My Blog List

Saturday, November 16, 2019

೧೩ ದಿನದ ಮುಷ್ಕರ ನಿಲ್ಲಿಸಿದ ದೆಹಲಿ ವಕೀಲರು

೧೩ ದಿನದ ಮುಷ್ಕರ ನಿಲ್ಲಿಸಿದ ದೆಹಲಿ ವಕೀಲರು
ನವದೆಹಲಿ: ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ನವೆಂಬರ್೨ರಂದು ಪೊಲೀಸರ ಜೊತೆಗೆ ಸಂಭವಿಸಿದ ಘರ್ಷಣೆಯನ್ನು ಅನುಸರಿಸಿ ನಡೆಸುತ್ತಿದ್ದ  ತಮ್ಮ  ೧೩ ದಿನಗಳ ಮುಷ್ಕರವನ್ನು ದೆಹಲಿಯ ಜಿಲ್ಲಾ ನ್ಯಾಯಾಲಯಗಳ ವಕೀಲರು 2019 ನವೆಂಬರ್ 15ರ ಶುಕ್ರವಾರ ಹಿಂತೆಗೆದುಕೊಂಡರು.

ಮುಷ್ಕರ ಹಿಂತೆಗೆದುಕೊಂಡ ವಿಷಯವನ್ನು ದೆಹಲಿಯ ಎಲ್ಲ ಜಿಲ್ಲಾ ನ್ಯಾಯಾಲಯಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ  ಧೀರ್ ಸಿಂಗ್ ಕಸನಾ ಪ್ರಕಟಿಸಿದರು.

ಗೌರವಾನ್ವಿತ ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಮತ್ತು ಮುಷ್ಕರವನ್ನು  ಅಮಾನತುಗೊಳಿಸುತ್ತಿದ್ದೇವೆ. 2019 ನವೆಂಬರ್ 16ರ ಶನಿವಾರ ಎಲ್ಲ ನ್ಯಾಯಾಲಯಗಳಲ್ಲೂ ಕೆಲಸ ಪುನಾರಂಭಗೊಳ್ಳಲಿದೆ. ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ವಕೀಲರ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರೆಯುವುದು ಎಂದು ಧೀರ್ ಸಿಂಗ್ ಹೇಳಿದರು.

No comments:

Advertisement