My Blog List

Tuesday, January 7, 2020

ಶಬರಿಮಲೈ: ಜ.೧೩ರಿಂದ ೯ ಸದಸ್ಯ ಸಂವಿಧಾನ ಪೀಠದ ವಿಚಾರಣೆ

       ಶಬರಿಮಲೈ: .೧೩ರಿಂದ ಸದಸ್ಯ ಸಂವಿಧಾನ ಪೀಠದ                                                               ವಿಚಾರಣೆ  
ನವದೆಹಲಿ: ಕೇರಳದ ಶಬರಿಮಲೈಯ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦-೫೦ರ ನಡುವಣ ವಯೋಮಾನದ ಮಹಿಳೆಯರ ಮೇಲೆ ಇದ್ದ ನಿಷೇಧವನ್ನು ರದ್ದು ಪಡಿಸಿ ತಾನು ೨೦೧೮ರಲ್ಲಿ ನೀಡಿದ್ದ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಸದಸ್ಯರ ಸಂವಿಧಾನ ಪೀಠವು ಮುಂದಿನ 2020 ಜನವರಿ 13ರ ಸೋಮವಾರ  ಹೊಸದಾಗಿ ವಿಚಾರಣೆ ಆರಂಭಿಸಲಿದೆ.

ಸಪ್ತ
ಸದಸ್ಯ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುವುದು ಎಂದು ಸುಪ್ರಿಂಕೋರ್ಟ್ ಕಳೆದ ತಿಂಗಳು ಇಂಗಿತ ವ್ಯಕ್ತ ಪಡಿಸಿತ್ತು. ಆದಾಗ್ಯೂ ಸುಪ್ರೀಕೋರ್ಟ್  2020 ಜನವರಿ 06ರ ಸೋಮವಾರ ನೀಡಿದ ಹೊಸ ಸೂಚನೆಯು ಪ್ರಕರಣವನ್ನು ಸದಸ್ಯ ಪೀಠವು ಜನವರಿ ೧೩ರಿಂದ (ಮುಂದಿನ ಸೋಮವಾರ) ವಿಚಾರಣೆ ನಡೆಸುವುದು ಎಂದು ತಿಳಿಸಿತು.

೨೦೧೮ರಲ್ಲಿ
ದೇವಾಲಯಕ್ಕೆ ಋತುಮತಿ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ನಡೆಸಿದ್ದ ವಿಚಾರಣೆಯ ಬಳಿಕ ಸುಪ್ರೀಕೋರ್ಟಿನ  ಪಂಚ ಸದಸ್ಯ ಸಂವಿಧಾನಪೀಠವು ದಕ್ಷಿಣ ಕೇರಳದ ೮೦೦ ವರ್ಷಗಳಷ್ಟು ಪುರಾತನವಾದ ದೇವಾಲಯದಲ್ಲಿ ಅನಾದಿ ಕಾಲದಿಂದ ಇದ್ದ ಋತುಮತಿ ವಯೋಮಾನದ ಮಹಿಳಾ ಪ್ರವೇಶ ನಿಷೇಧ ಪದ್ಧತಿಯನ್ನು : ಬಹುಮತದ ತೀರ್ಪಿನಲ್ಲಿ ರದ್ದು ಪಡಿಸಿತ್ತು.

ಕೇರಳದ
ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ೨೦೧೮ರ ಸೆಪ್ಟೆಂಬರ್ ೨೮ರಂದು ನೀಡಲಾಗಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಸುಮಾರು ೬೦ಕ್ಕೂ ಹೆಚ್ಚಿನ ಅರ್ಜಿಗಳ ವಿಚಾರಣೆಯನ್ನು  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಮುನ್ನ ವಿಸೃತ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ  ವರ್ಗಾವಣೆ ಮಾಡಿತ್ತು.

ಭಾರತದ
ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ  ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್, .ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತ್ತು.

