My Blog List

Friday, June 26, 2020

ಅನ್ ಲಾಕ್ ೨: ಕೇಂದ್ರ ಸಮಾಲೋಚನೆ ಶುರು

ಅನ್ ಲಾಕ್ :  ಕೇಂದ್ರ ಸಮಾಲೋಚನೆ ಶುರು

ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಯಾನ, ಶಿಕ್ಷಣ ಸಂಸ್ಥೆಗಳು ಮತ್ತು ಮೆಟ್ರೋ ಸೇವೆಗಳತ್ತ ಗಮನಹರಿಸಿರುವ ಕೇಂದ್ರ ಸರ್ಕಾರ, ಅನ್ ಲಾಕ್ ಸಲುವಾಗಿ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮುಂದಿನ ವಾರ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು 2020 ಜೂನ್ 26ರ ಶುಕ್ರವಾರ ತಿಳಿಸಿವೆ.

"ಹೌದು, ಅನ್ ಲಾಕ್ ಕುರಿತು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ" ಎಂದು ಯೋಜನೆಯಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಯೊಬ್ಬರು ದೃಢ ಪಡಿಸಿದರು.

ಮಧ್ಯೆ, ಜುಲೈ ೧೫ ರವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡುವುದಿಲ್ಲ ಎಂದು  ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಬಳಿಕ ನಂತರ ಶುಕ್ರವಾರ,) ಸ್ಪಷ್ಟಪಡಿಸಿತು. ಆದಾಗ್ಯೂ, ಆಯ್ದ ಮಾರ್ಗಗಳಲ್ಲಿ ಪ್ರಕರಣಗಳನ್ನು ಆಧರಿಸಿ ನಿಗದಿತ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳಿಗೆ ಅನುಮತಿ ನೀಡಬಹುದು ಎಂದು ಅದು ಹೇಳಿತು.

ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರದ ಯೋಜನೆ ಕೆಳಗಿನಂತಿದೆ:

ಮೆಟ್ರೋ

ಎಲ್ಲಾ ದೊಡ್ಡ ನಗರಗಳಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ ಮೆಟ್ರೊ ರೈಲುಗಳನ್ನು ತೆರೆಯಲು ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ. ದೆಹಲಿಯಲ್ಲಿ ಈಗ ಅತಿ ಹೆಚ್ಚು ಪ್ರಕರಣಗಳಿದ್ದರೆ, ಮುಂಬೈ ಸ್ವಲ್ಪ ಸುಧಾರಣೆಯನ್ನು ತೋರಿಸಿz. ಆದರೆ ಈಗ ಉಪನಗರಗಳಲ್ಲಿ ಹೊಸ ಗುಂಪು ಸೋಂಕುಗಳು (ಕ್ಲಸ್ಟರ್) ಕಾಣಿಸಿಕೊಂಡಿವೆ. ದಕ್ಷಿಣದಲ್ಲಿ, ಸೋಂಕು ನಿಯಂತ್ರಣಕ್ಕಾಗಿ ಚೆನ್ನೈಯಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಬೆಂಗಳೂರು ಕೂಡ ಗುಂಪು ಸೋಂಕುಗಳು ಇರುವಲ್ಲಿ ಭಾಗಶಃ ಲಾಕ್ಡೌನ್ ಜಾರಿಗೊಳಿಸಿದೆ.

