My Blog List

Wednesday, May 20, 2020

ಕೊರೋನಾ ಕುತ್ತು: 1,400 ಓಲಾ ನೌಕರರು ಮನೆಗೆ

ಕೊರೋನಾ ಕುತ್ತು:  1,400 ಓಲಾ ನೌಕರರು ಮನೆಗೆ
ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಓಲಾ ಕ್ಯಾಬ್ ಸಂಗ್ರಾಹಕ ಸಂಸ್ಥೆಯ ಆದಾಯ ಶೇಕಡ ೯೫ರಷ್ಟು ಕುಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ತನ್ನ ,೪೦೦ ಮಂದಿ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ಸಿಇಒ ಭವೀಶ್ ಅಗರವಾಲ್  2020 ಮೇ 20ರ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದರು.

ನೌಕರರಿಗೆ ಕಳುಹಿಸಿರುವ ಮಿಂಚಂಚೆಯೊಂದರಲ್ಲಿ (-ಮೇಲ್) ವ್ಯವಹಾರದ ಭವಿಷ್ಯ  ಅಸ್ಪಷ್ಟ ಮತ್ತು ಅಸ್ಥಿರವಾಗಿದೆ. ಬಿಕ್ಕಟ್ಟಿನ ಪರಿಣಾಮ ನಮಗೆ ಸುದೀರ್ಘವಾದದ್ದಾಗಿರಲಿದೆ ಎಂದು ಅಗರವಾಲ್ ಹೇಳಿದರು.

ವೈರಸ್ ಬಿಕ್ಕಟ್ಟಿನ ಹೊಡೆತ ನಿರ್ದಿಷ್ಟವಾಗಿ ನಮ್ಮ ಉದ್ಯಮಕ್ಕೆ ಅತ್ಯಂತ ಬಲವಾದುದಾಗಿದೆ. ನಮ್ಮ ಆದಾಯದ ಶೇಕಡಾ ೯೫ ಪಾಲು ಕಳೆದ ತಿಂಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಬಿಕ್ಕಟ್ಟು ಭಾರತದಾದ್ಯಂತ ಮಾತ್ರವೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಲಕ್ಷಾಂತರ ಮಂದಿ ಚಾಲಕರು ಮತ್ತು ಅವರ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ನುಡಿದರು.

ಕಂಪೆನಿಯು ತನ್ನ ಸಿಬ್ಬಂದಿ ಸಂಖ್ಯೆಯನ್ನು ಕುಗ್ಗಿಸಲು ನಿರ್ಧರಿಸಿದೆ ಮತ್ತು ,೪೦೦ ಮಂದಿ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡುತ್ತಿದೆ ಎಂದು ಅಗರವಾಲ್ ಹೇಳಿದರು.

ಇದು ಏಕಗಂಟಿನ ಕಾರ್ಯಾಚರಣೆಯಾಗಿದ್ದು ವಾರದ ಕೊನೆಯ ಹೊತ್ತಿಗೆ ಪೂರ್ಣಗೊಳ್ಳಲಿದೆ. ಮುಂದಿನ ವಾರದ ಹೊತ್ತಿಗೆ ಓಲಾ ಫುಡ್ಸ್ ಮತ್ತು ಓಲಾ ಫೈನಾನ್ಷಿಯಲ್ ಸರ್ವೀಸಸ್ನಲ್ಲೂ ಇದೇ ಮಾದರಿಯ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ನುಡಿದರು.

ಕಸರತ್ತಿನ ಬಳಿಕ ಕೋವಿಡ್ ಸಂಬಂಧಿತ ಕಡಿತಗಳನ್ನು ಮಾಡಲಾಗುವುದಿಲ್ಲ ಎಂದು ಅಗರವಾಲ್ ಹೇಳಿದರು.

ಹೆಚ್ಚು ಹೆಚ್ಚು ಕಂಪೆನಿಗಳು ತಮ್ಮ ದೊಡ್ಡ ಸಂಖ್ಯೆಯ ನೌಕರರು ಮನೆಯಿಂದಲೇ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಿವೆ. ವಿಮಾನಯಾನವು ಅಗತ್ಯ ಪ್ರವಾಸಗಳಿಗೆ ಸೀಮಿತವಾಗಲಿದೆ ಮತ್ತು ರಜಾ ಕಾಲದ ಪ್ರವಾಸಗಳನ್ನು ಒಳ್ಳೆಯ ಕಾಲದ ನಿರೀಕ್ಷೆಯೊಂದಿಗೆ ಮುಂದೂಡಲಾಗುತ್ತಿದೆ ಎಂದು ಅವರು ನುಡಿದರು.

