My Blog List

Friday, May 28, 2010

ಇಂದಿನ ಇತಿಹಾಸ History Today ಮೇ 28

ಇಂದಿನ ಇತಿಹಾಸ

ಮೇ 28

ಕೆನಡಾದ ಖ್ಯಾತ ಕಥೆಗಾರ್ತಿ ಅಲಿಸ್ ಮನ್ರೊ ಈ ವರ್ಷದ 'ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾದರು. ಜ್ಞಾನಪೀಠ ಪುರಸ್ಕೃತ ಭಾರತದ ಮಹಾಶ್ವೇತಾ ದೇವಿ ಹಾಗೂ ಭಾರತ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಎಸ್. ನೈಪಾಲ್ ಅವರನ್ನು ಹಿಂದಕ್ಕೆ ತಳ್ಳಿ ಮನ್ರೊ ಈ ಪ್ರಶಸ್ತಿ ಗೆದ್ದುಕೊಂಡರು.

2009: ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ 59 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಕೇಂದ್ರ ಸರ್ಕಾರದ ಚೊಚ್ಚಲ ಸಂಪುಟ ವಿಸ್ತರಣಾ ಸಮಾರಂಭ ಯಶಸ್ವಿಯಾಗಿ ನಡೆಯಿತು. ಈ ಮೂಲಕ ಯುಪಿಎ ವೇದಿಕೆಯಡಿ ಒಗ್ಗೂಡಿದ ಮನಮೋಹನ ಸಿಂಗ್ ನೇತೃತ್ವದ 79 ಸದಸ್ಯರ ಸಮ್ಮಿಶ್ರ ಪಡೆ, ದೇಶವನ್ನು ಮುನ್ನಡೆಸಲು ಸನ್ನದ್ಧವಾಯಿತು.

