My Blog List

Monday, November 16, 2020

ಅಧಿಕಾರಕ್ಕಾಗಿ ಗುಪ್ಕರ್ ಮೈತ್ರಿ: ಬಿಜೆಪಿ ಕಿಡಿ

 ಅಧಿಕಾರಕ್ಕಾಗಿ ಗುಪ್ಕರ್ ಮೈತ್ರಿ: ಬಿಜೆಪಿ ಕಿಡಿ

ಜಮ್ಮು: ಗುಪ್ಕರ್ ಒಕ್ಕೂಟದ ಘಟಕಗಳನ್ನು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕವು 2020 ನವೆಂಬರ್ 2020ರ ಸೋಮವಾರ  ಅವಕಾಶವಾದಿ ಗುಂಪು ಎಂದು ಕರೆಯಿತು. ಗುಪ್ಕರ್ ಮೈತ್ರಿಯ ಏಕೈಕ ಗುರಿ ಶತಾಯಗತಾಯ ಅಧಿಕಾರಕ್ಕೆ ಬರುವುದು ಮತ್ತು ತಮ್ಮ  ದುಷ್ಕೃತ್ಯಗಳನ್ನು ಮರೆಮಾಚುವುದು ಎಂದು ಬಿಜೆಪಿ ಹೇಳಿತು.

"ಪಾಕ್ ಪರ ಮತ್ತು ಚೀನಾ ಪರ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದಗುಪ್ಕರ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿತು.

ಗುಪ್ಕರ್ ಮೈತ್ರಿ ರಾಜಕೀಯ ಸಂಘಟನೆಯಲ್ಲ ಆದರೆ ಅವಕಾಶವಾದಿ ಗುಂಪು. ಗುಂಪಿನ ಏಕೈಕ ಗುರಿ ಅಧಿಕಾರಕ್ಕೆ ಬರುವುದು ಮತ್ತು ಅದೇ ಸಮಯದಲ್ಲಿ ಅಕ್ರಮವಾಗಿ ಭೂಮಿಯ ಅತಿಕ್ರಮಣ, ಅವುಗಳನ್ನು ಕ್ರಮಬದ್ಧಗೊಳಿಸುವುದು, ಭ್ರಷ್ಟಾಚಾರ ಪ್ರಕರಣಗಳು ಮತ್ತು ಮುಖ್ಯಮಂತ್ರಿ ನಿವಾಸದಲ್ಲಿನ ಕೊಲೆಗಳನ್ನು ತನಿಖೆಯಾಗದಂತೆ ಮರೆ ಮಾಚುವುದು ಇತ್ಯಾದಿ ಕೃತ್ಯಕ್ಕಾಗಿ ಗುಂಪು ಪರಸ್ಪರ ಕೈಜೋಡಿಸಿದೆ ಎಂದು  ಬಿಜೆಪಿಯ ಮುಖ್ಯ ವಕ್ತಾರ ವಕೀಲ ಸುನಿಲ್ ಸೇಥಿ ಸುದ್ದಿಗಾರರಿಗೆ ತಿಳಿಸಿದರು.

ಗುಪ್ಕರ್ ಮೈತ್ರಿಕೂಟಕ್ಕಾಗಿ ಕೈಜೋಡಿಸಿದ್ದರೂ, ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವ ಬಗ್ಗೆ ಘಟಕಗಳಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂದು ಸೇಥಿ ಹೇಳಿದರು.

"ಪಿಡಿಪಿಯು ಎನ್ಸಿಯ ಸಹಾಯಕ ಸಂಘಟನೆಯಾಗಿದೆ. ಆದರೆ ಪಿಡಿಪಿಯ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ತೊರೆಯಲು ಅರಂಭಿಸಿದ್ದಾರೆ ಎಂದು ಅವರು ಹೇಳಿದರು.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಾಜಿ ಸಚಿವ ಮುಜಾಫರ್ ಹುಸೇನ್ ಬೀಘ್ ಅವರು ಇತ್ತೀಚೆಗೆ ಪಕ್ಷವನ್ನು ತೊರೆದರು.

