My Blog List

Sunday, March 29, 2009

ಗೋಲೋಕದಲ್ಲಿ ಬೇಸಿಗೆ ಶಿಬಿರ

ಗೋಲೋಕದಲ್ಲಿ ಬೇಸಿಗೆ ಶಿಬಿರ


ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಸೀಮಾ ಪರಿಷತ್ತಿನ, ಅವಲಂಬನ ವತಿಯಿಂದ ಈ ವರ್ಷದ ಮಕ್ಕಳ ಬೇಸಿಗೆ ರಜಾ ಕಾಲದ ಶಿಬಿರವು ವಿರೋಧಿ ಸಂವತ್ಸರದ ವೈಶಾಖ ಕೃಷ್ಣ ಪಂಚಮಿಯಿಂದ ಚತುರ್ದಶಿಯವರೆಗೆ (14-5-2009ರಿಂದ 23-5-2009 ರವರೆಗೆ) ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲೀಪುರದ ದಿಣ್ಣೇ ಪಾಳ್ಯದ (ಬಿ.ಜೆ. ಶರ್ಮರ ಪ್ರತಿಮಾ ಫಾರಂ ಪಕ್ಕದಲ್ಲಿರುವ) ಗೋಲೋಕದಲ್ಲಿ ನಡೆಯಲಿದೆ.

ಆಸಕ್ತ ಯಜುಶಾಖಾ ಬೋಧಾಯನ ಸೂತ್ರದ ಉಪನೀತ ವಟುಗಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು 30-4-2009ರ ಒಳಗೆ ಪರಿಷತ್ತಿಗೆ ತಲುಪುವಂತೆ, ಸ್ವ ವಿಳಾಸವಿರುವ ಸರಿಯಾದ ಬೆಲೆಯ ಅಂಚೆ ಮುದ್ರಿತ ಲಕೋಟೆಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸೀಮಾ ಪರಿಷತ್ ಪ್ರಕಟಣೆ ತಿಳಿಸಿದೆ.

ಶ್ರೀ ರಾಮಾಶ್ರಮ, ಗಿರಿನಗರ ಬೆಂಗಳೂರು (ದೂರವಾಣಿ: 08026721510) ಇಲ್ಲಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಸಿ.ಎಚ್.ಎಸ್. ಭಟ್ ತಿಳಿಸಿದ್ದಾರೆ.
 

No comments:

Advertisement