My Blog List

Thursday, June 18, 2020

ಭಾರತದ ಯೋಧರು ಯಾರೂ ಕಣ್ಮರೆಯಾಗಿಲ್ಲ: ಸೇನೆ ಸ್ಪಷ್ಟನೆ

ಭಾರತದ ಯೋಧರು ಯಾರೂ ಕಣ್ಮರೆಯಾಗಿಲ್ಲ: ಸೇನೆ ಸ್ಪಷ್ಟನೆ

ಉದ್ವಿಗ್ನತೆ ಶಮಕ್ಕಾಗಿ ಉಭಯ ಸೇನಾ ಮುಖ್ಯಸ್ಥರ ಸಭೆ

ನದೆಹಲಿ: ಜೂನ್ ೧೫ ರಂದು ಪೂರ್ವ ಲಡಾಕ್ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದ ನಂತರ ಹಲವಾರು ಸೈನಿಕರು ನಾಪತ್ತೆಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ಸೇನೆ ನಿರಾಕರಿಸಿದೆ. ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕಾಗಿ ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರು 2020 ಜೂನ್ 18ರ ಗುರುವಾರ ಸಭೆ ನಡೆಸಿದ್ದು, ಸಂದರ್ಭದಲ್ಲಿ ಭಾರತೀಯ ಸೇನೆಯಿಂದ ಸ್ಪಷ್ಟನೆ ಬಂದಿತು.

ಗಲ್ವಾನ್ ಘರ್ಷಣೆಯ ಬಳಿಕ ಇದು ಎರಡನೇ ಸಭೆಯಾಗಿದ್ದು, ಬುಧವಾರವೂ ಸಭೆ ನಡೆದಿತ್ತು.

"ಭಾರತೀಯ ಸೇನೆಯ ಯಾವ ಸೈನಿಕರೂ ಕಣ್ಮರೆಯಾಗಿಲ್ಲಎಂದು ಸೇನೆಯು ಸಂಕ್ಷಿಪ್ತ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿತು.

ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಸಾವನ್ನಪ್ಪಿದ್ದು, ಚೀನಾದ ಕಡೆಯಲ್ಲೂ ಹಲವಾರು ಸಾವು ನೋವುಗಳು ಸಂಭವಿಸಿದ್ದವು.

ನ್ಯೂಯಾರ್ಕ್ ಟೈಮ್ಸ್ ಬುಧವಾರ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿ ಹೇಳಿಕೆಯನ್ನು  ನೀಡಲಾಗಿದೆ ಎಂದು ಸೇನೆಯ ವಕ್ತಾರರು ತಿಳಿಸಿದರು.

ಭಾರತೀಯ ಮಾಧ್ಯಮಗಳ ಕೆಲವು ವಿಭಾಗಗಳು ಕೂಡಾ ಹಲವಾರು ಭಾರತೀಯ ಸೈನಿಕರು ನಾಪತ್ತೆಯಾಗಿದ್ದಾರೆ ಅಥವಾ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ವರದಿ ಮಾಡಿದ್ದವು.

ಗಡಿ ಪಡೆಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸಲು ಪ್ರಮುಖ ಸಾಮಾನ್ಯ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ಮತ್ತು ಚೀನಾದ ನಿಯೋಗಗಳು ಪೂರ್ವ ಲಡಾಕ್ನಲ್ಲಿ ಗುರುವಾರ ಸಭೆ ನಡೆಸಿದ್ದು, ಸಂದರ್ಭದಲ್ಲೇ ಸೇನೆ ಹೇಳಿಕೆ ನೀಡಿದೆ.

ಹಾಲಿ ಗಡಿ ಬಿಕ್ಕಟ್ಟು ಪ್ರಾರಂಭವಾದ ನಂತರ ಹಾಗೂ ಕ್ರೂರ ಗಲ್ವಾನ್ ಕಣಿವೆ ಘರ್ಷಣೆಯ ನಂತರ ಇದು ಸೇನಾ ಅಧಿಕಾರಿಗಳ ಏಳನೇ ಸಭೆ ಇದಾಗಿದೆ.