ಇದೀಗ
ನವ ಸದಸ್ಯ ಪೀಠವು ಮಸೀದಿಗಳಿಗೆ ಮಹಿಳಾ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪದ್ಧತಿ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನೂ ಪುನರ್ ಪರಿಶೀಲನೆ ಮಾಡಲಿದೆ.

ದೇವಾಲಯ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಇದು ಕೇವಲ ಹಿಂದೂ ಮಹಿಳೆಯರ ದೇವಾಲಯ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಹೀಗಾಗಿ, ಬಗ್ಗೆ ವಿಸ್ತೃತವಾದ ಮತ್ತು ಚರ್ಚೆಯಾಗಬೇಕಾಗಿದೆ. ಆದ್ದರಂದ ಏಳು ನ್ಯಾಯಮೂರ್ತಿಗಳ ವಿಸ್ತೃತ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆಎಂದು ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿತ್ತು.

ವಿಸ್ತೃತ
ವಿಚಾರಣೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರಿಮನ್ ವಿರೋಧ ವ್ಯಕ್ತಪಡಿಸಿದ್ದರು. 
ವಿಸ್ತೃತ
ಪೀಠಕ್ಕೆ ಒಪ್ಪಿಸಲು ಪಂಚ ಸದಸ್ಯ ಪೀಠವು ಸರ್ವಾನುಮತಿಯ ಒಪ್ಪಿಗೆ ನೀಡಿದರೂ, ೨೦೧೮ರ ಸುಪ್ರೀಂಕೋರ್ಟ್ ನಿರ್ಣಯದ ಪುನರ್ ಪರಿಶೀಲನೆ ಕೋರಿದ ಅರ್ಜಿಗಳನ್ನು ಸಪ್ತ ಸದಸ್ಯ ಪೀಠಕ್ಕೆ ಒಪ್ಪಿಸುವ ಬಗ್ಗೆ ಪೀಠವು : ಬಹುಮತದ ಭಿನ್ನ ಅಭಿಪ್ರಾಯಗಳ ತೀರ್ಪು ನೀಡಿತ್ತು.

ಬಹುಮತದ
ತೀರ್ಪಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಇಂದು ಮಲ್ಹೋತ್ರ ಅವರು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ನಿರ್ಣಯ ಪುನರ್ ವಿಮರ್ಶೆ ಕೋರಿದ ಮನವಿಗಳನ್ನು ಬಾಕಿ ಇರಿಸಲು ನಿರ್ಧರಿಸಿತ್ತು ಮತ್ತು ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧವು ಶಬರಿಮಲೈಗೆ ಮಾತ್ರವೇ ಸೀಮಿತವಲ್ಲ, ಇತರ ಧರ್ಮಗಳಲ್ಲೂ ಇಂತಹ ಆಚರಣೆಗಳು ಇವೆ ಎಂದು ಹೇಳಿತ್ತು.

ಆದಾಗ್ಯೂ
, ಬಹುಮತದ ತೀರ್ಪು ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ೨೮ರ ತೀರ್ಪಿಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ನೀಡಿರಲಿಲ್ಲ್ಲ ಮತ್ತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ತನ್ನ ಹಿಂದಿನ ತೀರ್ಪಿಗೆ ತಡೆಯಾಜ್ಞೆಯನ್ನು ನೀಡಿರಲಿಲ್ಲ.

ಬಹುಮತದ
ತೀರ್ಪಿನ ಕೆಲವು ಭಾಗಗಳನ್ನು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು, ’ಧರ್ಮ ಮತ್ತು ನಂಬಿಕೆಯ ಮೇಲಿನ ಚರ್ಚೆಯನ್ನು ಪುನರುಜ್ಜೀನಗೊಳಿಸಲು ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆಎಂದು ಹೇಳಿದ್ದರು. ಶಬರಿಮಲೈಯಂತಹ ಧಾರ್ಮಿಕ ಸ್ಥಳಗಳು, ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶ ಮತ್ತು ಮಹಿಳಾ ಜನನಾಂಗ ಛೇದನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಮಾನ್ಯ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂದು ಅವರು ಹೇಳಿದ್ದರು.

