Friday, June 5, 2020

‘ಭಯೋತ್ಪಾದಕರು’ ಹೇಳಿಕೆ ಇಮ್ರಾನ್ ಖಾನರದ್ದೇ: ಭಾರತದ ಎದಿರೇಟು

ಭಯೋತ್ಪಾದಕರುಹೇಳಿಕೆ ಇಮ್ರಾನ್ ಖಾನರದ್ದೇ:  ಭಾರತದ ಎದಿರೇಟು

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಾವಿರಾರು ಪಾಕಿಸ್ತಾನಿ ಭಯೋತ್ಪಾದಕರು ಇರುವುದನ್ನು ಸೂಚಿಸುವ ಹೊಸ ವಿಶ್ವಸಂಸ್ಥೆ ವರದಿಯು ಕಳೆದ ವರ್ಷ  ಪಾಕಿಸ್ತಾನವು ೪೦,೦೦೦ ಭಯೋತ್ಪಾದಕರಿಗೆ ಆತಿಥ್ಯ ನೀಡಿದೆ ಎಂಬುದಾಗಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸ್ವತಃ ಒಪ್ಪಿಕೊಂಡದ್ದರ ಪ್ರತಿಫಲನವಾಗಿದೆ ಎಂದು ನಂಬಲರ್ಹ ಮೂಲಗಳು  2020 ಜೂನ್ 05ರ ಶುಕ್ರವಾರ ತಿಳಿಸಿದವು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು "ಪಾಕಿಸ್ತಾನವನ್ನು ದೂಷಿಸಲು" ವಿಶ್ವಸಂಸ್ಥೆ ವರದಿಯನ್ನು ಬಳಸುತ್ತಿದೆ ಎಂಬ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಾದಕ್ಕೆ ಪ್ರತಿಕ್ರಿಯಿಸಿದ ಅನಾಮಧೇಯರಾಗಿ ಉಳಿಯಬಯಸಿದ ವ್ಯಕ್ತಿ, ಈಗಾಗಲೇ ತಪ್ಪೊಪ್ಪಿಕೊಂಡಿರುವ ಇಮ್ರಾನ್ ಖಾನ್ ಹೇಳಿಕೆಯನ್ನೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡ ಪುನರುಚ್ಚರಿಸಿದೆಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಭಯೋತ್ಪಾದಕರಲ್ಲಿ ಸುಮಾರು ,೫೦೦ ಪಾಕಿಸ್ತಾನಿ ಪ್ರಜೆಗಳಿದ್ದಾರೆ ಮತ್ತು ಜೈಶ್--ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್--ತೊಯ್ಬಾ (ಎಲ್ಇಟಿ) ಯುದ್ಧ ಪೀಡಿತ ದೇಶಕ್ಕೆ ವಿದೇಶಿ ಹೋರಾಟಗಾರರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಕಳೆದ ತಿಂಗಳು ಬಿಡುಗಡೆ ಮಾಡಲಾದ ವಿಶ್ವಸಂಸ್ಥೆ ವರದಿಯು ತಿಳಿಸಿತ್ತು.

"ಪಾಕಿಸ್ತಾನವು ಇನ್ನೂ ೩೦,೦೦೦ ರಿಂದ ೪೦,೦೦೦ ಭಯೋತ್ಪಾದಕರಿಗೆ ಆತಿಥ್ಯ ವಹಿಸುತ್ತಿದೆ ಎಂದು ಅವರ ಪ್ರಧಾನಿ ಕಳೆದ ವರ್ಷ ಒಪ್ಪಿಕೊಂಡಿದ್ದನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ನೆನಪಿಸಿಕೊಳ್ಳುವುದು ಉತ್ತಮ. ಹಿಂದೆ ಭಯೋತ್ಪಾದಕರು ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ದೇಶದ ನೆಲವನ್ನು ಬಳಸಿದ್ದರು ಎಂದು ಪಾಕಿಸ್ತಾನದ ನಾಯಕತ್ವವು  ದಾಖಲಿಸಿz’ ಎಂದು ಮೇಲೆ ಉಲ್ಲೇಖಿಸಿದ ವ್ಯಕ್ತಿಗಳಲ್ಲಿ ಒಬ್ಬರು ಹೇಳಿದರು.

