ಗ್ರಾಹಕರ ಸುಖ-ದುಃಖ

My Blog List

Tuesday, December 30, 2008

'ಗೋವು ಉಳಿದರೆ ನಾವು ಉಳಿದೇವು'

'ಗೋವು ಉಳಿದರೆ ನಾವು ಉಳಿದೇವು'


ಗೋವಿನ ಅಳಿವು-ಉಳಿವಿನ ಮೇಲೆ ನಮ್ಮ ಮುಂದಿನ ಬದುಕು ನಿಂತಿದೆ. 
ಗೋವು   ಉಳಿದರೆ ನಾವು ಉಳಿದೇವು - ಇದು ರಾಮ ಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಸ್ಪಷ್ಟ ನುಡಿ.

ಡಿಸೆಂಬರ್ 28ರ ಭಾನುವಾರ ಬೆಳಗ್ಗೆ ಬೆಂಗಳೂರಿನ ಜಿಗಣಿಯ ಸ್ವಾಮೀ ವಿವೇಕಾನಂದ ಯೋಗ ವಿಶ್ವವಿದ್ಯಾಲಯ   ಆವರಣದ ಪ್ರಶಾಂತಿ ಕುಟೀರದಲ್ಲಿ 'ಯೋಗ, ಗೋವು ಮತ್ತು ಗ್ರಾಮ ಪುನರ್ ನಿರ್ಮಾಣ' ಕುರಿತ ಮೊತ್ತ ಮೊದಲ ಅಂತಾರಾಷ್ಟೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗೋವು ಅನಂತ ಸುಂದರ, ಸಂಪದ್ಭರಿತವಾಗಿದ್ದರೂ ಅತ್ಯಂತ ಸಂಕಟಪಡುತ್ತಿದೆ. ಇದರಿಂದಾಗಿ ಇಡೀ ವಿಶ್ವವೇ  ಸಂಕಟಪಡುವಂತೆ ಆಗುತ್ತಿದೆ. ಹಾಗಾಗದಿರಲು ಭಾವ ಪರವಶ ಸಂತ ಮಂಡಲದ ಮಾರ್ಗದರ್ಶನದ ಅಡಿಯಲ್ಲಿ ರಚನಾತ್ಮಕ ಕೈಗಾರಿಕಾ ಉದ್ಯಮಿಗಳು ಮುನ್ನಡೆಯಬೇಕು. ಅವರನ್ನು ಬುದ್ಧಿಜೀವಿಗಳು ಪರಸ್ಪರ ಬೆಸೆಯಬೇಕು. ಇದಕ್ಕೆ ಇಂತಹ ಸಮ್ಮೇಳನಗಳು ಸೇತುವೆಯಾಗಬೇಕು' ಎಂದು ಸ್ವಾಮೀಜಿ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಯೋಗ ಮಂಡಳಿಯ ನಿರ್ದೇಶಕ ಡಾ. ಚಿದಾನಂದಮೂರ್ತಿ, ಜೋಧಪುರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಲೋಕೇಶ್ ಶೇಖಾವತ್, ನೊಬೆಲ್ ಪ್ರಶಸ್ತಿಗೆ ನಾಮಾಂಕಿತರಾದ ಡಾ. ರಿಯೋ ರೆಬೆಲೋ, ಉದ್ಯಮಿ ದೇಶಬಂಧು ಗುಪ್ತಾ, ಪ್ರಶಾಂತಿ ಕುಟೀರದ ನಿರ್ದೇಶಕ ಡಾ. ಎಚ್.ಆರ್. ನಾಗೇಂದ್ರ ಮೊದಲಾದ ಗಣ್ಯರು ಹಾಜರಿದ್ದರು.

ಸಮ್ಮೇಳನ ಆರಂಭಕ್ಕೆ ಮೊದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಗೋ ಪೂಜೆ ನೆರವೇರಿಸಿದರು. ಸಮ್ಮೇಳನದ 
ನೆನಪಿಗಾಗಿ ಸ್ಮರಣಸಂಚಿಕೆಯೊಂದನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಡಿಸೆಂಬರ್ 30ರವರೆಗಿನ ಮೂರು ದಿನಗಳ ಸಮ್ಮೇಳನದಲ್ಲಿ ಪಂಚಗವ್ಯದ ಮೇಲೆ ಸಂಶೋಧನೆ ನಡೆಸುತ್ತಿರುವ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಭಾಗವಹಿಸಿವೆ. ಶ್ರೀಲಂಕಾ, ಚೀನಾ, ಜಪಾನ್, ನ್ಯೂಜಿಲೆಂಡಿನಿಂದಲೂ ತಜ್ಞರು ಆಗಮಿಸಿದ್ದಾರೆ. 

ಮೂರು ದಿನಗಳ ಸಮ್ಮೇಳನ ಅವಧಿಯಲ್ಲಿ ಒಟ್ಟು  14 ವಿಷಯಗಳ 
ಮೇಲೆ ವಿಚಾರಗೋಷ್ಠಿ ನಡೆಯುವುದು. ಯೋಗ, ಗೋವು, ಗೋವು-ಗವ್ಯೋತ್ಪನ್ನಗಳ ಉಪಯುಕ್ತತೆ, ಗ್ರಾಮಗಳನ್ನು ಪುನರ್ ನಿರ್ಮಿಸುವಲ್ಲಿ ಗೋವಿನ ಪಾತ್ರ - ಈ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯುವುದು.

ಮಂಗಳವಾರ ಸಂಜೆ 4ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನೆರವೇರುವುದು ಎಂದು ಶೀ ರಾಮಚಂದ್ರಾಪುರ ಮಠದ ಮಾಧ್ಯಮ ಕೇಂದ್ರ ತಿಳಿಸಿದೆ.
 

No comments:

Advertisement