ನ್ಯಾಯಮೂರ್ತಿಗಳಾದ
ಆರ್.ಎಫ್ ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಅಲ್ಪಮತದ ತೀರ್ಪು ಪುನರ್ ಪರಿಶೀಲನೆ ಕೋರಿದ ಎಲ್ಲ ಮನವಿಗಳನ್ನೂ ವಜಾಗೊಳಿಸಿ ಸೆಪ್ಟೆಂಬರ್ ೨೮ರ ನಿರ್ಧಾರಕ್ಕೆ ಬದ್ಧವಾಗುವಂತೆ ನಿರ್ದೇಶನ ನೀಡಿತ್ತು.

ಕೇರಳದಲ್ಲಿ
ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾದ ೨೦೧೮ ಸೆಪ್ಟೆಂಬರ್ ೨೮ರ ಸುಪ್ರೀಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾದ ೫೬ ಮರುಪರಿಶೀಲನಾ ಅರ್ಜಿಗಳು,  ನಾಲ್ಕು ಹೊಸ ರಿಟ್ ಅರ್ಜಿಗಳು ಮತ್ತು ವರ್ಗಾವಣೆ ಅರ್ಜಿಗಳು ಸೇರಿದಂತೆ ಒಟ್ಟು ೬೫ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಂವಿಧಾನ ಪೀಠದಿಂದ ಭಿನ್ನಮತದ ತೀರ್ಪು ಬಂದಿತ್ತು.

ಇದಕ್ಕೂ
ಮುನ್ನ ಪಂಚ ಸದಸ್ಯ ಸಂವಿಧಾನ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಿ, ನಾಯರ್ ಸೇವಾ ಸಮಾಜ, ದೇಗುಲದ ತಂತ್ರಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಕಕ್ಷಿದಾರರ ಅಹವಾಲು ಆಲಿಸಿದ ಬಳಿಕ ಪಂಚ ಸದಸ್ಯ ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ವರ್ಷದಿಂದ ೫೦ ವರ್ಷ ವಯಸ್ಸಿನವರೆಗಿನ ಮಹಿಳೆಯರು ಅಯ್ಯಪ್ಪದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು ೨೦೧೮ರ ಸೆಪ್ಟೆಂಬರ್ ೨೮ರಂದು ರದ್ದುಪಡಿಸಿ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, .ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ  ಅವರ ನ್ಯಾಯಪೀಠ : ಬಹುಮತದ ತೀರ್ಪು ನೀಡಿತ್ತು. 
ತನ್ಮೂಲಕ ಕೇರಳದ ಪ್ರತಿಷ್ಠಿತ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ೧೦ರಿಂದ ೫೦ ವರ್ಷಗಳ ನಡುವಣ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿತ್ತು. ಶತಮಾನಗಳಿಂದ ಅನುಸರಿಸುತ್ತಾ ಬರಲಾಗಿದ್ದ ಹಿಂದು ಧಾರ್ಮಿಕ ಪದ್ಧತಿಯು ಅಕ್ರಮ ಹಾಗೂ ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.

ಇತಿಹಾಸ
ನಿರ್ಮಿಸಿದ ಇಬ್ಬರು ಮಹಿಳೆಯರು: ಸುಪ್ರೀಂಕೋರ್ಟ್ತೀರ್ಪಿನ ಬಳಿಕ ವರ್ಷ (೨೦೧೯) ಜನವರಿ ೦೨ರಂದು ಬಿಂದು ಅಮ್ಮಿನಿ ಮತ್ತು ಆಕೆಯ ಸ್ನೇಹಿತೆ ಕನಕದುರ್ಗ ಶಬರಿಮಲೆಯ ತಳಶಿಬಿರದಿಂದ ಶಬರಿಮಲೈ ಮೆಟ್ಟಿಲುಗಳನ್ನು ಏರಿ ಇತಿಹಾಸ ನಿರ್ಮಿಸಿದ್ದರು.

No comments:

Advertisement