My Blog List

Wednesday, October 14, 2020

ಮೆಹಬೂಬಾ ಮುಫ್ತಿ ನಿವಾಸಕ್ಕೆ ಫಾರೂಕ್, ಒಮರ್ ಅಬುಲ್ಲ

 ಮೆಹಬೂಬಾ ಮುಫ್ತಿ ನಿವಾಸಕ್ಕೆ ಫಾರೂಕ್ಒಮರ್ ಅಬುಲ್ಲ

ಶ್ರೀನಗರನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲ ಮತ್ತು ಒಮರ್ ಅಬ್ದುಲ್ಲ ಅವರು ಬಂಧನದಿಂದ ಬಿಡುಗಡೆಯಾದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು 2020 ಅಕ್ಟೋಬರ್ 14ರ ಬುಧವಾರ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ಸಭೆಗೆ ಆಹ್ವಾನಿಸಿದರು.

ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕಕಳೆದ ವರ್ಷ ಆಗಸ್ಟ್  ರಿಂದ ಬಂಧನಕ್ಕೊಳಗಾಗಿದ್ದ ಮೆಹಬೂಬಾ ಮುಫ್ತಿ ಅವರ ಬಂಧನವನ್ನು ಮಂಗಳವಾರ ರಾತ್ರಿ ಕೊನೆಗೊಳಿಸಿದ ಕೇಂದ್ರಾಡಳಿತ ಪ್ರದೇಶದ ಆಡಳಿತದ ಕ್ರಮದ ಹಿನ್ನೆಲೆಯಲ್ಲಿ  ಬೆಳವಣಿಗೆ ನಡೆದಿದೆ.

ತನ್ನ ಟ್ರೇಡ್ಮಾರ್ಕ್ ಆಗಿರುವ ಹಸಿರು ಬಣ್ಣದ ಉಡುಪು ಧರಿಸಿದ್ದ ಮೆಹಬೂಬಾ ಮುಫ್ತಿ ಅವರು ತಮ್ಮ ಗುಪ್ಕರ್ ನಿವಾಸದಲ್ಲಿ ಪಕ್ಷದ ಮುಖಂಡರು ಮತ್ತು ಕಣಿವೆಯ ವಿವಿಧ ಭಾಗಗಳಿಂದ ಬಂದಿದ್ದ ಬೆಂಬಲಿಗರನ್ನು ಭೇಟಿಯಾದರು.

ನನ್ನ ತಂದೆ ಮತ್ತು ನಾನು  ಮಧ್ಯಾಹ್ನ ಮೆಹಬೂಬಾ ಮುಫ್ತಿ ಸಾಹಿಬಾ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದ ನಂತರ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಕರೆ ಮಾಡಿದೆವುನಾಳೆ ಮಧ್ಯಾಹ್ನ (ಗುರುವಾರಗುಪ್ಕರ್ ಘೋಷಣೆಗೆ ಸಹಿ ಮಾಡಿದವರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಫಾರೂಖ್ ಸಾಹೇಬರು ನೀಡಿದ ಆಹ್ವಾನವನ್ನು ಅವರು ದಯೆಯಿಂದ ಸ್ವೀಕರಿಸಿದ್ದಾರೆ’ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.

"ಇಂದು ನಮ್ಮ ಭೇಟಿಗೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲನಾವು ಅವರ ಯೋಗಕ್ಷೇಮವನ್ನು ತಿಳಿದುಕೊಳ್ಳಲು ಬಯಸಿದ್ದೆವುನಾಳೆಯ ಸಭೆಯಲ್ಲಿಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಮತ್ತು ಗುಪ್ಕರ್ ಘೋಷಣೆ ಸಹಿ ಮಾಡಿದವರ ಭವಿಷ್ಯದ ಕಾರ್ಯಸೂಚಿ ಬಗ್ಗೆ  ಚರ್ಚಿಸಲಾಗುವುದು’ ಎಂದು ಅವರು ಮತ್ತೊಂದು ಟ್ವೀಟಿನಲ್ಲಿ ಹೇಳಿದರು.