ಯಾರಿಗೆ ಯಾವ ಖಾತೆ
ಪ್ರಧಾನ ಮಂತ್ರಿ
ಡಾ. ಮನಮೋಹನ್ ಸಿಂಗ್ - ಹಂಚಿಕೆಯಾಗದೇ ಉಳಿದ ಎಲ್ಲಾ ಖಾತೆಗಳು
ಸಂಪುಟ ದರ್ಜೆ ಸಚಿವರು
ಪ್ರಣವ್ ಮುಖರ್ಜಿ - ಹಣಕಾಸು
ಎ.ಕೆ.ಆಂಟನಿ - ರಕ್ಷಣೆ
ಪಿ.ಚಿದಂಬರಂ - ಗೃಹ
ಶರದ್ ಪವಾರ್ - ಕೃಷಿ, ಆಹಾರ-ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
ಮಮತಾ ಬ್ಯಾನರ್ಜಿ - ರೈಲ್ವೆ
ಎಸ್.ಎಂ.ಕೃಷ್ಣ - ವಿದೇಶಾಂಗ ವ್ಯವಹಾರ
ಗುಲಾಂ ನಬಿ ಆಜಾದ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸುಶೀಲ್ ಕುಮಾರ್ ಶಿಂಧೆ - ಇಂಧನ
ಎಂ.ವೀರಪ್ಪ ಮೊಯಿಲಿ - ಕಾನೂನು
ಎಸ್.ಜೈಪಾಲ್ ರೆಡ್ಡಿ - ನಗರಾಭಿವೃದ್ಧಿ
ಕಮಲನಾಥ್ - ಭೂ ಸಾರಿಗೆ ಮತ್ತು ಹೆದ್ದಾರಿ
ವಯಲಾರ್ ರವಿ - ಸಾಗರೋತ್ತರ ಭಾರತೀಯ ವ್ಯವಹಾರ
ಮೀರಾ ಕುಮಾರ್ - ಜಲ ಸಂಪನ್ಮೂಲ
ಮುರಳಿ ದೇವ್ರಾ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಕಪಿಲ್ ಸಿಬಲ್ - ಮಾನವ ಸಂಪನ್ಮೂಲ ಅಭಿವೃದ್ಧಿ
ಅಂಬಿಕಾ ಸೋನಿ - ವಾರ್ತಾ ಮತ್ತು ಪ್ರಸಾರ
ಬಿ.ಕೆ.ಹಂಡಿಕ್ - ಗಣಿ, ಈಶಾನ್ಯ ಪ್ರದೇಶ ಅಭಿವೃದ್ಧಿ
ಆನಂದ ಶರ್ಮ - ವಾಣಿಜ್ಯ ಮತ್ತು ಕೈಗಾರಿಕೆ
ಸಿ.ಪಿ.ಜೋಷಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ವೀರಭದ್ರ ಸಿಂಗ್ - ಉಕ್ಕು
ವಿಲಾಸರಾವ್ ದೇಶಮುಖ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಡಾ. ಫಾರೂಕ್ ಅಬ್ದುಲ್ಲ - ಹೊಸ ಮತ್ತು ಪುನರ್‌ಬಳಕೆ ಇಂಧನ
ಎಂ.ಕೆ.ಅಳಗಿರಿ - ರಾಸಾಯನಿಕ ಮತ್ತು ರಸಗೊಬ್ಬರ
ದಯಾನಿಧಿ ಮಾರನ್ - ಜವಳಿ
ಎ.ರಾಜಾ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಮಲ್ಲಿಕಾರ್ಜುನ ಖರ್ಗೆ - ಕಾರ್ಮಿಕ ಮತ್ತು ಉದ್ಯೋಗ
ಕುಮಾರಿ ಸೆಲ್ಜಾ - ವಸತಿ, ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ
ಸುಬೋಧ್ ಕಾಂತ್ ಸಹಾಯ್ - ಆಹಾರ ಸಂಸ್ಕರಣಾ ಕೈಗಾರಿಕೆ
ಡಾ. ಎಂ.ಎಸ್.ಗಿಲ್ - ಯುವಜನ ಸೇವಾ ಮತ್ತು ಕ್ರೀಡೆ
ಜಿ.ಕೆ.ವಾಸನ್ - ನೌಕೆ
ಪವನ್ ಕುಮಾರ್ ಬನ್ಸಾಲ್ - ಸಂಸದೀಯ ವ್ಯವಹಾರ
ಮುಕುಲ್ ವಾಸ್ನಿಕ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಕಾಂತಿಲಾಲ್ ಭುರಿಯ - ಬುಡಕಟ್ಟು ವ್ಯವಹಾರ
ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು
ಪ್ರಫುಲ್ ಪಟೇಲ್ - ನಾಗರಿಕ ವಿಮಾನಯಾನ
ಪೃಥ್ವಿರಾಜ್ ಚೌಹಾಣ್ - ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನಿ
ಕಚೇರಿ, ಸಿಬ್ಬಂದಿ, ಸಾರ್ವಜನಿಕ ದೂರು, ಪಿಂಚಣಿ,
ಸಂಸದೀಯ ವ್ಯವಹಾರ
ಶ್ರೀಪ್ರಕಾಶ್ ಜೈಸ್ವಾಲ್ - ಕಲ್ಲಿದ್ದಲು, ಅಂಕಿ ಅಂಶ, ಯೋಜನೆ ಜಾರಿ
