ಗ್ರಾಹಕರ ಸುಖ-ದುಃಖ

My Blog List

Sunday, July 27, 2008

ಇಂದಿನ ಇತಿಹಾಸ History Today ಜುಲೈ 27

ಇಂದಿನ ಇತಿಹಾಸ

ಜುಲೈ 27

ಕ್ರೊಯೇಷಿಯಾದ ಜಾಗ್ರೆಬ್ ನಲ್ಲಿ ನಡೆದ 49ನೇ ಐ ಎಸ್ ಎಸ್ ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ಹಿರಿಯ ಜಾನಪದ ವಿದ್ವಾಂಸ ಮತಿಘಟ್ಟ ಕೃಷ್ಣಮೂರ್ತಿ (94) ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಮತಿಘಟ್ಟ ಮೂಲದ ಕೃಷ್ಣಮೂರ್ತಿ `ಕಳಸಾಪುರದ ಹುಡುಗರು', `ಗೃಹಿಣಿ ಗೀತ', `ಸಾಂಪ್ರದಾಯಿಕ ಗೀತೆಗಳು', `ಶಕುನದ ಹಕ್ಕಿ', `ಹೊನ್ನ ಹೊತ್ತಿಗೆ', `ಮರುಗಿ', `ನಾಡಪದಗಳು' `ನಮ್ಮ ಹಳ್ಳಿಯ ಹಾಡು' ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದರು. 50,000ಕ್ಕೂ ಹೆಚ್ಚು ಜನಪದ ಹಾಡು ಕಥೆಗಳನ್ನು ಸಂಗ್ರಹಿಸಿದ್ದಲ್ಲದೆ, ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೈಲಿಗೂ ಹೋಗಿದ್ದರು.

2006: ಭಾರತ- ಅಮೆರಿಕ ಪರಮಾಣು ಶಕ್ತಿ ಒಪ್ಪಂದವನ್ನು ಅಮೆರಿಕದ ಕಾಂಗ್ರೆಸ್ (ಪ್ರತಿನಿಧಿಗಳ ಸಭೆ) ಅನುಮೋದಿಸಿತು. 4 ಗಂಟೆಗಳ ಚರ್ಚೆಯ ಬಳಿಕ 435 ಸದಸ್ಯ ಬಲದ ಸದನವು 359 ಪರ ಮತ್ತು 68 ವಿರೋಧಿ ಮತಗಳಿಂದ ಒಪ್ಪಂದಕ್ಕೆ ಅನುಮೋದನೆ ನೀಡಿತು.

2006: ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೊಲೆ ಆರೋಪಿ, ಆಕೆಯ ಪ್ರಿಯಕರ ಗುರುರಾಜ ಕಿಶೋರನನ್ನು ಪೊಲೀಸರು ಬಂಧಿಸಿದರು. ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡಿದುದಾಗಿ ಆತ ಪೊಲೀಸರಲ್ಲಿ ತಪ್ಪು ಒಪ್ಪಿಕೊಂಡ.

2006: ಕ್ರೊಯೇಷಿಯಾದ ಜಾಗ್ರೆಬ್ ನಲ್ಲಿ ನಡೆದ 49ನೇ ಐ ಎಸ್ ಎಸ್ ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ರಾಷ್ಟ್ರದ ಸಮುದಾಯ ಸೇವೆಗೆ ತೊಡಗಿಸಿಕೊಂಡವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕೆನಡಾದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ `ಆರ್ಡರ್ ಆಫ್ ಕೆನಡಾ'ಕ್ಕೆ ಭಾರತದ ಅರ್ಥಶಾಸ್ತ್ರಜ್ಞ ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಲ್ ರಾಜನ್ ಮತ್ತು ಆರೋಗ್ಯ ಸೇವಾ ಕಾರ್ಯಕರ್ತೆ ಲಲಿತಾ ಮಲ್ಹೋತ್ರ ಆಯ್ಕೆಯಾದರು.

1992: ಖ್ಯಾತ ಲೇಖಕ, ವಕೀಲ, ಪತ್ರಕರ್ತ ರಾಮೇಶ್ವರ ಸಹಾಯ್ ಸಕ್ಸೇನಾ ಜನನ.

1992: ಖ್ಯಾತ ಹಿಂದಿ ಚಿತ್ರನಟ ಅಮ್ಜದ್ ಖಾನ್ ನಿಧನ.

1972: ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

1928: ಸಾಹಿತಿ ಶ್ರೀನಿವಾಸ ಕುಲಕರ್ಣಿ ಜನನ.

1910: ಸಾಹಿತಿ ಜೋಳದರಾಶಿ ದೊಡ್ಡನಗೌಡರ ಜನನ.

1910: ಖ್ಯಾತ ಗಾಯಕ ಬಂದೇ ಅಲಿಖಾನ್ ನಿಧನ.

1906: ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪಂಡಿತ, ನಿಘಂಟು ತಜ್ಞ, ಸಂಶೋಧಕ ಪ್ರೊ. ಮರಿಯಪ್ಪ ಭಟ್ಟ (27-7-1906ರಿಂದ 21-3-1980) ಅವರು ಗೋವಿಂದ ಭಟ್ಟ- ಕಾವೇರಿ ಅಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ಹವ್ಯಕ- ಇಂಗ್ಲಿಷ್ ನಿಘಂಟು, ತುಳು- ಇಂಗ್ಲಿಷ್ ನಿಘಂಟು, ರೆ.ಎಫ್. ಕಿಟೆಲ್ ಅವರ ಕನ್ನಡ- ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ ವಿಸ್ತಾರಗೊಳಿಸಿ, ರಚಿಸಿದ ನಿಘಂಟು ಮರಿಯಪ್ಪ ಭಟ್ಟರ ಮಹತ್ವದ ಕಾಣಿಕೆಗಳಲ್ಲಿ ಕೆಲವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement