My Blog List

Saturday, October 3, 2020

ಗಡಿ ಮೂಲಸೌಕರ್ಯ: ಹಿಂದಿನ ಸರ್ಕಾರಗಳಿಗೆ ಪ್ರಧಾನಿ ಮೋದಿ ತರಾಟೆ

 ಗಡಿ ಮೂಲಸೌಕರ್ಯ: ಹಿಂದಿನ ಸರ್ಕಾರಗಳಿಗೆ ಪ್ರಧಾನಿ ಮೋದಿ ತರಾಟೆ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 2020 ಅಕ್ಟೋಬರ್ 03ರ ಶನಿವಾರ . ಕಿ.ಮೀ ಉದ್ದದ ಅಟಲ್ ಸುರಂಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತ್ವರಿತ ಗಡಿ ಮೂಲ ಸೌಕರ್ಯಗಳ ನವೀಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಕಾರ್ಯತಂತ್ರದ ದೃಷ್ಟಿ ಹೊಂದಿರಲಿಲ್ಲ ಮತ್ತು ಅವುಗಳ ನವೀಕರಣಕ್ಕೆ ಮುಂದಾಗಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವಣ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಕಾರಕೋರಂ ಪಾಸ್ ಬಳಿಯ ದೌಲತ್ ಬೇಗ್ ಓಲ್ಡಿ ಪೋಸ್ಟ್‌ನಲ್ಲಿ ೧೬,೮೦೦ ಅಡಿ ಎತ್ತರದ ಏರ್‌ಸ್ಟ್ರಿಪ್‌ನ ಉದಾಹರಣೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.

೧೯೬೫ ರಿಂದ ೨೦೦೮ ರವರೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿರ್ಮಾಣಗೊಂಡಿರದ ಏರ್ ಸ್ಟ್ರಿಪ್‌ನ್ನು ೨೦೦೮ ರಲ್ಲಿ ರಷ್ಯಾದ ಎಎನ್ -೩೨ ವಿಮಾನವನ್ನು ಬಳಸಿಕೊಂಡು ಭಾರತೀಯ ವಾಯುಪಡೆಯು (ಐಎಎಫ್) ಸುಧಾರಿತ ಲ್ಯಾಂಡಿಂಗ್ ಮೈದಾನವನ್ನು ಸಕ್ರಿಯಗೊಳಿಸಿತು ಮತ್ತು ಯೋಜನೆ ಪೂರ್ಣಗೊಂಡ ನಂತರ ಅಂದಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಿಳಿಸಿತು.

ಡಿಬಿಒ-ಡೆಪ್ಸಾಂಗ್ ಬಲ್ಜ್ ಪ್ರದೇಶದಲ್ಲಿನ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಪ್ರಮುಖವಾದ ಏರ್‌ಸ್ಟ್ರಿಪ್ ಅನ್ನು ಈಗ ಸಿ -೧೩೦ ಜೆ ಹರ್ಕ್ಯುಲಸ್ ವಿಮಾನವು ಬಳಸುತ್ತಿರುವುದು ಚೀನೀ ಕಮಾಂಡರ್‌ಗಳ ಕಣ್ಣು ಕೆಂಪಾಗಿಸಿದೆ.

ಹಿಂದಿನ ಸರ್ಕಾರಗಳು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ರಸ್ತೆಗಳನ್ನು ನಿರ್ಮಾಣ ಮಾಡದೇ ಇರುವ ಮೂಲಕ ಭಾರತೀಯ ಸೇನೆಗೆ ಗಸ್ತು ತಿರುಗಲು ಎಲ್ ಎಸಿ ಉದ್ದಕ್ಕೂ ಅಡಚಣೆಗಳನ್ನು ಹಾಕಲಾಗಿದೆ ಎಂದು ಚೀನಾವನ್ನು ಉಲ್ಲೇಖಿಸದೆಯೇ ಪ್ರಧಾನಿ ಆಪಾದಿಸಿದರು.

ಉಭಯ ದೇಶಗಳ ಗಡಿ ಮೂಲಸೌಕರ್ಯದಲ್ಲಿನ ೩೦ ವರ್ಷಗಳ ವ್ಯತ್ಯಾಸ ಪಿಎಲ್‌ಎಗೆ ಸಾಮರ್ಥ್ಯ ದೃಷ್ಟಿಯಿಂದ ನೆರವಾಗಿದೆ ಎಂದು ಚೀನೀ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಪ್ರಾರಂಭಿಸಿದ ಮೂರು ಯೋಜನೆಗಳಾದ ಅಟಲ್ ಸುರಂಗ (ಹಿಮಾಚಲ ಪ್ರದೇಶ), ಕೋಸಿ ಮಹಾ ಸೇತು (ಬಿಹಾರ) ಮತ್ತು ಬೋಗಿಬೀಲ್ ಸೇತುವೆ (ಅಸ್ಸಾಂ) ಮೂರನ್ನು ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ಬಗೆಗಿನ ಹಿಂದಿನ ಸರ್ಕಾರಗಳ ಉದಾಸೀನ ಮನೋಭಾವವನ್ನು ಪ್ರದರ್ಶಿಸಲು ಪ್ರಧಾನಿ ಮೋದಿ ಬಳಸಿದರು.