ಬಿಕ್ಕಟ್ಟಿನ ಪರಿಣಾಮ ಖಂಡಿತವಾಗಿ ನಮಗೆ ಸುದೀರ್ಘವಾದ್ದಾಗಲಿದೆ. ವಿಶ್ವವು ಕೋವಿಡ್-ಪೂರ್ವ ಯುಗಕ್ಕೆ ಸದ್ಯೋಭವಿಷ್ಯದಲ್ಲಂತೂ ಮರಳಲು ಸಾಧ್ಯವಿಲ್ಲ. ಸಾಮಾಜಿಕ ಅಂತರ, ಕಾತರ ಮತ್ತು ಮುಂಜಾಗರೂಕತೆಗಳು ಪ್ರತಿಯೊಬ್ಬನಿಗೂ ಕಾರ್ ನಿರ್ವಹಣಾ ತತ್ವಗಳಾಗಲಿವೆ ಎಂದು ಅವರು ಹೇಳಿದರು.

ಕಳೆದ ಕೆಲವು ವಾರಗಳಲ್ಲಿ ಉಬರ್, ಝೊಮಾಟೋ ಮತ್ತು ಸ್ವಿಗ್ಗಿಯಂತಹ ತಂತ್ರಜ್ಞಾನ ಆಧಾsರಿತ ಉದ್ಯಮಗಳು ಕೋವಿಡ್ -೧೯ ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ಬೇಡಿಕೆ ಕಳೆದುಕೊಂಡಿದ್ದು ಉದ್ಯಮ ಬಹುತೇಕ ಕಂಗೆಟ್ಟಿದೆ.

ಝೊಮಾಟೋ ಸಂಸ್ಥೆಯು ತನ್ನ ೪೦೦೦ ಸಿಬ್ಬಂದಿಯ ಪೈಕಿ ಶೇಕಡಾ ೧೩ರಷ್ಟು ಮಂದಿಯನ್ನು ಸೇವೆಯಿಂದ ತೆಗೆದುಹಾಕುವುದಾಗಿ ಹೇಳಿದ್ದರೆ, ಸ್ವಿಗ್ಗಿ ,೧೦೦ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿದೆ. ಉಬರ್ ಜಾಗತಿಕ ಮಟ್ಟದಲ್ಲಿ ೩೦೦೦ ಮಂದಿಯನ್ನು ಕೆಲಸ ತೆಗೆದುಹಾಕುತ್ತಿದ್ದು ಇದು ಭಾರತದಲ್ಲೂ ಪರಿಣಾಮ ಬೀರುವ ಸಾಧ್ಯತೆಗಳವೆ.

ಕಳೆದ ವರ್ಷ ಓಲಾ ತನ್ನ ,೫೦೦ ಜನರ ಕಾರ್ಮಿಕ ಪಡೆಯನ್ನು ಪುನರ್ರಚಿಸಿತ್ತು. ಪರಿಣಾಮವಾಗಿ ೩೫೦ ಮಂದಿ ಕೆಲಸ ಕಳೆದುಕೊಂಡಿದ್ದರು.

ಭವಿಷ್ಯದ ಅವಕಾಶಗಳಲ್ಲಿ ಹೂಡುವ ಸಲುವಾಗಿ ನಗದು ಹಣವನ್ನು ಸಂರಕ್ಷಿಸುವುದನ್ನು ಬಿಕ್ಕಟ್ಟು ಅನಿವಾರ್ಯಗೊಳಿಸಿದೆ ಎಂದೂ ಅಗರವಾಲ್ ತಮ್ಮ ಮಿಂಚಂಚೆಯಲ್ಲಿ ತಿಳಿಸಿದರು.

ನಮ್ಮ ವ್ಯವಹಾರದ ಹೊಸ ವಾಸ್ತವಗಳಿಗೆ ನಮ್ಮ ಸಂಸ್ಥೆಯನ್ನು ನಾವು ಪುನರ್ರಚಿಸಿಕೊಳ್ಳುತ್ತಿದ್ದು, ಕಾರ್ ನಿರ್ವಹಣಾ ಶ್ರೇಷ್ಠತೆ ನಿಟ್ಟಿನಲ್ಲಿ ನಮ್ಮನ್ನು ನಾವು ಬಲಪಡಿಸಿಕೊಳ್ಳಲು ಬದ್ಧರಾಗಬೇಕಾಗಿದೆ ಎಂದು ಅವರು ಹೇಳಿದರು.

ನಾವು ನಮ್ಮ ಹೂಡಿಕೆಗನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯದ ಜನರನ್ನು ಗುಂಪಿನಲ್ಲಿ ಸೇರಿಸುತ್ತಿದ್ದೇವೆ. ಬಿಕ್ಕಟ್ಟು ಡಿಜಿಟಲ್ ವಾಣಿಜ್ಯದಲ್ಲಿ ವ್ಯಾಪಕ ಹೆಚ್ಚಳವನ್ನು ತೋರಿಸುತ್ತಿದೆ. ಸ್ಪಷ್ಟ ಚಲನಚೀಲತೆಯು ನಮ್ಮ ವ್ಯವಹಾರಗಳು ಮತ್ತು ಸ್ಥೂಲ ಪ್ರವೃತ್ತಿಗಳನ್ನು ಉತ್ತಮವಾಗಿ ನಿಯಂತ್ರಿಸಲಿವೆ ಎಂದು ಅವರು ನುಡಿದರು.

ಮುಂದಿನ ಕೆಲವು ವರ್ಷಗಳಲ್ಲಿ ಲಾಭದಾಯಕವಾಗಲು ಮತ್ತು ಸಾರ್ವಜನಿಕವಾಗಿ ಹೋಗುವ ಗುರಿಯ ಬಗ್ಗೆ ಕಂಪನಿಯು ಹಿಂದೆಯೇ ಮಾತನಾಡಿದೆ. ನೋಟಿಸ್ ಅವಧಿಯನ್ನು ಲೆಕ್ಕಿಸದೆ, ಕೆಲಸ ಬಿಡುವ ನೌಕರರು ತಮ್ಮ ನಿಗದಿತ ವೇತನದ ತಿಂಗಳ ಕನಿಷ್ಠ ಹಣಕಾಸಿನ ಪಾವತಿಯನ್ನು ಪಡೆಯುತ್ತಾರೆ ಎಂದು ಅಗರ್ವಾಲ್ ಹೇಳಿದರು.

"ನಮ್ಮೊಂದಿಗೆ ಗಮನಾರ್ಹವಾಗಿ ಹೆಚ್ಚು ಸಮಯ ಕಳೆದ ನೌಕರರು ಅಧಿಕಾರಾವಧಿಯನ್ನು ಅವಲಂಬಿಸಿ ಹೆಚ್ಚಿನ ಪಾವತಿಗೆ ಅರ್ಹರಾಗಿರುತ್ತಾರೆ" ಎಂದು ಅವರು ನುಡಿದರು.

"ತೊಂದರೆಗೆ ಒಳಗಾಗುವ ಎಲ್ಲ ನೌಕರರು ತಮ್ಮ ವೈದ್ಯಕೀಯ, ಜೀವ ಮತ್ತು ಅಪಘಾತ ವಿಮಾ ರಕ್ಷಣೆಯನ್ನು ಡಿಸೆಂಬರ್ ೩೧, ೨೦೨೦ ರವರೆಗೆ ಅಥವಾ ಅವರ ಮುಂದಿನ ಕೆಲಸದ ಪ್ರಾರಂಭ ಇವುಗಳಲ್ಲಿ ಯಾವುದು ಮೊದಲು ಬರುವುದೋ ಅಲ್ಲಿಯವರೆಗೆ ಪಡೆಯುತ್ತಾರೆ. ಇದು ಆರೋಗ್ಯ ಮತ್ತು ಇತರರ ಆರ್ಥಿಕ ಹೊರೆ ಮತ್ತು ಸಮಯದ ಇತರ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಗರವಾಲ್  ಹೇಳಿದರು.

ಪ್ರತಿ ಉದ್ಯೋಗಿಗೆ ಪೋಷಕರಿಗೆ (ಅಥವಾ ಅಳಿಯಂದಿರಿಗೆ) ವೈದ್ಯಕೀಯ ವಿಮೆಯನ್ನು ನೀಡಲು ಕೂಡಾ ಕಂಪನಿಯು ನಿರ್ಧರಿಸಿದೆ. ವಿಮೆಯು ೯೦ ವರ್ಷ ವಯಸ್ಸಿನವರೆಗೆ  ಮೊದಲಿನ ಎಲ್ಲ ಕಾಯಿಲೆಗಳಿಗೆ ಲಕ್ಷ ರೂಪಾಯಿಗಳವರೆಗಿನ ರಕ್ಷಣೆ ಒದಗಿಸುತ್ತದೆ.

No comments:

Advertisement