My Blog List

Monday, November 23, 2020

ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ನಿಧನ

 ಅಸ್ಸಾಮಿನ ಮಾಜಿ ಮುಖ್ಯಮಂತ್ರಿ  ತರುಣ್ ಗೊಗೋಯ್ ನಿಧನ

ಗುವಾಹಟಿ/ ನವದೆಹಲಿ: ಕೋವಿಡ್ ನಂತರದ ತೊಡಕುಗಳಿಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ತಮ್ಮ ೮೬ ನೇ ವಯಸ್ಸಿನಲ್ಲಿ  2020 ನವೆಂಬರ್ 23ರ ಸೋಮವಾರ ನಿಧನರಾದರು.

ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರ ಗೊಗೋಯ್ ನಿಧನದ ವಿಚಾರವನ್ನು ಪ್ರಕಟಿಸಿದರು.

ಹಿರಿಯ ಕಾಂಗ್ರೆಸ್ ನಾಯಕನ ಆರೋಗ್ಯ ಸ್ಥಿತಿ ಮಂಗಳವಾರ ಬೆಳಗ್ಗೆ ಹದಗೆಟ್ಟಿತ್ತು. ವೆಂಟಿಲೇಷನ್‌ನಲ್ಲಿ ಇದ್ದ ಅವರು ಭಾನುವಾರ ಬಹುಅಂಗಾಂಗ ವೈಫಲ್ಯಕ್ಕೆ ಗುರಿಯಾಗಿದ್ದು, ಅವರಿಗೆ ಡಯಾಲಿಸಿಸ್ ಮಾಡಲಾಗಿತ್ತು.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅಸ್ಸಾಮಿನ ೮೪ ವರ್ಷದ ನಾಯಕನನ್ನು ನವೆಂಬರ್ ರಂದು ಜಿಎಂಸಿಎಚ್‌ಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಾಗ ಅವರನ್ನು ವೆಂಟಿಲೇಷನ್‌ಗೆ ಒಳಪಡಿಸಲಾಯಿತು. ಅಕ್ಟೋಬರ್ ೨೫ ರಂದು, ಕೋವಿಡ್-೧೯ ಮತ್ತು ಚೇತರಿಕೆಯ ನಂತರದ ಇತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಗೊಗೊಯ್ ಅವರನ್ನು ಎರಡು ತಿಂಗಳ ನಂತರ ಜಿಎಂಸಿಎಚ್‌ನಿಂದ ಬಿಡುಗಡೆ ಮಾಡಲಾಗಿತ್ತು.

ಅವರು ಆಗಸ್ಟ್ ೨೫ ರಂದು ಕೋವಿಡ್-೧೯ ಸೋಂಕಿಗೆ ಒಳಗಾಗಿದ್ದರು. ಮತ್ತು ಮರುದಿನ ಜಿಎಂಸಿಎಚ್‌ಗೆ ದಾಖಲಾಗಿದ್ದರು.

ಹಿರಿಯ ಕಾಂಗ್ರೆಸ್ ನಾಯಕನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತ ಪಡಿಸಿದರು. "ತರುಣ್ ಗೊಗೋಯ್ ಜಿ ಅವರು ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರರಾಗಿದ್ದರು, ಅವರು ಅಸ್ಸಾಮ್ ಮತ್ತು ಕೇಂದ್ರದಲ್ಲಿ ಹಲವಾರು ವರ್ಷಗಳ ರಾಜಕೀಯ ಅನುಭವ ಹೊಂದಿದ್ದರು. ಅವರ ನಿಧನದಿಂದ ತಳಮಳವಾಗಿದೆ. ಅವರ ಕುಟುಂಬ ಮತ್ತು ಬೆಂಬಲಿಗರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್ ಮಾಡಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಿವಂಗತ ನಾಯಕನಿಗೆ ಗೌರವ ಸಲ್ಲಿಸಿ ಕುಟುಂಬಕ್ಕೆ ಸಂತಾಪ ಸೂಚಿಸಿದರು. "ತರುಣ್ ಗೊಗೋಯ್ ನಿಜವಾದ ಕಾಂಗ್ರೆಸ್ ನಾಯಕರಾಗಿದ್ದರು. ಅಸ್ಸಾಮಿನ ಎಲ್ಲ ಜನರು ಮತ್ತು ಸಮುದಾಯಗಳನ್ನು ಒಟ್ಟಿಗೆ ಸೇರಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ನನ್ನ ಮಟ್ಟಿಗೆ ಅವರು ಒಬ್ಬ ಮಹಾನ್ ಮತ್ತು ಬುದ್ಧಿವಂತ ಶಿಕ್ಷಕರಾಗಿದ್ದರು. ನಾನು ಅವರನ್ನು ಬಹಳವಾಗಿ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಾನು ಅವರನ್ನು ಕಳೆದುಕೊಂಡಿದ್ದೇನೆ. ಅವರಿಗೆ ನನ್ನ ಪ್ರೀತಿ, ಗೌರವದೊಂದಿಗೆ ಕುಟುಂಬಕ್ಕೆ ಸಂತಾಪ ವ್ಯಕ್ತ ಪಡಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೊಗೋಯ್ ಅವರನ್ನು ಶ್ರೀಮಂತ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅನುಭವಿ ನಾಯಕ ಎಂದು ನೆನಪಿಸಿಕೊಂಡರು. "ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಶ್ರೀಮಂತ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅನುಭವಿ ನಾಯಕನನ್ನು ದೇಶ ಕಳೆದುಕೊಂಡಿದೆ. ಅವರ ಅಧಿಕಾರಾವಧಿಯು ಅಸ್ಸಾಮಿನಲ್ಲಿ ಅಗಾಧ ಬದಲಾವಣೆಯ ಅವಧಿಯಾಗಿದೆ ಎಂದು ಅವರು ಹೇಳಿದರು.