ಸಲ್ಮಾನ್ ಖುರ್ಷಿದ್ - ಕಂಪನಿ ವ್ಯವಹಾರ, ಅಲ್ಪಸಂಖ್ಯಾತರು
ಜೈರಾಮ್ ರಮೇಶ್ - ಪರಿಸರ ಮತ್ತು ಅರಣ್ಯ
ಕೃಷ್ಣಾ ತೀರ್ಥ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ದಿನ್ಷ ಪಟೇಲ್ - ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
ರಾಜ್ಯ ಸಚಿವರು
ಇ.ಅಹಮದ್ - ರೈಲ್ವೆ
ವಿ.ನಾರಾಯಣ ಸ್ವಾಮಿ - ಯೋಜನಾ ಮತ್ತು ಸಂಸದೀಯ ವ್ಯವಹಾರ
ಶ್ರೀಕಾಂತ್ ಜೇನಾ - ರಾಸಾಯನಿಕ ಮತ್ತು ರಸಗೊಬ್ಬರ
ಮುಲ್ಲಪಲ್ಲಿ ರಾಮಚಂದ್ರನ್ - ಗೃಹ ವ್ಯವಹಾರ
ಜ್ಯೋತಿರಾದಿತ್ಯ ಸಿಂಧಿಯ - ವಾಣಿಜ್ಯ ಮತ್ತು ಕೈಗಾರಿಕೆ
ಡಿ.ಪುರಂದೇಶ್ವರಿ - ಮಾನವ ಸಂಪನ್ಮೂಲ ಅಭಿವೃದ್ಧಿ
ಕೆ.ಎಚ್.ಮುನಿಯಪ್ಪ - ರೈಲ್ವೆ
ಪನಬಾಕ ಲಕ್ಷ್ಮಿ - ಜವಳಿ
ಅಜಯ್ ಮಾಕನ್ - ಗೃಹ ವ್ಯವಹಾರ
ನಮೋ ನಾರಾಯಣ ಮೀನಾ - ಹಣಕಾಸು
ಎಂ.ಎಂ.ಪಲ್ಲಂ ರಾಜು - ರಕ್ಷಣೆ
ಸೌಗತ ರೇ - ನಗರಾಭಿವೃದ್ಧಿ
ಎಸ್.ಎಸ್.ಪಳನಿ ಮಾಣಿಕ್ಯಂ - ಹಣಕಾಸು
ಜಿತಿನ್ ಪ್ರಸಾದ್ - ಪೆಟ್ರೋಲಿಯಂ, ನೈಸರ್ಗಿಕ ಅನಿಲ
ಎ.ಸಾಯಿ ಪ್ರತಾಪ್ - ಉಕ್ಕು
ಪ್ರಿಣೀತ್ ಕೌರ್ - ವಿದೇಶಾಂಗ ವ್ಯವಹಾರ
ಗುರುದಾಸ್ ಕಾಮತ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಹರೀಶ್ ರಾವತ್ - ಕಾರ್ಮಿಕ ಮತ್ತು ಉದ್ಯೋಗ
ಕೆ.ವಿ.ಥಾಮಸ್ - ಕೃಷಿ, ಗ್ರಾಹಕ ವ್ಯವಹಾರ, ಆಹಾರ-ನಾಗರಿಕ ಸರಬರಾಜು
ಭರತ್ ಸಿನ್ಹ ಸೋಲಂಕಿ - ಇಂಧನ
ಮಹಾದೇವ್ ಎಸ್. ಖಂಡೇಲ - ಭೂ ಸಾರಿಗೆ ಮತ್ತು ಹೆದ್ದಾರಿ
ದಿನೇಶ್ ತ್ರಿವೇದಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಿಸಿರ್ ಅಧಿಕಾರಿ - ಗ್ರಾಮೀಣಾಭಿವೃದ್ಧಿ
ಸುಲ್ತಾನ್ ಅಹಮದ್ - ಪ್ರವಾಸೋದ್ಯಮ
ಮುಕುಲ್ ರಾಯ್ - ನೌಕೆ
ಮೋಹನ್ ಜತುವಾ - ವಾರ್ತಾ ಮತ್ತು ಪ್ರಸಾರ
ಡಿ.ನೆಪೋಲಿಯನ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಡಾ. ಎಸ್.ಜಗತ್‌ರಕ್ಷಕನ್ - ವಾರ್ತಾ ಮತ್ತು ಪ್ರಸಾರ
ಎಸ್.ಗಾಂಧಿ ಸೆಲ್ವನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ತುಷಾರ್‌ಭಾಯಿ ಚೌಧರಿ - ಬುಡಕಟ್ಟು ವ್ಯವಹಾರ
ಸಚಿನ್ ಪೈಲಟ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಅರುಣ್ ಯಾದವ್ - ಯುವಜನ ಸೇವೆ ಮತ್ತು ಕ್ರೀಡೆ
ಪ್ರತೀಕ್ ಪ್ರಕಾಶ್‌ಬಾಪು ಪಾಟೀಲ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಆರ್.ಪಿ.ಎನ್.ಸಿಂಗ್ - ಭೂ ಸಾರಿಗೆ ಮತ್ತು ಹೆದ್ದಾರಿ
ಶಶಿ ತರೂರ್ - ವಿದೇಶಾಂಗ ವ್ಯವಹಾರ
ವಿನ್ಸೆಂಟ್ ಪಾಲ - ಜಲ ಸಂಪನ್ಮೂಲ
ಪ್ರದೀಪ್ ಜೈನ್ - ಗ್ರಾಮೀಣಾಭಿವೃದ್ಧಿ
ಅಗಾಥಾ ಸಂಗ್ಮಾ - ಗ್ರಾಮೀಣಾಭಿವೃದ್ಧಿ

