My Blog List

Friday, May 15, 2020

ವಿಶ್ವ ಬ್ಯಾಂಕಿನಿಂದ ಭಾರತದ ಸಾಮಾಜಿಕ ಭದ್ರತಾ ಯೋಜನೆಗೆ ನೆರವು

ವಿಶ್ವ ಬ್ಯಾಂಕಿನಿಂದ ಭಾರತದ ಸಾಮಾಜಿಕ ಭದ್ರತಾ ಯೋಜನೆಗೆ ನೆರವು
ನವದೆಹಲಿ: ದೇಶದ ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ವಿಶ್ವ ಬ್ಯಾಂಕ್ ಸಮ್ಮತಿಸಿದ್ದು, ಬಿಲಿಯನ್ (೧೦೦ ಕೋಟಿ) ಅಮೆರಿಕನ್ ಡಾಲರ್ (ಸುಮಾರು ,೫೦೦ ಕೋಟಿ ರೂಪಾಯಿ) ನೆರವನ್ನು  2020 ಮೇ 15ರ ಶುಕ್ರವಾರ ಘೋಷಿಸಿತು.

ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ  ಆರೋಗ್ಯ ವಲಯಕ್ಕಾಗಿ ವಿಶ್ವ ಬ್ಯಾಂಕ್ ಕಳೆದ ತಿಂಗಳು ಬಿಲಿಯನ್ (೧೦೦ ಕೋಟಿ)  ಅಮೆರಿಕನ್ ಡಾಲರ್ ತುರ್ತು ನೆರವು ಘೋಷಿಸಿತ್ತು. ಮೂಲಕ ದೇಶಕ್ಕೆ ವಿಶ್ವ ಬ್ಯಾಂಕಿನಿಂದ ಎರಡು ಬಿಲಿಯನ್ (೨೦೦ ಕೋಟಿ) ಡಾಲರ್ ನೆರವು ದೊರೆತಂತಾಯಿತು.

ವಿಶ್ವ ಬ್ಯಾಂಕ್ ಭಾರತದೊಂದಿಗೆ ಮೂರು ವಲಯಗಳಲ್ಲಿ ಕೈಜೋಡಿಸಲಿದೆ ಎಂದು ವಿಶ್ವ ಬ್ಯಾಂಕ್ ನಿರ್ದೇಶಕರಾಗಿರುವ ಜುನೈದ್ ಅಹಮದ್ ಹೇಳಿದರು.

ಆರೋಗ್ಯ, ಸಾಮಾಜಿಕ ಭದ್ರತೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ ಎಂಇ)- ಇವು
ಭಾರತ ಸರ್ಕಾರದೊಂದಿಗೆ ವಿಶ್ವ ಬ್ಯಾಂಕ್ ಪಾಲುದಾರಿಕೆ ಹೊಂದುತ್ತಿರುವ ಮೂರು ವಲಯಗಳಾಗಿವೆ.

ಭಾರತ ಸರ್ಕಾರವು ವಲಸಿಗರು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ತಂತ್ರಜ್ಞಾನ ವ್ಯವಸ್ಥೆಗೆ ವಿಶ್ವ ಬ್ಯಾಂಕ್ ನಿಧಿ ಬಳಕೆಯಾಗಲಿದೆ.

ಭಾರತ ಸರ್ಕಾರದ ೪೦೦ಕ್ಕೂ ಹೆಚ್ಚು ಸಾಮಾಜಿಕ ಭದ್ರತೆಗೆ ಸಂಬಂಧಿತ ಯೋಜನೆಗಳನ್ನು ತಂತ್ರಜ್ಞಾನ ಆಧಾರಿತವಾಗಿ ಸಂಯೋಜಿಸುವ ಕಾರ್ಯಗಳತ್ತ ವಿಶ್ವ ಬ್ಯಾಂಕ್ ಗಮನ ಹರಿಸಿದೆ. ನಗರದ ಬಡವರು ಹಾಗೂ ಗ್ರಾಮೀಣ ಭಾಗದ ಬಡವರಿಗೆ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಸಮಾನತೆ ಕಾಯ್ದುಗೊಳ್ಳಲು ತಂತ್ರಜ್ಞಾನ ವ್ಯವಸ್ಥೆ ಅವಶ್ಯವಾಗಿದೆ ಎಂದು ಜುನೈದ್ ಅಹಮದ್ ಹೇಳಿದ್ದಾರೆ.

ಜನರು ಸಾಮಾಜಿಕ ಯೋಜನೆಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಟ ಮಾಡಬೇಕಾಗುವುದನ್ನು ತಪ್ಪಿಸುವುದು, ಇರುವಲ್ಲಿಯೇ ಯೋಜನೆ ಬಳಕೆಗೆ ಅವಕಾಶ ಕಲ್ಪಿಸುವುದನ್ನು ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವ್ಯವಸ್ಥೆ ರೂಪಿಸುವ ಯೋಜನೆ ಮಹತ್ವದ್ದಾಗಿದೆ.

ಕೊರೊನಾ ವೈರಸ್ ಸೊಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳಿಗೆ ೧೬೦ ಬಿಲಿಯನ್ ಡಾಲರ್ ತುರ್ತು ಸಹಕಾರ ನೀಡಲು ವಿಶ್ವ ಬ್ಯಾಂಕ್ ಕಳೆದ ತಿಂಗಳು ಸಮ್ಮತಿಸಿದೆ.

ಒಂದು ಬಿಲಿಯನ್ ಡಾಲರ್ ಪೈಕಿ ೫೫೦ ಮಿಲಿಯನ್ ಡಾಲರ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್‌ನಿಂದ (ಐಡಿಎ) ಸಿಗಲಿದೆ. ಐಬಿಆರ್‌ಡಿ ಕಡೆಯಿಂದ ಸಾಲದ ರೂಪದಲ್ಲಿ ೨೦೦ ಮಿಲಿಯನ್ ಡಾಲರ್ ಹಾಗೂ ಉಳಿದ ೨೫೦ ಮಿಲಿಯನ್ ಡಾಲರ್ ನೆರವು ೨೦೨೦ರ ಜೂನ್ ೩೦ಕ್ಕೆ ಪೂರೈಕೆಯಾಗಲಿದೆ.

No comments:

Advertisement