ಕಳೆದ ಜುಲೈಯಲ್ಲಿ ವಾಷಿಂಗ್ಟನ್ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ಮಾತನಾಡಿದ ಖಾನ್, ಪಾಕಿಸ್ತಾನದಲ್ಲಿ ಇನ್ನೂ ಸುಮಾರು ೩೦,೦೦೦ ರಿಂದ ೪೦,೦೦೦ ಸಶಸ್ತ್ರ ಜನರಿದ್ದಾರೆ, ಅವರು ಅಫ್ಘಾನಿಸ್ತಾನ ಅಥವಾ ಕಾಶ್ಮೀರದ ಕೆಲವು ಭಾಗಗಳಲ್ಲಿ ತರಬೇತಿ ಮತ್ತು ಹೋರಾಟ ನಡೆಸಿದ್ದಾರೆ ಎಂದು ಹೇಳಿದ್ದರು.

"ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ ವರದಿಯು ಪಾಕಿಸ್ತಾನದ ಪ್ರಧಾನ ಮಂತ್ರಿ ಈಗಾಗಲೇ ಒಪ್ಪಿಕೊಂಡಿದ್ದನ್ನು ಪುನರುಚ್ಚರಿಸಿದೆ. ವರದಿಯನ್ನು ಟೀಕೆ ಮಾಡುವ ಮುನ್ನ ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅದರ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಹೊರಹೊಮ್ಮುವ ಭಯೋತ್ಪಾದನೆಗೆ ಎಲ್ಲ ರೀತಿಯ ಬೆಂಬಲವನ್ನು ಕೊನೆಗೊಳಿಸಬೇಕುಎಂದು ವ್ಯಕ್ತಿ ನುಡಿದರು.

"ಪಾಕಿಸ್ತಾನವು ಭಯೋತ್ಪಾದನೆಯ ನರಕೇಂದ್ರವಾಗಿದೆ ಎಂಬ ವಾಸ್ತವ ವಿಶ್ವಸಂಸ್ಥೆ ಮತ್ತು ವಿಶ್ವ ಸಮುದಾಯಕ್ಕೆ  ತಿಳಿದಿದೆ" ಎಂದು ವ್ಯಕ್ತಿ ಹೇಳಿದರು.

ಪಾಕಿಸ್ತಾನವು "ವಿಶ್ವಸಂಸ್ಥೆಯು ಗೊತ್ತುಪಡಿಸಿದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳಲ್ಲಿ ಒಂದಾಗಿದೆ" ಮತ್ತು "ಇತರರ ಕಡೆಗೆ ಬೆರಳು ತೋರಿಸುವ ಸುಳ್ಳು ಪ್ರಯತ್ನಗಳಿಗಾಗಿ ಅದು ನೆಲದ ಮೇಲಿನ ಸಂಗತಿಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲ" ಎಂದು ವ್ಯಕ್ತಿ ಹೇಳಿದರು.

ಇದಲ್ಲದೆ, ಭಾರತ ಮತ್ತು ಅಫ್ಘಾನಿಸ್ತಾನದ ಜನರ ನಡುವಿನ ಸಾಂಪ್ರದಾಯಿಕ ಮತ್ತು ಸ್ನೇಹಪರ ಸಂಬಂಧಗಳಲ್ಲಿ ವಿಭಜನೆಯನ್ನು ಸೃಷ್ಟಿಸುವ ಪಾಕಿಸ್ತಾನದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಅಫಘಾನಿಸ್ತಾನದ ಜನರು ಮತ್ತು ಅಂತಾರಾಷ್ಟ್ರೀಯ ಸಮುದಾಯವುವಿಧ್ವಂಸಕರುಯಾರೆಂಬುದನ್ನು ಮತ್ತು ಭಯೋತ್ಪಾದಕರಿಗೆ ಆಶ್ರಯ, ತರಬೇತಿ, ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವನ್ನು ಯಾರು ಒದಗಿಸುತ್ತಿದ್ದಾರೆ ಮತ್ತು ಮುಗ್ಧ ಆಫ್ಘನ್ನರು ಮತ್ತು ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರ ವಿರುದ್ಧ ಹಿಂಸಾಚಾರವನ್ನು ಪ್ರಾಯೋಜಿಸುತ್ತಿದ್ದಾರೆ ಎಂಬುದನ್ನು ಚೆನ್ನಾಗಿ ತಿಳಿದಿದ್ದಾರೆಎಂದು ವ್ಯಕ್ತಿ ನುಡಿದರು.

