My Blog List

Saturday, July 19, 2008

ಇಂದಿನ ಇತಿಹಾಸ History Today ಜುಲೈ 19

ಇಂದಿನ ಇತಿಹಾಸ

19 ಜುಲೈ

ಮುಂಬೈ ಉಪನಗರದ ಬೋರಿವಿಲಿಯ ಬಬಾಯಿ ನಾಕಾ ಪ್ರದೇಶದಲ್ಲಿ ಕುಸಿದು ಬಿದ್ದ ಏಳು ಮಹಡಿಗಳ `ಲಕ್ಷ್ಮಿ ಛಾಯಾ' ಕಟ್ಟಡದ ಅವಶೇಷದಿಂದ ಹೊರತರಲಾದ ವ್ಯಕ್ತಿಯೊಬ್ಬ ಮುಂಬೈಯ ಭಗವತಿ ಆಸ್ಪತ್ರೆಯಲ್ಲಿ ಮೃತನಾದ.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಮತ್ತೆ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮೊನ್ ನ ಆಪ್ತರಾದ ಅಸ್ಗರ್ ಮುಕದಮ್, ಷಾನವಾಜ್ ಖುರೇಶಿ ಮತ್ತು ಮೊಹಮದ್ ಶೋಯಿಬ್ ಘನ್ಸಾರ್ ಗೆ ಟಾಡಾ ನ್ಯಾಯಾಧೀಶರು ಗಲ್ಲು ಶಿಕ್ಷೆ ಮತ್ತು ತಲಾ ರೂ. 4ಲಕ್ಷ ದಂಡ ವಿಧಿಸಿದರು. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಗೆ ಮರಣದಂಡನೆ ವಿಧಿಸಿದಂತಾಯಿತು. 1992ರಿಂದ ಮೆಮೊನ್ ನ ನೌಕರನಾಗಿದ್ದ ಮುಕದಮ್, ಕಳೆದ ಸೆಪ್ಟೆಂಬರ್ 18ರಂದು ಅಪರಾಧಿ ಎಂದು ತೀರ್ಮಾನವಾಗಿತ್ತು. ಬಾಂಬ್ ಸ್ಫೋಟದ ಸಂಚು ರೂಪಿಸುವಲ್ಲಿಂದ ಹಿಡಿದು ಕಾರ್ಯಾಚರಣೆ ಪೂರ್ತಿಗೊಳ್ಳುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಕದಮ್, ದಾದರಿನ ಪ್ಲಾಜಾ ಚಿತ್ರ ಮಂದಿರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆರ್ ಡಿಎಕ್ಸ್ ಇರಿಸಿದ್ದ. ಈ ಸ್ಫೋಟದಲ್ಲಿ ಹತ್ತು ಮಂದಿ ಸತ್ತು 36 ಮಂದಿ ಗಾಯಗೊಂಡಿದ್ದರು. ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಶಿಕ್ಷೆಗೆ ಒಳಗಾಗಿರುವ ಮೂವರನ್ನು ಮುಕದಮ್ ಹೋಟೆಲುಗಳಿಗೆ ತಲುಪಿಸಿದ್ದ. ಹೋಟೆಲುಗಳಲ್ಲಿ ಸ್ಫೋಟ ಸಂಭವಿಸಿತ್ತು.

2007: ಮುಂಬೈ ಉಪನಗರದ ಬೋರಿವಿಲಿಯ ಬಬಾಯಿ ನಾಕಾ ಪ್ರದೇಶದಲ್ಲಿ ಕುಸಿದು ಬಿದ್ದ ಏಳು ಮಹಡಿಗಳ `ಲಕ್ಷ್ಮಿ ಛಾಯಾ' ಕಟ್ಟಡದ ಅವಶೇಷದಿಂದ ಹೊರತರಲಾದ ವ್ಯಕ್ತಿಯೊಬ್ಬ ಮುಂಬೈಯ ಭಗವತಿ ಆಸ್ಪತ್ರೆಯಲ್ಲಿ ಮೃತನಾದ. ಇದರಿಂದಾಗಿ ಈ ದುರಂತದಲ್ಲಿ ಮಡಿದವರ ಸಂಖ್ಯೆ 26ಕ್ಕೇರಿತು.

2007: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮ ಸಭೆಗಳ ಬದಲಿಗೆ ವಿಧಾನಸಭಾ ಸದಸ್ಯರ ನೇತೃತ್ವದ ಸಮಿತಿಗೆ ನೀಡುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ- 2007ನ್ನು ರಾಜ್ಯಪಾಲ ಟಿ.ಎನ್. ಚತುರ್ವೇದಿ ವಾಪಸು ಕಳುಹಿಸಿದರು.