ಗುಪ್ಕರ್ ಘೋಷಣೆಯು ಜಮ್ಮು ಮತ್ತು ಕಾಶ್ಮೀರದ ಹಿಂದಿನ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡುವ ನ್ಯಾಷನಲ್ ಕಾನ್ಫರೆನ್ಸ್ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಪೀಪಲ್ಸ್ ಕಾನ್ಫರೆನ್ಸ್ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಸಿಪಿಐ (ಎಂ) -  ಎಲ್ಲಾ ಪ್ರಾದೇಶಿಕ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಜಂಟಿ ಪ್ರಯತ್ನವಾಗಿದೆಭೇಟಿಯ ನಂತರಒಟ್ಟಿಗೆ ವಿಷಯಗಳನ್ನು ಬದಲಾಯಿಸಬಹುದೆಂದು ಮೆಹಬೂಬಾ ಮುಫ್ತಿ ಅವರು ಹಾರೈಸಿದ್ದಾರೆ.

"ನಿಮ್ಮ ಮತ್ತು ಫಾರೂಕ್ ಸಹಾಬ್ ಮನೆಗೆ ಬಂದಿರುವುದು ಸಂತೋಷವಾಗಿದೆಇದು ಅವರ ಮಾತನ್ನು ಕೇಳುವ ಧೈರ್ಯವನ್ನು ನೀಡಿತುನಾವೆಲ್ಲರೂ ವಿಷಯಗಳನ್ನು ಚೆನ್ನಾಗಿ ಬದಲಾಯಿಸಬಹುದು ಎಂದು ನನಗೆ ಖಾತ್ರಿಯಿದೆ’ ಎಂದು ಒಮರ್ ಅಬ್ದುಲ್ಲಾ ಅವರಿಗೆ ಮುಫ್ತಿ ಹೇಳಿದರು.

ಈಗಾಗಲೇಬಿಡುಗಡೆಯಾದ ಒಂದು ಗಂಟೆಯಲ್ಲೇ ಮುಫ್ತಿ ಅವರು ದೆಹಲಿಗೆ ಕಠಿಣ ಸಂದೇಶ ಕಳುಹಿಸಿದ್ದಾರೆಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಜನರು ನಿರಂತರವಾಗಿ ಹೋರಾಡಬೇಕಾಗುತ್ತದೆ ಮತ್ತು ಆಗಸ್ಟ್  ರಂದು ದೆಹಲಿಯಿಂದ ಕಸಿದುಕೊಂಡಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಫ್ತಿ ಹೇಳಿದರು.

ನಾನು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಇಂದು ಮುಕ್ತಳಾಗಿದ್ದೇನೆ ಸಮಯದಲ್ಲಿ ಕಪ್ಪು ದಿನವಾದ ೨೦೧೯ರ ಆಗಸ್ಟ್ ೫ರ Pರಾಳ ನಿರ್ಧಾರವು ನನ್ನ ಹೃದಯ ಮತ್ತು ಆತ್ಮವನ್ನು ನೋಯಿಸುತ್ತದೆಜಮ್ಮು ಮತ್ತು ಕಾಶ್ಮೀರದ ಜನರಿಗೆ ಅದೇ ಭಾವನೆ ಇರುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆನಮ್ಮಲ್ಲಿ ಯಾರೊಬ್ಬರೂ ಹಗಲು ದರೋಡೆ ಮತ್ತು ಅವಮಾನವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಅವರು .೨೩ ನಿಮಿಷಗಳ ಆಡಿಯೊದಲ್ಲಿ ಹೇಳಿದರು.

ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ದೆಹಲಿ ದರ್ಬಾರ್ ನಮ್ಮಿಂದ ಕಸಿದುಕೊಂಡದ್ದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಈಗ ನಾವೆಲ್ಲರೂ ಪುನರುಚ್ಚರಿಸಬೇಕಾಗಿದೆ’ ಎಂದು ಅವರು ಹೇಳಿದರು.

೨೦೧೯ರ ಆಗಸ್ಟ್ ೪ರಂದು ಕೇಂದ್ರ ಸರ್ಕಾರವು ೩೭೦ ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮತ್ತು ಎಲ್ಲ ರಾಜಕೀಯ ನಾಯಕರನ್ನು ಬಂಧಿಸುವ ಒಂದು ದಿನ ಮೊದಲುಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕಾರಣಿಗಳ ಗುಂಪು ಶ್ರೀನಗರದ ಗುಪ್ಕರ್ನಲ್ಲಿ ಭೇಟಿಯಾಗಿ ಜಂಟಿ ಹೇಳಿಕೆ ನೀಡಿತ್ತು.

"ಜಮ್ಮು ಮತ್ತು ಕಾಶ್ಮೀರದ ಗುರುತುಸ್ವಾಯತ್ತತೆ ಮತ್ತು ವಿಶೇಷ ಸ್ಥಾನಮಾನವನ್ನು ಎಲ್ಲಾ ದಾಳಿಗಳು ಮತ್ತು ಆಕ್ರಮಣಗಳ ವಿರುದ್ಧ ರಕ್ಷಿಸಲು ಪ್ರತಿಜ್ಞೆ ಮಾಡುತ್ತೇವೆ’ ಎಂಬುದಾಗಿ ಘೋಷಿಸಿದ  ಹೇಳಿಕೆಯನ್ನು ಗುಪ್ಕರ್ ಘೋಷಣೆ ಎಂದು ಕರೆಯಲಾಗುತ್ತದೆ.

೨೦೨೦ ಆಗಸ್ಟ್ ೨೨ರಂದುಬೆಳವಣಿಗೆಯ ಒಂದು ವರ್ಷದ ಬಳಿಕ ಹಿಂದಿನ ರಾಜ್ಯದ ಆರು ರಾಜಕೀಯ ಪಕ್ಷಗಳು ಮತ್ತೆ ಹೇಳಿಕೆ ನೀಡಿ ಗುಪ್ಕರ್ ಘೋಷಣೆಯನ್ನು ಮುಂದಕ್ಕೆ ಒಯ್ಯುವುದಾಗಿ ಘೋಷಿಸಿದ್ದವು.

೩೭೦ ನೇ ವಿಧಿಯನ್ನು ಹಿಂತೆಗೆದುಕೊಂಡ ನಂತರ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಮುಖ್ಯವಾಹಿನಿಯ ಪಕ್ಷಗಳು ಸಹಿ ಮಾಡಿದ ಮೊದಲ ಜಂಟಿ ಹೇಳಿಕೆ ಇದಾಗಿದೆ.

ಇದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಪುನಃಸ್ಥಾಪನೆಗೆ ಜಂಟಿ ಹೋರಾಟವನ್ನು ಪ್ರಾರಂಭಿಸುವ ಸುಳಿವು ನೀಡಿತು.

"ನಾವೆಲ್ಲರೂ ಗುಪ್ಕರ್ ಘೋಷಣೆಯ ವಿಷಯಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಮತ್ತು ಅದನ್ನು ಅಚಲವಾಗಿ ಅನುಸರಿಸುತ್ತೇವೆ ಎಂದು ಪುನರುಚ್ಚರಿಸುತ್ತೇವೆವಿಧಿ ೩೭೦ ಮತ್ತು ೩೫ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ರಾಜ್ಯದ ಪುನಃಸ್ಥಾಪನೆಗಾಗಿ ಶ್ರಮಿಸಲು ನಾವು ಬದ್ಧರಾಗಿದ್ದೇವೆ ಮತ್ತು ರಾಜ್ಯದ ಯಾವುದೇ ವಿಭಜನೆಯು ನಮಗೆ ಸ್ವೀಕಾರಾರ್ಹವಲ್ಲ ಎಂದು ನಾವು ಸರ್ವಾನುಮತದಿಂದ ಪುನರುಚ್ಚರಿಸುತ್ತೇವೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರವು  ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಗೊಳಿಸುವ ಕೆಲವೇ ಗಂಟೆಗಳ ಮೊದಲು ಕಾಶ್ಮೀರದ ಎಲ್ಲ ಮುಖ್ಯವಾಹಿನಿಯ ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು.

ವಿಶೇಷ ಸ್ಥಾನಮಾನದ ರದ್ದಿನ ಜೊತೆಗೆ ಕೇಂದ್ರವು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ (ಶಾಸಕಾಂಗ ಸಹಿತಮತ್ತು ಲಡಾಖ್ (ಶಾಸಕಾಂಗ ರಹಿತಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತುಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲ ಮತ್ತು ಅವರ ಪುತ್ರ ಒಮರ್ ಅಬ್ದುಲ್ಲ ಅವರನ್ನು ಕ್ರಮವಾಗಿ ಮಾರ್ಚ್ ೧೩ ಮತ್ತು ಮಾರ್ಚ್ ೨೪ ರಂದು ಬಿಡುಗಡೆ ಮಾಡಲಾಗಿತ್ತು.

No comments:

Advertisement