2009: ಕೆನಡಾದ ಖ್ಯಾತ ಕಥೆಗಾರ್ತಿ ಅಲಿಸ್ ಮನ್ರೊ ಈ ವರ್ಷದ 'ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾದರು. ಜ್ಞಾನಪೀಠ ಪುರಸ್ಕೃತ ಭಾರತದ ಮಹಾಶ್ವೇತಾ ದೇವಿ ಹಾಗೂ ಭಾರತ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಎಸ್. ನೈಪಾಲ್ ಅವರನ್ನು ಹಿಂದಕ್ಕೆ ತಳ್ಳಿ ಮನ್ರೊ ಈ ಪ್ರಶಸ್ತಿ ಗೆದ್ದುಕೊಂಡರು. 77 ವರ್ಷದ ಮನ್ರೊ, ಈ ಪ್ರಶಸ್ತಿ ಪಡೆದ ಮೂರನೇ ಸಾಹಿತಿ. ಪ್ರಶಸ್ತಿ 60,000 ಪೌಂಡ್‌ಗಳಷ್ಟು ನಗದು ಹಣ ಒಳಗೊಂಡಿದೆ.

2009: ಅಕಾಲಕ್ಕೆ ತಲೆಗೂದಲು ಉದುರುವುದು (ಬೊಕ್ಕತಲೆ) ಗಂಡಸರನ್ನು ಕಾಡುವ ಒಂದು ಸಮಸ್ಯೆ. ಅದರಲ್ಲೂ ಯೌವನದಲ್ಲೇ ಇದು ಕಾಣಿಸಿಕೊಂಡರೆ ಚಿಂತೆಯ ಗೆರೆಗಳು ಹೆಚ್ಚಾಗುತ್ತವೆ. ಇದಕ್ಕೆ ಕಾರಣವಾಗುವ ವಂಶವಾಹಿನಿ ಪತ್ತೆಹಚ್ಚಿರುವ ವಿಜ್ಞಾನಿಗಳು ಈ ಸಮಸ್ಯೆ ನಿವಾರಿಸಲು ಪರಿಣಾಮಕಾರಿ ಅಸ್ತ್ರ ಸಿಕ್ಕಿದೆ ಎಂದು ಪ್ರಕಟಿಸಿದರು. ಟೋಕಿಯೊದ ರಾಷ್ಟ್ರೀಯ ತಳಿ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದ್ದು, 'ಎಸ್‌ಒಎಕ್ಸ್ 21' ಎಂಬ ವಂಶವಾಹಿನಿಯೇ ವ್ಯಕ್ತಿಯ ತಲೆ ಮೇಲೆ ಕೂದಲು ಇರಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸುತ್ತದೆ ಎಂದು ಹೇಳಿದರು. ಈ ವಂಶವಾಹಿನಿಯ ಇರುವಿಕೆ ಮುಂಚೆಯೇ ಗೊತ್ತಿತ್ತಾದರೂ ಈವರೆಗೆ ಅದು ನರಕೋಶಗಳ ರೂಪುಗೊಳ್ಳುವಿಕೆಯಲ್ಲಿ ಪಾತ್ರ ವಹಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಈ ವಂಶವಾಹಿನಿ ಕೂದಲು ಪೋಷಕ ಎಂದು ಅಧ್ಯಯನಗಳು ದೃಢಪಡಿಸಿದವು. ಇದೇ ವಂಶವಾಹಿನಿ ಹೊಂದಿರುವ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ದೃಢಪಟ್ಟಿದೆ. ಆಗತಾನೇ ಹುಟ್ಟಿದ ಇಲಿಮರಿಗಳಲ್ಲಿ 'ಎಸ್‌ಒಎಕ್ಸ್ 21'ವಂಶವಾಹಿನಿಯ ಚಟುವಟಿಕೆ ಸ್ಥಗಿತಗೊಳಿಸಿದಾಗ 15 ದಿನಗಳಲ್ಲೇ ಅವುಗಳ ಕೂದಲು ಉದುರಲು ಶುರುವಾಗಿ ನಂತರದ ಒಂದೇ ವಾರದಲ್ಲಿ ಪೂರ್ತಿ ಬೋಳಾಗಿದ್ದುದು ಕಂಡುಬಂತು. ಹೀಗಾಗಿ ಮನುಷ್ಯರಲ್ಲೂ ಬೊಕ್ಕತಲೆ ಸಮಸ್ಯೆಗೆ ಇದೇ ಕಾರಣವೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದ ಪ್ರೊ.ಯುಮಿಕೊ ಪ್ರತಿಪಾದಿಸಿದರು.

2009: ಖ್ಯಾತ ವಿದ್ವಾಂಸ, ಡೆಮಾಕ್ರಟಿಕ್ ಪಕ್ಷದ ಮಾಜಿ ಸಂಸದ ತಿಮೋಥಿ ರೋಮರ್ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯನ್ನಾಗಿ ಹೆಸರಿಸಿದರು.

2008: ವಾಯುಮಾಲಿನ್ಯ ವಿಷಯದಲ್ಲಿ ದೇಶದ ರಾಜಧಾನಿ ದೆಹಲಿಯನ್ನೂ ಕೋಲ್ಕತ ಮೀರಿಸಿ ಪರಿಸರ ಮಾಲಿನ್ಯದಲ್ಲಿ ಮುಂಚೂಣಿಯಲ್ಲಿದೆ!. ದೆಹಲಿಗಿಂತಲೂ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯಾಘಾತ ಸಂಭವಿಸುವುದು ಕೂಡಾ ಕೋಲ್ಕತದಲ್ಲೇ! ವರ್ಷವೊಂದರಲ್ಲಿ ಕೋಲ್ಕತದಲ್ಲಿ ಪ್ರತಿ ಲಕ್ಷ ಜನರಲ್ಲಿ 18ಕ್ಕೂ ಹೆಚ್ಚು ಮಂದಿ ಶ್ವಾಸಕೋಶ ಕ್ಯಾನ್ಸರ್ ಇಲ್ಲವೇ ಹೃದಯಾಘಾತಕ್ಕೆ ಬಲಿಯಾದರೆ ಅದೇ ದೆಹಲಿಯಲ್ಲಿ ಲಕ್ಷ ಜನರ್ಲಲಿ 13 ಮಂದಿ ಈ ಖಾಯಿಲೆಗಳಿಗೆ ಬಲಿಯಾಗುತ್ತಾರೆ ಎಂದು ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಸಿಎನ್ಸಿಐ)ನ ಪರಿಸರ ವಿಜ್ಞಾನಿ ತ್ವಿಷಾ ಲಹಿರಿ ಬಹಿರಂಗ ಪಡಿಸಿದರು. ಕ್ಯಾನ್ಸರಿಗಿಂತಲೂ ಹೆಚ್ಚಾಗಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಕೋಲ್ಕತದಲ್ಲಿ ಹೆಚ್ಚಾಗಿದೆ ಎಂದು ಸಿಎನ್ಸಿಐನ ವರದಿ ತಿಳಿಸಿತು.

