My Blog List

Friday, July 31, 2020

ದೇಶದ ಕೊರೋನಾ ಸಾವಿನ ಪ್ರಮಾಣ ಶೇಕಡಾ ೨.೧೮ಕ್ಕೆ ಇಳಿಕೆ

 ದೇಶದ ಕೊರೋನಾ ಸಾವಿನ  ಪ್ರಮಾಣ ಶೇಕಡಾ .೧೮ಕ್ಕೆ ಇಳಿಕೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಮತ್ತೆ ತೆರೆಯಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಬ್ರೇಕ್ ಹಾಕಿರುವ ದೆಹಲಿಯ ಲೆಪ್ಟಿನೆಂಟ್ ಗವರ್ನರ್ (ಎಲ್‌ಜಿ) ಅನಿಲ್ ಬೈಜಾಲ್ ಅವರು ನಿರ್ಧಾರವನ್ನು 2020 ಜುಲೈ 31ರ ಶುಕ್ರವಾರ ರದ್ದು ಪಡಿಸಿದರು.

ಅನ್ಲಾಕ್ .೦ರ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯನ್ನು ತೆರೆಯಲು ಅರವಿಂದ ಕೇಜ್ರಿವಾಲ್ ಸರ್ಕಾರ ನಿರ್ಧರಿಸಿತ್ತು.

ಮಧ್ಯೆ, ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ಶುಕ್ರವಾರ ಕೋವಿಡ್ -೧೯ ಪರಿಸ್ಥಿತಿ ಕುರಿತ ಸಚಿವರ ತಂಡದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ .೨೮ ಮಾತ್ರ ವೆಂಟಿಲೇಟರ್, ಶೇಕಡಾ .೬೧ ತೀವ್ರ ನಿಗಾ ಘಟಕ (ಐಸಿಯು) ಮತ್ತು ಶೇಕಡಾ .೩೨ ಆಮ್ಲಜನಕದ ಬೆಂಬಲದಲ್ಲಿ ಇವೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲ ಶಾಸಕರಿಗೆ ಮೂರು ತಿಂಗಳ ವೇತನದಲ್ಲಿ ಶೇಕಡಾ ೩೦ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ. "ನಾನು ನಿಧಿಗೆ ತಮ್ಮ ಕೊಡುಗೆಯನ್ನು ನೀಡುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಭಾರತದ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ ೧೬ ಲಕ್ಷವನ್ನು ದಾಟಿದೆ.
ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೫೫,೦೭೯ ಸೋಂಕು ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ೭೭೯ ಸಾವುಗಳು ಸಂಭವಿಸಿವೆ. ಒಟ್ಟು ೧೬,೩೮,೮೭೧ ಪ್ರಕರಣಗಳ ಪೈಕಿ ೧೦,೫೭,೮೦೬ ಪ್ರಕರಣಗಳಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗಿ ಚೇತರಿಸಿದ್ದಾರೆ. ,೪೫,೩೧೮ ಸಕ್ರಿಯ ಪ್ರಕರಣಗಳಿವೆ. ಸಾವಿನ ಸಂಖ್ಯೆ ೩೫,೭೪೭ ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ -೧೯ನ್ನು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಆರು ತಿಂಗಳ ಬಳಿಕ, ಯುವಜನರು ಸೋಂಕಿಗೆ ಒಳಗಾಗಬಹುದು ಮತ್ತು ವೈರಸ್‌ಗೆ ಬಲಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದ್ದು, ಸ್ವಯಂ ರಕ್ಷಣೆಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಯುವಕರಿಗೆ ಸಲಹೆ ಮಾಡಿದೆ.

ಲಸಿಕೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಜನರು, ಎಲ್ಲಿ ವಾಸವಾಗಿದ್ದಾರೋ ಅಲ್ಲಿಯೇ ಏಕಕಾಲಕ್ಕೆ ಕೋವಿಡ್ -೧೯ ಲಸಿಕೆ ಪಡೆಯುವಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಅದು ಹೇಳಿದೆ. "ನಾವು ನಮ್ಮ ವಿಧಾನವನ್ನು ಬದಲಾಯಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು.