ಗೊಗೋಯ್ ಅವರ ನಿಧನಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಂತಾಪ ಸೂಚಿಸಿದ್ದು, ಗೊಗೋಯ್ ಅವರ ಸೇವೆ ಮತ್ತು ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಅಸ್ಸಾಮ್ ಜನರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.

"ಮಾಜಿ ಮುಖ್ಯಮಂತ್ರಿ ತರುಣ್  ಗೊಗೋಯ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರ ಸಾವಿನೊಂದಿಗೆ ರಾಜ್ಯವು ಅನುಭವಿ, ಸಮರ್ಥ ಮತ್ತು ದಕ್ಷ ರಾಜಕೀಯ ನಾಯಕನನ್ನು ಕಳೆದುಕೊಂಡಿದೆ" ಎಂದು ಅವರು ಹೇಳಿದರು. "ಅವರ ಹಾಸ್ಯಪ್ರಜ್ಞೆ, ಸ್ನೇಹಪರ ಮತ್ತು ಬಹಿರಂಗ ಸ್ವಭಾವವು ಎಲ್ಲರನ್ನೂ ಆಕರ್ಷಿಸಿತ್ತು. ಅವರು ತಮ್ಮ ಸರಳ ಜೀವನಶೈಲಿಯೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿದ್ದರು ಮತ್ತು ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವಲ್ಲಿ ಅಪಾರ ಕೊಡುಗೆ ನೀಡಿದರು" ಎಂದು ಸೋನೊವಾಲ್ ಹೇಳಿದರು.

"ಹಿರಿಯ ನಾಯಕ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಜಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದುರಂತ ನಷ್ಟವನ್ನು ಭರಿಸಲು ಸರ್ವಶಕ್ತನು ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ. ಅವರ ಕುಟುಂಬ ಮತ್ತು ಬೆಂಬಗಲಿರೊಂದಿಗೆ ನನ್ನ ಸಂತಾಪವಿದೆ. ಓಂ ಶಾಂತಿ ಶಾಂತಿ ಶಾಂತಿ ಎಂದು ಟ್ವೀಟ್ ಮಾಡಿದರು.

"ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಜಿ ಅವರ ದುರದೃಷ್ಟಕರ ನಿಧನದಿಂದ ತೀವ್ರವಾಗಿ ನೋವು ಅನುಭವಿಸಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಮಿಜೋರಾಂ ಮುಖ್ಯಮಂತ್ರಿ ಝೊರಾಮ್ತಂಗ ಅವರು ಸಂತಾಪ ವ್ಯಕ್ತಪಡಿಸುತ್ತಾ, "ತರುಣ್  ಗೊಗೋಯ್ ದಾದಾ, ನೀವು ಪರಿಪೂರ್ಣ ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ನಿಮಗೂ ನಿಮ್ಮ ಕುಟುಂಬಕ್ಕೂ ನನ್ನ ಪ್ರಾಮಾಣಿಕ ಸಂತಾಪಗಳು ಎಂದು ಬರೆದರು.

No comments:

Advertisement