My Blog List

Thursday, November 26, 2020

ಕಾಶ್ಮೀರ ಭಯೋತ್ಪಾದಕ ದಾಳಿ: ಇಬ್ಬರು ಯೋಧರು ಹುತಾತ್ಮ

 ಕಾಶ್ಮೀರ ಭಯೋತ್ಪಾದಕ ದಾಳಿ: ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಕೇವಲ ೪೮ ಗಂಟೆಗಳು ಬಾಕಿ ಇರುವಾಗ, ಇಬ್ಬರು ಭಾರತೀಯ ಸೇನಾ ಸೈನಿಕರು ಕೇಂದ್ರಾಡಳಿತ ಪ್ರದೇಶದ ರಾಜಧಾನಿಯ ಹೊರಗಡೆ ಹಾಡು ಹಗಲೇ ನಡೆದ ಭಯೋತ್ಪಾದಕ ದಾಳಿಯಲ್ಲಿ 2020 ನವೆಂಬರ 26ರ ಗುರುವಾರ ಹುತಾತ್ಮರಾದರು.

ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿರುವ ಶರೀಫಾಬಾದ್ನಲ್ಲಿ  ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು.

ಮೂಲಗಳ ಪ್ರಕಾರ, ಉಗ್ರರು ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಹೊಂಚುಹಾಕಿ ಅವರ ಮೇಲೆ ಗುಂಡು ಹಾರಿಸಿದರು ತೀವ್ರವಾಗಿ ಗಾಯಗೊಳಿಸಿದರು. ಗಾಯಾಳು ಯೋಧರು ಬಳಿಕ ಅಸು ನೀಗಿದರು.

ಭಾರತೀಯ ಸೇನಾ ರಸ್ತೆ ತೆರೆಯುವ ತಂಡದ (ಆರ್ಒಪಿ) ಮೇಲಿನ ದಾಳಿಯು ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ೧೨ ನೇ ವಾರ್ಷಿಕೋತ್ಸವದಂದೇ ನಡೆದಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಎಸ್ಒಜಿ ಮತ್ತು ಸಿಆರ್ಪಿಎಫ್ ವ್ಯಾಲಿ ಕ್ಯೂಎಟಿ ಪ್ರದೇಶವನ್ನು ಸುತ್ತುವರಿಯಲು ಸ್ಥಳಕ್ಕೆ ಧಾವಿಸಿವೆ. ದಾಳಿಕೋರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಚುನಾವಣೆಗೆ ಹೋಗುವ ಮುನ್ನ ಘಟನೆ ನಡೆದಿದೆ.

ಡಿಡಿಸಿ ಚುನಾವಣೆಯನ್ನು ಅಡ್ಡಿಪಡಿಸಲು ಭಯೋತ್ಪಾದಕರು ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.

ನವೆಂಬರ್ ೧೯ ರಂದು ಜಮ್ಮುವಿನ ನಾಗ್ರೋಟಾ ಬಳಿ ನಡೆದ ಗುಂಡಿನ ಘರ್ಷಣೆಯಲ್ಲಿ ಟ್ರಕ್ಕಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ನಾಲ್ಕು ಜೈಶ್ ಮೊಹಮ್ಮದ್ ಭಯೋತ್ಪಾದಕರು ಸಾಂಬಾದಲ್ಲಿನ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದರು. ಅವರು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕಿನಲ್ಲಿ ಪ್ರಯಾಣಿಸುತ್ತಿದ್ದರು, ಇದನ್ನು ನಾಗ್ರೋಟಾ ಬಳಿಯ ಟೋಲ್ ಪ್ಲಾಜಾದಲ್ಲಿ ಪೊಲೀಸರು ತಡೆದಿದ್ದರು.

No comments:

Advertisement