ಅಟಲ್ ಸುರಂಗವನ್ನು ಶನಿವಾರ ಉದ್ಘಾಟಿಸಿದರೆ, ೧೯೩೪ ರಿಂದ ನೆನೆಗುದಿಗೆ ಬಿದ್ದಿದ್ದ ಕೋಸಿ ರೈಲು ಸೇತುವೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಯಿತು ಮತ್ತು ಬೋಗಿಬೀಲ್ ಸೇತುವೆಗೆ ೨೦೧೮ ರಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರ ಸಮ್ಮುಖದಲ್ಲಿ, ಪ್ರಧಾನಿ ಮೋದಿ ಅವರು ಭಾರತೀಯ ಅಧಿಕಾರಶಾಹಿಗೂ ಚಾಟಿ ಬೀಸಿದರು. ಈಗ ಹಾರಾಟಕ್ಕಷ್ಟೇ ಬಾಕಿ ಉಳಿದಿರುವ ರಫೇಲ್ ಯುದ್ಧ ವಿಮಾನ ಹಲವಾರು ವರ್ಷಗಳ ಕಾಲ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಕಡತಗಳ ಚಲನೆಗಷ್ಟೇ ಸೀಮಿತವಾಗಿದ್ದುದು ಭಾರತ ಭಾರತದ ರಕ್ಷಣೆಗೆ ಧಕ್ಕೆಯುಂಟುಮಾಡುತ್ತದೆ ಎಂದು ಮೋದಿ ಹೇಳಿದರು.

ಆರ್ಡನೆನ್ಸ್ ಕಾರ್ಖಾನೆಗಳ ಉದಾಹರಣೆಯನ್ನು ಉಲ್ಲೇಖಿಸಿದ, ಪ್ರಧಾನಿ ಭಾರತೀಯ ಅಧಿಕಾರಶಾಹಿಗೆ "ಆತ್ಮನಿರ್ಭರ್" ಭಾರತಕ್ಕೆ ಅಡ್ಡಿಯಾಗಿ ನಿಲ್ಲದಂತೆ ನಿಲ್ಲದಂತೆ ಎಚ್ಚರಿಕೆ ನೀಡಿದರು.

ಅಟಲ್ ಸುರಂಗದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲವಾದರೂ, ರೋಹ್ಟಾಂಗ್ ಲಾ ಅಡಿಯಲ್ಲಿರುವ ಸುರಂಗವು ದಾರ್ಚಾ-ಉಪಶಿ-ಲೇಹ್ ಮಾರ್ಗಕ್ಕಿಂತ ಹೆಚ್ಚಾಗಿ ದಾರ್ಚಾ-ಪದಮ್-ನಿಮು ಮಾರ್ಗದ ಮೂಲಕ ಲಡಾಖ್‌ಗೆ ಹೊಸ ರಸ್ತೆಯನ್ನು ತೆರೆಯುತ್ತದೆ, ಇದು ಭಾರೀ ಹಿಮಪಾತದ ಕಾರಣದಿಂದ ವರ್ಷಕ್ಕೆ ಆರು ತಿಂಗಳು ನಿರ್ಬಂಧಿಸಲ್ಪಡುತ್ತದೆ.

ಡಾರ್ಚಾ-ಪದಮ್-ನಿಮು ಮಾರ್ಗವು ದಾರ್ಚಾ-ಪದಮ್ ಅಕ್ಷದಲ್ಲಿ ಶಿಂಕು ಲಾ ಅಡಿಯಲ್ಲಿ . ಕಿಲೋಮೀಟರ್ ಸುರಂಗವನ್ನು ನಿರ್ಮಿಸಿದ ನಂತರ ವರ್ಷಪೂರ್ತಿ ತೆರೆದಿರುತ್ತದೆ.

ದೇಶದ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಲಡಾಖ್ ವಲಯದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವಂತೆಯೇ, ಅರುಣಾಚಲ ಪ್ರದೇಶದ ಕಾರ್ಯತಂತ್ರದ ರಸ್ತೆಗಳನ್ನು ಪೂರ್ಣಗೊಳಿಸಲು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಹೆಚ್ಚು ವೇಗವಾಗಿ ಚಲಿಸುತ್ತಿದೆ. ಇದರಿಂದ ತವಾಂಗ್, ವಾಲಾಂಗ್ ಮತ್ತು ಕಿಬುಥೂ ಮುಂತಾದ ಸ್ಥಳಗಳು ಸರ್ವ ಋತು ಹವಾಮಾನ ರಸ್ತೆಗಳ ಮೂಲಕ ಭಾರತದ ಇತರ ಭಾಗಗಳಿಗೆ ಸಂಪರ್ಕ ಹೊಂದಲಿವೆ.

ಚೀನಾವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ್ನು ಮಾನ್ಯ ಮಾಡಲು ನಿರಾಕರಿಸಿರುವುದು ಮತ್ತು ಪ್ರದೇಶಗಳಲ್ಲಿನ ಗಡಿ ಮೂಲ ಸೌಕರ್ಯ ನವೀಕರಣವನ್ನು ಭಾರತದ ಅತಿಕ್ರಮಣ ಎಂಬುದಾಗಿ ಕರೆಯುವುದರಲ್ಲಿ ಅಚ್ಚರಿಯೇನೂ ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

No comments:

Advertisement