ಗುರುವಾರ ಬಿಡುಗಡೆ ಮಾಡಿದ್ದ ತನ್ನ  ಹೇಳಿಕೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಕಚೇರಿಯು,  ಪಾಕಿಸ್ತಾನವನ್ನು ದೂಷಿಸಲು ವಿಶ್ವಸಂಸ್ಥೆ ವರದಿಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಪಾಕಿಸ್ತಾನಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಾದಿಸಿದೆ. "ಪಾಕಿಸ್ತಾನವು ಭಾರತದ ದುರುದ್ದೇಶಪೂರಿತ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ, ಇದು ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿತಪ್ಪಿಸುವ ಗುರಿಯನ್ನು ಹೊಂದಿದೆ" ಎಂದು ಪಾಕಿಸ್ತಾನ ಹೇಳಿದೆ.

ವರದಿಯಲ್ಲಿ ಪಾಕಿಸ್ತಾನದಲ್ಲಿ "ಸುರಕ್ಷಿತ ತಾಣಗಳು" ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ, ಇದು "ಅಫ್ಘಾನಿಸ್ತಾನದಲ್ಲಿ [ವಿಶ್ವಸಂಸ್ಥೆ ತಂಡಕ್ಕೆ] ಅಫ್ಘಾನಿಸ್ತಾನದಲ್ಲಿ ಒದಗಿಸಿದ ಸುದ್ದಿಯನ್ನು  ಆಧರಿಸಿದೆ" ಎಂದು ಪಾಕಿಸ್ತಾನ ಹೇಳಿದೆ.

ಭಾರತವು "ಅಫ್ಘನ್ ಶಾಂತಿ ಪ್ರಕ್ರಿಯೆಗೆ ತೊಡಕುಗಳನ್ನು ಸೃಷ್ಟಿಸಲು" ಪ್ರಯತ್ನಿಸುತ್ತಿದೆ ಎಂದು ಪಾಕ್ ವಿದೇಶಾಂಗ ಕಚೇರಿ ವಾದಿಸಿತು, ಮತ್ತುಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಪ್ರಾಯೋಜಕ ಎಂಬುದಾಗಿ ಭಾರತ ಹೇಳಿದ್ದರ ಕಡೆಗೆ ಬೊಟ್ಟು ಮಾಡಿದೆ.

ಅಲ್ ಖೈದಾದ ಹಿರಿಯ ನಾಯಕತ್ವ ಮತ್ತು ,೫೦೦ ಪಾಕಿಸ್ತಾನ ಪ್ರಜೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಿದೇಶಿ ಭಯೋತ್ಪಾದಕರು ಅಫ್ಘಾನಿಸ್ತಾನದಲ್ಲಿ ಮುಂದುವರೆದ ಪರಿಸ್ಥಿತಿ ಬಗ್ಗೆ ಭಾರತದಗಂಭೀರ ಕಳವಳವನ್ನು ವ್ಯಕ್ತಪಡಿಸುವ ಮೂಲಕ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ವಿಶ್ವಸಂಸ್ಥೆ  ವರದಿಗೆ ಪ್ರತಿಕ್ರಿಯಿಸಿದ್ದರು. "ಪಾಕಿಸ್ತಾನವು ಅಂತರರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಉಳಿದಿದೆ ಎಂಬ ಭಾರತದ ದೀರ್ಘಕಾಲದ ನಿಲುವನ್ನು ವರದಿ ಸಮರ್ಥಿಸುತ್ತದೆ" ಎಂದು ಅವರು ಹೇಳಿದ್ದರು.

No comments:

Advertisement