My Blog List

Saturday, November 14, 2020

‘ಆತ್ಮ ನಿರ್ಭರ’ ಅರ್ಜುನ್ ಟ್ಯಾಂಕ್ ಮೇಲೆ ಪ್ರಧಾನಿ ಸವಾರಿ

 ‘ಆತ್ಮ ನಿರ್ಭರ’ ಅರ್ಜುನ್  ಟ್ಯಾಂಕ್ ಮೇಲೆ ಪ್ರಧಾನಿ ಸವಾರಿ

ನವದೆಹಲಿ: ಪಶ್ಚಿಮ ಗಡಿಯಲ್ಲಿರುವ ಆಯಕಟ್ಟಿನ ಲೋಂಗೆವಾಲಾ ನೆಲೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ 2020 ನವೆಂಬರ್ 14ರ ಶನಿವಾರ ಅರ್ಜುನ್ ಟ್ಯಾಂಕ್ ಸವಾರಿ ಮಾಡುವ ಮೂಲಕ ಪಾಕಿಸ್ತಾನ ಮತ್ತು ಚೀನಾಕ್ಕೆ ಸಂದೇಶ ರವಾನಿಸಿದರು.

ಅರ್ಜುನ್ ಟ್ಯಾಂಕ್ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಭಾರತ ಸೇನೆಯ ಚೊಚ್ಚಲ ಸಮರ ಟ್ಯಾಂಕ್ ಆಗಿದ್ದು, ಅದರ ಮೇಲೆ ಪ್ರಧಾನಿ ಸವಾರಿಯು ಸ್ಥಳೀಯರಿಗೆ ಮತ್ತು ವಿದೇಶಗಳಿಗೆ ಪ್ರಧಾನಿಯ ಸ್ಪಷ್ಟ ಸಂದೇಶವಾಗಿದೆ.

ಭಾರತೀಯ ಸೇನೆಯು ಅರ್ಜುನ್ ಎಂಕೆ (ಮಾರ್ಕ್ ಆಲ್ಫಾ) ಎರಡು ರೆಜಿಮೆಂಟ್‌ಗಳನ್ನು ರಚಿಸಲಿದ್ದು, ಇದು ಮಾರ್ಕ್ ಟ್ಯಾಂಕ್‌ಗೆ ಹೋಲಿಸಿದರೆ ೭೨ ಸುಧಾರಣೆಗಳನ್ನು ಹೊಂದಿದೆ. ಪೈಕಿ ೧೪ ಪ್ರಮುಖ ಸುಧಾರಣೆಗಳಾಗಿದ್ದರೆ, ೫೮ ಸಣ್ಣ ಸುಧಾರಣೆಗಳಾಗಿವೆ.

ಮುಂದಿನ ಆರು ತಿಂಗಳಲ್ಲಿ ಹೊಸ ರೆಜಿಮೆಂಟ್‌ಗಳನ್ನು ಸೇರಿಸಲಾಗುವುದು. "೧೧೮ ಅರ್ಜುನ್ ಎಂಬಿಟಿ ಎಂಕೆ ಖರೀದಿಗೆ ಅಗತ್ಯತೆಯ ಸ್ವೀಕಾರವು ಪ್ರಗತಿಯಲ್ಲಿದೆ. ನಾವು ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಇಂಡೆಂಟ್ ನಿರೀಕ್ಷಿಸುತ್ತಿದ್ದೇವೆಎಂದು ಹಿರಿಯ ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದರು. ಎರಡು ರೆಜಿಮೆಂಟ್‌ಗಳಲ್ಲಿ ತಲಾ ೫೯ ಟ್ಯಾಂಕ್‌ಗಳಿವೆ.

ವಿಹಂಗಮ ದೃಷ್ಟಿ ಥರ್ಮಲ್ ಇಮೇಜಿಂಗ್ ವೈಶಿಷ್ಟ್ಯದೊಂದಿಗೆ, ಟ್ಯಾಂಕ್‌ನ ಕಮಾಂಡರ್ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ಹೆಲಿಕಾಪ್ಟರ್‌ಗಳಂತಹ ಕೆಳಗಿನಿಂದ ಹಾರುವ ವಸ್ತುಗಳನ್ನು ತಡೆಯಲು ಇದು ರಿಮೋಟ್ ಕಂಟ್ರೋಲ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸಹ ಹೊಂದಿದೆ. ಇದುಅಗೆಯುವ ನೇಗಿಲು ವೈಶಿಷ್ಟ್ಯವನ್ನು ಸಹ ಹೊಂದಿದೆ, ಅದು ಒಂದು ಅಡಿಗಳಷ್ಟು ಆಳವನ್ನು ಹೊಂದಿರುತ್ತದೆ. ಇದು ಥರ್ಮೋಬಾರಿಕ್ ಮದ್ದುಗುಂಡು ಮತ್ತು ನುಗ್ಗುವ-ಹಾಗೂ ಸಿಡಿಯುವ ಮದ್ದುಗುಂಡುಗಳನ್ನು ಹಾರಿಸಬಹುದು.

ಅರ್ಜುನ್ ೨೦೦೪ ರಲ್ಲಿ ಭಾರತ ಸೇನಾ ಸೇವೆಗಳಿಗೆ ಪ್ರವೇಶಿಸಿದೆ. ಸೇನೆಯು ಇಲ್ಲಿಯವರೆಗೆ ೧೨೪ ಅರ್ಜುನ್ ಟ್ಯಾಂಕ್‌ಗಳನ್ನು ದಾಸ್ತಾನು ಮಾಡಿದೆ. ಇವುಗಳನ್ನು ಪಾಕಿಸ್ತಾನದ ಗಡಿಯಲ್ಲಿ ಜೈಸಲ್ಮೇರ್‌ನಲ್ಲಿ ನಿಯೋಜಿಸಲಾಗಿದೆ.

ಸ್ಥಳೀಯರಿಗೆ ಒತ್ತು ನೀತಿ ಅಳವಡಿಸಿಕೊಳ್ಳುವಲ್ಲಿ ಭಾರತದ ರಕ್ಷಣಾ ಇಲಾಖೆಯು ಮುಂಚೂಣಿಯಲ್ಲಿದೆ. ಸಚಿವಾಲಯವು ಇತ್ತೀಚೆಗೆ ೧೦೧ ರಕ್ಷಣಾ ವಸ್ತುಗಳ ಪಟ್ಟಿಯನ್ನು ಹೊರತಂದಿದ್ದು, ಅವುಗಳ ಆಮದು ಮಾಡುವುದನ್ನು ನಿಷೇಧಿಸಲಾಗಿದೆ.

ಭಾರತೀಯ ಸೇನೆಯು ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಮುಖಾಮುಖಿಯಾಗಿರುವ ಮಹತ್ವದ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಪ್ರಧಾನಿ ಮೋದಿ ಅವರ ಸಂದೇಶವು ಬಂದಿದೆ. ಪಾಕಿಸ್ತಾನ ನಡೆಸಿದ ಆಕ್ರಮಣದಲ್ಲಿ ಶುಕ್ರವಾರ ಐವರು ಯೋಧರು ಹುತಾತ್ಮರಾಗಿದ್ದರು.

ಇಂದು, ದೇಶದ ಸೈನ್ಯವು ಇತರ ದೊಡ್ಡ ದೇಶಗಳೊಂದಿಗೆ ಮಿಲಿಟರಿ ಕವಾಯತಿನಲ್ಲಿ ತೊಡಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕಾರ್ಯತಂತ್ರದ ಸಹಭಾಗಿತ್ವದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಪ್ರಧಾನಿ ಇದಕ್ಕೆ ಮುನ್ನ ಜೈಸಲ್ಮೇರ್‌ನಲ್ಲಿ ಹೇಳಿದ್ದರು.

ಇಂದು ಇಡೀ ಜಗತ್ತು ವಿಸ್ತರಣಾವಾದಿ ಶಕ್ತಿಗಳಿಂದ ತೊಂದರೆಗೀಡಾಗಿದೆ. ವಿಸ್ತರಣೆಯು ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥತೆಯಾಗಿದೆ ಮತ್ತು ೧೮ ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಭಾರತವು ಚಿಂತನೆಯ ವಿರುದ್ಧ ಬಲವಾದ ಧ್ವನಿಯಾಗುತ್ತಿz’ ಎಂದು ಪ್ರಧಾನಿ ಮೋದಿ ಚೀನಾವನ್ನು ಉಲ್ಲೇಖಿಸದೆಯೇ ಟೀಕಿಸಿದ್ದರು.

No comments:

Advertisement