ಗಸ್ತು ಪಾಯಿಂಟ್ ೧೪ ಸಮೀಪ ಘರ್ಷಣೆಯ ಸ್ಥಳದಲ್ಲಿ ಕರು ಮೂಲದ ಎಚ್ ಕ್ಯೂ ಕಾಲಾಳುಪಡೆ ವಿಭಾಗದ ಕಮಾಂಡರ್ ಮೇಜರ್ ಜನರಲ್ ಅಭಿಜಿತ್ ಬಾಪಟ್ ಮತ್ತು ಅವರ ಚೀನಾದ ತತ್ಸಮಾನ ಅಧಿಕಾರಿ ಮಾತುಕತೆ ನಡೆಸಿದರು,

ಇದೇ ಸ್ಥಳದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆಗಿನ ಗಡಿ ಚಕಮಕಿಯಲ್ಲಿ ಭಾರತೀಯ ಸೇನೆಯು ೪೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾವುನೋವುಗಳನ್ನು ಅನುಭವಿಸಿತ್ತು.

೧೯೭೫ರ ಅಕ್ಟೋಬರಿನಲ್ಲಿ ಚೀನಾದ ಸೇನೆಯು ಅರುಣಾಚಲ ಪ್ರದೇಶದ ತುಲುಂಗ್ ಲಾ ಸೆಕ್ಟರ್ನಲ್ಲಿ ಭಾರತೀಯ ಗಸ್ತು ಪಡೆಯ ನಾಲ್ವರು ಸೈನಿಕರನ್ನು ಗುಂಡಿಕ್ಕಿ ಕೊಂದಿತ್ತು.

ಜೂನ್ ೧೫ ಘರ್ಷಣೆಯಲ್ಲಿ ೭೬ ಭಾರತೀಯ ಸೈನಿಕರು ಗಾಯಗೊಂಡಿದ್ದು, ೧೮ ಮಂದಿ ಗಂಭೀgವಾಗಿ  ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೇಡಿಯೊ ವರದಿ ಮತ್ತು ಇತರ ಗುಪ್ತಚರಗಳನ್ನು ಮೂಲಗಳನ್ನು ಉಲ್ಲೇಖಿಸಿ ಘರ್ಷಣೆಯಲ್ಲಿ ೪೩ ಚೀನಿಯರು ಸಾವನ್ನಪ್ಪಿದ್ದಾರೆ ಅಥವಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ.

ಚೀನಾದ ಮಾರಣಾಂತಿಕ ಸಾವುನೋವುಗಳಲ್ಲಿ ಕರ್ನಲ್-ಶ್ರೇಣಿಯ ಅಧಿಕಾರಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಜೂನ್ ೧೫ ರಂದು ನಡೆದ ಅಪರೂಪದ ಸಭೆಯಲ್ಲಿ ಹಿರಿಯ ಭಾರತೀಯ ಮತ್ತು ಚೀನಾದ ಮಿಲಿಟರಿ ಕಮಾಂಡರ್ಗಳು ರೂಪಿಸಿದ ಗಡಿ ಉದ್ವಿಗ್ನತೆ ಶಮನ ಯೋಜನೆಗಳನ್ನು ಜೂನ್ ೧೫ ಜಗಳವು ವಾಸ್ತವಿಕವಾಗಿ ಹಳಿ ತಪ್ಪಿಸಿದೆ.

೨೦ ಭಾರತೀಯ ಸೈನಿಕರು ಸಾವನ್ನಪ್ಪಿದ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಮತ್ತು ಚೀನಾದ ಮಿಲಿಟರಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಸಭೆ ನಡೆಸಿದರು.

ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸಲು ಎರಡೂ ದೇಶಗಳು ಮಾಡುವ ಪ್ರಯತ್ನಗಳ ಭಾಗ ಇದಾಗಿದೆ ಎಂದು ಮೂಲಗಳು ಹೇಳಿವೆ.

ಜೂನ್ ೧೫ ರಂದು ಸಂಜೆ ಗಂಟೆ ಸುಮಾರಿಗೆ ಘರ್ಷಣೆ ಪ್ರಾರಂಭವಾಗಿತ್ತು. ಕರ್ನಲ್ ಸಂತೋಷ್ ಬಾಬು ನೇತೃತ್ವದ ಸುಮಾರು ೫೦ ಸೈನಿಕರ ಭಾರತೀಯ ಸೇನಾ ತಂಡವು ಪೆಟ್ರೋಲ್ ಪಾಯಿಂಟ್ ೧೪ನ್ನು ತಲುಪಿತ್ತು. ಉಭಯ ರಾಷ್ಟ್ರಗಲ ನಡುವಿನ ಶಿಷ್ಟಾಚಾರದಂತೆ ಸೈನಿಕರು ನಿರಾಯುಧರಾಗಿದ್ದರು.

ಜೂನ್ ರಂದು ಎರಡೂ ಕಡೆಯ ಹಿರಿಯ ಕಮಾಂಡರ್ಗಳು ಚರ್ಚಿಸಿದ ಉದ್ವಿಗ್ನತೆ ಶಮನ ಯೋಜನೆಯಡಿ ಚೀನಾದ ಸೈನಿಕರು ಸ್ಥಳದಿಂದ ಹಿಂದೆ ಸರಿಯಬೇಕಿತ್ತು.

ಸ್ಥಳದಲ್ಲಿ  ನಿಯಮ ಉಲ್ಲಂಘಿಸಿ, ಚೀನೀ ಸೇನೆ ಇದ್ದುದನ್ನು ಭಾರತೀಯ ಸೇನಾ ತಂಡವು ಗಮನಿಸಿತು. ಅವರ ಡೇರೆಗಳೂ ಅಲ್ಲೇ ಇದ್ದವುಎಂದು ಮೂಲUಳು ಹೇಳಿವೆ.

ಸ್ಥಳದಲ್ಲಿ ಕರ್ನಲ್ ಬಾಬು ಮತ್ತು ಅವರ ತಂಡವು ಚೀನಾದ ಸೈನಿಕರಿಗೆ ಮುಖಾಮುಖಿಯಾದಾಗ ಘರ್ಷಣೆ ಸಂಭವಿಸಿತು. ಚೀನಾದ ಸೈನಿಕರು ತಮ್ಮ ಸ್ಥಾನಗಳನ್ನು ಖಾಲಿ ಮಾಡಲು ನಿರಾಕರಿಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು ಮತ್ತು ಭಾರತೀಯ ಸೈನಿಕರು ಡೇರೆಗಳನ್ನು ಕಿತ್ತು ಹಾಕಿದರು.

ಕೆಲವೇ ನಿಮಿಷಗಳಲ್ಲಿ, ಉಭಯ ದೇಶಗಳ ಸೈನಿಕರು ಹೊಡೆದಾಟದಲ್ಲಿ ತೊಡಗಿದರು. ಹಿಂಸಾತ್ಮಕ ಘರ್ಷಣೆ, ಏಳು ಗಂಟೆಗಳ ಕಾಲ ನಡೆಯಿತು. ಉಭಯ ಕಡೆಯಿಂದಲೂ ಹೆಚ್ಚುವರಿ ಸೇನೆಗಳು ರವಾನೆಯಾದವು. ಘರ್ಷಣೆ ಗಸ್ತು ಪಾಯಿಂಟ್ ೧೪ರ ಪ್ರದೇಶದ ಮೇಲ್ಭಾಗದ ನದಿಯ ಸಮೀಪದ ಕಿರಿದಾದ ಪರ್ವತ ಶ್ರೇಣಿಗೂ ವ್ಯಾಪಿಸಿತು. ಸ್ಥಳದಲ್ಲಿಯೇ ಉಭಯ ಕಡೆಯವರೂ ಸಾವು ನೋವುಗಳನ್ನು ಅನುಭವಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಮೇ ರಿಂದ ಮುಂದುವರೆದ ಉದ್ವಿಗ್ನತೆಯನ್ನು ಶಮನಗೊಳಿಸುವ ಯತ್ನವಾಗಿ ಭಾರತ ಮತ್ತು ಚೀನೀ ಅಧಿಕಾರಿಗಳು ನಿಯಮಿತವಾಗಿ ಭೇಟಿ ಮಾಡುತ್ತಿದ್ದಾರೆ. ಜೂನ್ ೬ರಂದು ಲೆಹ್ ಮೂಲದ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್ಜಿಯಾಂಗ್ ಪ್ರದೇಶದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನಡುವೆ ಚರ್ಚಿ ನಡೆದಿತ್ತು.

No comments:

Advertisement