2008: ದೇಶದ ಹಲವಾರು ಕಡೆಗಳಲ್ಲಿ ಹಾಗೂ ಇತ್ತೀಚೆಗೆ ಜೈಪುರದಲ್ಲಿ ಸೈಕಲುಗಳನ್ನು ಬಳಸಿ ಉಗ್ರರು ಬಾಂಬ್ ಸ್ಫೋಟ ಕೃತ್ಯದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ತಾಜ್ ಮಹಲ್ ಬಳಿ ಸೈಕಲ್ ನಿಲುಗಡೆಯನ್ನು ನಿಷೇಧಿಸಲಾಯಿತು. ವಿಶ್ವದ ಪ್ರಸಿದ್ಧ ತಾಜ್ ಮಹಲ್ ಭಯೋತ್ಪಾದಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ತಾಜ್ ಮಹಲ್ಗೆ ವಿವಿಧ ಏಜೆನ್ಸಿಗಳ ಭದ್ರತಾ ಪಡೆಗಳನ್ನು ಹಾಕಲಾಯಿತು.

2008: ಕನ್ನಡ ನೆಲದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಅಂಪೈರ್ ಎ.ವಿ.ಜಯಪ್ರಕಾಶ್ ಮಟ್ಟಿಗೆ ಈದಿನ ತಮ್ಮೂರು ಬೆಂಗಳೂರಿನಲ್ಲಿಯೇ ಕೊನೆಯ ಬಾರಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. ಕ್ರಿಕೆಟ್ ವೃತ್ತಿಪರ ಅಂಪೈರ್ ಜೀವನದಿಂದ ನಿವೃತ್ತಿ ಹೊಂದುವ ನಿರ್ಧಾರ ಪ್ರಕಟಿಸಿದ ಜಯಪ್ರಕಾಶ್ ಕೊನೆಯ ಬಾರಿಗೆ ಕ್ಷೇತ್ರದ ಅಂಪೈರ್ ಆಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಅವರು ತಮ್ಮ ಹೊಣೆಯನ್ನು ಕೊನೆಯ ಬಾರಿಗೆ ನಿಭಾಯಿಸಿದರು. 58 ವರ್ಷ ವಯಸ್ಸಿನ ಜಯಪ್ರಕಾಶ್ ದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಪೈರ್ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕ್ಷೇತ್ರದ ಅಂಪೈರ್ ಆಗಿದ್ದಾಗಲೇ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ಥಾನದ ವಿರುದ್ಧ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸಿನಲ್ಲಿ ಹತ್ತು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

2008: ಬಾಲಿವುಡ್ ನಟ ಸಂಜಯ್ ದತ್ ಹಾಗೂ ಮಾನ್ಯತಾರ ವಿವಾಹಕ್ಕೆ ಕಡೆಗೂ ನ್ಯಾಯಾಲಯ ಒಪ್ಪಿಗೆಯ ಮುದ್ರೆ ಒತ್ತಿತು. ಇವರಿಬ್ಬರ ವಿವಾಹ ಕಾನೂನು ಬದ್ಧವಾಗಿದೆ ಎಂದು ಮುಂಬೈನ ಸೆಷನ್ಸ್ ಕೋರ್ಟ್ ಹೇಳಿತು. ವಿಚಾರಣಾಧೀನ ಕೈದಿ ಮೆಹ್ರಾಜ್ ಶೇಕ್ ಎಂಬುವವನು, `ಮಾನ್ಯತಾ ನನ್ನ ಹೆಂಡತಿ. ಆಕೆ ನನ್ನಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಆಕೆ ಸಂಜಯ ದತ್ ಅವರನ್ನು ಮದುವೆಯಾಗಿರುವುದು ಕಾನೂನು ಬದ್ಧವಲ್ಲ. ಆದ್ದರಿಂದ ಆಕೆಯ ವಿರುದ್ಧ ಬಹುಪತಿತ್ವ ಕಾನೂನಿನಡಿ ಕ್ರಮ ಜರುಗಿಸಬೇಕು ಎಂದು ಮುಂಬೈ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ಕೋರ್ಟಿನಿಂದ ಜಾಮೀನು ದೊರೆತ ನಂತರ ಸಂಜಯ್ ಮಾನ್ಯತಾರನ್ನು ಪ್ರಸಕ್ತ ವರ್ಷದ ಫೆಬ್ರುವರಿ ತಿಂಗಳ ಮೊದಲ ವಾರ ಗೋವಾದಲ್ಲಿ ಮದುವೆಯಾಗಿದ್ದರು. ತದನಂತರ ಫೆ.11ರಂದು ಅವರು ಮಾಧ್ಯಮದವರಿಗೆ ತಮ್ಮ ಮದುವೆ ವಿಷಯವನ್ನು ಬಹಿರಂಗಗೊಳಿಸಿ ಶಾಸ್ತ್ರೋಕ್ತವಾಗಿ ಮುಂಬೈಯಲ್ಲಿ ಮತ್ತೆ ಮದುವೆಯಾದರು.