ಮೈತ್ರಿಕೂಟದ ಇತರ ಪಕ್ಷಗಳ ವಿಷಯದಲ್ಲೂ ಇದೇ ಕಥೆ. ಪಿಡಿಪಿಯ ಬಂಡಾಯ ನಾಯಕರು ಮತ್ತು ಕಾರ್ಯಕರ್ತರು ಮುಂಬರುವ ಕಾಶ್ಮೀರದ ಚುನಾವಣೆಯಲ್ಲಿ ಸ್ವತಂತ್ರರಾಗಿ ಸ್ಪರ್ಧಿಸಲಿದ್ದು,  ವಿಜೇತರು ಹೊರಹೊಮ್ಮುತ್ತಾರೆ ಎಂದು ನನಗೆ ವಿಶ್ವಾಸವಿದೆಎಂದು ಸೇಥಿ ಹೇಳಿದರು.

ಗುಪ್ಕರ್ ಗುಂಪಿಗೆ ಕಾಂಗ್ರೆಸ್ ಹೇಗೆ ಸೇರಿಕೊಂಡಿದೆ ಎಂದು ಸೇಥಿ ಆಶ್ಚರ್ಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕಾಗಿದೆ. ಇದು ಪಿಡಿಪಿ ಮತ್ತು ಎನ್ಸಿಯ ಪಾಕ್ ಪರ ಮತ್ತು ಚೀನಾ ಪರ ಹೇಳಿಕೆಗಳನ್ನು ಅನುಮೋದಿಸುತ್ತದೆಯೇ ಎಂದು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ದೋಣಿಗಳಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

"ಇತ್ತೀಚಿನವರೆಗೂ ಅವರು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಿದ್ಧರಿರಲಿಲ್ಲ ಮತ್ತು ೩೭೦ ನೇ ವಿಧಿಯನ್ನು ಪುನಃಸ್ಥಾಪನೆಗೆ ಒತ್ತಾಯಿಸುತ್ತಿದ್ದರು. ಈಗ ಅವರು ಅಧಿಕಾರದ ಮೊಗಸಾಲೆ ಪ್ರವೇಶಿಸಲು ವಿಮಾನವೇರಿದ್ದಾರೆ ಎಂದು ಎನ್ಸಿ ಮತ್ತು ಪಿಡಿಪಿಯನ್ನು ಬಿಜೆಪಿ ವಕ್ತಾರರು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಮುನ್ನ ಜಮ್ಮು ಮತ್ತು ಕಾಶ್ಮೀರದ ಜೆಪಿ ಮುಖ್ಯಸ್ಥ ರವೀಂದರ್ ರೈನಾ, ಗುಪ್ಕರ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸೇರುವುದು "ವಿಶ್ವಾಸಘಾತುಕತನ" ಎಂದು ಖಂಡಿಸಿದ್ದರು.

ಕ್ಸಿ ಜಿನ್ಪಿಂಗ್, ಸೈಯದ್ ಸಲಾಹುದ್ದೀನ್, ಅಜರ್ ಮಾಸನ್ಸ್ ಮತ್ತು ಹಫೀಜ್ ಡೇರ್ಡ್ ಅವರ ಭಾಷೆಯಲ್ಲಿ  ಮಾತನಾಡುವವರನ್ನು (ಗುಪ್ಕರ್ ಮೈತ್ರಿ) ಕಾಂಗ್ರೆಸ್ ಸ್ವೀಕರಿಸಿದೆ. ಇದು ದೇಶದ್ರೋಹಕ್ಕೆ ಸಮ. ಗುಪ್ಕರ್ ಮೈತ್ರಿಕೂಟಕ್ಕೆ ಸೇರುವ ಮೂಲಕ ಕಾಂಗ್ರೆಸ್ ಪಾಕಿಸ್ತಾನ ಮತ್ತು ಚೀನಾವನ್ನು ಸೇರಿಕೊಂಡಿದೆ ಆದರೆ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ರೈನಾ ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿನ ದಲಿತರು, ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು, ಮಹಿಳೆಯರು ಮತ್ತು ವಾಲ್ಮೀಕಿ ಸಮುದಾಯಗಳ  ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್ ಬಯಸಿದೆ ಎಂದು ರೈನಾ ಹೇಳಿದ್ದರು.

No comments:

Advertisement