ಜಾಗತಿಕ ಕೊರೋನಾವೈರಸ್ ಪ್ರಕರಣಗಳು ಶುಕ್ರವಾರ ೧೭ ಮಿಲಿಯನ್ (.೭೦ ಕೋಟಿ) ಗಡಿ ದಾಟಿವೆ.

ಪಂಜಾಬಿನಲ್ಲಿ ರಾತ್ರಿ ಕರ್ಫ್ಯೂ: ಪಂಜಾಬ್ ಸರ್ಕಾರವು ಶುಕ್ರವಾರ ಅನ್ಲಾಕ್ . ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ರಾತ್ರಿ ೧೧ ರಿಂದ ಬೆಳಿಗ್ಗೆ ರವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ಆದೇಶ ನೀಡಿದೆ. ಜಿಮ್ಸ್ ಮತ್ತು ಯೋಗ ಸಂಸ್ಥೆಗಳು ಆಗಸ್ಟ್ ೫ರಿಂದ ತೆರೆಯಲಿವೆ.

ದೆಹಲಿಯ ಪರಿಸ್ಥಿತಿಯನ್ನು ಸಚಿವರ ತಂಡ (ಗೋಮ್) ಚರ್ಚಿಸಿತು, ದೇಶದ ಚೇತರಿಕೆ ಪ್ರಮಾಣಕ್ಕೆ ಹೋಲಿಸಿದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ ೮೯ಕ್ಕಿಂತ ಹೆಚ್ಚು ಚೇತರಿಕೆ ಕಂಡು ಬಂದಿದೆ ಎಂದು ಗೋಮ್ ಹೇಳಿತು. ಪುಣೆ, ಥಾಣೆ, ಬೆಂಗಳೂರು ಮತ್ತು ಹೈದರಾಬಾದ್ ಇನ್ನೂ ಚಿಂತೆಯ ವ್ಯಾಪ್ತಿಯಲ್ಲಿ ಇವೆ ಎಂದು ಅದು ಹೇಳಿತು.

 ಭಾರತವು ೧೦ ಲಕ್ಷಕ್ಕಿಂತಲೂ ( ಮಿಲಿಯನ್) ಹೆಚ್ಚು ಚೀತರಿಕೆಯ ಮೈಲಿಗಲ್ಲನ್ನು ಸಾಧಿಸಿದೆ. ದೇಶದ ಚೇತರಿಕೆಯ ಪ್ರಮಾಣವನ್ನು ಶೇಕಡಾ ೬೪.೫೪ಕ್ಕೆ ಏರಿದೆ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿರುವ ಪ್ರಕರಣಗಳು ಒಟ್ಟು  ಪ್ರಕರಣಗಳ ಕೇವಲ /೩ರಷ್ಟು ಅಥವಾ ಶೇಕಡಾ ೩೩.೨೭ರಷ್ಟಿವೆ ಎಂದು ಡಾ. ಹರ್ಷ ವರ್ಧನ್ ಹೇಳಿದರು.

ಭಾರತದಲ್ಲಿ ಕೋವಿಡ್-೧೯ ಸಾವಿನ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಿದೆ. ಇದು ಪ್ರಸ್ತುತ ಶೇಕಡಾ .೧೮ರಷ್ಟು ಇದೆ. ವಿಶ್ವದ ಮರಣ ಪ್ರಮಾಣಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಎಂದು ಅವರು ನುಡಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಎಲ್ಲಾ ಶಾಸಕರಿಗೆ ತಮ್ಮ ಸಂಬಳದ ಶೇಕಡಾ ೩೦ರಷ್ಟನ್ನು ಮೂರು ತಿಂಗಳ ಕಾಲ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ರಾಜ್ಯ ಸಚಿವರ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಮನವಿ ಮಾಡಿದರು.

"ನೀವೆಲ್ಲರೂ ಒಪ್ಪಿದರೆ, ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬರುವ ತನಕ, ಕೋವಿಡ್ -೧೯ ವಿರುದ್ಧ ಹೋರಾಡಲು ನಾವು ನಮ್ಮ ಸಂಬಳದ ಶೇಕಡಾ ೩೦ರಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡೋಣ ಎಂದು ಅವರು ನುಡಿದರು.

No comments:

Advertisement