My Blog List

Friday, January 11, 2013

ಶಿರಸಿ ಅರಣ್ಯ ಕಾಲೇಜಿಗೆ ರಜತ ಸಂಭ್ರಮ

ಶಿರಸಿ ಅರಣ್ಯ ಕಾಲೇಜಿಗೆ ರಜತ ಸಂಭ್ರಮ


ಬೆಂಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಶಿರಸಿಯ ಅರಣ್ಯ ಮಹಾವಿದ್ಯಾಲಯಕ್ಕೆ 25 ವರ್ಷಗಳು ತುಂಬಿದ್ದು ರಜತ ಮಹೋತ್ಸವ ಸಂಭ್ರಮಾಚರಣೆಗೆ ಅಣಿಯಾಗಿದೆ.

ಮಹಾವಿದ್ಯಾಲಯಕ್ಕೆ 25 ವರ್ಷ ತಂಬಿದ ಹಿನ್ನೆಲೆಯಲ್ಲಿ ಜನವರಿ 12 ಮತ್ತು 13ರಂದು ಅರಣ್ಯ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ಕೆ. ಪಾಟೀಲ ತಿಳಿಸಿದ್ದಾರೆ.

ಜನವರಿ  12ರಂದು ಮಧ್ಯಾಹ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಆರ್. ಹಂಚಿನಾಳ ಅಧ್ಯಕ್ಷತೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 13ರಂದು ಬೆಳಿಗ್ಗೆ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ ಅವರು ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆಯುವ ರಜತ ಮಹೋತ್ಸವ ಸಮಾರಂಭದಲ್ಲಿ  ಕಾನೂನು ಸಚಿವ ಎಸ್. ಸುರೇಶ ಕುಮಾರ್, ಪಶ್ಚಿಮಘಟ್ಟ ಕಾರ‌್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಾಜಿ ಅರಣ್ಯ ಸಚಿವ ವಿಜಯಶಂಕರ, ಶಾಸಕ ಸುನೀಲ ಹೆಗಡೆ, ಕೃಷ್ಣ ನಾರಾಯಣ ಗೌಡ, ಗುರುಪಾದ ಹೆಗಡೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

No comments:

Advertisement