My Blog List

Thursday, March 5, 2020

ಲೋಕಸಭೆಯಿಂದ ೭ ಕಾಂಗ್ರೆಸ್ ಸಂಸದರ ಅಮಾನತು

ಲೋಕಸಭೆಯಿಂದ   ಕಾಂಗ್ರೆಸ್ ಸಂಸದರ ಅಮಾನತು
ನವದೆಹಲಿ: ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಅವರ ಮೇಜಿನಿಂದ ಕಾಗದ ಪತ್ರಗಳನ್ನು ಕಿತ್ತುಕೊಂಡದ್ದಕ್ಕಾಗಿ ಮತ್ತು ಸದನದ ನಿಯಮಾವಳಿಗಿಗೆ ಅಗೌರವ ತೋರಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಮಂದಿ ಸಂಸತ್ ಸದಸ್ಯರನ್ನು ಸದನದಿಂದ ಮುಂಗಡಪತ್ರ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆಯು 2020 ಮಾರ್ಚ್ 05ರ ಗುರುವಾರ ಕೈಗೊಂಡಿತು.

ಅಮಾನತುಗೊಂಡಿರುವ ಸದಸ್ಯರು: ಗೌರವ್ ಗೊಗೋಯಿ, ಟಿ.ಎನ್. ಪ್ರತಾಪನ್, ಡೀನ್ ಕುರಿಯಾಕೋಸ್, ಮನಿಕಾ ಟ್ಯಾಗೋರ್, ರಾಜಮೋಹನ್ ಉನ್ನಿಥನ್, ಬೆನ್ನಿ ಬೆಹನನ್ ಮತ್ತು ಗುರುಜೀತ್ ಸಿಂಗ್ ಔಜ್ಲಿಯಾ.

ಪಕ್ಷದ ಸಂಸದರನ್ನು ಸದನ ಕಲಾಪದಿಂದ ಅಮಾನತುಗೊಳಿಸಿದ್ದು ಸೇಡಿನ ಕ್ರಮ ಎಂಬುದಾಗಿ ಕಾಂಗ್ರೆಸ್ ಪಕ್ಷವು ಬಳಿಕ ಟೀಕಿಸಿತು.

No comments:

Advertisement