Wednesday, September 30, 2009

ಚಾರಿತ್ರಿಕ ಗೋ ಯಾತ್ರೆ ಇಂದು ಶುಭಾರಂಭ

ಚಾರಿತ್ರಿಕ ಗೋ ಯಾತ್ರೆ

ಇಂದು ಶುಭಾರಂಭ






ಗೋ ಸಂರಕ್ಷಣೆಯ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಲ್ಲಿಯೇ ಇದೇ ಪ್ರಪ್ರಥಮ ಬಾರಿಗೆ ಚಾರಿತ್ರಿಕ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಇಂದು (30 ಸೆಪ್ಟೆಂಬರ್ 2009) ಕುರುಕ್ಷೇತ್ರದಿಂದ ಆರಂಭವಾಗಲಿದೆ.

ಸಕಲ ವಿಶ್ವಕ್ಕೆ ಒಳಿತನ್ನು ಉಂಟು ಮಾಡುವ ಆಶಯದೊಂದಿಗೆ ಆರಂಭವಾಗುತ್ತಿರುವ 108 ದಿನಗಳ ಈ ಐತಿಹಾಸಿಕ ಗೋ ಯಾತ್ರೆ ಇಡೀ ಭಾರತಾದ್ಯಂತ ಸಂಚರಿಸಲಿದ್ದು, ಗೋ ಸಂರಕ್ಷಣೆ, ಗೋ ಆಧಾರಿತ ಕೃಷಿಯ ಪುನರುಜ್ಜೀವನ, ಗೋವಿನಿಂದ ಆಗುವ ಅನುಕೂಲಗಳು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ.

ಕೋಟ್ಯಂತರ ಸಹಿ ಸಂಗ್ರಹ ಕಾರ್ಯ ನಡೆದು ಗೋ ವಂಶ ಸಂರಕ್ಷಣೆಗಾಗಿ ಜನತಾ ಜನಾರ್ದನನ ಕೂಗು ಮೊಳಗಲಿದೆ.

ಇಲ್ಲಿರುವ ಪುಟ್ಟ ವಿಡಿಯೋ 'ಎರಡನೇ ಸ್ವಾತಂತ್ರ್ಯ ಚಳವಳಿ' ಎಂದೇ ಪರಿಗಣಿತವಾಗಿರುವ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತಿದೆ.



ನೋಡಿ. ನಿಮ್ಮ ಬಂಧು, ಮಿತ್ರರಿಗೂ ತೋರಿಸಿ. ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯಲ್ಲಿ ತನು, ಮನ, ಧನಗಳೊಂದಿಗೆ ಮನಃಪೂರ್ವಕವಾಗಿ ಪಾಲ್ಗೊಳ್ಳಿ.

ಗೋ ಸಂರಕ್ಷಣೆಯ ಮೂಲಕ ಕೃಷಿಕರನ್ನು ರಕ್ಷಿಸಿ, ಕೃಷಿಗೆ ಮರುಜೀವ ನೀಡಿ, ತನ್ಮೂಲಕ ನಿಮ್ಮ ಬಟ್ಟಲಿನ ಆಹಾರವನ್ನು, ನಿಮ್ಮ ಆರೋಗ್ಯವನ್ನು, ನಿಮ್ಮ ಮನೆ ಮಂದಿಯ, ಬಂಧು- ಮಿತ್ರರ ಆರೋಗ್ಯವನ್ನು ಸಂರಕ್ಷಿಸಿ.

-ನೆತ್ರಕೆರೆ ಉದಯಶಂಕರ  

No comments:

Advertisement