು ತೀವ್ರವಾಗಿ ಕಾಯುತ್ತಿದ್ದಾರೆ, ಇದರಿಂದ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಬಲ್ಲುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

No comments:

Advertisement