ಶೈಕ್ಷಣಿಕ ಸಂಸ್ಥೆಗಳು

ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸರ್ಕಾರವೂ ಹಿಂಜರಿಯುತ್ತಿದೆ. ಕರ್ನಾಟಕವನ್ನು ಹೊರತುಪಡಿಸಿ, ಹೆಚ್ಚಿನ ರಾಜ್ಯಗಳು ತಮ್ಮ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿವೆ. ಸಿಬಿಎಸ್ ಮತ್ತು ಐಸಿಎಸ್ ಕೂಡ ಪರ್ಯಾಯ ಶ್ರೇಣೀಕರಣ ವ್ಯವಸ್ಥೆಯನ್ನು ಘೋಷಿಸಿವೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅನ್ಲಾಕ್ ಮಾರ್ಗಸೂಚಿ  ಪ್ರಕಾರ, ಶಾಲೆಗಳು ಮತ್ತು ಕಾಲೇಜುಗಳ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದು ಕೊಳ್ಳಬೇಕಾಗಿತ್ತು. "ಶಾಲೆಗಳು / ಕಾಲೇಜುಗಳನ್ನು ರಾಜ್ಯಗಳೊಂದಿಗೆ ಸಮಾಲೋಚಿಸಿ ತೆರೆಯಲಾಗುವುದು. ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಆಡಳಿತವು ಪೋಷಕರು ಮತ್ತು ಇತರ ಪಾಲುದಾರರೊಂದಿಗೆ ಸಾಂಸ್ಥಿಕ ಮಟ್ಟದಲ್ಲಿ ಸಮಾಲೋಚನೆ ನಡೆಸಬಹುದು. ಪ್ರತಿಕ್ರಿಯೆಯ ಆಧಾರದ ಮೇಲೆ, ಜುಲೈ ೨೦೨೦ ರಲ್ಲಿ ಪುನಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೇ ೩೦ ಮಾರ್ಗಸೂಚಿ ಹೇಳಿತ್ತು.

ವಾಯುಯಾನ

ಭಾರತಕ್ಕೆ / ಹೊರಗಿನ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಜುಲೈ ೧೫ ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಖಾಸಗಿ ವಾಹಕಗಳಿಗೆ ಕೆಲವು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಕುರಿತು ಸಮಾಲೋಚನೆಗಳು ಪ್ರಾರಂಭವಾಗಿವೆ.

ಏರ್ ಇಂಡಿಯಾವು ಅಮೆರಿಕಕ್ಕೆ ಹಾರಾಟ ನಡೆಸುತ್ತಿರುವ ಭಾರತದ ವಂದೇ ಭಾರತ್ ಮಿಷನ್ ಬಗ್ಗೆ ಅಮೆರಿಕ ಆಡಳಿತ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ-ಭಾರತ ಮಾರ್ಗಗಳಲ್ಲಿ ಹಾರಲು ಅಮೆರಿಕದ ವಾಹಕಗಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ಅಮೆರಿಕವು ಇದನ್ನು ಏಕಸ್ವಾಮ್ಯ ಎಂದು ಕರೆದಿದೆ ಮತ್ತು ಏರ್ ಇಂಡಿಯಾದ ವಂದೇ ಭಾರತ್ ವಿಮಾಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಿಂದಲೂ (ಯುಎಇ) ಇದೇ ರೀತಿಯ ಆಕ್ಷೇ ಬಂದಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುಬೈ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಕಾರ್ಮಿಕ ಕ್ಷೇತ್ರ

ಅನ್ ಲಾಕ್ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹೆಚ್ಚಿನ ಕ್ರಮಗಳನ್ನು ಪ್ರಕಟಿಸಬಹುದು. ಉತ್ತರ ಪ್ರದೇಶ, ಬಿಹಾರ, ಬಂಗಾಳ ಮತ್ತು ಒಡಿಶಾದಂತಹ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ವಲಸೆ ಕಾರ್ಮಿಕರ ಕೌಶಲ್ಯ ನಕ್ಷೆಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಹಂಚಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಅನ್ ಲಾಕ್ ಕಾಟೇಜ್ ಕೈಗಾರಿಕೆಗಳಿಗೆ ಉತ್ತೇಜನ ಮತ್ತು ಸ್ಥಳೀಯ ಕಾರ್ಮಿಕರ ಉದ್ಯೋಗದ ಬಗ್ಗೆ ಗಮನ  ಕೇಂದ್ರೀಕರಿಸುತ್ತದೆ.

ಕೈಗಾರಿಕೆಗಳ ಸ್ವಾವಲಂಬನೆಯ ಬಗ್ಗೆ ಕೂಡಾ ಅನ್ ಲಾಕ್ ಗಮನ ಇಡುವ ಸಾಧ್ಯತೆಯಿದೆ. ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯಮಗಳಿಗೆ ಅನ್ ಲಾಕ್ ಉತ್ತೇಜನ ನೀಡುವ ಸಾಧ್ಯತೆ ಇದೆ.

No comments:

Advertisement