My Blog List

Saturday, December 19, 2020

ಭಾರತ ದುರ್ಬಲವಲ್ಲ, ಯಾವುದೇ ಆಕ್ರಮಣ ಸಹಿಸದು: ರಾಜನಾಥ್ ಸಿಂಗ್

 ಭಾರತ ದುರ್ಬಲವಲ್ಲ, ಯಾವುದೇ ಆಕ್ರಮಣ ಸಹಿಸದುರಾಜನಾಥ್ ಸಿಂಗ್

ಹೈದರಾಬಾದ್: ಭಾರತವು ಈಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ, ಯಾವುದೇ ರೀತಿಯ ಆಕ್ರಮಣವನ್ನು ನಡೆಸುವ ಶತ್ರುಗಳಿಗೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 2020 ಡಿಸೆಂಬರ್ 19ರ ಶನಿವಾರ ಹೇಳಿದರು.

"ಇದು ಹೊಸ ಭಾರತವಾಗಿದ್ದು, ಯಾವುದೇ ಆಕ್ರಮಣವನ್ನು ಸಹಿಸುವುದಿಲ್ಲ, ಆದರೂ ಯಾವುದೇ ಸಮಸ್ಯೆಯನ್ನು ಸಂಘರ್ಷದ ಬದಲು ಸಂವಾದದ ಮೂಲಕ ಪರಿಹರಿಸುವುದು ನಮ್ಮ ಉದ್ದೇಶ ಎಂದು ರಾಜನಾಥ್ ಸಿಂಗ್ ಹೇಳಿದರು.

ಹೈದರಾಬಾದಿನ ಹೊರವಲಯದಲ್ಲಿರುವ ದುಂಡಿಗಲ್ ವಾಯುಪಡೆಯ ನಿಲ್ದಾಣದಲ್ಲಿ ನಡೆದ ಸಂಯೋಜಿತ ಪದವಿ ಪ್ರದಾನ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ತರಬೇತಿಯಲ್ಲಿ ಹೊಸದಾಗಿ ಪದವಿ ಪಡೆದ ಕೆಡೆಟ್ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರೋನವೈರಸ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ಚೀನಾ ಇತ್ತೀಚೆಗೆ ನಡೆಸಿದ ಆಕ್ರಮಣವನ್ನು ರಕ್ಷಣಾ ಸಚಿವರು ನೆನಪಿಸಿಕೊಂಡರು.

"ದೇಶವು ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾಗ, ಚೀನಾ ತನ್ನ ಕೊಳಕು ಉದ್ದೇಶಗಳನ್ನು ಗಡಿಯಲ್ಲಿ ಪ್ರದರ್ಶಿಸಿತು. ಆದರೆ ಭಾರತವು ದುರ್ಬಲ ರಾಷ್ಟ್ರವಲ್ಲ ಎಂದು ನಾವು ಅವರಿಗೆ ಸಾಬೀತುಪಡಿಸಿದ್ದೇವೆ ಮತ್ತು ಅವರಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದೇವೆ ಎಂದು ಸಿಂಗ್ ಹೇಳಿದರು.

ಚೀನಾದೊಂದಿಗಿನ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ತಾಳಿದ ನಿಲುವಿನ ಬಗ್ಗೆ ವಿವಿಧ ದೇಶಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ನೆನಪಿಸಿದರು.

ಭಾರತ ಯಾವಾಗಲೂ ಸಂವಾದ ಮತ್ತು ಶಾಂತಿಯನ್ನು ನಂಬುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು. "ಈಗಿನಂತೆ, ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ಮತ್ತು ರಾಜತಾಂತ್ರಿಕ ಮಾತುಕತೆಗಳ ಮಧ್ಯೆ ಇವೆ. ನಾನು ಮತ್ತೆ ಪುರುಚ್ಚರಿಸುತ್ತಿದ್ದೇನೆ, ನಮಗೆ ಸಂಘರ್ಷ ಬೇಡ, ಬೇಕಾದ್ದು ಶಾಂತಿ ಮಾತ್ರ. ಆದರೆ ರಾಷ್ಟ್ರದ ಸಾರ್ವಭೌಮತ್ವಕ್ಕೆ ಏನಾದರೂ ಹಾನಿ ಉಂಟಾದರೆ ನಾವು ಸಹಿಸುವುದಿಲ್ಲ. ಅಂತಹ ಸಂದರ್ಭದಲ್ಲಿ, ಬಲವಾದ ಉತ್ತರವನ್ನು ನೀಡಲು ನಾವು ಸಜ್ಜುಗೊಂಡಿದ್ದೇವೆ ಎಂದು ಸಿಂಗ್ ಹೇಳಿದರು.

ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಅವರು, ಭಾರತದೊಂದಿಗೆ ನಾಲ್ಕು ಯುದ್ಧಗಳಲ್ಲಿ ಸೋತಿದ್ದರೂ, ನೆರೆಯ ದೇಶ ಪಾಠ ಕಲಿತಿಲ್ಲ. ಇದು ಇನ್ನೂ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ಭಾರತದೊಂದಿಗೆ ಪರೋಕ್ಷ (ಪ್ರಾಕ್ಸಿ) ಯುದ್ಧಗಳನ್ನು ನಡೆಸುತ್ತಿದೆ ಎಂದು ಆಪಾದಿಸಿದರು.

ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದನೆ ವಿರುದ್ಧ ಪಟ್ಟುಹಿಡಿದು ಹೋರಾಟ ನಡೆಸುತ್ತಿವೆ ಎಂದು ಹೇಳಿದ ಸಿಂಗ್, ನೆಲ, ಗಾಳಿ ಮತ್ತು ನೀರಿನ ಮೇಲೆ ಎಲ್ಲಾದರೂ ಸರಿ, ಯಾವುದೇ ರೀತಿಯ ಯುದ್ಧವನ್ನು ಮಾಡಲು ಸಿದ್ಧರಾಗಿರಬೇಕು,.ಸೈಬರ್ ಯುದ್ಧದ ರೂಪದಲ್ಲಿ ಮತ್ತೊಂದು ಬೆದರಿಕೆ ಇದೆ. ಅದನ್ನು ಎದುರಿಸಲು ನಾವು ಸಿದ್ಧರಾಗಿರಬೇಕು ಎಂದು ಹೇಳಿದರು.

ಕೇಂದ್ರ ಸಚಿವರು ಭಾರತೀಯ ವಾಯುಪಡೆಯ ಸೇವೆಗಳನ್ನು ಶ್ಲಾಘಿಸಿದರು, ಇದು ಶತ್ರುಗಳ ವಿರುದ್ಧ ಹೋರಾಡುವಲ್ಲಿ ಮತ್ತು ದೇಶದ ಸಮಗ್ರತೆಯನ್ನು ಕಾಪಾಡುವಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ರಫೇಲ್ ಸಮರ ವಿಮಾನದ ಆಗಮನವು ಭಾರತೀಯ ವಾಯುಪಡೆಯ ಬಲವನ್ನು ವೃದ್ಧಿ ಪಡಿಸಿದೆ ಮತ್ತು ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ಪಾಸಿಂಗ್ ಔಟ್ ಪೆರೇಡನ್ನು ಪರಿಶೀಲಿಸಿದ ನಂತರ, ರಕ್ಷಣಾ ಸಚಿವರು ಪದವೀಧರ ತರಬೇತಿ ಪಡೆದವರಿಗೆಪ್ರೆಸಿಡೆಂಟ್ ಕಮಿಷನ್ ಪ್ರದಾನ ಮಾಡಿದರು. ಸಮಾರಂಭದಲ್ಲಿ ಫ್ಲೈಟ್ ಕೆಡೆಟ್ಗಳಿಗೆವಿಂಗ್ಸ್ ಮತ್ತುಬ್ರೆವೆಟ್ಸ್ ಪ್ರಸ್ತುತಿ ಮಾಡಲಾಯಿತು.

ಅರ್ಹತೆಯಲ್ಲಿ ಮೊದಲ ಸ್ಥಾನ ಪಡೆದ ಫ್ಲೈಯಿಂಗ್ ಆಫೀಸರ್ ಆಯಿಶ್ ಖತೇರಿ ಅವರಿಗೆ, ರಕ್ಷಣಾ ಸಚಿವರು ಒಟ್ಟಾರೆ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿವಾಯು ಸಿಬ್ಬಂದಿ ಗೌರವ ಖಡ್ಗವನ್ನು (ಏರ್ ಸ್ಟಾಫ್ ಸ್ವೋರ್ಡ್ ಆಫ್ ಆನರ್) ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ಯು -೩೦ ವಿಮಾನ, ಪ್ರಸಿದ್ಧ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ, ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡ, ಪಿಲಾಟಸ್ ಪಿಸಿ - ತರಬೇತುದಾರ ಮತ್ತು ಪಿಸಿ -, ಕಿರಣ್ ಮತ್ತು ಹಾಕ್ ವಿಮಾನಗಳ ರಚನೆಗಳ ಮೂಲಕ ಫ್ಲೈಪಾಸ್ಟ್ ಸಹ ಏರೋಬ್ಯಾಟಿಕ್ ಪ್ರದರ್ಶನ ಕೂಡಾ ಇತ್ತು.

ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Advertisement