2007: ಪಾಕಿಸ್ತಾನದ ಎರಡು ಕಡೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 38 ಮಂದಿ ಮೃತರಾದರು. ದಕ್ಷಿಣ ಪಾಕಿಸ್ತಾನದ ಹಬ್ ಎಂಬಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಪೊಲೀಸರು ಸೇರಿ 30 ಮಂದಿ ಮೃತರಾದರು. ವಾಯವ್ಯ ಭಾಗದ ಹಂಗು ಎಂಬಲ್ಲಿ ಆತ್ಮಹತ್ಯಾ ಪಡೆಯ ಸದಸ್ಯನೊಬ್ಬ ಪೊಲೀಸ್ ತರಬೇತಿ ಕೇಂದ್ರದ ಒಳಗೆ ಕಾರು ನುಗ್ಗಿಸಿ ಬಾಂಬ್ ಸ್ಫೋಟಿಸಿದ್ದರಿಂದ 8 ಮಂದಿ ಮೃತರಾದರು.

2007: ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಹೈದರಾಬಾದ್ ಮೂಲದ ಶಂಕರಶಾಸ್ತ್ರಿ ನೇಮಕಗೊಂಡರು. ಹೈದರಾಬಾದಿನಲ್ಲಿ ಜನಿಸಿದ ಶಾಸ್ತ್ರಿ ತಮ್ಮ ವಿದ್ಯಾಬ್ಯಾಸವನ್ನು ಪುಣೆಯಲ್ಲಿ ಮುಗಿಸಿ ವಿದೇಶದಲ್ಲಿನ ವಿವಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಜಾರ್ಖಂಡಿನ ಗುಡ್ಡಗಾಡು ಮಹಿಳೆ ಲಕ್ಷ್ಮಿ ಲಕ್ರಾ (27) ಉತ್ತರ ರೈಲ್ವೆಯಲ್ಲಿ ಮೊತ್ತ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದಳು. ಮೂಲತಃ ಮುಂಬೈಯವಳಾದ ಲಕ್ಷ್ಮಿ 1992ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದು, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಮಾರ್ಗದಲ್ಲಿ ಮುನ್ನಡೆದರು.

2006: ತಿರುಮಲ ತಿರುಪತಿ ದೇವಸ್ಥಾನವು ತನ್ನ ಎಲ್ಲ 10,000 ಮಂದಿ ನೌಕರರಿಗೂ ಹಣೆಯಲ್ಲಿ `ತಿಲಕ' ಧರಿಸುವುದನ್ನು ಕಡ್ಡಾಯಗೊಳಿಸಿ ನಿರ್ದೇಶನ ನೀಡಿತು.

2006: ಒರಿಸ್ಸಾದ ಪುರಿ ಮತ್ತು ಕೊನಾರ್ಕ್ ನಡುವೆ ಭಾರತದ ಮೊದಲ ವೇದಾಂತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಅಗರ್ ವಾಲ್ ಪ್ರತಿಷ್ಠಾನ ಮತ್ತು ಒರಿಸ್ಸಾ ಸರ್ಕಾರ ಭುವನೇಶ್ವರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. 8000 ಎಕರೆ ವಿಸ್ತೀರ್ಣದಲ್ಲಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ವಿಶ್ವವಿದ್ಯಾಲಯ ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಿದೆ.

2006: ಸರ್ಕಾರಿ ಸೇವಯಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮೀಸಲು ಸೌಲಭ್ಯಕ್ಕೆ ಸಂಬಂಧಿಸಿದಂತೆ `ಕೆನೆಪದರ' ಪಟ್ಟಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಈ ಪಟ್ಟಿಯಲ್ಲಿ ಇರುವವರ ಮಕ್ಕಳು ಮೀಸಲು ಸೌಲಭ್ಯಕ್ಕೆ ಅರ್ಹರಲ್ಲ ಎಂದು ಪ್ರಕಟಿಸಿತು.

1993: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನ.

1969: ದೇಶದ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿತು.

1965: ಜ್ಯೋತಿ ಗುರುಪ್ರಸಾದ್ ಜನನ.

1954: ಕೆ.ಎಂ. ವಿಜಯಲಕ್ಷ್ಮಿ ಜನನ.

1945: ರೂಪ ಕುಲಕರ್ಣಿ ಜನನ.

1938: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಯಂತ ವಿಷ್ಣು ನಾರಳೀಕರ್ ಜನನ.

1920: ಕಾದಂಬರಿಕಾರ, ಕಥೆ, ನಾಟಕಕಾರ ತ್ರಿವಿಕ್ರಮ (19-7-1920ರಿಂದ 9-1-1998) ಅವರು ಕೆ.ಎಸ್. ಕೃಷ್ಣಮೂರ್ತಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

No comments:

Advertisement