My Blog List

Tuesday, July 7, 2009

ಇಂದಿನ ಇತಿಹಾಸ History Today ಜುಲೈ 06

ಇಂದಿನ ಇತಿಹಾಸ

ಜುಲೈ 06
ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2008: ಇಸ್ಲಾಮಾಬಾದಿನ ವಿವಾದಿತ ಲಾಲ್ ಮಸೀದಿ ಬಳಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 19 ಜನರು ಮೃತರಾದರು. ಪಾಕಿಸ್ಥಾನ ಸೇನೆ ಕಳೆದ ವರ್ಷ ಲಾಲ್ ಮಸೀದಿ ಮೇಲೆ ಆಕ್ರಮಣ ಮಾಡಿದ್ದನ್ನು ಖಂಡಿಸಿ ನಿಷೇಧಿತ ಉಗ್ರಗಾಮಿ ಸಂಘಟನೆಗಳು ಜನರಲ್ ಪರ್ವೇಜ್ ಮುಷರಫ್ ಅವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕೆಂದು ಪ್ರತಿಭಟನೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿತು.

2006: ಕನ್ನಡದ ಖ್ಯಾತ ಚಲನಚಿತ್ರ ನಟಿಯರಲ್ಲಿ ಒಬ್ಬರಾದ ಪ್ರೇಮಾ ಮತ್ತು ಎಂಜಿನಿಯರ್ ಜೀವನ್ ಅವರ ಮದುವೆ ಬೆಂಗಳೂರಿನ ವಸಂತನಗರದ ಕೊಡವ ಸಮಾಜ ಭವನದಲ್ಲಿ ನಡೆಯಿತು.

2006: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ (73) ಬೆಂಗಳೂರಿನ ಶಾಖಾಮಠದಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2006: ಬಿಎಂಐಸಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಕಟಿಸಿದರು.

1932: ಪದ್ಮಾಮೂರ್ತಿ ಜನನ.

1918: ಖ್ಯಾತ ಸಾಹಿತಿ ದೇ. ಜವರೇಗೌಡ ಅವರು ದೇವೇಗೌಡ-ಚೆನ್ನಮ್ಮ ದಂಪತಿಯ ಪುತ್ರನಾಗಿ ಚೆನ್ನಪಟ್ಟಣ ತಾಲ್ಲೂಕಿನ ಚೆಕ್ಕೆರೆ ಗ್ರಾಮದಲ್ಲಿ ಜನಿಸಿದರು. ಜನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಸಂಪಾದನೆ, ವಿಶ್ವಕೋಶ ಇತ್ಯಾದಿ ಎಲ್ಲ ಅಧ್ಯಯನ ಕ್ಷೇತ್ರಗಳನ್ನು ಒಂದೆಡೆಗೆ ತಂದ ಕೀರ್ತಿ ಜವರೇಗೌಡರದ್ದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

1 comment:

Shantharam said...

nimma blog chenngide
orkut nalli community madiddiri hige munduvariyalli

Advertisement