2008: ಮಂಗಳೂರಿನಲ್ಲಿ ಬಹುಕೋಟಿ ರೂಪಾಯಿ ಬಂಡವಾಳದ ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ವಲಯವನ್ನು (ಪಿಸಿಪಿಐಆರ್) ಸ್ಥಾಪಿಸುವ ಕರ್ನಾಟಕದ ಪ್ರಸ್ತಾವಕ್ಕೆ ಕೇಂದ್ರ ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಇಲಾಖೆ ಕಾರ್ಯದರ್ಶಿ ವಿ.ಎಸ್.ಸಂಪತ್ ಬಹಿರಂಗ ಪಡಿಸಿದರು. ರಾಜ್ಯ ಸರ್ಕಾರವು ಬಹಳ ಹಿಂದೆಯೇ ಈ ಕುರಿತ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಕೇಂದ್ರವು ಭೂಮಿಯ ಲಭ್ಯತೆ ಹಾಗೂ ಇತರ ಮೂಲಸೌಕರ್ಯಗಳ ಬಗ್ಗೆ ಇನ್ನಷ್ಟು ವಿವರಣೆ ಕೋರಿ ಪ್ರಸ್ತಾವವನ್ನು ಹಿಂದಕ್ಕೆ ಕಳುಹಿಸಿತ್ತು.

2008: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ ಮಳೆ ಸುರಿದು ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿತು. ಸಿಡಿಲು ಬಡಿದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಶಿವಮೊಗ್ಗ ಜಿಲ್ಲೆಯ ಗೋಂದಿಚಟ್ನಹಳ್ಳಿಯಲ್ಲಿ, ಉಡುಪಿ ಜಿಲ್ಲೆಯ ಹೆಜಮಾಡಿಕೋಡಿ ಎಂಬಲ್ಲಿ ತಲಾ ಒಬ್ಬರು ಮೃತರಾದರು.

2008: ಆರು ವರ್ಷಗಳ ಹಿಂದೆ ನಡೆದ ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಅಪರಾಧಿಗಳು ಎಂದು ಘೋಷಿಸಿತು. ಉತ್ತರಪ್ರದೇಶದ ರಾಜಕಾರಣಿ ಡಿ. ಪಿ.ಯಾದವ್ ಅವರ ಪುತ್ರನಾದ ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ವಿರುದ್ಧದ ಕೊಲೆ, ಅಪಹರಣ ಮತ್ತು ಸಾಕ್ಷಿಗಳ ನಾಶ ಆಪಾದನೆಗಳು ಸಾಬಿತಾಗಿವೆ ಎಂದು ನ್ಯಾಯಾಧೀಶ ರವೀಂದ್ರ ಕೌರ್ ಪ್ರಕಟಿಸಿದರು.

2008: ವೀರರಾಣಿ ಕಿತ್ತೂರ ಚನ್ನಮ್ಮಾಜಿ ವಂಶಸ್ಥ ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಾತ್ಯಾ ಸಾಹೇಬ ಬಾಪುಸಾಹೇಬ ದೇಸಾಯಿ (ಕಿತ್ತೂರಕರ) (89) ಈದಿನ ರಾತ್ರಿ ಚನ್ನಮ್ಮನ ಕಿತ್ತೂರಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ, ರಾಣಿ ಚನ್ನಮ್ಮಾಜಿಯ 5 ನೇ ವಂಶಸ್ಥರಾದ ಅವರು ಪಾಂಡಿಚೇರಿಯ ಅರವಿಂದ ಆಶ್ರಮದಲ್ಲಿ 25 ವರ್ಷಕಾಲ ಇದ್ದು ಕಿತ್ತೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರತಿಷ್ಠಿತ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

2007: ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನ್ ಸೈನಿಕ ಹಾರಿಸಿದ್ದ ಗುಂಡು ಹೊಕ್ಕು 64 ವರ್ಷಗಳಿಂದ ತಲೆನೋವಿನಿಂದ ನರಳುತ್ತಿದ್ದ ಚೀನೀ ಮಹಿಳೆಯ ತಲೆಯಿಂದ ಗುಂಡನ್ನು ವೈದ್ಯರು ಕೊನೆಗೂ ಹೊರತೆಗೆದರು. 1943ರಲ್ಲಿ ತನ್ನ ತಾತನನ್ನು ನೋಡಲು ಹೊಗ್ಲು ಪ್ರಾಂತ್ಯಕ್ಕೆ ತೆರಳಿದ ಸಂದರ್ಭದಲ್ಲಿ ಜಪಾನಿ ಸೇನಾಪಡೆಯವನೊಬ್ಬ ಹಾರಿಸಿದ ಗುಂಡು ಜಿನ್ ಗುಂಜಿಂಗ್ (77) ತಲೆಗೆ ಹೊಕ್ಕು ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಅಸಭ್ಯ ಮಾತುಗಳೊಂದಿಗೆ ನಿರಂತರ ತಲೆ ನೋವು ಅನುಭವಿಸುತ್ತಿದ್ದಳು. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು.

2007: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಜಪಾನಿನ ಕೃಷಿ ಸಚಿವ ತೊಷಿಕಾತ್ಸು ಮಾತ್ಸುಕಾ (62) ಆತ್ಮಹತ್ಯೆ ಮಾಡಿಕೊಂಡರು. ನೇಣು ಹಾಕಿಕೊಳ್ಳಲು ಯತ್ನಿಸಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಾತ್ಸುಕಾ ಅವರನ್ನು ಟೋಕಿಯೋದ ಕಿಯೋ ವಿವಿ ಆಸ್ಪತ್ರೆಗೆ ತಂದಾಗ ಪ್ರಾಣ ಹಾರಿಹೋಗಿತ್ತು.

2007: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪ ಹೊತ್ತಿರುವ ಮಾಜಿ ಸಿಕ್ಕಿಂ ಮುಖ್ಯಮಂತ್ರಿ ಎನ್. ಬಿ. ಭಂಡಾರಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಒಂದು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 5000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಿಕ್ಕಿಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಂಡಾರಿ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಆದಾಯ ಮೀರಿ 15.22 ಲಕ್ಷ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿತ್ತು.

2007: ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನ ಸಂಸ್ಥೆಯ ನಿಯೋಜಿತ ನಿರ್ದೇಶಕ ಡಾ. ಪ್ರೇಮ ಸುಮನ್ ಜೈನ್ ಅವರು 35 ವರ್ಷಗಳಿಂದ ಪಾಲಿ, ಪ್ರಾಕೃತ ಭಾಷೆಯ ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಗೌರವ ಪುರಸ್ಕಾರ ಪಡೆದರು.

2007: ಸ್ತನ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವಂಶವಾಹಿಗಳನ್ನು (ಜೀನ್ಸ್) ಪತ್ತೆ ಹಚ್ಚುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಕ್ಯಾನ್ಸರ್ ತಜ್ಞ ಕರೋಲ್ ಸಿಕೋರ ನೇತೃತ್ವದ ವಿಜ್ಞಾನಿಗಳ ತಂಡವೊಂದು ಲಂಡನ್ನಿನಲ್ಲಿ ಪ್ರಕಟಿಸಿತು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರಿಗೆ ಕಾರಣವಾಗುವ ಕನಿಷ್ಠ ನಾಲ್ಕು ವಂಶವಾಹಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ವಿಜ್ಞಾನಿಗಳು `ನೇಚರ್ ಅಂಡ್ ನೇಚರ್ ಜೆನೆಟಿಕ್ಸ್' ಪತ್ರಿಕೆಯ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿದರು. ವಂಶವಾಹಿ ವಿಜ್ಞಾನದಲ್ಲಿ ಇದೊಂದು ಮಹತ್ವದ ಮುನ್ನಡೆ.

2007: ಎಂಜಿನಿಯರಿಂಗ್ ಶಿಕ್ಷಣದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಶ್ವ ವಿದ್ಯಾಲಯವು (ವಿಟಿಯು) ತನ್ನ ವಾಪ್ತಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆಯ ಆವಶ್ಯಕತೆ ಇಲ್ಲದೆ 4 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲು ನಿರ್ಧರಿಸಿತು. ವಿಟಿಯು ಕುಲಪತಿ ಡಾ. ಕೆ. ಬಾಲವೀರರೆಡ್ಡಿ ಈ ವಿಚಾರ ಪ್ರಕಟಿಸಿದರು.

2007: ಉಡುಪಿ ಜಿಲ್ಲೆಯ ಮೂಳೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆಗೆ ಹೊರಟಿದ್ದ ವ್ಯಾನೊಂದು ಅಪಘಾತಕ್ಕೆ ಈಡಾದ ಪರಿಣಾಮವಾಗಿ 7 ಮಕ್ಕಳು, 9 ಮಹಿಳೆಯರು ಸೇರಿ ಒಟ್ಟು 17 ಜನ ಮೃತರಾದರು.

2007: ಸುಂದರಗಢ ಜಿಲ್ಲೆಯ ಖಂದಧರ್ ಬೆಟ್ಟಗಳಲ್ಲಿ ಸಮೀಕ್ಷೆ ಕಾಲದಲ್ಲಿ ಅವಯವ ರಹಿತ ಹಲ್ಲಿಗಳನ್ನು ಪತ್ತೆ ಹಚ್ಚಿದುದಾಗಿ ಒರಿಸ್ಸಾ ಪ್ರಾಣಿಶಾಸ್ತ್ರಜ್ಞರ ತಂಡ ಪ್ರಕಟಿಸಿತು.

2006: ಫಿಲಿಪ್ಪೀನ್ಸಿನ ರಾಜಧಾನಿ ಮನಿಲಾ ಸಮೀಪದ ಫೆಸಿಗ್ ನಗರದಲ್ಲಿ ಈದಿನ ಮುಕ್ತಾಯಗೊಂಡ ನಾಲ್ಕು ಸ್ಟಾರ್ ಫಿಲಿಪ್ಪೀನ್ಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಫೈನಲ್ಲಿನಲ್ಲಿ ಪ್ರಶಸ್ತಿ ಗೆದ್ದ ನೈನಾ ನೆಹ್ವಾಲ್ ರಾಷ್ಟ್ರದ ಬ್ಯಾಡ್ಮಿಂಟನ್ ರಂಗದ ದಾಖಲೆಯ ಪುಟದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದರು.

1998: ಭಾರತದ ಅಣ್ವಸ್ತ್ರ ಪರೀಕ್ಷೆಗಳಿಗೆ ಪ್ರತಿಯಾಗಿ ಪಾಕಿಸ್ಥಾನ ಐದು ಅಣ್ವಸ್ತ್ರಗಳನ್ನು ಸ್ಫೋಟಿಸಿತು. ಇದನ್ನು ಅನುಸರಿಸಿ ಅಮೆರಿಕ, ಜಪಾನ್ ಮತ್ತು ಇತರ ರಾಷ್ಟ್ರಗಳು ಪಾಕಿಸ್ಥಾನದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದವು.

1997: ಮಾಜಿ ಕೇಂದ್ರ ಸಚಿವರಾದ ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಆರ್.ಕೆ. ಧವನ್ ಮತ್ತು ಮಾಧವರಾವ್ ಸಿಂಧಿಯಾ ಅವರನ್ನು ವಿ.ಬಿ. ಗುಪ್ತ ನೇತೃತ್ವದ ವಿಶೇಷ ನ್ಯಾಯಾಲಯವು ಜೈನ್ ಹವಾಲಾ ಹಗರಣದಿಂದ ಮುಕ್ತಗೊಳಿಸಿತು.

1964: ಪ್ಯಾಲಸ್ಥೈನ್ ಲಿಬರೇಶನ್ ಆರ್ಗನೈಸೇಷನ್ (ಪಿಎಲ್ಒ) ಸ್ಥಾಪನೆಗೊಂಡಿತು.

1961: ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜನಾಭಿಪ್ರಾಯ ರೂಪಿಸಲು ಮತ್ತು ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಲು ಬ್ರಿಟಿಷ್ ವಕೀಲ ಪೀಟರ್ ಬೆನೆನ್ಸನ್ ಲಂಡನ್ನಿನಲ್ಲಿ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಘಟನೆಯನ್ನು ಸ್ಥಾಪಿಸಿದರು. ಶಾಂತಿ, ನ್ಯಾಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೆಲೆಗಟ್ಟು ಒದಗಿಸಲು ಸಲ್ಲಿಸಿದ ಸೇವೆಗಾಗಿ ಈ ಸಂಘಟನೆಗೆ 1977ರ ನೊಬೆಲ್ ಪ್ರಶಸ್ತಿ ಲಭಿಸಿತು.

1930: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗವತಿ ಚರಣ ವೋಹ್ರಾ ನಿಧನರಾದರು.

1906: ಸಾಹಿತಿ, ಕಾದಂಬರಿಕಾರ, ನಾಟಕಕಾರ ಕೆ. ವೆಂಕಟರಾಮಪ್ಪ (28-5-1906 ರಿಂದ 2-9-1991) ಅವರು ಸುಬ್ಬಾಶಾಸ್ತ್ರಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ವೆಂಕಟರಾಮಪ್ಪ ಅವರ ವಿದ್ವತ್ತನ್ನು ಗುರುತಿಸಿ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1923: ತೆಲುಗು ಚಿತ್ರನಟ, ತೆಲುಗುದೇಶಂ ಪಕ್ಷದ ಸ್ಥಾಪಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ (1923-96) ಜನ್ಮದಿನ.

1883: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (1883-1966) ಜನ್ಮದಿನ.

1865: `ಬ್ರೋಚೆವಾರೆವರುರಾ' ಕೃತಿ ರಚಿಸಿದ ಖ್ಯಾತ ಸಂಗೀತಗಾರ ಮೈಸೂರು ವಾಸುದೇವಾಚಾರ್ಯ (28-5-1865ರಿಂದ 17-5-1961) ಅವರು ಸುಬ್ರಹ್ಮಣ್ಯಾಚಾರ್ಯ- ಕೃಷ್ಣಾಬಾಯಿ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1759: ವಿಲಿಯಂ ಪಿಟ್ ಜನ್ಮದಿನ (1759-1806). ಈತ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ. 1783ರಲ್ಲಿ ಪ್ರಧಾನಿಯಾದಾಗ ಈತನಿಗೆ 24 ವರ್ಷ ವಯಸ್ಸು. ಈತ ಪ್ರಧಾನಿ ಸ್ಥಾನಕ್ಕೆ ತಂದೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಮೊತ್ತ ಮೊದಲ ವ್ಯಕ್ತಿ ಕೂಡಾ.

1738: ಜೋಸೆಫ್ ಗಿಲೋಟಿನ್ (1738-1814) ಹುಟ್ಟಿದ ದಿನ. ಫ್ರಾನ್ಸಿನ `ತಲೆ ಕಡಿಯುವ ಯಂತ್ರ'ಕ್ಕೆ ಈ ವ್ಯಕ್ತಿಯ ಹೆಸರನ್ನೇ ಇಡಲಾಯಿತು. ಇಂತಹ ಯಂತ್ರದ ಬಗ್ಗೆ ಬೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಹೆಸರನ್ನು ಅದಕ್ಕೆ ನೀಡಲಾಯಿತು. ಆದರೆ ಈ ಯಂತ್ರ ಆತನ ಸಂಶೋಧನೆಯಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement